ಮೈಸೂರು: ರಾಜ್ಯ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿ ಬರುವ ವಿವಿಧ ಅಕಾಡೆಮಿ ಹಾಗೂ ವಿವಿಧ ಪ್ರಾಧಿಕಾರಗಳ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕಾತಿ ಮಾಡಿದೆ. ಜತೆಗೆ ಹಳೆ ಸದಸ್ಯರನ್ನು ಕೈ ಬಿಟ್ಟು ಹೊಸಬರನ್ನು ನೇಮಿಸಿದೆ.
ಪರಿಷ್ಕೃತಿ ಪಟ್ಟಿಯಲ್ಲಿ ಮೈಸೂರು ಭಾಗದವರ ವಿವರ ಇಂತಿವೆ. ಕರ್ನಾಟಕ ಲಲಿತಾ ಅಕಾಡೆಮಿಗೆ ಅನೀತಾ ಫಾತೀಮಾ ಬದಲು ಮಡಿಕೇರಿ ರಾಮ ಗೌತಮ್, ಕರ್ನಾಟಕ ನಾಟಕ ಅಕಾಡೆಮಿಗೆ ಪ್ರೇಮ ಬಾದಾಮಿ ಬದಲು ಮೈಸೂರಿನ ಜೀವನ ಕುಮಾರ್, ಕರ್ನಾಟಕ ಜಾನಪದ ಅಕಾಡೆಮಿಗೆ ಚಾಮರಾಜನಗರದ ನರಸಿಂಹ ಮೂರ್ತಿ ಬದಲು ಬಳ್ಳಾರಿ ಶಿವೇಶ್ವರ ಗೌಡ , ಕರ್ನಾಟಕ ಕೊಡವ ಸಮಾಜಕ್ಕೆ ಕೌಸಲ್ಯ ಸತೀಶ ಸೋಮಯಂಡ, ನಾಗೇಶ್ ಕಾಲುರೂ, ಪ್ರಮೀಳಾ ನಾಚಯ್ಯ, ಚಾಮನರ ದಿನೇಶ್ ಬೆಳ್ಳಿಯಪ್ಪ, ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಮೈಸೂರಿನ ವಸಂತ ಭಾರದ್ವಾಜ್ ಕಬ್ಬಿನಾಲೆ ಅವರನ್ನು ಕೈ ಬಿಟ್ಟು ಡಾ.ರಾಜೀವ ಲೋಚನ ಅವರನ್ನು ಸದಸ್ಯರಾಗಿ ನೇಮಿಸಿದೆ.
ರಂಗ ಸಮಾಜದ ಪೂರ್ತಿ ಬದಲು:
ರಂಗ ಸಮಾಜದ ಈ ಹಿಂದಿನಿ ಸದಸ್ಯರಾದ ಸಿದ್ದರಾಮ ಹಿಪ್ಪರಗಿ, ಹಾಲಸ್ವಾಮಿ, ಮೈಸೂರಿನ ಡಾ.ಹೇಲನ್, ಶ್ರೀಧರ್ ಹೆಗಡೆ, ಶಿವೇಶ್ವರ ಗೌಡ ಅವರನ್ನು ಕೈ ಬಿಟ್ಟು ಬದಲಾಗಿ ಡಾ. ಶಶಿಧರ್ ನರೇಂದ್ರ, ಡಾ.ಶೀನ ನಡೋಳಿ, ರಾಜಣ್ಣ ಜೀವರ್ಗಿ, ದಾಕ್ಷಾಯಿಣಿ ಭಟ್, ಡಾ.ಟಿ.ಆರ್.ಗುರುಪ್ರಸಾದ ಅವರನ್ನು ನೇಮಿಸಲಾಗಿದೆ.
೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…
ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…
ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…
‘ಸಪೋರ್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…
ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್ವೇ ಯೋಜನೆಗೆ ವೇಗ ದೊರೆತಿದೆ.…
ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…