ಓದುಗರ ಪತ್ರ
೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ ಪ್ರಶಸ್ತಿ ನೀಡಿರುವುದು ಪ್ರಶಂಸನೀಯ. ಈ ಬಾರಿ ಇಬ್ಬರು ಚುಟುಕು ಸಾಹಿತಿಗಳಿಗೆ ಈ ಗೌರವ ದೊರೆತಿದೆ. ಈ ನಿಟ್ಟಿನಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಮೈಸೂರಿನ ಡಾ ಎಂ.ಜಿ.ಆರ್.ಅರಸ್ ರವರು ಚುಟುಕು ಸಾಹಿತ್ಯ ಪರಿಷತ್ ಸ್ಥಾಪಿಸಿ, ಕಳೆದ ಎರಡೂವರೆ ದಶಕಗಳಿಂದಲೂ ಪ್ರತಿ ವರ್ಷವೂ ಚುಟುಕು ಸಾಹಿತ್ಯ ಪರಿಷತ್ ಮೂಲಕ ಚುಟುಕು ಕವಿಗೋಷ್ಠಿಗಳನ್ನು ಅಯೋಜಿಸಿ, ಬೆಳಕಿಗೆ ಬಾರದ ಹಲವಾರು ಸಾಹಿತಿಗಳನ್ನು ಪರಿಚಯಿಸಿದ್ದಾರೆ.
ಹಾಗೆಯೇ ಕಳೆದ ಹಲವಾರು ವರ್ಷಗಳಿಂದಲೂ ಚುಟುಕು ಸಾಹಿತ್ಯ ಪರಿಷತ್ ಧ್ಯೇಯ ವಾಕ್ಯವಾದ ಚುಟುಕು ಸಾಹಿತ್ಯ, ಬದುಕಿಗೆ ಲಾಲಿತ್ಯ ಎಂದು ಪರಿಚಯಿಸಿ, ಬಹಳಷ್ಟು ಚುಟುಕು ಕವನಗಳು, ಚುಟುಕು ಕವನ ಸಂಕಲನಗಳನ್ನು ತಮ್ಮ ಪರಿಷತ್ ಮೂಲಕ ಪ್ರಕಟಿಸಿ, ಪ್ರತಿ ವರ್ಷವೂ ಚುಟುಕು ಸಾಹಿತ್ಯ ಸಮಾವೇಶ ಏರ್ಪಡಿಸಿ, ಚುಟುಕು ಶ್ರೀ, ಇತ್ಯಾದಿ ಬಿರುದುಗಳನ್ನು ನೀಡುತ್ತಾ ಬಂದಿರುವುದು ಮೆಚ್ಚುವಂತಹದ್ದು.
ಪ್ರಸ್ತುತ ಚುಟುಕು ಸಾಹಿತ್ಯದ ಪ್ರಕಾರಕ್ಕೂ ಮನ್ನಣೆ ನೀಡಿ ಕನ್ನಡ ಪುಸ್ತಕ ಪ್ರಾಧಿಕಾರ, ಚುಟುಕು ಸಾಹಿತಿಗಳನ್ನು ಗುರುತಿಸಿ ಗೌರವಿಸಿರುವುದು, ಡಾ. ಅರಸ್ರವರ ಶ್ರಮಕ್ಕೆ ಸಂದ ಗೌರವ ಎಂದೇ ಹೇಳಬೇಕು.
-ವಿಜಯ್ ಹೆಮ್ಮಿಗೆ, ಮೈಸೂರು
ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…
ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…
‘ಸಪೋರ್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…
ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್ವೇ ಯೋಜನೆಗೆ ವೇಗ ದೊರೆತಿದೆ.…
ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…
ಚನ್ನೇಶ ಬಿ.ಇದರಮನಿ ಸಿಬ್ಬಂದಿಗಳ ಕೊರತೆಯಿಂದ ಸಕಾಲದಲ್ಲಿ ಆಗದ ಕೆಲಸ; ಸಾರ್ವಜನಿಕರ ಆಕ್ರೋಶ ಮೈಸೂರು: ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ…