BREAKING NEWS

ಮಂಗಳೂರು ಸ್ಫೋಟ: ಮೈಸೂರಿನಲ್ಲಿ ಶಂಕಿತನ ಸಹಚರ ವಶಕ್ಕೆ

ಮೈಸೂರು: ಮಂಗಳೂರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರ ಶಾರಿಖ್ ಜೊತೆ ವಾಸವಿದ್ದ ಸಹಚರನನ್ನು ಮೈಸೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. 

ಶಂಕಿತ ಭಯೋತ್ಪಾಧಕ ಶಾರಿಖ್‌ನೊಂದಿಗೆ ಒಡನಾಟ ಹೊಂದಿದ್ದ ಆತನ ಸಹಚರನನ್ನು ಮೇಟಗಳ್ಳಿಯ ಲೋಕನಾಯಕನಗರದ ರೂಮ್‌ನಲ್ಲೇ ಪೊಲೀಸರು ವಶಕ್ಕೆ ಪಡೆದು, ಮೇಟಗಳ್ಳಿ ಠಾಣೆಯಲ್ಲಿ ವಿಚಾರಣೆ ನಡೆಸಿ ಅಜ್ಞಾತ ಸ್ಥಳದಲ್ಲಿ ವಿಚಾರಣೆ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಸಭ್ಯನಂತೆ ಇದ್ದ ಉಗ್ರ

ಶಂಕಿತ ಉಗ್ರ ತಾನಿದ್ದ ರೂಮ್‌ನಿಂದ ಹೊರ ಬಂದರೂ ನೆರೆಹೊರೆಯವರೊಂದಿಗೆ ಮಾತನಾಡುತ್ತಿರಲಿಲ್ಲ. ನೋಡಲು ವಿದ್ಯಾರ್ಥಿಯಂತೆ ಹಾಗೂ ಯಾವುದೋ ಕಂಪನಿಯಲ್ಲಿ ಕೆಲಸ ಮಾಡುವವರಂತೆ ಓಡಾಡುತ್ತಿದ್ದ. ಸಂಜೆ ಮನೆ ಸೇರಿದರೆ ಹೊರಗೆ ಬರುತ್ತಿರಲಿಲ್ಲ. ಸರಿಯಾಗಿ ಬಾಡಿಗೆ ನೀಡುತ್ತಿರಲಿಲ್ಲ ಎಂದು ಸ್ಥಳೀಯರು ಮತ್ತು ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಪೊಲೀಸ್ ಆಯುಕ್ತ ರಮೇಶ್ ಅವರ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಪೊಲೀಸ್, ಸಿಸಿಬಿ ಬೆಂಗಳೂರಿಂದ ಬಾಂಬ್ ನಿಷ್ಕ್ರೀಯ ದಳ, ಭಯೋತ್ಪಾಧಕ ನಿಗ್ರಹ ದಳದ ಸಿಬ್ಬಂದಿ

ಸೇರಿದಂತೆ ವಿವಿಧ ಘಟಕಗಳ ಪೊಲೀಸರು, ಹಿರಿಯ ಅಧಿಕಾರಿಗಳು ಭಾನುವಾರ ಮುಂಜಾನೆ 3 ಗಂಟೆಯಿಂದ ಮಧ್ಯಾಹ್ನ 3ಗಂಟೆವರೆಗೂ ಕಾರ್ಯಾಚರಣೆ ನಡೆಸಿದ್ದಾರೆ. ಶೋಧನೆ ಮಾಡುವ ಸಂದರ್ಭದಲ್ಲಿ ಪೊಲೀಸರು ಸ್ಥಳೀಯರು ಸೇರಿದಂತೆ ಯಾರೊಬ್ಬರೂ ಓಡಾಡದಂತೆ ಮನೆ ಇರುವ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರು. ಇದರಿಂದ ಕೆಲಕಾಲ ಸ್ಥಳೀಯರಲ್ಲಿ ಆತಂಕ ನಿರ್ಮಾಣವಾಗಿತ್ತು.

andolana

Recent Posts

ಫೆ.೫ರಂದು ಶ್ರೀ ಶಂಭುಲಿಂಗೇಶ್ವರ ದೇವಾಲಯ ಲೋಕಾರ್ಪಣೆ

ಹೇಮಂತ್ ಕುಮಾರ್ ಕಾಶಿ ನಂತರ ಸ್ಮಶಾನವಾಸಿ ಶಿವನ ದೇವಸ್ಥಾನವೆಂಬ ಹೆಗ್ಗಳಿಕೆ  ಮಂಡ್ಯ: ದೇಶದಲ್ಲೇ ಭಸ್ಮೋದ್ಧಾರಿಯಾದ ಶಿವ ಸ್ಮಶಾನವಾಸಿಯಾಗಿರುವ ದೇವಾಲಯ ಕಾಶಿ…

2 hours ago

ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ ಜಿಲ್ಲಾಸ್ಪತ್ರೆ ದುಬಾರಿ!

ನವೀನ್ ಡಿಸೋಜ ವೈದ್ಯಕೀಯ ಶಿಕ್ಷಣ ಇಲಾಖೆ ಆಡಳಿತಕ್ಕೊಳಪಟ್ಟ ಬಳಿಕ ಸೇವೆಯೊಂದಿಗೆ ಶುಲ್ಕವೂ ಹೆಚ್ಚಳ; ಪ್ರತಿಯೊಂದು ಸೇವೆಗೂ ಪಾವತಿ ಮಾಡಬೇಕಾದ ಅನಿವಾರ್ಯತೆ …

3 hours ago

ಸುರಕ್ಷತೆಯ ಗ್ಯಾರಂಟಿ ಇಲ್ಲದ ಶಾಲಾ ವಾಹನಗಳಲ್ಲಿ ಮಕ್ಕಳ ಪ್ರಯಾಣ!

ಮಹದೇಶ್ ಎಂ.ಗೌಡ ಹನೂರು ತಾಲ್ಲೂಕಿನ ಹಲವು ಶಾಲೆಗಳಲ್ಲಿ ದುರಸ್ತಿಗೆ ಬಂದಿರುವ, ವಿಮೆ ಇಲ್ಲದ ವಾಹನಗಳ ಬಳಕೆ; ಸಾರ್ವಜನಿಕರಲ್ಲಿ ಆತಂಕ ಹನೂರು:…

3 hours ago

ಈ ಜಾಗ ನೋಡಿ; ಕಸ ಹಾಕುವ ಮುನ್ನ ಯೋಚನೆ ಮಾಡಿ!

ಕೆ.ಬಿ.ರಮೇಶ ನಾಯಕ ಕಸ ಎಸೆಯುತ್ತಿದ್ದ ಸ್ಥಳಗಳಲ್ಲಿ ಮನರಂಜನಾ ವಸ್ತುಗಳ ಚಿತ್ತಾಕರ್ಷಣೆ ರಸ್ತೆ ಬದಿ ಕಸ ಹಾಕುವವರ ಮನ ಪರಿವರ್ತನೆಗೆ ವಿನೂತನ…

3 hours ago

ಉಂಡವಾಡಿ ಪೈಪ್‌ಲೈನ್ ಕಾಮಗಾರಿಯಿಂದ ಹದಗೆಟ್ಟ ರಸ್ತೆಗಳು

ಎಂ.ಅನುಚೇತನ್ ಸಂಚಾರಕ್ಕೆ ಅಡಚಣೆ,ಆರೋಗ್ಯಕ್ಕೆ ಕುತ್ತು, ಶಾಲಾ ಮಕ್ಕಳು, ಸ್ಥಳೀಯರು ಹೈರಾಣ ಮೈಸೂರು: ಮೈಸೂರಿನಲ್ಲಿ ಕುಡಿಯುವ ನೀರಿನ ಬರ ನೀಗಿಸುವ ಸಲುವಾಗಿ,…

3 hours ago

ಫ್ಲೋರೈಡ್‌ಯುಕ್ತ ನೀರು ಕುಡಿದು ಕಿಡ್ನಿ ಸಮಸ್ಯೆ!

ಮಹದೇಶ್ ಎಂ.ಗೌಡ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿತ; ಫ್ಲೋರೈಡ್‌ ಯುಕ್ತ ನೀರು ಸೇವಿಸಿ ಆರೋಗ್ಯ ಸಮಸ್ಯೆ ಎನ್ನುವ ಸ್ಥಳೀಯರು…

3 hours ago