ವಾರಾಂತ್ಯದ ರಜಾದಿನಗಳನ್ನು ಸಿನಿಮಾ ವೀಕ್ಷಣೆ, ಮೋಜು, ಮಸ್ತಿ ಎಂದು ವಿನಿಯೋಗಿಸಿ, ಕಾಲ ಕಳೆಯುವ ಇಂದಿನ ದಿನಮಾನಗಳಲ್ಲಿ ತಮ್ಮೂರಿನ ಪರಿಸರ ಬಗೆಗೆ ಕಾಳಜಿಯನ್ನು ಹೊತ್ತು, ಬತ್ತಿ ಹೋಗುತ್ತಿರುವ ನದಿಗೆ ಮರುಜೀವ ಕೊಡುವ ಪ್ರಯತ್ನದ ಮೂಲಕ ಹಲವಾರು ಪರಿಸರ ಕಾಳಜಿ ಕುರಿತ ಕಾರ್ಯಕ್ರಮಗಳ ಜತೆ ಸಾಗಿರುವ ಯುವಪಡೆಯ ಕಾರ್ಯವೈಖರಿಯು ಎಲ್ಲರ ಗಮನಸೆಳೆದಿದೆ.
ಇದು ‘ಗುಂಡ್ಲು ಪರಿಸರ ಬಳಗ’ದ ವಿಶೇಷ!. ಇದೊಂದು ಸಮಾನ ಮನಸ್ಕ ಗೆಳೆಯರ ಬಳಗ, ಈ ಬಳಗವು ನಶಿಸಿಹೋಗಿರುವ ಗುಂಡ್ಲು ನದಿಯನ್ನು ಪುನರುಜ್ಜೀವನಗೊಳಿಸಲು ಹುಟ್ಟಿಕೊಂಡ ಒಂದು ಗುಂಪಾಗಿದ್ದು, ಪ್ರತಿ ಭಾನುವಾರ ಶ್ರಮದಾನದ ಮೂಲಕ ಕೆರೆಗಳ ಪುನರುಜ್ಜೀವನಗೊಳಿಸುವ ಕಾರ್ಯವನ್ನು ಪ್ರಾಥಮಿಕವಾಗಿ ಹಮ್ಮಿಕೊಂಡಿದೆ.
ಇದರ ಜೊತೆಗೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಜೀವಸೆಲೆಯಾಗಿದ್ದ ‘ಗುಂಡ್ಲು ನದಿ’ ನಶಿಸಿ ಹೋಗಲು ಕಾರಣಗಳನ್ನು ಪಟ್ಟಿ ಮಾಡಿ ಆ ನದಿಯನ್ನು ಪುನರುಜ್ಜೀವನಗೊಳಿಸುವ ಜತೆಗೆ, ಹಸಿರು ಪ್ರದೇಶದ ವಿಸ್ತರಣೆ, ಕೆರೆಗಳ ಸಂರಕ್ಷಣೆ ಕಾರ್ಯಗಳ ಒಂದುಯೋಜನೆಯನ್ನು ರೂಪಿಸಿಕೊಂಡು ಸಮಾನ ಮನಸ್ಕ ಗೆಳೆಯರ ಬಳಗ ಕಾರ್ಯನಿರತವಾಗಿದೆ.
2022ರ ನಂವೆಂಬರ್ 6ನೇ ತಾರೀಖಿನಿಂದ ಪ್ರತಿ ಭಾನುವಾರ ನಿರಂತರವಾಗಿ ಶ್ರಮದಾನ ಮಾಡುತ್ತಾ ಬಂದಿದೆ. ಪ್ರಾಥಮಿಕವಾಗಿ 10 ಸದಸ್ಯರಿಂದ ಆರಂಭವಾದ ‘ಗುಂಡ್ಲು ಪರಿಸರ ಬಳಗ’ದಲ್ಲಿ ಈಗ 200ಕ್ಕೂ ಹೆಚ್ಚು ಸದಸ್ಯರಿದ್ದು ಭಾನುವಾರದ ದಿನಗಳಂದು ಎಲ್ಲರೂ ಶ್ರಮದಾನದಲ್ಲಿ ಭಾಗಿಯಾಗುತ್ತಾರೆ. ಗುಂಡ್ಲುಪೇಟೆ ಪಟ್ಟಣದಲ್ಲಿ ಕಸ ಮತ್ತು ಕಟ್ಟಡದ ಅವಶೇಷಗಳನ್ನು ಹಾಕಿ ಮುಚ್ಚಿ ಹಾಕಲಾಗಿದ್ದ ಚಿಕ್ಕ ಕೆರೆಗೆ ಮರುಜೀವ ಕೊಡುವ ಕಾರ್ಯವನ್ನು ಈ ಪರಿಸರ ಬಳಗ ಕೈಗೆತ್ತಿಕೊಂಡಿದೆ. ಅಲ್ಲಿ ಸುರಿಯಲಾಗಿದ್ದ ಸಹಸ್ರಾರು ಟ್ರ್ಯಾಕ್ಟರ್ ಲೋಡ್ಗಳಷ್ಟು ಕಟ್ಟಡದ ಅವಶೇಷಗಳನ್ನು ಹೊರಸಾಗಿಸಿ, ಕೆರೆಯ ತುಂಬೆಲ್ಲ ಬೆಳೆದಿದ್ದ ಮುಳ್ಳಿನ ಗಿಡಗಳನ್ನು ತೆರವುಗೊಳಿಸಿ, ಊಳಿನಿಂದ ಮುಚ್ಚಿ ಹೋಗಿದ್ದ ಜಲಮಾರ್ಗಗಳನ್ನು ಸ್ವಚ್ಛಗೊಳಿಸಿ, ಕೆರೆಗೆ ನೀರು ಸರಾಗವಾಗಿ ಹರಿದು ಬರುವಂತೆ ಮಾಡಿ ಈ ಕೆರೆಯನ್ನು ಮೈಸೂರಿನ ಕುಕ್ಕರಹಳ್ಳಿ ಕೆರೆ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕೆಂಬ ಗುರಿಯೊಂದಿಗೆ ಕಾರ್ಯ ಬರದಿಂದ ಸಾಗಿದೆ.
ಈ ತಂಡವು ಪ್ರತಿ ಭಾನುವಾರ ಬೆಳಿಗ್ಗೆ 7.30 ರಿಂದ ಶ್ರಮದಾನ ಕಾರ್ಯ ಹಮ್ಮಿಕೊಳ್ಳುತ್ತಾ ಬಂದಿದ್ದು ಯಾರು ಬೇಕಾದರೂ ಭಾಗವಹಿಸಬಹುದಾಗಿದೆ.
ಗುಂಡ್ಲುಹೊಳೆ ಪುನರುಜ್ಜೀವನಗೊಳಿಸುವ ಜತೆಗೆ, ವಿದ್ಯಾರ್ಥಿಗಳಿಗೆ ‘ಪಕ್ಷಿ ವೀಕ್ಷಣೆ’ ಕಾರ್ಯವನ್ನು ಗುಂಡ್ಲುಹೊಳೆ ಪರಿಸರ ವ್ಯಾಪ್ತಿಯಲ್ಲಿ ತಿಂಗಳಲ್ಲಿ 2 ವಾರ ಹಮ್ಮಿಕೊಳ್ಳುತ್ತಿದ್ದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಪಕ್ಷಿ ಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲು ಪರಿಸರ ತಜ್ಞರೂ ಇದ್ದಾರೆ. ಮುಂದಿನ ದಿನಗಳಲ್ಲಿ ಪೃಕೃತಿ ಅರಿವು ಕಾರ್ಯಕ್ರಮಗಳು, ಪ್ಲಾಸ್ಟಿಕ್ ಪಾಯ, ಗಿಡ ನೆಡುವ ಕಾರ್ಯಕ್ರಮ ಆಯೋಜಿಸುವ ಉದ್ದೇಶವನು ಹೊಂದಿದೆ ಈ ತಂಡ.
ಗುಂಡ್ಲು ಹೊಳೆ/ನದಿ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ವಿಜಯಪುರ ಎಂಬ ಪಟ್ಟಣ ಗುಂಡ್ಲುಪೇಟೆ ಎಂದು ಮರು ನಾಮಕರಣಗೊಂಡಿತು. ಚಿಕ್ಕಕೆರೆಯ ಕೋಡಿ ನೀರು ಗುಂಡ್ಲುನದಿಯ ಒಡಲು ಸೇರುತ್ತದೆ. ಕೆರೆಯ ತೂಬಿನ ತೊಟ್ಟಿಯಲ್ಲಿರುವ ಚಪ್ಪಡಿ ಕಲ್ಲುಗಳಲ್ಲಿನ ಕೆತ್ತನೆ, ಕೆರೆುಂ ಪೂರ್ವ ಭಾಗದಲ್ಲಿರುವ ಮೆಟ್ಟಿಲುಗಳು, ಕೆರೆಯಿಂದ ಪಟ್ಟಣಕ್ಕೆ ಕುಡಿಯಲು ನೀರು ಹರಿಸುತ್ತಿದ್ದ ಮೇಲ್ಸೇತುವೆಗಳು ಜನೋಪಯೋಗಿ ಕೆರೆಯ ಅಸ್ತಿತ್ವವನ್ನು ಸಾರುತ್ತಿವೆ.
ಶ್ರೀಕಂಠ (ಕಂಠಿ)
ಸಂಪನ್ಮೂಲ ವ್ಯಕ್ತಿ.
ಗುಂಡ್ಲು ಪರಿಸರ ಬಳಗ
ಸಾರ್ವಜನಿಕರ ಸಹಕಾರ ದೊರೆತರೆ ಗುಂಡ್ಲು ನದಿಯ ಗತ ವೈಭವ ಮರುಕಳಿಸಲಿದೆ. ಮೊದಲ ಹೆಜ್ಜೆಯಾಗಿ ಪಟ್ಟಣದ ಚಿಕ್ಕಕೆರೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಆಸಕ್ತಿ ಮೂಡಿಸಲು ಪರಿಸರ ಶಿಕ್ಷಣ ಪ್ರಾರಂಭಿಸಿದ್ದೇವೆ.
ನಾಗಾರ್ಜುನ್ ಕುಮಾರ್ ಎಸ್. ಎಂ.
ಗುಂಡ್ಲು ಪರಿಸರ ಬಳಗದ ಪದಾಧಿಕಾರಿ.
– ವಸಂತ
ನಾಲ್ಕನೆ ತರಗತಿ
ಗುಂಡ್ಲು ಪರಿಸರ ಬಳಗ ಹಮ್ಮಿಕೊಳ್ಳುವ ಗಿಡಗಳನ್ನು ತೆರವುಗೊಳಿಸುವುದು, ಕಾವಲಿಯಲ್ಲಿ ಹೂಳೆತ್ತುವುದು ಸೇರಿದಂತೆ ಹಲವಾರು ಶ್ರಮದಾನ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇನೆ. ಸಾಮಾಜಿಕ ಕಾರ್ಯಗಳು ನಮಗೆ ಇಷ್ಟವಾಗುತ್ತವೆ.
-ಸಚಿನ್, ಕಾಲೇಜು ವಿದ್ಯಾರ್ಥಿ
ಮೈಸೂರು : ಸಮಾಜದಲ್ಲಿ ನಾನಾ ಕಾರಣಗಳಿಂದ ನೊಂದ ಪುರುಷರ ಹಕ್ಕುಗಳ ರಕ್ಷಣೆ ಹಾಗೂ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು…
ಮೈಸೂರು : ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಎಸ್ಐಆರ್ ಪ್ರಕ್ರಿಯೆ ನಿಯಮದಂತೆ ನಡೆಯುತ್ತಿಲ್ಲ. ಗುಂಪು ಗುಂಪಾಗಿ ಮತದಾರರ ಪಟ್ಟಿ ಪರಿಷ್ಕರಣೆ…
ಎಚ್.ಎಸ್.ದಿನೇಶ್ ಕುಮಾರ್ ನಿತ್ಯಾನಂದ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪಶ್ಚಾತ್ತಾಪದ ಕಣ್ಣೀರು ಮೈಸೂರು: ನಗರದ ಕುವೆಂಪುನಗರದಲ್ಲಿ ಪತ್ನಿಯಿಂದಲೇ ಹತ್ಯೆಯಾದ ನಿತ್ಯಾನಂದ…
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕು ಪಡೆದುಕೊಂಡಿದ್ದು, ಹಾರಂಗಿ ಜಲಾಶಯದ ಒಳಹರಿವಿನಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದೆ. ಹಾರಂಗಿ ಜಲಾಶಯಕ್ಕೆ…
ಮಹಾತ್ಮನ ಚಿಂತನೆಯ ಹಾದಿಯಲ್ಲಿ ನಡೆಯಬೇಕಿದೆ ನಾನು ಕಂಡ ಗಾಂಧಿಜಿಯವರಲ್ಲಿ, ಅವರ ಜೀವನದಲ್ಲಿ ನನ್ನನ್ನು ಅತ್ಯಂತ ಹೆಚ್ಚಾಗಿ ಆಕರ್ಷಿಸಿದ ವಿಷಯ ಎಂದರೆ…
ಗಾಂಧಿಜಿಯವರ ಜೀವನ ಚರಿತ್ರೆ ದೇಶ, ಖಂಡಗಳ ಗಡಿ ದಾಟಿ ಮನುಷ್ಯರೆಲ್ಲರ ಒಳಿತನ್ನು ಬಯಸುವ ಬಯಕೆಯನ್ನು ಭಾವಿಸಿ, ಜೀವಿಸಿ ತೋರಿಸಿದವರ ಪುಣ್ಯ…