ಆಂದೋಲನ ಪುರವಣಿ

ಯುವ ಡಾಟ್‌ ಕಾಂ : ಬತ್ತಿ ಹೋದ ಜೀವ ಸೆಲೆಗೆ ಮರುಜೀವ

– ಸೌಮ್ಯ ಹೆಗ್ಗಡಹಳ್ಳಿ

ವಾರಾಂತ್ಯದ ರಜಾದಿನಗಳನ್ನು ಸಿನಿಮಾ ವೀಕ್ಷಣೆ, ಮೋಜು, ಮಸ್ತಿ ಎಂದು ವಿನಿಯೋಗಿಸಿ, ಕಾಲ ಕಳೆಯುವ ಇಂದಿನ ದಿನಮಾನಗಳಲ್ಲಿ ತಮ್ಮೂರಿನ ಪರಿಸರ ಬಗೆಗೆ ಕಾಳಜಿಯನ್ನು ಹೊತ್ತು, ಬತ್ತಿ ಹೋಗುತ್ತಿರುವ ನದಿಗೆ ಮರುಜೀವ ಕೊಡುವ ಪ್ರಯತ್ನದ ಮೂಲಕ ಹಲವಾರು ಪರಿಸರ ಕಾಳಜಿ ಕುರಿತ ಕಾರ್ಯಕ್ರಮಗಳ ಜತೆ ಸಾಗಿರುವ ಯುವಪಡೆಯ ಕಾರ್ಯವೈಖರಿಯು ಎಲ್ಲರ ಗಮನಸೆಳೆದಿದೆ.

ಇದು ‘ಗುಂಡ್ಲು ಪರಿಸರ ಬಳಗ’ದ ವಿಶೇಷ!. ಇದೊಂದು ಸಮಾನ ಮನಸ್ಕ ಗೆಳೆಯರ ಬಳಗ, ಈ ಬಳಗವು ನಶಿಸಿಹೋಗಿರುವ ಗುಂಡ್ಲು ನದಿಯನ್ನು ಪುನರುಜ್ಜೀವನಗೊಳಿಸಲು ಹುಟ್ಟಿಕೊಂಡ ಒಂದು ಗುಂಪಾಗಿದ್ದು, ಪ್ರತಿ ಭಾನುವಾರ ಶ್ರಮದಾನದ ಮೂಲಕ ಕೆರೆಗಳ ಪುನರುಜ್ಜೀವನಗೊಳಿಸುವ ಕಾರ್ಯವನ್ನು ಪ್ರಾಥಮಿಕವಾಗಿ ಹಮ್ಮಿಕೊಂಡಿದೆ.
ಇದರ ಜೊತೆಗೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಜೀವಸೆಲೆಯಾಗಿದ್ದ ‘ಗುಂಡ್ಲು ನದಿ’ ನಶಿಸಿ ಹೋಗಲು ಕಾರಣಗಳನ್ನು ಪಟ್ಟಿ ಮಾಡಿ ಆ ನದಿಯನ್ನು ಪುನರುಜ್ಜೀವನಗೊಳಿಸುವ ಜತೆಗೆ, ಹಸಿರು ಪ್ರದೇಶದ ವಿಸ್ತರಣೆ, ಕೆರೆಗಳ ಸಂರಕ್ಷಣೆ ಕಾರ್ಯಗಳ ಒಂದುಯೋಜನೆಯನ್ನು ರೂಪಿಸಿಕೊಂಡು ಸಮಾನ ಮನಸ್ಕ ಗೆಳೆಯರ ಬಳಗ ಕಾರ್ಯನಿರತವಾಗಿದೆ.
2022ರ ನಂವೆಂಬರ್ 6ನೇ ತಾರೀಖಿನಿಂದ ಪ್ರತಿ ಭಾನುವಾರ ನಿರಂತರವಾಗಿ ಶ್ರಮದಾನ ಮಾಡುತ್ತಾ ಬಂದಿದೆ. ಪ್ರಾಥಮಿಕವಾಗಿ 10 ಸದಸ್ಯರಿಂದ ಆರಂಭವಾದ ‘ಗುಂಡ್ಲು ಪರಿಸರ ಬಳಗ’ದಲ್ಲಿ ಈಗ 200ಕ್ಕೂ ಹೆಚ್ಚು ಸದಸ್ಯರಿದ್ದು ಭಾನುವಾರದ ದಿನಗಳಂದು ಎಲ್ಲರೂ ಶ್ರಮದಾನದಲ್ಲಿ ಭಾಗಿಯಾಗುತ್ತಾರೆ. ಗುಂಡ್ಲುಪೇಟೆ ಪಟ್ಟಣದಲ್ಲಿ ಕಸ ಮತ್ತು ಕಟ್ಟಡದ ಅವಶೇಷಗಳನ್ನು ಹಾಕಿ ಮುಚ್ಚಿ ಹಾಕಲಾಗಿದ್ದ ಚಿಕ್ಕ ಕೆರೆಗೆ ಮರುಜೀವ ಕೊಡುವ ಕಾರ್ಯವನ್ನು ಈ  ಪರಿಸರ ಬಳಗ ಕೈಗೆತ್ತಿಕೊಂಡಿದೆ. ಅಲ್ಲಿ ಸುರಿಯಲಾಗಿದ್ದ ಸಹಸ್ರಾರು ಟ್ರ್ಯಾಕ್ಟರ್ ಲೋಡ್‌ಗಳಷ್ಟು ಕಟ್ಟಡದ ಅವಶೇಷಗಳನ್ನು ಹೊರಸಾಗಿಸಿ, ಕೆರೆಯ ತುಂಬೆಲ್ಲ ಬೆಳೆದಿದ್ದ ಮುಳ್ಳಿನ ಗಿಡಗಳನ್ನು ತೆರವುಗೊಳಿಸಿ, ಊಳಿನಿಂದ ಮುಚ್ಚಿ ಹೋಗಿದ್ದ ಜಲಮಾರ್ಗಗಳನ್ನು ಸ್ವಚ್ಛಗೊಳಿಸಿ, ಕೆರೆಗೆ ನೀರು ಸರಾಗವಾಗಿ ಹರಿದು ಬರುವಂತೆ ಮಾಡಿ ಈ ಕೆರೆಯನ್ನು ಮೈಸೂರಿನ ಕುಕ್ಕರಹಳ್ಳಿ ಕೆರೆ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕೆಂಬ ಗುರಿಯೊಂದಿಗೆ ಕಾರ್ಯ ಬರದಿಂದ ಸಾಗಿದೆ.

ಈ ತಂಡವು ಪ್ರತಿ ಭಾನುವಾರ ಬೆಳಿಗ್ಗೆ 7.30 ರಿಂದ ಶ್ರಮದಾನ ಕಾರ್ಯ ಹಮ್ಮಿಕೊಳ್ಳುತ್ತಾ ಬಂದಿದ್ದು ಯಾರು ಬೇಕಾದರೂ ಭಾಗವಹಿಸಬಹುದಾಗಿದೆ.
ಗುಂಡ್ಲುಹೊಳೆ ಪುನರುಜ್ಜೀವನಗೊಳಿಸುವ ಜತೆಗೆ, ವಿದ್ಯಾರ್ಥಿಗಳಿಗೆ ‘ಪಕ್ಷಿ ವೀಕ್ಷಣೆ’ ಕಾರ್ಯವನ್ನು ಗುಂಡ್ಲುಹೊಳೆ ಪರಿಸರ ವ್ಯಾಪ್ತಿಯಲ್ಲಿ ತಿಂಗಳಲ್ಲಿ 2 ವಾರ ಹಮ್ಮಿಕೊಳ್ಳುತ್ತಿದ್ದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಪಕ್ಷಿ ಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲು ಪರಿಸರ ತಜ್ಞರೂ ಇದ್ದಾರೆ. ಮುಂದಿನ ದಿನಗಳಲ್ಲಿ ಪೃಕೃತಿ ಅರಿವು ಕಾರ್ಯಕ್ರಮಗಳು, ಪ್ಲಾಸ್ಟಿಕ್ ಪಾಯ, ಗಿಡ ನೆಡುವ ಕಾರ್ಯಕ್ರಮ ಆಯೋಜಿಸುವ ಉದ್ದೇಶವನು ಹೊಂದಿದೆ ಈ ತಂಡ.



ಗುಂಡ್ಲು ಹೊಳೆ/ನದಿ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ವಿಜಯಪುರ ಎಂಬ ಪಟ್ಟಣ ಗುಂಡ್ಲುಪೇಟೆ ಎಂದು ಮರು ನಾಮಕರಣಗೊಂಡಿತು. ಚಿಕ್ಕಕೆರೆಯ ಕೋಡಿ ನೀರು ಗುಂಡ್ಲುನದಿಯ ಒಡಲು ಸೇರುತ್ತದೆ. ಕೆರೆಯ ತೂಬಿನ ತೊಟ್ಟಿಯಲ್ಲಿರುವ ಚಪ್ಪಡಿ ಕಲ್ಲುಗಳಲ್ಲಿನ ಕೆತ್ತನೆ, ಕೆರೆುಂ ಪೂರ್ವ ಭಾಗದಲ್ಲಿರುವ ಮೆಟ್ಟಿಲುಗಳು, ಕೆರೆಯಿಂದ ಪಟ್ಟಣಕ್ಕೆ ಕುಡಿಯಲು ನೀರು ಹರಿಸುತ್ತಿದ್ದ ಮೇಲ್ಸೇತುವೆಗಳು ಜನೋಪಯೋಗಿ ಕೆರೆಯ ಅಸ್ತಿತ್ವವನ್ನು ಸಾರುತ್ತಿವೆ.

ಶ್ರೀಕಂಠ (ಕಂಠಿ)
ಸಂಪನ್ಮೂಲ ವ್ಯಕ್ತಿ.
ಗುಂಡ್ಲು ಪರಿಸರ ಬಳಗ



ಸಾರ್ವಜನಿಕರ ಸಹಕಾರ ದೊರೆತರೆ ಗುಂಡ್ಲು ನದಿಯ ಗತ ವೈಭವ ಮರುಕಳಿಸಲಿದೆ. ಮೊದಲ ಹೆಜ್ಜೆಯಾಗಿ ಪಟ್ಟಣದ ಚಿಕ್ಕಕೆರೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಆಸಕ್ತಿ ಮೂಡಿಸಲು ಪರಿಸರ ಶಿಕ್ಷಣ ಪ್ರಾರಂಭಿಸಿದ್ದೇವೆ.

ನಾಗಾರ್ಜುನ್ ಕುಮಾರ್ ಎಸ್. ಎಂ.
ಗುಂಡ್ಲು ಪರಿಸರ ಬಳಗದ ಪದಾಧಿಕಾರಿ.


ಕೆರೆಯ ಪರಿಸರದಲ್ಲಿ ಹಸಿರು ನೊಣಹಿಡುಕ, ಟಿಟ್ಟಿಬ, ಲಾಂಗ್ ಟೇಲ್ಡ್ ಶ್ರೈಕ್, ಹಾರ್ನ್ ಬಿಲ್, ಇತರೇ ಪಕ್ಷಿಗಳನ್ನು ನೋಡಿ ಖುಷಿಯಾಯಿತು. ಪಕ್ಷಿ ಸಂಕುಲದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆನಿಸಿದೆ.

ವಸಂತ
ನಾಲ್ಕನೆ ತರಗತಿ



ಗುಂಡ್ಲು ಪರಿಸರ ಬಳಗ ಹಮ್ಮಿಕೊಳ್ಳುವ ಗಿಡಗಳನ್ನು ತೆರವುಗೊಳಿಸುವುದು, ಕಾವಲಿಯಲ್ಲಿ ಹೂಳೆತ್ತುವುದು ಸೇರಿದಂತೆ ಹಲವಾರು ಶ್ರಮದಾನ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇನೆ. ಸಾಮಾಜಿಕ ಕಾರ್ಯಗಳು ನಮಗೆ ಇಷ್ಟವಾಗುತ್ತವೆ.
-ಸಚಿನ್, ಕಾಲೇಜು ವಿದ್ಯಾರ್ಥಿ

andolanait

Recent Posts

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

12 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

15 hours ago

ಶೂಟೌಟ್‌ ಪ್ರಕರಣ ; ಮೃತರು ಬೇಟೆಗಾರರು ಎಂಬುದಕ್ಕೆ ಮತ್ತಷ್ಟು ಸಾಕ್ಷ್ಯ ಬಿಡುಗಡೆ ಮಾಡಿದ ಅರಣ್ಯ ಇಲಾಖೆ

ಹನೂರು : ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಬಲಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್​​ ಸಿಗುತ್ತಿದೆ. ದನ ಹುಡುಕಲು ಹೋಗಿದ್ದವರ…

16 hours ago

ನಕಲಿ ಔಷಧ ಜಾಲ ಪತ್ತೆ ಪ್ರಕರಣ ; ಎಸ್‌ಐಟಿ ತನಿಖೆಗೆ ಆದೇಶ

ಬೆಂಗಳೂರು: ಬೆಂಗಳೂರು ದಕ್ಷಿಣದ ದೊಡ್ಡೇರಿಯಲ್ಲಿ ಬೃಹತ್ ನಕಲಿ ಔಷಧ ಜಾಲ ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ಪ್ರಕರಣವನ್ನು…

17 hours ago

ಮುಡಾ ಬದಲಿ ನಿವೇಶನಗಳ ಹಂಚಿಕೆ ಆದೇಶ ರದ್ದು ; ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ ಸಚಿವ ಯತೀಂದ್ರ

ಸದ್ದಿಲ್ಲದೆ ಕೈಗೊಂಡ ತೀರ್ಮಾನಕ್ಕೆ ಬೆಚ್ಚಿದ ರಿಯಲ್‌ ಎಸ್ಟೇಟ್ ಉದ್ಯಮಿಗಳು; ಮೂರು ಪಕ್ಷಗಳಲ್ಲೂ ತಳಮಳ ಕೆ.ಬಿ.ರಮೇಶನಾಯಕ ಮೈಸೂರು : ಕಳೆದ ಎರಡು…

17 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ; 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ

ಮೊದಲಬಾರಿಗೆ ರಾಷ್ಟ್ರರಾಜಧಾನಿಯಿಂದ ಹೊರಗೆ ಆಯೋಜನೆ   72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಮೊದಲ ಬಾರಿಗೆ ನವದೆಹಲಿಯಿಂದ…

18 hours ago