ಆಂದೋಲನ ಪುರವಣಿ

ಜಡವಸ್ತುಗಳಿಗೂ ಜೀವ ತುಂಬುವ ಮೂರ್ತಿ ಇವರು

ಎ. ಆರ್. ಗಿರಿಧರ

ಮೈಸೂರಿನ ಡಿ. ಸುಬ್ಬಯ್ಯ ರಸ್ತೆಯ ನಿವಾಸಿ ಕೆ. ಜಿ. ಅನಂತ ಕೃಷ್ಣ (ಮನೆಯವರು, ಸ್ನೇಹಿತರು ಕರೆಯುವುದು ಮೂರ್ತಿ) ಅವರಿಗೆ ಜಡ ವಸ್ತುಗಳಿಗೂ ಜೀವ ತುಂಬುವ ಕಲೆ ಕರಗತವಾಗಿದೆ. ಕೊಬ್ಬರಿಗಿಟಕಿ, ಕಬ್ಬಿಣದ ತಗಡು, ಬೆಲ್ಲದ ಉಂಡೆ, ಅಚ್ಚು, ಕ್ಯಾರೆಟ್, ಬೀಟ್ರೂಟ್ ಮೊದಲಾದ ತರಕಾರಿಗಳು, ಗೋಂಡಂಬಿ, ಬಣ್ಣದ ಪೇಪರ್ ಯಾವುದೇ ಇವರ ಕೈಗೇ ಸಿಕ್ಕಿದರೂ ಕಲಾಕೃತಿಗಳನ್ನು ರೂಪಿಸುವ ಕೈಚಳಕ ಇವರಿಗಿದೆ.

ಐಟಿಐ ಫಿಟ್ಟರ್ ವ್ಯಾಸಂಗ ಮಾಡಿ ವಿಕ್ರಾಂತ್ (ಈಗ ಜೆಕೆ) ಟೈರ್ಸ್‌ನಲ್ಲಿ ಮೋಲ್ಡ್ ವಿಭಾಗದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಅನಂತ ಕೃಷ್ಣ ಕ್ಯಾರೆಟ್, ಮೂಲಂಗಿ, ಗೋಡಂಬಿ, ಕಡೆಗೆ ಕೊಬ್ಬರಿಯ ತುಂಡಿನಲ್ಲೂ ಬಾತುಕೋಳಿ ಮೊದಲಾದ ಚಿತ್ರಗಳನ್ನು ಮೂಡಿಸುತ್ತಾರೆ. ಚಿಕ್ಕಂದಿನಿಂದಲೂ ಕ್ರಿಯಾಶೀಲ ವ್ಯಕ್ತಿಯಾಗಿದ್ದ ಮೂರ್ತಿ ಅವರು ಆಟೋಟ, ಯೋಗಾಸನ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿಯೇ ಮುಂದಿರುತ್ತಿದ್ದರು. ೧೯೬೭ರಲ್ಲಿ ಕೊಬ್ಬರಿಯಲ್ಲಿ ಕಲಾಕೃತಿಗಳನ್ನು ರಚಿಸುತ್ತಿದ್ದ ಸುಬ್ಬ ಲಕ್ಷ ಮ್ಮ ಅವರು ಇವರಿಗೂ ಕೊಬ್ಬರಿ ಗಿಟಕಿಯೊಂದನ್ನು ಕೊಟ್ಟು ಸ್ಕೆಚ್ ಮಾಡಲು ಹೇಳಿದರು. ಅಂದಿನಿಂದ ಮೂರ್ತಿ ಅವರು ಕೊಬ್ಬರಿಯಲ್ಲಿ ಕಲಾ ಕೃತಿಗಳನ್ನು ರಚಿಸಲು ಆರಂಭಿಸಿದರು.

ಪರಿಚಯಸ್ತರು, ಅಕ್ಕಪಕ್ಕದವರ ಮನೆಯಲ್ಲಿ ಮದುವೆ ನಿಶ್ಚಯವಾದರೆ ಮೊದಲು ಸಂಪರ್ಕಿಸುವುದು ಮೂರ್ತಿ ಅವರನ್ನು. ಕೊಬ್ಬರಿ ಗಿಟಕಿನಲ್ಲಿ, ವೀಣೆ, ನವಿಲು, ಗಿಳಿ ಪಂಜರ, ಪನ್ನೀರು ದಾನಿ, ಗೌರಿಯ ಮುಖ ಹೀಗೆ ಹಲವಾರು ಕಲಾಕೃತಿಗಳನ್ನು ರೂಪಿಸುತ್ತಾರೆ. ಇದಕ್ಕಾಗಿ ಅಂಗಡಿಗೆ ತೆರಳಿ ಸುಮಾರು ೧೦೦ ಕೊಬ್ಬರಿ ಗಿಟಕುಗಳನ್ನು ಹುಡುಕಿದರೆ ಆಕಾರಕ್ಕೆ ತಕ್ಕಂತೆ ಕೆಲವೇ ಗಿಟಕಿಗಳು ಸಿಗುತ್ತವೆ.

ಅಂಗಡಿಯವರು ಕೇಳಿದಷ್ಟು ಬೆಲೆ ನೀಡಿ ಮನೆಗೆ ತಂದು ಅದನ್ನು ಆಕಾರಕ್ಕೆ ತಕ್ಕಂತೆ ಕತ್ತರಿಸಿ ಕಲಾ ಕೃತಿಗಳನ್ನು ರೂಪಿಸುತ್ತಾರೆ. ಇವರು ಮಾಡಿದ ಕೊಬ್ಬರಿ ಕಲಾಕೃತಿಗಳು ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಇತರೆ ದೇಶಗಳಿಗೂ ತಲುಪಿರುವುದು ವಿಶೇಷ. ಚಿಕ್ಕ ಗಾತ್ರದಲ್ಲಿ ಬರುವ ಬಕೆಟ್, ಬೆಲ್ಲದಲ್ಲಿ ಶಿವಲಿಂಗ, ಬಾತುಕೋಳಿ, ಕಮಲದ ಬಟ್ಟಲು, ಹಣತೆ ಮೊದಲಾದ ಕಲಾಕೃತಿಗಳು ಹೆಚ್ಚು ಆಕರ್ಷಣೀಯವಾಗಿವೆ.

ಮೆಟಲ್ ವರ್ಕ್: ಅಲ್ಯೂಮಿನಿಯಂ ತಗಡಿನಲ್ಲಿಯೂ ಇವರು ನಿಪುಣರು. ಪರಶುರಾಮ, ನವಿಲು, ಗಿಡಮರ, ಕೊಕ್ಕರೆ ಮೊದಲಾದ ಕಲಾಕೃತಿಗಳು ಇವರ ಕೈಚಳಕದಲ್ಲಿ ಮೂಡಿವೆ. ಮೆಟಲ್ ವರ್ಕ್ ಮಾಡಲು ಅಪಾರ ಪರಿಶ್ರಮ ಬೇಕು. ಮೊದಲು ಯಾವ ಚಿತ್ರ ರಚಿಸಬೇಕೋ ಅದರ ಸ್ಕೆಚ್ ಹಾಕುಕೊಂಡು ಚಿನ್ನ, ಬೆಳ್ಳಿ ಕೆಲಸಗಾರರು ಬಳಸುವ ಆಕ್ಸಾ ಬ್ಲೇಡ್ ಮಾದರಿಯ ಉಪಕರಣದಲ್ಲಿ ಕೊರೆಯುತ್ತಾ ಹೋಗಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಕೈಗೆ ಗಾಯವಾಗುತ್ತದೆ ಇಲ್ಲವೇ ಕಲಾಕೃತಿ ಹಾಳಾಗುತ್ತದೆ. ಸುಂದರ ಕಲಾಕೃತಿ ಮೂಡಿ ಬಂದಾಗ ಆಗುವ ಸಂತಸಕ್ಕೆ ಬೆಲೆ ಕಟ್ಟಲಾಗದು ಎನ್ನುತ್ತಾರೆ ಮೂರ್ತಿ.

ಪೇಪರ್ ಕಟಿಂಗ್ಸ್ ನಲ್ಲಿಯೂ ಸೈ: ಪತ್ರಿಕೆಯಲ್ಲಿ ಬಂದಿದ್ದ ಪೇಪರ್ ಕಟಿಂಗ್ ಕಲಾವಿದರೊಬ್ಬರ ಬಗೆಗಿನ ಲೇಖನದಿಂದ ಪ್ರೇರಿತರಾದ ಮೂರ್ತಿ ಅವರು ಬಣ್ಣದ ಪೇಪರ್ ಗಳಲ್ಲಿ ಗಂಡಭೇರುಂಡ, ಅಶೋಕ ಚಕ್ರ ಮೊದಲಾದವುಗಳನ್ನು ರಚಿಸುವುದನ್ನು ಕಲಿತರು. ಇನ್ನು ಹತ್ತಿ ಹಾರ ಮಾಡುವು ದರಲ್ಲಿಯೂ ಇವರು ನಿಪುಣರು. ಹಬ್ಬದ ದಿನಗಳಲ್ಲಿ ತಿಂಗಳಿಗೂ ಮೊದಲೇ ಇಂತಹ ಹಾರ ಬೇಕು ಎಂದು ಬೇಡಿಕೆ ಇಡುವ ಗ್ರಾಹಕರೂ ಇದ್ದಾರೆ.

 

andolana

Recent Posts

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

2 hours ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

2 hours ago

ಅಳಿಯ ಅಲ್ಲ, ಮಗಳ ಗಂಡ!

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…

2 hours ago

ವಿರಾಜಪೇಟೆ: ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಪಾರಮ್ಯ

ಕಾಂಗೀರ ಬೋಪಣ್ಣ ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ…

2 hours ago

ಇದು ಅಂತ್ಯವಲ್ಲ-ಹೊಸ ಆರಂಭ

ರೇಣುಕಾ ನಿಡುಗುಂದಿ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ತಾತ್ಕಾಲಿಕ ನೈತಿಕ ಗೆಲುವು ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ…

2 hours ago

ಎಸ್‌ಐಆರ್ ಅರ್ಜಿ; ಅನಿವಾರ್ಯ ಮರ್ಜಿ

ಚಿರಂಜೀವಿ ಸಿ ಹುಲ್ಲಹಳ್ಳಿ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ…

2 hours ago