ಗಾಂಧಿಜಿಯವರ ಜೀವನ ಚರಿತ್ರೆ ದೇಶ, ಖಂಡಗಳ ಗಡಿ ದಾಟಿ ಮನುಷ್ಯರೆಲ್ಲರ ಒಳಿತನ್ನು ಬಯಸುವ ಬಯಕೆಯನ್ನು ಭಾವಿಸಿ, ಜೀವಿಸಿ ತೋರಿಸಿದವರ ಪುಣ್ಯ ಕಥೆ. ಒಳಿತಿಗೆ ಎದುರಾಗುವ ಎಲ್ಲ ವಿಘ್ನಗಳನ್ನು ಧೈರ್ಯವಾಗಿ ಎದುರಿಸಿ ನಿಂತವರು ಗಾಂಧಿ. ಮನುಷ್ಯ ಕುಲದ ಪ್ರಜ್ಞಾವಂತಿಕೆ ವಿಕಾಸವಾಗಬೇಕಾದ ದಿಕ್ಕಿಗೆ ಗಾಂಧಿಜಿಯ ಜೀವನ ಒಂದು ಕೈಮರ. ಪುಣ್ಯವಶಾತ್ ಗಾಂಧಿಜಿಯ ಜೀವಿತದ ಕಾಲದಲ್ಲಿ ಸತ್ಯಕ್ಕಾಗಿ ಜೀವನವನ್ನೇ ಪಣಕ್ಕೊಡ್ಡಿ ಗಟ್ಟಿಯಾಗಿ ನಿಲ್ಲಲು ಅವಕಾಶವಿತ್ತು. ಅವರ ಆತ್ಮಕಥೆಗೆ ನೂರು ವರ್ಷವೇನು ಸಾವಿರ ವರ್ಷಗಳೇ ಆದರೂ ಅದು ಸತ್ಯಕ್ಕಾಗಿ ನಿಲುವ ಛಲವ ದೀಪ್ತಗೊಳಿಸು ಎನ್ನೊಳು ಎಂಬ ಹಂಬಲವನ್ನು ಮತ್ತೆ ಮತ್ತೆ ಮೊರೆಯುವ, ಮನುಕುಲದ ಒಳಿತುಗಳ ಕಥೆ. ಇದಕ್ಕೆ ಸರಿಸಾಟಿಯಾದದ್ದು ನಮಗೆ ಮತ್ತೆಲ್ಲೂ ಸಿಗುವುದಿಲ್ಲ.
ದ್ವೇಷದ ನಡುವೆ ಪ್ರೀತಿಯನ್ನು ಎತ್ತಿ ಹಿಡಿಯುವ, ವೈರಿಗಳ ನಡುವೆ ಸ್ನೇಹವನ್ನು ಬಿತ್ತುವ, ಸ್ವಾರ್ಥಿಗಳ ನಡುವೆ ನಿಸ್ವಾರ್ಥ ನಿಲುವನ್ನು ಗೆಲ್ಲುವಂತೆ ಮಾಡಬಲ್ಲ ಆದರೂ ಮಗುವಿನಂತೆ ಸರಳವಾಗಿ ಬದುಕಿದ ಮಹಾತ್ಮನ ಆತ್ಮಕಥೆಗೆ ನೂರು ವರ್ಷ ಆಗಿರುವುದು ಸಂಭ್ರಮಿಸಬೇಕಾದ ವಿಷಯ. ಗಾಂಧಿಯ ಬದುಕಿನಿಂದ ಸೂರ್ತಿ ಪಡೆಯದೆ ಬದುಕುವುದು ಆತ್ಮವಂಚಕರಿಗೆ ಮಾತ್ರ ಸಾಧ್ಯ. ಇಂತಹ ಆತ್ಮವಂಚಕರೇ ನಮ್ಮ ನಡುವೆ ಹೆಚ್ಚಿರಬಹುದು. ಆದರೇನು? ಗಾಂಧಿಯ ಬೆಳಕನ್ನು ಮುಚ್ಚಿಡಲು ಸಾಧ್ಯವಿಲ್ಲ. ಅದು ಮತ್ತೆ ಮತ್ತೆ ನಮ್ಮ ನಾಡನ್ನು ಬೆಳಗುತ್ತಲೇ ಇರುತ್ತದೆ.
-ಜಿ.ಎಸ್.ಜಯದೇವ, ದೀನಬಂಧು ಟ್ರಸ್ಟ್, ಚಾಮರಾಜನಗರ
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…
ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…
ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…
ಮಂಡ್ಯ: ರಾಜ್ಯದಲ್ಲಿ ಕೆಆರ್ಎಸ್ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವ ಡ್ಯಾಂನಿಂದ…
ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…
ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…