ಎಚ್.ಎಸ್.ದಿನೇಶ್ ಕುಮಾರ್
ನಿತ್ಯಾನಂದ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪಶ್ಚಾತ್ತಾಪದ ಕಣ್ಣೀರು
ಮೈಸೂರು: ನಗರದ ಕುವೆಂಪುನಗರದಲ್ಲಿ ಪತ್ನಿಯಿಂದಲೇ ಹತ್ಯೆಯಾದ ನಿತ್ಯಾನಂದ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೈಲು ಸೇರಿರುವ ನಾಲ್ವರಿಗೆ ಕೊಲೆಯ ಬಗ್ಗೆ ತಿಳಿದೇ ಇರಲಿಲ್ಲವಂತೆ. ಈಗ ಅವರುಗಳು ಪಶ್ಚಾತ್ತಾಪದಿಂದ ಪ್ರತೀದಿನ ಪೊಲೀಸರ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.
ಈ ಪ್ರಕರಣದಲ್ಲಿ ನಿತ್ಯಾನಂದನ ಪತ್ನಿ ಸುಶೀಲ ಹಾಗೂ ಆಕೆಯ ತಂಗಿಯ ಪತಿ ಹರೀಶ್ ಎಂಬವರು ಕೊಲೆಯ ರೂವಾರಿಗಳು. ಆದರೆ, ಇದರ ಬಗ್ಗೆ ಏನೂ ಗೊತ್ತಿರದ ಹಾಗೂ ಮರ ಕತ್ತರಿಸುವ
ವೃತ್ತಿಯಲ್ಲಿದ್ದ ರಂಗನಾಥ್(೨೩), ನವೀನ್(೨೪), ಚಂದನ್(೨೩) ಹಾಗೂ ಗಜೇಂದ್ರ(೨೫) ಅವರು ಗಳೂ ಕೂಡ ಈ ಪ್ರಕರಣದಲ್ಲಿ ಆರೋಪಿಗಳಾಗಿ ದ್ದಾರೆ. ಜೂ.೨೭ರ ಶನಿವಾರ ರಾತ್ರಿ ೧೨ ಗಂಟೆಯವರೆಗೂ ಅವರಿಗೆ ‘ತಾವು ಓರ್ವ ವ್ಯಕ್ತಿಯನ್ನು ಕೊಲೆ ಮಾಡಲು ಬಂದಿದ್ದೇವೆ’ ಎಂಬುದರ ಅರಿವೇ ಇರಲಿಲ್ಲ ಎಂಬುದು ಪೊಲೀಸರ ತನಿಖೆಯ ವೇಳೆ ಗೊತ್ತಾಗಿದೆ. ಸುಶೀಲ ಅವರ ತಂಗಿಯ ಗಂಡ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ನೌಕರ.
ಪ್ರಕರಣವೊಂದರಲ್ಲಿ ಸಿಲುಕಿದ್ದ ಕಾರಣ ಆತ ಆರು ತಿಂಗಳ ಹಿಂದೆ ಅಮಾನತ್ತಿಗೊಳಗಾಗಿದ್ದಾನೆ. ಈ ಹಿಂದೆ ಆತ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮರ ಕತ್ತರಿಸುವ ವೃತ್ತಿಯಲ್ಲಿ ಇದ್ದ ನಾಲ್ವರೂ ಪರಿಚಯವಾಗಿದ್ದರು. ಸುಶೀಲ ಹಾಗೂ ಮೈದುನ ಹರೀಶ್ ಅವರು ನಿತ್ಯಾನಂದನ ಕೊಲೆಗೆ ಒಂದು ವಾರದ ಹಿಂದೆಯೇ ಸಂಚು ರೂಪಿಸಿದ್ದರು. ಆದರೆ, ಆಜಾನುಬಾಹುವಾಗಿದ್ದ ನಿತ್ಯಾನಂದನನ್ನು ಇಬ್ಬರೇ ಸೇರಿ ಕೊಲೆ ಮಾಡುವುದು ಕಷ್ಟ ಎಂಬುದರ ಅರಿವು ಅವರಿಗಿತ್ತು. ಈ ಕಾರಣದಿಂದ ಕೊಲೆಗೆ ಕೆಲವರ ಸಹಾಯ ಪಡೆಯಲು ನಿರ್ಧರಿಸಿದ್ದಾರೆ.
ಆಗ ಹರೀಶ್ ನೆನಪಿಗೆ ಬಂದವರು ಈ ನಾಲ್ವರು ಅಮಾಯಕರು. ಅವರುಗಳನ್ನು ಸಂಪರ್ಕಿಸಿದ ಹರೀಶ್, ಮೈಸೂರಿನಲ್ಲಿ ಮರ ಕತ್ತರಿಸುವ ಕೆಲಸವಿದೆ. ದಿನಕ್ಕೆ ಒಂದು ಸಾವಿರ ರೂ. ಕೂಲಿ ಕೊಡಿಸುತ್ತೇನೆ ಎಂದು ಹೇಳಿ ಕರೆಸಿಕೊಂಡಿದ್ದಾನೆ. ಅದರಂತೆ ಅವರುಗಳು ಜೂ.೨೭ರ ಶನಿವಾರ ಸಂಜೆಯೇ ಮೈಸೂರಿಗೆ ಬಂದಿದ್ದಾರೆ. ಅವರುಗಳನ್ನು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಇರುವ ವಸತಿಗೃಹವೊಂದರಲ್ಲಿ ಇರಿಸಿದ್ದಾನೆ. ರಾತ್ರಿ ಎಲ್ಲರಿಗೂ ಮದ್ಯದ ಪಾರ್ಟಿ ಮಾಡಿಸಿದ್ದಾನೆ.
ನಂತರ ರಾತ್ರಿ ೧೨ ಗಂಟೆ ವೇಳೆಗೆ ನಿತ್ಯಾನಂದ ಅವರ ಮನೆಗೆ ಈ ನಾಲ್ವರು ಕಾರ್ಮಿಕರನ್ನು ಕರೆದುಕೊಂಡು ಬಂದಿದ್ದಾನೆ. ಅಲ್ಲಿಗೆ ಬಂದ ನಂತರವೇ ಅವರಿಗೆ ‘ತಾವು ಬಂದಿರುವುದು ಓರ್ವ ವ್ಯಕ್ತಿಯನ್ನು ಕೊಲೆ ಮಾಡಲು’ ಎಂಬ ವಿಚಾರ ಗೊತ್ತಾಗಿದೆ. ಆರಂಭದಲ್ಲಿ ಅವರುಗಳು ‘ನಾವು ಕೊಲೆ ಮಾಡುವುದಿಲ್ಲ’ ಎಂದು ಹಿಂದೇಟು ಹಾಕಿದ್ದಾರೆ. ಆದರೆ, ಮದ್ಯದ ನಶೆಯಲ್ಲಿ ಇದ್ದ ಅವರುಗಳನ್ನು ಹರೀಶ್ ಬಲವಂತವಾಗಿ ಒಪ್ಪಿಸಿದ್ದಾನೆ. ನಂತರ ನಿದ್ರೆಯಲ್ಲಿ ಇದ್ದ ನಿತ್ಯಾನಂದನನ್ನು ಎಲ್ಲರೂ ಸೇರಿ ಸುತ್ತುವರಿದಿದ್ದಾರೆ.
ಅಷ್ಟರಲ್ಲಿ ಎಚ್ಚರಗೊಂಡ ನಿತ್ಯಾನಂದ ಬಚಾವಾಗಲು ಎಲ್ಲರೊಡನೆ ಹೋರಾಟ ನಡೆಸಿದ್ದಾರೆ. ಆದರೂ ಅಂತಿಮವಾಗಿ ಆರು ಮಂದಿ ಸೇರಿ ಅವರ ಮೇಲೆ ಮುಗಿಬಿದ್ದಿದ್ದಾರೆ. ನಾಲ್ವರು ಸೇರಿ ಆತನ ಕೈ ಕಾಲು ಹಿಡಿದಿದ್ದಾರೆ. ನಂತರ ಅಲ್ಲಿಯೇ ಇದ್ದ ಬೆಡ್ಶೀಟ್ ಮೂಲಕ ಅವರ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಮುಗಿಸಿದ್ದಾರೆ. ಇಷ್ಟೆಲ್ಲಾ ಆಗುವ ಹೊತ್ತಿಗೆ ಮುಂಜಾನೆ ಮೂರು ಗಂಟೆ ಆಗಿದೆ. ನಂತರ ಎಲ್ಲರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇದೀಗ ಎಲ್ಲರನ್ನೂ ವಶಕ್ಕೆ ಪಡೆದಿರುವ ಪೊಲೀಸರ ತಂಡ ಅವರುಗಳು ತಂಗಿದ್ದ ವಸತಿಗೃಹ, ಕುವೆಂಪುನಗರದ ಮನೆ ಹಾಗೂ ಇನ್ನಿತರ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಿದೆ. ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕು ಪಡೆದುಕೊಂಡಿದ್ದು, ಹಾರಂಗಿ ಜಲಾಶಯದ ಒಳಹರಿವಿನಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದೆ. ಹಾರಂಗಿ ಜಲಾಶಯಕ್ಕೆ…
ಮಹಾತ್ಮನ ಚಿಂತನೆಯ ಹಾದಿಯಲ್ಲಿ ನಡೆಯಬೇಕಿದೆ ನಾನು ಕಂಡ ಗಾಂಧಿಜಿಯವರಲ್ಲಿ, ಅವರ ಜೀವನದಲ್ಲಿ ನನ್ನನ್ನು ಅತ್ಯಂತ ಹೆಚ್ಚಾಗಿ ಆಕರ್ಷಿಸಿದ ವಿಷಯ ಎಂದರೆ…
ಗಾಂಧಿಜಿಯವರ ಜೀವನ ಚರಿತ್ರೆ ದೇಶ, ಖಂಡಗಳ ಗಡಿ ದಾಟಿ ಮನುಷ್ಯರೆಲ್ಲರ ಒಳಿತನ್ನು ಬಯಸುವ ಬಯಕೆಯನ್ನು ಭಾವಿಸಿ, ಜೀವಿಸಿ ತೋರಿಸಿದವರ ಪುಣ್ಯ…
ಸ್ವಾಮಿ ಪೊನ್ನಾಚ್ಚಿ ನಾನು ಹುಚ್ಚೇಗೌಡರನ್ನು ನೋಡಿದ್ದು ಇತ್ತೀಚೆಗೆ. ಅದೂ ಅತ್ತಿಖಾನೆ ಎಸ್ಟೇಟ್ ಸ್ಥಾಪಕ ಮಾರಿಸ್ ಬಗ್ಗೆ ತಿಳಿಯಲು ಹೋದಾಗ. ಸಿಕ್ಕ…
ನಮ್ಮ ಜಾತಿಯ ಜನರು ನನ್ನ ವಿದೇಶ ಪ್ರಯಾಣವನ್ನು ಕುರಿತು ಗೊಂದಲವನ್ನು ಎಬ್ಬಿಸಿದರು. ಅಲ್ಲಿಯವರೆಗೆ ಮೋಧ್ ಬನಿಯರ ಪೈಕಿ ಯಾರೂ ವಿಲಾಯತಿಗೆ…
ಬೆಂಗಳೂರಿನ ನಾಗರಿಕರಿಗೆ ಸುರಕ್ಷಿತವಾಗಿ ಪಾದಚಾರಿ ಮಾರ್ಗದಲ್ಲಿ ನಡೆಯುವ ಹಕ್ಕಿದೆ.ಪಾದಚಾರಿ ಮಾರ್ಗಗಳ ಒತ್ತುವರಿ ಎಂದರೆ ನಾಗರಿಕರ ಸುರಕ್ಷತೆ ಕಸಿದುಕೊಂಡಂತೆ. ಇದು ಕೇವಲ…