ಆಂದೋಲನ ಪುರವಣಿ

ಯೋಗ ಕ್ಷೇಮ : ಜನನೇಂದ್ರಿಯದ ಸಂರಚನೆ

ಡಾ. ಬಿ.ಡಿ. ಸತ್ಯನಾರಾಯಣ.
ಚರ್ಮ ಮತ್ತುಲೈಂಗಿಕ ರೋಗಗಳ ತಜ್ಞರು ಮೈಸೂರು
ಭಾರತದಂತಹ ದೇಶಗಳಲ್ಲಿ ಇಂದಿಗೂ ಲೈಂಗಿಕ ಶಿಕ್ಷಣ ಮುಕ್ತವಾಗಿ ದೊರೆಯುತ್ತಿಲ್ಲ. ಅಂಜಿಕೆ, ನಾಚಿಕೆ, ಕಟ್ಟುಪಾಡುಗಳಿಗೆ ಸಿಲುಕಿ ಹಲವಾರು ಮಂದಿ ಲೈಂಗಿಕ ಸಮಸ್ಯೆಗಳಿಗೆ ತುತ್ತಾಗುತ್ತಿರುವುದು ಸಾಮಾನ್ಯವಾಗಿದೆ. ಇದೇ ವೇಳೆ ಈಗೀಗ ಲೈಂಗಿಕ ಶಿಕ್ಷಣಕ್ಕೆ ತಕ್ಕಮಟ್ಟಿಗಿನ ಬೆಂಬಲ ಸಿಕ್ಕುತ್ತಿರುವುದು ಸಂತೋಷದ ವಿಚಾರ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರತಿ ವಾರ ‘ಯೋಗಕ್ಷೇಮ’ ವಿಶೇಷ ಪುಟದಲ್ಲಿ ಲೈಂಗಿಕ ತಿಳವಳಿಕೆಯನ್ನು ಮೈಸೂರಿನ ಚರ್ಮ ಮತ್ತು ಲೈಂಗಿಕ ರೋಗಗಳ ತಜ್ಞರಾದ ಡಾ. ಬಿ.ಡಿ. ಸತ್ಯನಾರಾಯಣ ಅವರು ನೀಡಲಿದ್ದಾರೆ.
ಗಂಡು-ಹೆಣ್ಣಿನ ಪರಸ್ಪರ ಆಕರ್ಷಣೆ ಪ್ರಕೃತಿದತ್ತ ನಿಯಮ. ಬಾಲ್ಯಾವಸ್ಥೆಯಲ್ಲಿಯೇ ಈ ಆಕರ್ಷಣೆ ಶುರುವಾಗುತ್ತದೆ. ನಂತರ ಪ್ರಾಯದ ಹಂತ ತಲುಪುತ್ತಿದ್ದಂತೆ ಮಾನಸಿಕವಾಗಿ, ದೈಹಿಕವಾಗಿ ಲೈಂಗಿಕ ಅರಿವು ಹೆಚ್ಚಾಗುತ್ತದೆ. ಈ ರೀತಿಯ ಅರಿವಿನ ಹಂತದಲ್ಲಿ ಹಾರ್ಮೋನ್‌ಗಳ ಉತ್ಪಾದನೆ, ಜನನೇಂದ್ರಿಯಗಳ ಬಗೆಗಿನ ತಿಳವಳಿಕೆ ಮಹತ್ವಪೂರ್ಣವಾದದ್ದು.
ಮೂತ್ರನಾಳ (ಯುರೇತ್ರ), ಶಿಶ್ನ (ಪೆನ್ನಿಸ್), ಪ್ರಾಸ್ಟೇಟ್, ವೃಷಣ, ವೀರ್ಯನಾಳ (ಎಪಿಡೈಡಿಮಿಸ್), ವೀರ್ಯ ಕೋಶಗಳು (ಸಮೈನಲ್ ವೆಸಿಕಲ್ಸ್) ಪುರುಷ ಜನನೇಂದ್ರಿಯದ ಮುಖ್ಯ ಅಂಶಗಳು. ಮೂತ್ರ ನಾಳವು ಮೂತ್ರ ಕೋಶದಿಂದ ಪ್ರಾರಂಭವಾಗಿ ಸುಮಾರು ೨೦ ಸೆ.ಮೀ. ಉದ್ದವಿರುತ್ತದೆ. ಪ್ರಾಸ್ಟೇಸ್ ಗ್ರಂಥಿಯು ಮೂತ್ರ ಕೋಶದ ಕೆಳ ಭಾಗದಲ್ಲಿದ್ದು, ಇದರ ಮೂಲಕ ಮೂತ್ರನಾಳವು ಹಾಯ್ದು ಹೋಗುತ್ತದೆ. ಪ್ರಾಸ್ಟೇಟ್ ಗ್ರಂಥಿಯ ಹಿಂಭಾಗದ ಮೇಲುಗಡೆ ವೀರ್ಯ ಕೋಶಗಳಿದ್ದು, ವೃಷಣಗ ಳಿಂದ ಉತ್ಪತ್ತಿಯಾದ ವೀರ್ಯ ವೀರ್ಯನಾಳಗಳ ಮೂಲಕ ಹರಿದು ವೀರ್ಯಕೋಶಗಳಲ್ಲಿ ಶೇಖರವಾಗುತ್ತದೆ.  ಜನನಾಂಗವು ಸ್ನಾಯುಗಳು, ರಕ್ತ ನಾಳಗಳು ಮತ್ತು ನರ ತಂತುಗಳಿಂದ ಸುತ್ತುವರಿದಿರುತ್ತದೆ. ಇದನ್ನು ಶಿಶ್ನ ಎಂದೂ ಕರೆಯಲಾಗುತ್ತದೆ. ಇದರ ಮೇಲು ಭಾಗವನ್ನು ಕಾಂಡವೆಂದು, ತುದಿಯಲ್ಲಿ ಅಡಿಕೆಯ ಉಂಡೆಯಂತೆ ಕಾಣವು ಭಾಗವನ್ನು ಗ್ಲ್ಯಾನ್ಸ್ ಪೆನ್ನಿಸ್ (ಬಳ್ಳಿ) ಎಂದು ಕರೆಯುತ್ತೇವೆ.
ಪುರುಷತ್ವದ ಹಾರ್ಮೋನ್ ಮತ್ತು ವೀರ್ಯಾಣುವನ್ನು ಉತ್ಪಾದಿಸುವ ಎರಡು ವೃಷಣಗಳು ಶಿಶ್ನದ ತಳಭಾಗದಲ್ಲಿ ಚರ್ಮದಿಂದ ಆವೃತ್ತವಾದ ವೃಷಣದ ಚೀಲದಲ್ಲಿ ಸಂರಕ್ಷಿಸಲ್ಪಟ್ಟಿರುತ್ತವೆ. ವೀರ್ಯ ಮತ್ತು ಮೂತ್ರವು ಒಂದೇ ನಾಳದಿಂದ ಬೇರೆ ಬೇರೆ ಸಮಯದಲ್ಲಿ ಹೊರ ಬರುತ್ತವೆ. ಇವೆಲ್ಲವೂ ನಮ್ಮ ದೈಹಿಕ ಬದಲಾವಣೆ, ಹಾರ್ಮೋನುಗಳ ಉತ್ಪತ್ತಿಯಿಂದ ಒಂದು ಹಂತದ ವರೆಗೆ ನಿರಂತರವಾಗಿ ನಡೆಯುತ್ತಿರುತ್ತವೆ.
andolanait

Recent Posts

ನೀಟ್‌ ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ರದ್ದು: ಸೆ.5ರ ಪ್ರತಿಭಟನೆ ಹಿಂಪಡೆದ ಸಿಜೆಪಿ

ನವದೆಹಲಿ: ಸೆಪ್ಟೆಂಬರ್‌ 5ರಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯನ್ನು ಹಿಂಪಡೆಯಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸುಪ್ರೀಂ ಕೋರ್ಟ್‌ಗೆ…

7 hours ago

ನೀಟ್‌ ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ರದ್ದು

ನವದೆಹಲಿ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದೆ. ಜುಲೈನಲ್ಲಿ…

8 hours ago

ನೇಪಾಳ ಪ್ರವಾಹ | ಮೃತರ ಸಂಖ್ಯೆ 939ಕ್ಕೆ ಏರಿಕೆ, ಇನ್ನೂ ಸುಮಾರು 4,000 ಜನ ಕಣ್ಮರೆ

ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ ಮುಂದುವರಿದಿದ್ದು, ಮೃತರ ಸಂಖ್ಯೆ 939ಕ್ಕೆ ಏರಿಕೆಯಾಗಿದೆ. ಇನ್ನೂ ಸುಮಾರು 4 ಸಾವಿರ ಜನರು…

10 hours ago

ಮಡಿಕೇರಿ: ಕೆರೆಗೆ ಹಾರಿ ತಾಯಿ ಮಗಳು ಆತ್ಮಹತ್ಯೆ

ಮಡಿಕೇರಿ: ತಲಕಾವೇರಿ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ತಾಯಿ ಮತ್ತು ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.…

10 hours ago

ಮಡಿಕೇರಿ: ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ!

ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ ಆತಂಕ ಮೂಡಿಸಿದೆ. ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾಮದ ಪೊಲಮಾನಿ…

10 hours ago

ಓದುಗರ ಪತ್ರ: ನೀರು ಸೋರಿಕೆ ತಡೆಗಟ್ಟಿ

ಮೈಸೂರಿನ ಚಾಮರಾಜ ಮೊಹದ ಸೋನಾರ್ ಬೀದಿಯಲ್ಲಿ ಸಾರ್ವಜನಿಕ ನಲ್ಲಿಗೆ ಸಂಪರ್ಕ ಕಲ್ಪಿಸುವ ಪೈಪ್ ಪಡೆದುಹೋಗಿದ್ದು, ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.…

17 hours ago