ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ ನಡೆದಿದೆ.
ಗುರುವಾರ ತಾಲೂಕಿನ ಉಸ್ಗೂರಿನ ಚಂದ್ರಕಾಂತ ವ್ಯವಹಾರದ ನಿಮ್ಮಿತ್ತ ನಗರದ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಹಣವನ್ನು ಸ್ಕೂಟಿಯಲ್ಲಿಟ್ಟುಕೊಂಡು ತಾಲೂಕು ಆಡಳಿತ ಸೌಧದ ಸಮೀಪದ ಸದಾ ಜನಸಂಚಾರವಿರುವ ಪತ್ರಬರಹಗಾರರ ಕಾರ್ಯಾಲಯದ ಬಾಗಿಲಲ್ಲಿ ವಾಹನ ನಿಲ್ಲಿಸಿ ಒಳಗಿದ್ದ ಹಣದಲ್ಲಿ ೫೦.೦೦೦ ರೂಗಳನ್ನು ಸ್ಕೂಟಿಯಲ್ಲಿಟ್ಟು ಲಾಕ್ ಮಾಡಿ ಉಳಿದ ಹಣವನ್ನು ಎತ್ತಿಕೊಂಡು ಪತ್ರ ಬರೆಸಲು ಒಳಗೆ ತೆರಳಿದ್ದರು.
ಕಾರ್ಯಾಲಯದ ಒಳ ಹೋಗಿ ಅವರು ಹೊರಬರುವ ವೇಳೆಗೆ ಸ್ಕೂಟಿಯ ಡಿಕ್ಕಿ ತೆರದು ಹಣ ಕಳವು ಮಾಡಲಾಗಿತ್ತು ಈ ಘಟನೆಯಿಂದ ಕಂಗಾಲದ ಚಂದ್ರು ಹಾಗೂ ಪತ್ರ ಬರಹಗಾರ ನಾಗರಾಜ ಅರಸು ಅದೇ ಕಟ್ಟಡದಲ್ಲಿದ್ದ ಸಿ ಸಿ ಟಿ ವಿ ಯನ್ನು ಪರಿಶಿಲನೆಗೆ ಒಳಪಡಿಸಿದಾಗ ಮೂವರು ಚೋರರು ಸ್ಕೂಟಿ ಬಳಿ ಬಂದು ಅದರ ಅಕ್ಕಪ್ಪಕ್ಕ ನಿಂತು ಕೆಲವೇ ಕ್ಷಣದಲ್ಲಿ ಡಿಕ್ಕಿ ಎತ್ತಿ ಕೈಬೆರಳುಗಳನ್ನು ಒಳಗೆ ತೂರಿಸಿ ಹಣ ಕದ್ದು ಪರಾರಿಯಾದ ದೃಶ್ಯ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ . ನಂತರ ಚಂದ್ರು ಪಟ್ಟಣ ಠಾಣೆಗೆ ಹೋಗಿ ಹಣಕಳ್ಳತನವಾದ ಕುರಿತು ದೂರು ನೀಡಿದ್ದೂ ಅಲ್ಲದೆ ಸಿ ಸಿ ಟಿ ವಿಯ ದೃಶ್ಯವಳಿಗಳ ನೀಡಿದ್ದಾರೆ. ಕಳ್ಳರ ಪತ್ತೆಗೆ ನಂಜನಗೂಡು ಪೊಲೀಸರೀಗ ಬಲೆ ಬೀಸಿದ್ದಾರೆ.
ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…
ಬೆಂಗಳೂರು: ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ…
ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಹಾಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಇಡೀ…
ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ…
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು…
ಭಾರತೀಯ ಚಿತ್ರೋದ್ಯಮದ ಉತ್ತೇಜನಕ್ಕಾಗಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮುಂದಾಗಿರುವ ಸುದ್ದಿ. ಚಿತ್ರರಂಗಕ್ಕೆ ಸಂಬಂಧಿಸಿದಂತೆ, ಚಿತ್ರಗಳನ್ನು ವರ್ಗೀಕರಿಸಿ, ಪ್ರಮಾಣಪತ್ರ…