ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ ನಡೆದಿದೆ.
ಗುರುವಾರ ತಾಲೂಕಿನ ಉಸ್ಗೂರಿನ ಚಂದ್ರಕಾಂತ ವ್ಯವಹಾರದ ನಿಮ್ಮಿತ್ತ ನಗರದ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಹಣವನ್ನು ಸ್ಕೂಟಿಯಲ್ಲಿಟ್ಟುಕೊಂಡು ತಾಲೂಕು ಆಡಳಿತ ಸೌಧದ ಸಮೀಪದ ಸದಾ ಜನಸಂಚಾರವಿರುವ ಪತ್ರಬರಹಗಾರರ ಕಾರ್ಯಾಲಯದ ಬಾಗಿಲಲ್ಲಿ ವಾಹನ ನಿಲ್ಲಿಸಿ ಒಳಗಿದ್ದ ಹಣದಲ್ಲಿ ೫೦.೦೦೦ ರೂಗಳನ್ನು ಸ್ಕೂಟಿಯಲ್ಲಿಟ್ಟು ಲಾಕ್ ಮಾಡಿ ಉಳಿದ ಹಣವನ್ನು ಎತ್ತಿಕೊಂಡು ಪತ್ರ ಬರೆಸಲು ಒಳಗೆ ತೆರಳಿದ್ದರು.
ಕಾರ್ಯಾಲಯದ ಒಳ ಹೋಗಿ ಅವರು ಹೊರಬರುವ ವೇಳೆಗೆ ಸ್ಕೂಟಿಯ ಡಿಕ್ಕಿ ತೆರದು ಹಣ ಕಳವು ಮಾಡಲಾಗಿತ್ತು ಈ ಘಟನೆಯಿಂದ ಕಂಗಾಲದ ಚಂದ್ರು ಹಾಗೂ ಪತ್ರ ಬರಹಗಾರ ನಾಗರಾಜ ಅರಸು ಅದೇ ಕಟ್ಟಡದಲ್ಲಿದ್ದ ಸಿ ಸಿ ಟಿ ವಿ ಯನ್ನು ಪರಿಶಿಲನೆಗೆ ಒಳಪಡಿಸಿದಾಗ ಮೂವರು ಚೋರರು ಸ್ಕೂಟಿ ಬಳಿ ಬಂದು ಅದರ ಅಕ್ಕಪ್ಪಕ್ಕ ನಿಂತು ಕೆಲವೇ ಕ್ಷಣದಲ್ಲಿ ಡಿಕ್ಕಿ ಎತ್ತಿ ಕೈಬೆರಳುಗಳನ್ನು ಒಳಗೆ ತೂರಿಸಿ ಹಣ ಕದ್ದು ಪರಾರಿಯಾದ ದೃಶ್ಯ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ . ನಂತರ ಚಂದ್ರು ಪಟ್ಟಣ ಠಾಣೆಗೆ ಹೋಗಿ ಹಣಕಳ್ಳತನವಾದ ಕುರಿತು ದೂರು ನೀಡಿದ್ದೂ ಅಲ್ಲದೆ ಸಿ ಸಿ ಟಿ ವಿಯ ದೃಶ್ಯವಳಿಗಳ ನೀಡಿದ್ದಾರೆ. ಕಳ್ಳರ ಪತ್ತೆಗೆ ನಂಜನಗೂಡು ಪೊಲೀಸರೀಗ ಬಲೆ ಬೀಸಿದ್ದಾರೆ.
ವರದಿ : ಎಸ್.ಎಸ್.ಭಟ್
ನವದೆಹಲಿ: ಸೆಪ್ಟೆಂಬರ್ 5ರಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯನ್ನು ಹಿಂಪಡೆಯಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸುಪ್ರೀಂ ಕೋರ್ಟ್ಗೆ…
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಜುಲೈನಲ್ಲಿ…
ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ ಮುಂದುವರಿದಿದ್ದು, ಮೃತರ ಸಂಖ್ಯೆ 939ಕ್ಕೆ ಏರಿಕೆಯಾಗಿದೆ. ಇನ್ನೂ ಸುಮಾರು 4 ಸಾವಿರ ಜನರು…
ಮಡಿಕೇರಿ: ತಲಕಾವೇರಿ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ತಾಯಿ ಮತ್ತು ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.…
ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್ ಕಲ್ಲುಬಂಡೆ ಆತಂಕ ಮೂಡಿಸಿದೆ. ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾಮದ ಪೊಲಮಾನಿ…
ಮೈಸೂರಿನ ಚಾಮರಾಜ ಮೊಹದ ಸೋನಾರ್ ಬೀದಿಯಲ್ಲಿ ಸಾರ್ವಜನಿಕ ನಲ್ಲಿಗೆ ಸಂಪರ್ಕ ಕಲ್ಪಿಸುವ ಪೈಪ್ ಪಡೆದುಹೋಗಿದ್ದು, ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.…