ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ ಹಲವಾರು ಹಿರಿಯ ರಾಜಕಾರಣಿಗಳು ಕಂಬಳ ಬೇಡ ಎಂದರೂ ಸರ್ಕಾರ ಕಂಬಳಕ್ಕೆ ಸಿದ್ಧತೆ ನಡೆಸುತ್ತಿರುವುದು ಹಠಮಾರಿತನದ ಧೋರಣೆಯಾಗಿದೆ. ದಸರಾ ಹಬ್ಬ ಮೈಸೂರಿನ ಅಸ್ಮಿತೆ. ಪ್ರತಿ ವರ್ಷವೂ ಒಂದೊಂದು ಹೊಸ ಹೊಸ ಕಾರ್ಯಕ್ರಮಗಳನ್ನು ಸೇರಿಸುತ್ತಾ ಹೋದರೆ ಮೂಲ ದಸರಾ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯವೂ ಇದೆ. ಮುಂದಿನ ದಿನಗಳಲ್ಲಿ, ತಮಿಳುನಾಡಿನ ಪ್ರಸಿದ್ಧ ಕ್ರೀಡೆ ಜಲ್ಲಿ ಕಟ್ಟು, ಬಿಹಾರದ ನೃತ್ಯ, ಬೆಂಗಾಲಿ ಡ್ಯಾನ್ಸ್ ಹೀಗೆ ಸೇರಿಸುತ್ತಾ ಹೋದರೇ ನಾಡ ಹಬ್ಬ ದಸರಾದ ಮೆರುಗು ಮರೆಯಾಗುತ್ತಾ ಹೋಗುತ್ತದೆ. ಈ ವರ್ಷ ‘ಕೆಲವರು’ ಹಣ ಮಾಡಲು ಕಂಬಳವನ್ನು ಆಯೋಜಿಸಲು ಮುಂದಾದಂತೆ ಕಾಣುತ್ತಿದೆ.
ಇದಕ್ಕೆ ಸರ್ಕಾರ ಅವಕಾಶ ನೀಡಬಾರದು. ಇನ್ನೊಂದು ವಿಷಯ ಇಲ್ಲಿ ಪ್ರಸ್ತಾಪಿಸಬೇಕಾಗುತ್ತದೆ. ದಸರಾ ಮುಗಿದು ನಾಲ್ಕೈದು ತಿಂಗಳಾದರೂ ಲೆಕ್ಕ ಪತ್ರವನ್ನೇ ಕೊಡುವುದಿಲ್ಲ. ನಂತರ ಸಾರ್ವಜನಿಕರನ್ನು ತೃಪ್ತಿಪಡಿಸಲೆಂದೋ ಲೆಕ್ಕಪತ್ರ ನೀಡುವ ಸಂಪ್ರದಾಯವನ್ನು ಕಾಣಬಹುದು. ಈ ವರ್ಷದಿಂದಾದರೂ ದಸರಾ ಮುಗಿದ ಕೆಲವು ದಿನಗಳಲ್ಲೇ ಜನರಿಗೆ ‘ಒಪ್ಪಿಗೆ’ಯಾಗುವಂತಹ ಲೆಕ್ಕಪತ್ರ ನೀಡುವ ಅಭ್ಯಾಸ ರೂಢಿಸಿಕೊಳ್ಳಬೇಕಾಗಿದೆ.
-ಬೂಕನಕೆರೆ ವಿಜೇಂದ್ರ, ಮೈಸೂರು
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು…
ಭಾರತೀಯ ಚಿತ್ರೋದ್ಯಮದ ಉತ್ತೇಜನಕ್ಕಾಗಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮುಂದಾಗಿರುವ ಸುದ್ದಿ. ಚಿತ್ರರಂಗಕ್ಕೆ ಸಂಬಂಧಿಸಿದಂತೆ, ಚಿತ್ರಗಳನ್ನು ವರ್ಗೀಕರಿಸಿ, ಪ್ರಮಾಣಪತ್ರ…
ನವೀನ್ ಡಿಸೋಜ ತ್ವರಿತಗತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ; ಒಟ್ಟು ೪,೬೮,೬೫೭ ನಮೂನೆ ವಿತರಣೆ ಮೂಲಕ ಶೇ.೧೦೦ ಪ್ರಗತಿ…
ಹನೂರು: ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡುವಿನದೊಡ್ಡಿ ಮತ್ತು ಅರ್ಧನಾರೀಪುರ ಗ್ರಾಮಗಳಿಗೆ ಗುರುವಾರ ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್…
ರಾಜೇಶ್ ಬೆಂಡರವಾಡಿ ಯಾರೂ ಹೆಚ್ಚು, ಯಾರೂ ಕಮ್ಮಿ ಇಲ್ಲ ಎಂಬಂತೆ ಚಾ.ನಗರದ ಈ ಇಬ್ಬರ ಹೆಸರು ಹೈಕಮಾಂಡ್ ಅಂಗಳದಲ್ಲಿ ಚಾಮರಾಜನಗರ:…
ಎಸ್.ಎಸ್.ಭಟ್ ಮೈಸೂರು: ರಾಜ್ಯದಲ್ಲಿ ಸಾಕಷ್ಟು ಹೆಸರು ಮಾಡಿ ಆದರ್ಶವಾಗಿದ್ದ ಆದರ್ಶ ಪ್ರೌಢ ಶಾಲೆಗಳನ್ನು ಉನ್ನತೀಕರಿಸಿ ಪ್ರೌಢಶಾಲೆಗಳೊಂದಿಗೆ ೭೪ ಪದವಿ ಪೂರ್ವ…