Andolana originals

ʼವಿದ್ಯಾವಂತರು ಸಮುದಾಯಕ್ಕೆ ಆಸರೆಯಾಗಬೇಕುʼ

 

ಈ ನಡೆ ಶೋಷಿತ ಸಮುದಾಯಗಳ ಪ್ರಗತಿಗೆ ಸಹಕಾರಿ

-ಟಿ.ಕೆ.ಹರೀಶ್

ಶಿಕ್ಷಣ ಕೇವಲ ವೈಯಕ್ತಿಕ ಬೆಳವಣಿಗೆಗೆ ಮಾತ್ರ ಸೀಮಿತವಾಗಿರಬಾರದು. ಅದು ಸಮಾಜದ ಪ್ರಗತಿಗೆ ಪೂರಕವಾಗಿರಬೇಕು. ಒಬ್ಬ ವ್ಯಕ್ತಿ ವಿದ್ಯಾವಂತನಾದರೆ, ಆತನ ಕುಟುಂಬಕ್ಕೆ ಮಾತ್ರ ಬೆಳಕಾಗುತ್ತದೆ. ಅದೇ ವಿದ್ಯಾವಂತ ತನ್ನ ಸಮುದಾಯಕ್ಕೆ ನೆರವಾದರೆ ಇಡೀ ಸಮಾಜವೇ ಪ್ರಗತಿ ಹೊಂದುತ್ತದೆ. ಶೋಷಿತರನ್ನು ಸಬಲೀಕರಣಗೊಳಿಸುವ ಮೂಲಕ ಸಮಾನತೆಯ ಸಮಾಜವನ್ನು ನಿರ್ಮಿಸುವುದು ಪ್ರತಿಯೊಬ್ಬರ ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಯಾಗಿದೆ. ಶಿಕ್ಷಣ, ಆರ್ಥಿಕ ವಲಯಗಳಲ್ಲಿ ತಾರತಮ್ಯವಿಲ್ಲದ ವಾತಾವರಣ ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವುದರಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಶಿಕ್ಷಣವು ಕೇವಲ ವ್ಯಕ್ತಿಯೊಬ್ಬರ ವೈಯಕ್ತಿಕ ಬೆಳವಣಿಗೆಗೆ ಸೀಮಿತವಾಗಿರದೆ, ಇಡೀ ಸಮಾಜದ, ಅದರಲ್ಲೂ ವಿಶೇಷವಾಗಿ ಶೋಷಿತ ಮತ್ತು ಹಿಂದುಳಿದ ವರ್ಗಗಳ ಏಳಿಗೆಗೆ ಪ್ರಮುಖ ಸಾಧನವಾಗಬೇಕು.

ಶಿಕ್ಷಣ ಪಡೆದ ಪ್ರತಿಯೊಬ್ಬ ಶೋಷಿತ ವರ್ಗದ ವ್ಯಕ್ತಿಯು ತಮ್ಮ ಸಮುದಾಯದ ಏಳಿಗೆಗೆ ಶ್ರಮಿಸುವುದು ಅವರ ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ‘ಶಿಕ್ಷಿತರಾಗಿ, ಸಂಘಟಿತರಾಗಿ, ಹೋರಾಡಿ’ ಎಂಬ ಧ್ಯೇಯವಾಕ್ಯವು ಇದನ್ನೇ ಪ್ರತಿಪಾದಿಸುತ್ತದೆ. ಶೋಷಿತ ಮತ್ತು ಕೆಳವರ್ಗದಿಂದ ಬಂದು ಯಶಸ್ಸು ಹಾಗೂ ಶಿಕ್ಷಣ ಪಡೆದವರು ತಮ್ಮದೇ ಸಮುದಾಯದ ಅನಕ್ಷರಸ್ಥರಿಗೆ, ಬಡವರಿಗೆ ಬೆಂಬಲವಾಗಿ ನಿಂತಾಗ ಮಾತ್ರ ನೈಜ ಸಾಮಾಜಿಕ ಬದಲಾವಣೆ ಸಾಧ್ಯವಾಗುತ್ತದೆ.

ಶಿಕ್ಷಣ ಎನ್ನುವುದು ಕೇವಲ ವೈಯಕ್ತಿಕ ಬೆಳವಣಿಗೆಗೆ ಮಾತ್ರ ಸೀಮಿತವಾಗಿದೆ, ಸಮಾಜದ ಪ್ರಗತಿಗೂ ಪೂರಕವಾಗಿರಬೇಕು. ಪ್ರತಿಯೊಬ್ಬ ವಿದ್ಯಾವಂತನೂ ತನ್ನ ಯಶಸ್ಸಿನ ಜೊತೆಗೆ ತನ್ನ ಸುತ್ತಮುತ್ತಲಿನವರನ್ನು ಕೈಹಿಡಿದು ನಡೆಸುವುದು ಅತ್ಯಂತ ಜವಾಬ್ದಾರಿಯುತ ಕೆಲಸವಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ, ಶಿಕ್ಷಣ ಪಡೆದ ಪ್ರತಿಯೊಬ್ಬ ಶೋಷಿತ ವರ್ಗದ ವ್ಯಕ್ತಿಯೂ ತಮ್ಮ ಕೆಳವರ್ಗದ ಜನರನ್ನು ಕೈಹಿಡಿದು ಮೇಲೆತ್ತುವ ಮೂಲಕ ಮತ್ತು ಸಮಾನತೆಯ ಸಮಾಜವನ್ನು ನಿರ್ಮಿಸುವ ಮೂಲಕ ಈ ಅಂತರವನ್ನು ಹೋಗಲಾಡಿಸಬೇಕು.

ಆದರೆ ಇಂದು ಶಿಕ್ಷಣದ ಮೂಲಕ ಮೇಲೇರಿದ ಕೆಲವು ಶೋಷಿತ ಸಮುದಾಯದ ವ್ಯಕ್ತಿಗಳು, ಅದೇ ಸಮುದಾಯದ ತಳಮಟ್ಟದ ಜನರೊಂದಿಗೆ ಬೆರೆಯಲು ಹಿಂಜರಿಯುವುದು ಅಥವಾ ಅವರ ಸಮಸ್ಯೆಗಳಿಗೆ ಸ್ಪಂದಿಸದಿರುವುದನ್ನು ನಾವು ನೋಡುತ್ತಿದ್ದೇವೆ. ಮೇಲ್ಜಾತಿ ಎನಿಸಿಕೊಂಡ ಜನರಿಂದ ಶೋಷಣೆಗೆ ಒಳಗಾಗಿದ್ದ ವಿದ್ಯಾವಂತರು, ತಮಗಿಂತ ಕೆಳಸ್ತರದವರನ್ನು ಅದೇ ರೀತಿಯಲ್ಲಿ ಅಥವಾ ಅಸ್ಪೃಶ್ಯತೆಯ ಮನೋಭಾವದಿಂದ ನೋಡುವುದು ನಿಜವಾದ ಅಸ್ಪೃಶ್ಯತೆಯಾಗಿದೆ.
ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗದ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದ ಋಣ ತೀರಿಸಲು ಮತ್ತು ಸಮುದಾಯದ ಏಳಿಗೆಗೆ ಶ್ರಮಿಸಲು ಹಲವು ಮಾರ್ಗಗಳಿವೆ.

ಜ್ಞಾನದ ಹಂಚಿಕೆ: ತಮ್ಮ ಸಮುದಾಯದ ಮಕ್ಕಳಿಗೆ ಉಚಿತ ಬೋಧನೆ, ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದಕ್ಕೆ ಮುಂದಾಗಬೇಕು.

ಆರ್ಥಿಕ ಮತ್ತು ಕಾನೂನು ನೆರವು: ಸರ್ಕಾರಿ ಯೋಜನೆಗಳು, ವಿದ್ಯಾರ್ಥಿವೇತನಗಳು ಮತ್ತು ಕಾನೂನು ಹಕ್ಕುಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಾಗಿದೆ.

ಸಾಮಾಜಿಕ ನಾಯಕತ್ವ: ವಿದ್ಯಾವಂತರು ಸಮುದಾಯದ ಧ್ವನಿಯಾಗಿ ನಿಲ್ಲುವುದು, ಅವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು ಮತ್ತು ಸಮಾನತೆಗಾಗಿ ಹೋರಾಡುವುದು ಅತ್ಯಗತ್ಯ.

ಮಾರ್ಗದರ್ಶನ ಮತ್ತು ಸಲಹೆ: ನಿಮ್ಮ ಸಮುದಾಯದ ಯುವಕ-ಯುವತಿಯರಿಗೆ ಉನ್ನತ ಶಿಕ್ಷಣ, ಉದ್ಯೋಗಾವಕಾಶಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡುವುದು.

ಆರ್ಥಿಕ ಮತ್ತು ಸಾಮಾಜಿಕ ಬೆಂಬಲ: ವಿದ್ಯಾವಂತರು ಅಥವಾ ಸರ್ಕಾರಿ ಉದ್ಯೋಗದಲ್ಲಿರುವವರು ತಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುವುದು ಅಥವಾ ಅವರ ಶಿಕ್ಷಣಕ್ಕೆ ಆರ್ಥಿಕವಾಗಿ ನೆರವಾಗುವುದು. ಸಾಮಾಜಿಕ ಜಾಗೃತಿ ಮೂಢನಂಬಿಕೆಗಳು, ಅನಕ್ಷರತೆ ಮತ್ತು ಶೋಷಣೆಯ ವಿರುದ್ಧ ಧ್ವನಿಯೆತ್ತಿ, ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ.

ಕೌಶಲ ತರಬೇತಿ: ಈ ಸುಶಿಕ್ಷಿತರು, ತಮ್ಮ ಸಮುದಾಯಗಳ ವಿದ್ಯಾರ್ಥಿಗಳಿಗೆ ಕೇವಲ ಸಾಂಪ್ರದಾಯಿಕ ಶಿಕ್ಷಣವಷ್ಟೇ ಅಲ್ಲದೆ, ಸ್ವಾವಲಂಬಿಗಳಾಗಲು ಅಗತ್ಯವಿರುವ ವೃತ್ತಿಪರ ಕೌಶಲಗಳನ್ನು ಕಲಿಸುವುದು. ಆತ್ಮವಿಶ್ವಾಸ ತುಂಬುವುದು ಕೀಳರಿಮೆಯಿಂದ ಬಳಲುವ ಯುವಕರಲ್ಲಿ ಸಾಽಸುವ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಜಾಗೃತಗೊಳಿಸುವುದು.
ಮೂಢನಂಬಿಕೆ ನಿರ್ಮೂಲನೆ: ಸಮಾಜದಲ್ಲಿರುವ ಹಳೆಯ ತಪ್ಪು ಕಲ್ಪನೆಗಳನ್ನು ದೂರಾಗಿಸಿ, ವೈಜ್ಞಾನಿಕ ಮನೋಭಾವ ಬೆಳೆಸುವುದು ಶಿಕ್ಷಣವಂತರ ಜವಾಬ್ದಾರಿಯಾಗಿದೆ.

ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವವರ ಏಳಿಗೆಗೆ ಅದೇ ವರ್ಗದ ವಿದ್ಯಾವಂತರು ಮತ್ತು ಯಶಸ್ವಿ ವ್ಯಕ್ತಿಗಳು ಸಹಾಯ ಹಸ್ತ ಚಾಚುವುದರಿಂದ ಪರಿಣಾಮಕಾರಿ ಮತ್ತು ಶಾಶ್ವತ ಬದಲಾವಣೆ ತರಲು ಸಾಧ್ಯಗುತ್ತದೆ. ಇದು ಕೇವಲ ವೈಯಕ್ತಿಕ ಜವಾಬ್ದಾರಿಯಲ್ಲ, ಬದಲಿಗೆ ಇಡೀ ಸಮಾಜದಲ್ಲಿ ಸಮಾನತೆ ತರಲು ಇರುವ ಪ್ರಮುಖ ಸಾಮಾಜಿಕ ಕರ್ತವ್ಯವಾಗಿದೆ.

ನಾವು ಬೆಳೆದು ಬಂದ ಬೇರುಗಳನ್ನು ಮರೆಯದೆ, ನಮ್ಮ ಸಮುದಾಯದ ಇನ್ನಷ್ಟು ಜನರನ್ನು ಯಶಸ್ಸಿನ ಮೆಟ್ಟಿಲೇರಿಸುವುದು ಪ್ರತಿಯೊಬ್ಬ ವಿದ್ಯಾವಂತನ ಆದ್ಯ ಕರ್ತವ್ಯ ಆಗಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರ ‘ಶಿಕ್ಷಿತರಾಗಿ, ಸಂಘಟಿಸಿ, ಹೋರಾಡಿ’ ಎಂಬ ಮಂತ್ರದಂತೆ, ಶಿಕ್ಷಣ ಮತ್ತು ಪರಸ್ಪರ ಬೆಂಬಲವು ಒಂದು ಸಬಲ ಮತ್ತು ಸಮಾನತೆಯ ಸಮಾಜವನ್ನು ನಿರ್ಮಿಸಲು ಬುನಾದಿಯಾಗಿದೆ. ಒಬ್ಬ ವ್ಯಕ್ತಿಯ ಯಶಸ್ಸು ಇಡೀ ಸಮುದಾಯಕ್ಕೆ ಸ್ಛೂರ್ತಿಯಾಗಬೇಕು.

 

ಆಂದೋಲನ ಡೆಸ್ಕ್

Recent Posts

ನಾಗೇಂದ್ರ ರಾಜೀನಾಮೆ; ಅನಿಲ್‌ಗೆ ಸಚಿವ ಸ್ಥಾನ ಸಿಗುವುದೇ?

ಮಂಜು ಕೋಟೆ ಎಚ್.ಡಿ.ಕೋಟೆ: ನಾಯಕ ಸಮುದಾಯದ ಮುಖಂಡರಾದ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ತೆರವಾಗಿರುವ ಆ…

10 mins ago

ಓದುಗರ ಪತ್ರ: ಮದ್ದು ಅರೆಯಲಿ ಆಳುವವರು!

ಮದ್ದು ಅರೆಯಲಿ ಆಳುವವರು! ಬಗೆದಷ್ಟೂ ಬಯಲಾಗುತಿದೆ ಬ್ರಹ್ಮಾಂಡ ಭ್ರಷ್ಟಾಚಾರ ನೆಲದಾಳಕೂ ಬೇರೂರಿದೆ ಕೆಪಿಎಸ್‌ಸಿಯ ಕರ್ಮಕಾಂಡ! ಹಣವಂತರ ಆಡುಂಬಲವಿದು ಹರಣವಾಗುತಿದೆ ಬಡವನ…

18 mins ago

ಓದುಗರ ಪತ್ರ: ಪಾದಚಾರಿ ಮಾರ್ಗಕ್ಕೂ ಅಡ್ಡಗಾಲು

ಮೈಸೂರಿನ ಕುವೆಂಪು ನಗರ ಕಾಂಪ್ಲೆಕ್ಸ್ ಹತ್ತಿರ ಇರುವ ಒಂದನೇ ಹಂತ (ಇಡಬ್ಲ್ಯು ಎಸ್) ೩ನೇ ಕ್ರಾಸ್ ಬಳಿ ರಸ್ತೆಯ ಒಂದು…

20 mins ago

ಓದುಗರ ಪತ್ರ: ಈ ಶೌಚಾಲಯ ಪ್ರಾರಂಭಕ್ಕೆ ಮುಹೂರ್ತ ಬಂದಿಲ್ಲವೇ?

ಹೆಚ್. ಡಿ. ಕೋಟೆ ಮಿನಿ ವಿಧಾನಸೌಧ ಆಡಳಿತ ಕಚೇರಿ ಪಕ್ಕದಲ್ಲಿ ಸಾರ್ವಜನಿಕರಿಗಾಗಿ ಸಾಕಷ್ಟು ಹಣ ಖರ್ಚು ಮಾಡಿ ಶೌಚಾಲಯವನ್ನು ನಿರ್ಮಾಣ…

22 mins ago

ಓದುಗರ ಪತ್ರ: 365 ದಿನಗಳೂ ಸಾರ್ವಜನಿಕ ಗ್ರಂಥಾಲಯಗಳ ಸೇವೆ ಲಭ್ಯವಿರಲಿ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಬೆಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳು…

23 mins ago

ಯುವಜನರ ಕೈಯಲ್ಲಿ ಮೊಬೈಲ್ ಇದೆ; ದಿಕ್ಕು ಇದೆಯೇ?

ಟಿ.ಕೆ.ಹರೀಶ್ ತಕ್ಷಣದ ಯಶಸ್ಸಿನ ಸಂಸ್ಕೃತಿಯಿಂದ ಅಪಾಯಕಾರಿ ; ಯುವಜನರಿಗೆ ಮನವರಿಕೆ ಅಗತ್ಯ ಇಂದು ಒಂದು ಮಗು ಹುಟ್ಟಿದಾಗ ಅದರ ಸುತ್ತಲೂ…

26 mins ago