ಆಂದೋಲನ ಪುರವಣಿ

ಯೋಗ ಕ್ಷೇಮ : ವೀರ್ಯ ಸ್ಖಲನದ ಬಗ್ಗೆ ತಪ್ಪು ತಿಳುವಳಿಕೆ ಬೇಡ

ವೀರ್ಯವು ಲೈಂಗಿಕಾಂಗಗಳಿಂದ ಹೊರಚೆಲ್ಲಲ್ಪಡುತ್ತದೆ. ಈ ವೇಳೆ ಸ್ನಾಯುಗಳು ವಿಕಸನ, ಸಂಕುಚಿತ ಕ್ರಿಯೆಗೆ ಒಳಪಟ್ಟು ಶಕ್ತಿಯು ವ್ಯಯವಾಗುತ್ತದೆ. ಈ ವೇಳೆ ಸೊಂಟದ ಸುತ್ತಲೂ ನಿಶ್ಯಕ್ತಿಯ ಅನುಭವ ಆಗುವುದು ಸ್ವಾಭಾವಿಕ. ಇದು ವೀರ್ಯನಾಶದಿಂದ ಆಗುತ್ತಿದೆ ಎಂದು ತಿಳಿಯುವುದು ಮೂಢನಂಬಿಕೆ. ಕೆಲವರಲ್ಲಿ ಕೆಲವೊಮ್ಮೆ ಮೂತ್ರ ವಿಸರ್ಜನೆ ಸಮಯದಲ್ಲೇ ಅಥವಾ ಕೊನೆಯಲ್ಲಿ ಮಜ್ಜಿಗೆ ಬಣ್ಣದಂಥ ಮೂತ್ರ ಅಥವಾ ಲೋಳೆಯಂತಹ ವಿಸರ್ಜನೆಯಾಗಬಹುದು. ಆಗ ಮೂತ್ರದೊಂದಿಗೆ ವೀರ್ಯ ವಿಸರ್ಜನೆಯಾಗುತ್ತಿದೆ ಎಂದು ಬಹಳಷ್ಟು ಮಂದಿ ತಪ್ಪು ತಿಳಿದುಕೊಂಡಿರುತ್ತಾರೆ. ಲೈಂಗಿಕಾಂಗಳಲ್ಲಿರುವ ಯುರೇತ್ರಲ್ ಮತ್ತು ಪ್ರಾನ್ಟೇಟ್ ಗ್ರಂಥಿಗಳು ಸ್ರವಿಸುವ ರಸರಗಳು ಒಮ್ಮೊಮ್ಮೆ ಮೂತ್ರದ ಜೊತೆಗೆ ಬೆರಕೆಯಾವುದೇ ಮಜ್ಜಿಗೆ ಬಣ್ಣದ ಮೂತ್ರ ವಿಸರ್ಜನೆಗೆ ಕಾರಣ. ಹಾಗಾಗಿ ಯುವಕರು ಮೂತ್ರದ ಬಣ್ಣದ ವ್ಯತ್ಯಾಸಕ್ಕೂ ವೀರ್ಯನಾಶಕ್ಕೂ ಸಂಬಂಧವಿದೆ ಎಂದುಕೊಳ್ಳಬಾರದು.

ಲೈಂಗಿಕ ಕ್ರಿಯೆಯ ಸಮಯದಲ್ಲಿ ಹೊರ ಚೆಲ್ಲುವ ವೀರ್ಯದ ಬಣ್ಣ, ಪ್ರಮಾಣ, ಸಾಂದ್ರತೆಯು ಲೈಂಗಿಕ ಪ್ರಚೋದನೆಯ ತೀವ್ರತೆ, ವಯಸ್ಸು, ಹಾರ್ಮೋನ್‌ಗಳ ಮಟ್ಟ, ಸಂಗಾತಿಯೊಡನೆ ಇರುವ ಸಾಮರಸ್ಯ ಮತ್ತು ಪುರುಷನ ಆರೋಗ್ಯವನ್ನು ಅವಲಂಬಿಸಿರುತ್ತದೆ. ವಯಸ್ಸಾದಂತೆ ವೀರ್ಯದ ಬಣ್ಣವು ತಿಳಿ ಹಳದಿ ಬಣ್ಣಕ್ಕೆ ತಿರುಗಬಹುದು. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆ ನಿಮಿತ್ತ ಹಾಗೂ ವಯಸ್ಸು ಹೆಚ್ಚಾದಂತೆ ವೀರ್ಯದ ಪ್ರಮಾಣವೂ ಕಡಿಮೆಯಾಗಬಹುದು. ಯುವಕರಲ್ಲಿ ವೀರ್ಯ ಸ್ಖಲನ, ವೀರ್ಯದ ಪ್ರಮಾಣದಲ್ಲಿ ವ್ಯತ್ಯಾಸವಾದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಮದುವೆಯಾಗಿ ಮಕ್ಕಳಾಗಿದ್ದರೆ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.

andolanait

Recent Posts

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

2 hours ago

ಓದುಗರ ಪತ್ರ: ವೈದ್ಯಕೀಯ ಸೀಟು ಹೆಚ್ಚಳ: ಪ್ರಶಂಸನೀಯ ನಡೆ

೨೦೨೮ - ೨೯ ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ ಹೆಚ್ಚುವರಿಯಾಗಿ ೫,೦೦೦ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ…

2 hours ago

ಓದುಗರ ಪತ್ರ: ಬಂದ್ ಮಾಡುವುದರಿಂದ ನಮಗೇ ತೊಂದರೆ ಅಲ್ಲವೇ?

ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟಿದ್ದು ಎಲ್‌ನಿನೋ ಪರಿಣಾಮ ಎಂದು ವರದಿಗಳು ಹೇಳಿವೆ. ಜೊತೆಗೆ ಹವಾಮಾನ ಇಲಾಖೆ ಅದನ್ನು ಪುಷ್ಟೀಕರಿಸಿದ್ದು, ಈ…

2 hours ago

ತಂಬಾಕು ನಿಯಂತ್ರಣ: ಕೇಂದ್ರ ದ್ವಂದ್ವ ನೀತಿ

ವಸಂತಕುಮಾರ ಮೈಸೂರು ಮಠ, ತಂಬಾಕು ವಿರೋಧಿ ಹೋರಾಟಗಾರ ಗುಣಮಟ್ಟದ ತಂಬಾಕು ಬೆಳೆ ಸಂಬಂಧ ರಾಜಕೀಯ ಹಸ್ತಕ್ಷೇಪ ಸಲ್ಲದು ಯಾವುದೇ ರೀತಿಯ…

2 hours ago

ಮಳೆಗಾಲದಲ್ಲಿ ಶುದ್ಧ ಕುಡಿಯುವ ನೀರು, ಬಿಸಿ ನೀರು ಒದಗಿಸಿ

ನವೀನ್ ಡಿಸೋಜ ಸಾಂಕ್ರಾಮಿಕ ಕಾಯಿಲೆಯಲ್ಲಿ ಹಿನ್ನೆಲೆ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಆಹಾರ ಸುರಕ್ಷತೆ ಇಲಾಖೆ ಸೂಚನೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ…

2 hours ago

ಹಿಂದಿನ ಉಸ್ತುವಾರಿಗಿದ್ದ ಖಾತೆಗಳು ಪುಟ್ಟರಂಗಶೆಟ್ಟರಿಗೆ!

ರಾಜೇಶ್ ಬೆಂಡರವಾಡಿ ಪಶುಸಂಗೋಪನೆ, ರೇಷ್ಮೆ ಖಾತೆ ಹಂಚಿಕೆ; ಉಭಯ ಕ್ಷೇತ್ರಗಳಲ್ಲಿ ಅನುಭವ ಇರುವ ಹಿನ್ನೆಲೆ  ಚಾಮರಾಜನಗರ: ರಾಜ್ಯದಲ್ಲಿ ಎರಡನೇ ಹಂತದಲ್ಲಿ…

2 hours ago