ಆಂದೋಲನ ಪುರವಣಿ

ಯೋಗ ಕ್ಷೇಮ : ಮುಟ್ಟು ಮುಂದೂಡುವ ಮುನ್ನ ವಹಿಸಿ ಎಚ್ಚರ

ಸೌಮ್ಯ ಹೆಗ್ಗಡಹಳ್ಳಿ

ಆಧುನಿಕ ಸಂದರ್ಭದಲ್ಲಿ ಹೆಂಗಳೆಯರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಮುಟ್ಟಿನ ಸಮಸ್ಯೆಯೂ ಒಂದು. ಇದೇ ವೇಳೆಯಲ್ಲಿ ದೂರದೂರಿನ ಪ್ರಯಾಣಕ್ಕೆಂದೋ, ಶುಭ ಸವಾರಂಭಗಳಲ್ಲಿ ಭಾಗವಹಿಸಲೆಂದೋ ತಿಂಗಳ ಋತು ಚಕ್ರನ್ನು ಮುಂದೂಡಲು (ಎರಡ್ಮೂರು ದಿನಗಳಿಗೆ) ಮಾತ್ರೆಗಳನ್ನು ತೆಗೆದುಕೊಳ್ಳುವುದು ಸಾಮಾನ್ಯವಾಗುತ್ತಿದೆ. ಇದು ಸರಿಯೇ? ಇದರಿಂದ ಆರೋಗ್ಯಕ್ಕೆ ಸಮಸ್ಯೆ ಆಗುತ್ತದೆಯೇ ಎಂಬುದರ ಬಗ್ಗೆ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ.ಲಲಿತಾ ಅವರು ಮಾತನಾಡಿದ್ದಾರೆ.

* ಮುಟ್ಟು ಮುಂದೂಡಲು ಮಾತ್ರೆಗಳ ಸೇವನೆ ಸೂಕ್ತವೇ?

ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ ಮಾತ್ರೆಗಳ ಬಳಕೆ ಮಾಡಬೇಕು. ಮುಟ್ಟಾಗುವ ೫ ದಿನಗಳ ಮುಂಚಿತವಾಗಿ ದಿನಕ್ಕೊಂದರಂತೆ ಮಾತ್ರೆಗಳನ್ನು ಬಳಸಬಹುದು. ಆದರೆ ಇದನ್ನೇ ಪುನರಾವರ್ತನೆ ಮಾಡುವುದು ಸರಿಯಲ್ಲ. ನಕಲಿ ಮಾತ್ರೆಗಳಿಂದ ದೂರವಿರಬೇಕು. ಕಡ್ಡಾಯವಾಗಿ ೧೦ ದಿನಗಳು ಮೀರಬಾರದು.


* ಈ ಬಗೆಯ ಮಾತ್ರೆ ಯಾರು ತೆಗೆದುಕೊಳ್ಳಬಹುದು?
ಇದಕ್ಕೆ ವಯಸ್ಸಿನ ಮೀತಿ ಇಲ್ಲ. ೧೮ ವರ್ಷ ಮೇಲ್ಪಟ್ಟವರು ತೆಗೆದುಕೊಳ್ಳಬಹುದು. ತೆಗೆದುಕೊಳ್ಳುವ ಮುನ್ನ ಕಡ್ಡಾಯವಾಗಿ ವೈದ್ಯರ ಸಲಹೆ ತೆಗೆದುಕೊಳ್ಳುವುದು ಸೂಕ್ತ.


* ಈ ಮಾತ್ರೆಗಳನ್ನು ಯಾರು ತೆಗೆದುಕೊಳ್ಳಬಾರದು?
ಮಧುಮೇಹಿಗಳು, ಹೃದುಂ ಸಂಬಂಧಿ ಸಮಸ್ಯೆ ಉಳ್ಳವರು, ಹಲವು ಬಗೆಯ ಕಾಯಿಲೆಯಿಂದ ಬಳಲುತ್ತಿರುವವರು ಈ ಮಾತ್ರಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬಾರದು. ಇದರಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಬಹಳಷ್ಟು ಎಚ್ಚರ ವಹಿಸುವುದು ಸೂಕ್ತ.


* ಮಾತ್ರೆಗಳ ಸೇವನೆಯಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು?

ಮುಟ್ಟು ತಡೆ ಮಾತ್ರೆಗಳನ್ನು ತೆಗೆದುಕೊಂಡು ಬಳಿಕ ಮುಟ್ಟಾದ ಸಂದರ್ಭಗಳಲ್ಲಿ ವಾಕರಿಕೆ, ಸುಸ್ತಾಗುವುದು, ಸಿಡುಕುವುದು ಸಹಜ. ಇದಕ್ಕೆ ಹಾರ್ಮೋನಿನಲ್ಲಿ ಆಗುವ ಬದಲಾವಣೆಗಳು ಕಾರಣ.


* ಸಾಮಾನ್ಯ ಮುಟ್ಟಿಗೂ ಮುಂದೂಡಲ್ಪಟ್ಟ ಮುಟ್ಟಿಗೂ ಏನು ವ್ಯತ್ಯಾಸ?

ಸಾಮಾನ್ಯ ಋತು ಚಕ್ರದ ದಿನಗಳಿಗೂ ಮುಂದೂಡಿ ಮುಟ್ಟಾದ ದಿನಗಳಿಗೂ ಬಹಷ್ಟು ವ್ಯತ್ಯಾಸವಿರುತ್ತದೆ. ಕೆಲವರಲ್ಲಿ ಅತಿಯಾದ ರಕ್ತಸ್ರಾವ ಕಾಡುವುದುಂಟು, ಮತ್ತಷ್ಟು ಮಂದಿಯಲ್ಲಿ ಕಡಿಮೆ ರಕ್ತಸ್ರಾವವೂ ಆಗುವುದುಂಟು. ಈ ಕಾರಣಕ್ಕಾಗಿ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.


ಮಾತ್ರೆ ತೆಗೆದುಕೊಳ್ಳುವ ಮುನ್ನ ತಿಳಿದಿರಬೇಕಾದ ಅಂಶಗಳೇನು?

ಒಂದಷ್ಟು ಮಹಿಳೆಯರು ಸರಿಯಾದ ತಿಳುವಳಿಕೆ ಇಲ್ಲದೆ ಮುಟ್ಟು ಮುಂದೂಡುವ ಮಾತ್ರೆಗಳನ್ನು ಸೇವಿಸಿ ಅನಾರೋಗ್ಯಕ್ಕೀಡಾದ ಉದಾಹರಣೆಗಳು ಉಂಟು. ಈ ವಾತ್ರೆಗಳನ್ನು ಯಾವಾಗ ಹೇಗೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಪ್ರತಿಯೊಬ್ಬರ ದೇಹ ಪ್ರಕೃತಿಯೂ ಬೇರೆ ಬೇರೆ ಇರುವುದರಿಂದ ಎಲ್ಲರಿಗೂ ಒಂದೇ ಸೂತ್ರ ಅನ್ವಯವಾಗುವುದಿಲ್ಲ.

andolanait

Recent Posts

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

3 hours ago

ಓದುಗರ ಪತ್ರ: ವೈದ್ಯಕೀಯ ಸೀಟು ಹೆಚ್ಚಳ: ಪ್ರಶಂಸನೀಯ ನಡೆ

೨೦೨೮ - ೨೯ ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ ಹೆಚ್ಚುವರಿಯಾಗಿ ೫,೦೦೦ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ…

3 hours ago

ಓದುಗರ ಪತ್ರ: ಬಂದ್ ಮಾಡುವುದರಿಂದ ನಮಗೇ ತೊಂದರೆ ಅಲ್ಲವೇ?

ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟಿದ್ದು ಎಲ್‌ನಿನೋ ಪರಿಣಾಮ ಎಂದು ವರದಿಗಳು ಹೇಳಿವೆ. ಜೊತೆಗೆ ಹವಾಮಾನ ಇಲಾಖೆ ಅದನ್ನು ಪುಷ್ಟೀಕರಿಸಿದ್ದು, ಈ…

3 hours ago

ತಂಬಾಕು ನಿಯಂತ್ರಣ: ಕೇಂದ್ರ ದ್ವಂದ್ವ ನೀತಿ

ವಸಂತಕುಮಾರ ಮೈಸೂರು ಮಠ, ತಂಬಾಕು ವಿರೋಧಿ ಹೋರಾಟಗಾರ ಗುಣಮಟ್ಟದ ತಂಬಾಕು ಬೆಳೆ ಸಂಬಂಧ ರಾಜಕೀಯ ಹಸ್ತಕ್ಷೇಪ ಸಲ್ಲದು ಯಾವುದೇ ರೀತಿಯ…

3 hours ago

ಮಳೆಗಾಲದಲ್ಲಿ ಶುದ್ಧ ಕುಡಿಯುವ ನೀರು, ಬಿಸಿ ನೀರು ಒದಗಿಸಿ

ನವೀನ್ ಡಿಸೋಜ ಸಾಂಕ್ರಾಮಿಕ ಕಾಯಿಲೆಯಲ್ಲಿ ಹಿನ್ನೆಲೆ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಆಹಾರ ಸುರಕ್ಷತೆ ಇಲಾಖೆ ಸೂಚನೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ…

3 hours ago

ಹಿಂದಿನ ಉಸ್ತುವಾರಿಗಿದ್ದ ಖಾತೆಗಳು ಪುಟ್ಟರಂಗಶೆಟ್ಟರಿಗೆ!

ರಾಜೇಶ್ ಬೆಂಡರವಾಡಿ ಪಶುಸಂಗೋಪನೆ, ರೇಷ್ಮೆ ಖಾತೆ ಹಂಚಿಕೆ; ಉಭಯ ಕ್ಷೇತ್ರಗಳಲ್ಲಿ ಅನುಭವ ಇರುವ ಹಿನ್ನೆಲೆ  ಚಾಮರಾಜನಗರ: ರಾಜ್ಯದಲ್ಲಿ ಎರಡನೇ ಹಂತದಲ್ಲಿ…

3 hours ago