ಇವರ ಹೆಸರು ಲಲಿತಾ ಮೊದಲಿಯಾರ್.ಇರುವುದು ಮೈಸೂರಿನ ರಾಜೀವ ನಗರದಲ್ಲಿ. ಇವರ ತಂದೆ ಅರಮನೆಗೆ ಹತ್ತಿರವಿದ್ದ ಮೈಸೂರಿನ ಒಂದು ಕಾಲದ ವರ್ತಕರು.
ಜೀವನದ ಹಲವು ಜಂಜಡಗಳಿಗೆ ಸಿಲುಕಿ ಜರ್ಜರಿತರಾಗಿದ್ದ ಲಲಿತಾ ಅದರಿಂದ ಹೊರಬರಲು ಕಂಡುಕೊಂಡ ದಾರಿ ಕನ್ನಡ ತಾಯಿ ಭುವನೇಶ್ವರಿಯ ದಿರಿಸು ಧರಿಸಿ ನವಂಬರ್ ತಿಂಗಳು ಪೂರ್ತಿ ಮೈಸೂರು ನಗರದ ರಾಜ್ಯೋತ್ಸವದ ಸಮಾರಂಭಗಳಲ್ಲಿ ಪ್ರತ್ಯಕ್ಷರಾಗುವುದು ಮತ್ತು ಆಗಸ್ಟ್ ಹದಿನೈದರಂದು ಭಾರತ ಮಾತೆಯ ವೇಷ ಧರಿಸಿ ಸ್ವಾತಂತ್ರೋತ್ಸವದಲ್ಲಿ ಪಾಲುಗೊಳ್ಳುವುದು.
ಕಳೆದ ಹಲವು ಹತ್ತು ವರ್ಷಗಳಿಂದ ಚಾಚೂ ತಪ್ಪದೆ ಈ ಕೈಂಕರ್ಯದಲ್ಲಿ ತೊಡಗಿರುವ ಲಲಿತಾ ಮೊದಲಿಯಾರ್ ಎಂಬ ಈ ತಾಯಿಗೆ ಬದುಕಲ್ಲಿ ಬೇರೆ ಯಾವುದೂ ಮಹಾತ್ವಾಕಾಂಕ್ಷೆಗಳಿಲ್ಲ. ಕನ್ನಡ ನಾಡಿನ ಈ ಮಣ್ಣು ಮತ್ತು ಮೈಸೂರಿನ ಬದುಕು ತನಗೆ ಕೊಟ್ಟ ಸುಖ ಸಂತೋಷಗಳಿಗೆ ತಾನು ತೋರಿಸುವ ಕೃತಜ್ಞತೆ ತನ್ನ ಈ ಕಾಯಕ ಎಂದು ವಿನೀತಳಾಗಿ ಹೇಳುತ್ತಾರೆ. ತನ್ನ ಬದುಕಿನ ಕುರಿತು ಹೇಳಹೋದರೆ ದೊಡ್ಡ ಕಾದಂಬರಿಯೇ ಸಾಕಾಗಲಾರದು ಎಂದು ವಿಷಾಧದಿಂದ ನಗುತ್ತಾರೆ.
ಲಖನೌ: ಉತ್ತರ ಪ್ರದೇಶದ ಅಲಿಗಂಜ್ನಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡವೊಂದರಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ 15 ವಿದ್ಯಾರ್ಥಿಗಳು…
ಕೀನ್ಯಾ: ಕಾಂಗೋದಲ್ಲಿ ಎಬೋಲಾ ವೈರಸ್ನ ಅಟ್ಟಹಾಸ ಮುಂದುವರಿದಿದ್ದು, ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 1003ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರ…
ಹಲಗೂರು: ಇಲ್ಲಿಗೆ ಸಮೀಪದ ಗಾಣಾಳು ಜಲಪಾತದಲ್ಲಿ ಈಜಲು ಇಳಿದಿದ್ದ ಯುವಕನೊಬ್ಬ ನೀರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.…
ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…
ಬೆಂಗಳೂರು: ದಿನದಿಂದ ದಿನಕ್ಕೆ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಶೀಘ್ರದಲ್ಲೇ ರಾಜ್ಯ ಸರ್ಕಾರ ಬಸ್ ಪ್ರಯಾಣ…
ಲಂಡನ್: ನಿರೀಕ್ಷೆಯಂತೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಡಳಿತಾರೂಢ ಲೇಬರ್ ಪಕ್ಷದೊಳಗೆ…