ಆಂದೋಲನ ಪುರವಣಿ

ಯುವ ಡಾಟ್‌ ಕಾಮ್‌: ಇ-ಬುಕ್ ಲೋಕದಲ್ಲೊಂದು ಸುತ್ತು ಹಾಕಿ

ಇನ್ನೇನು 5ಜಿ ಆಗಮನವಾಗುವ ಹೊಸ್ತಿಲಲ್ಲಿ ನಿಂತಿದ್ದೇವೆ. ಈ ವೇಳೆಯಲ್ಲಿ ವಿದ್ಯಾರ್ಥಿಗಳು, ಓದುಗರು ಅಂತಾರ್ಜಾಲದೊಳಗೆ ಪ್ರವೇಶ ಪಡೆದುಕೊಂಡು ಸಾಕಷ್ಟು ಪಡೆದುಕೊಂಡಿದ್ದಾರೆ. ಅಲ್ಲಿ ಸಿಗುವ ಬೇರೆ ಬೇರೆ ಆಕರ್ಷಕ ಕೊಂಡಿಗಳನ್ನು ಹಿಡಿದು ಸಮಯವನ್ನು ವ್ಯರ್ಥ ಮಾಡಿಕೊಂಡು ಆಸಕ್ತಿಯನ್ನು ಬೇರೆ ಕಡೆಗೆ ಹರಿಸಿದ್ದೂ ಇದೆ.

ಇಂತಹ ಹೊತ್ತಿನಲ್ಲಿ ಎಚ್ಚರಿಕೆಯಿಂದ, ನಮಗೇನು ಬೇಕು ಎನ್ನುವ ಸ್ಪಷ್ಟತೆಯಿಂದ ಜಾಲಾಡಿದರೆ ಜಾಲತಾಣ ಬೃಹತ್ ವಿಶ್ವಕೋಶ. ಇಲ್ಲಿ ಎಲ್ಲವೂ ಲಭ್ಯ. ಅಂತೆಯೇ ಇ-ಬುಕ್, ಆಡಿಯೋ ಬುಕ್‌ಗಳೂ ಕೂಡ.

ಕನ್ನಡದ ಮಟ್ಟಿಗೆ ಇ-ಬುಕ್‌ಗಳ ಲೋಕ ಆರಂಭವಾಗಿದ್ದು ೨೦೧೫ರಿಂದ ಈಚೆಗೆ. ಕೊರೊನಾ ಸಂದರ್ಭದಲ್ಲಿ ಇವುಗಳ ಬೆಳವಣಿಗೆ ಹೆಚ್ಚಾಯಿತು. ಮೈಲಾಂಗ್ ಸೇರಿ ಹಲವಾರು ಸಂಸ್ಥೆಗಳು ಹೊಸ ಇ-ಪುಸ್ತಕಗಳ ಪ್ರಕಟಣೆ, ಇರುವ ಪುಸ್ತಕಗಳನ್ನು ಇ-ಪುಸ್ತಕಗಳಾಗಿ ಪರಿವರ್ತಿಸುವ ಕೆಲಸ ಮಾಡುತ್ತಿವೆ. ಅಲ್ಲದೇ ಎಲ್ಲ ಪ್ರಮುಖ ಪ್ರಕಾಶನ ಸಂಸ್ಥೆಗಳೂ ಇ-ಪುಸ್ತಕದ ಕಡೆ ಮುಖ ಮಾಡುತ್ತಿವೆ.

ಅನುಕೂಲಗಳು

  • ಒಮ್ಮೆ ಸಿದ್ಧಪಡಿಸಿದರೆ ಮತ್ತೆ ಸಿದ್ಧಪಡಿಸುವ ಅಗತ್ಯವಿಲ್ಲ.
  • ತಪ್ಪುಗಳಿದ್ದರೆ ತಿದ್ದಿಕೊಳ್ಳಲು ಸುಲಭ, ಕಡಿಮೆ ವೆಚ್ಚ.
  • ಬೇಕೆಂದ ತಕ್ಷಣ ಕೊಂಡುಕೊಳ್ಳಲು ಅವಕಾಶ.
  • ಮೊಬೈಲ್‌ನಲ್ಲಿಯೇ ಓದಬಹುದು, ಟಿಪ್ಪಣಿ ಮಾಡಿಕೊಳ್ಳಬಹುದು.
  • ಭೌತಿಕವಾಗಿ ಸಂಗ್ರಹಿಸಿ ಇಟ್ಟುಕೊಳ್ಳಬೇಕಾದ ಹೊರೆ ಇರುವುದಿಲ್ಲ.
  • ಎಲ್ಲಿಯೇ ಇದ್ದರೂ ಓದಬಹುದು, ಕಂಪ್ಯೂಟರ್, ಟ್ಯಾಬ್‌ಗಳಲ್ಲೂ ಬಳಸಬಹುದು.
andolana

Recent Posts

ಮಹಾಪಂಚ್ ಕಾರ್ಟೂನ್‌

ಮಹಾಪಂಚ್ ಕಾರ್ಟೂನ್‌ | ಏಪ್ರಿಲ್‌ 9  

24 mins ago

ಕೇರಳ,ಪುದುಚೇರಿ,ಅಸ್ಸಾಂ ವಿಧಾನಸಭಾ ಚುನಾವಣೆ : ಮತದಾನ ಆರಂಭ

ನವದೆಹಲಿ : ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳಿಗೆ ಇಂದು ಬೆಳಿಗ್ಗೆ ಮತದಾನ ಆರಂಭವಾಗಿದೆ. ಜೊತೆಗೆ ನಾಗಾಲ್ಯಾಂಡ್‌ನ ಕೊರಿಡಾಂಗ್…

49 mins ago

ಬಾಗಲಕೋಟೆ, ದಾವಣೆಗರೆ ದಕ್ಷಿಣ ಉಪಚುನಾವಣೆಗೆ ಮತದಾನ ಆರಂಭ

ಬಾಗಲಕೋಟೆ : ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬೆಳಿಗ್ಗೆ ಮತದಾನ ಆರಂಭವಾಗಿದೆ. ಗುರುವಾರ, ಏಪ್ರಿಲ್ 9ರಂದು…

60 mins ago

ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಬಂಧನ ನೋಟಿಸ್‌ ಹಿಂಪಡೆದ ಕೋರ್ಟ್‌

ಮೈಸೂರು: ಮೈಸೂರು ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ (ಜಯರಾಮು ಆರ್‌ ವಿರುದ್ಧ ಕರ್ನಾಟಕ ರಾಜ್ಯ) ಪ್ರಕರಣದಲ್ಲಿ…

11 hours ago

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಹುಲಿ ಪೃಥ್ವಿ ಇನ್ನಿಲ್ಲ

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಹುಲಿ ಪೃಥ್ವಿ ಇನ್ನಿಲ್ಲ ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಪ್ರವಾಸಿಗರ ಮನಗೆದ್ದಿದ್ದ ಹೆಮ್ಮೆಯ ಹುಲಿ…

13 hours ago

ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಬಂಧನ

ಬೆಂಗಳೂರು: 42ನೇ ಎಸಿಜೆಎಂ ನ್ಯಾಯಾಲಯ ಅರೆಸ್ಟ್‌ ವಾರೆಂಟ್‌ ಜಾರಿಯ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.…

14 hours ago