Andolana originals

ಸಾವಿರಾರು ಸೈನಿಕರ ಜೀವನ್ಮರಣದ ಪ್ರಶ್ನೆಯಾಗಿತ್ತು

ಕೈಲಾಶ್ ಶ್ರೇಣಿಯ ರೇಚಿನ್ ಲಾ ಪಾಸ್‌ನತ್ತ ಮುನ್ನುಗ್ಗುತ್ತಿರುವ ಚೀನಾದ ಟ್ಯಾಂಕ್‌ಗಳನ್ನು ತಡೆಯಲು ಒಂದೇ ಒಂದು ಗುಂಡು ಹಾರಿಸಿದರೂ ಆ ದೇಶದೊಂದಿಗೆ ಪೂರ್ಣ ಪ್ರಮಾಣದ ಯುದ್ಧಕ್ಕೆ ನಾಂದಿ ಹಾಡುವ ಸಾಧ್ಯತೆಗಳು ದಟ್ಟವಾಗಿದ್ದವು. ಅಂಥದೊಂದು ಪರಿಸ್ಥಿತಿಯನ್ನು ಬಯಸಿಯೇ ಭಾರತದ ಸೇನೆಯನ್ನು ಪ್ರಚೋದಿಸಲು ಚೀನಾ ಮುಂದಾಗಿದೆಯೋ ಏನೋ ಎಂಬ ಸಂಶಯವೂ ಇತ್ತು. ಆ ಸೂಕ್ಷ್ಮ ಪರಿಸ್ಥಿತಿಯಲ್ಲಿ ಜನರಲ್ ನರವಣೆ ಮೌನವಾಗಿ ಕುಳಿತಿದ್ದರು. ‘ಗೋಡೆಯ ಮೇಲಿನ ಗಡಿಯಾರದ ಟಿಕ್ ಟಿಕ್ ಶಬ್ದವೊಂದನ್ನು ಬಿಟ್ಟರೆ ಬೇರೇನೂ ಕೇಳಿಸುತ್ತಿರಲಿಲ್ಲ, ಜೂನ್ ತಿಂಗಳಿಂದ ಮಾಡಿಕೊಂಡಿರುವ ಎಲ್ಲ ಸಿದ್ಧತೆಗಳ ಬಗ್ಗೆ ಮನದಲ್ಲೇ ವಿಶ್ಲೇಷಣೆ ನಡೆಯುತ್ತಿತ್ತು, ಸರಬರಾಜು, ತರಬೇತಿ, ದುರ್ಗಮ ಭೂ ಪ್ರದೇಶ, ಹೊಸ ಪಡೆಗಳ ಗಸ್ತು ತಿರುಗುವಿಕೆ, ಯಾಂತ್ರೀಕೃತ ಪಡೆಗಳ ಸೇರ್ಪಡೆ ಎಲ್ಲವೂ ಈ ಕ್ಷಣಕ್ಕೆ ಸಾಕ್ಷಿಯಾಗಿವೆ. ಅದು ಮಕ್ಕಳು ಮರಳಿನಲ್ಲಿ ಮಾದರಿಗಳನ್ನು ನಿರ್ಮಿಸಿ ಆಡುವ ಯುದ್ಧದ ರೀತಿಯ ಆಟವಾಗಿರಲಿಲ್ಲ.

ಮುಂದಿನ ಕೆಲವೇ ನಿಮಿಷಗಳಲ್ಲಿ ಅವರು ನೀಡುವ ಯಾವುದೇ ಆದೇಶ ಸಾವಿರಾರು ಸೈನಿಕರ ಜೀವನ್ಮರಣದ ಪ್ರಶ್ನೆಯೂ ಆಗಿತ್ತು. ಇಂಥ ಸಂದರ್ಭದಲ್ಲಿ ಏನು ಮಾಡಬೇಕೆಂದು ಮನಸ್ಸು ಸ್ಪಷ್ಟವಾಗಿ ಹೇಳುತ್ತಿತ್ತಾದರೂ ಅದು ಸಂಪೂರ್ಣವಾಗಿ ಹರಳುಗಟ್ಟಿರಲಿಲ್ಲ. ಏಕೆಂದರೆ, ಖಂಡಿತವಾಗಿಯೂ ಅದು ಸುಲಭದ ತೀರ್ಮಾನವಾಗಿರಲಿಲ್ಲ. ಕೆಲವು ಕ್ಷಣಗಳ ನಂತರ ಜನರಲ್ ನರವಣೆ ತಮ್ಮ ನಿರ್ಧಾರವನ್ನು ಕೈಗೊಂಡರು. ‘ಮೊದಲ ಗುಂಡು ನಾವು ಹಾರಿಸುವುದಿಲ್ಲ’ ಎಂದು ಜನರಲ್ ಯೋಗೇಶ್ ಜೋಶಿ ಅವರಿಗೆ ಸೂಚನೆ ಕೊಟ್ಟರು. ನಾವೇ ಮೊದಲು ಗುಂಡು ಹಾರಿಸಿದರೆ, ‘ನಾವಾಗೇ ಈ ಯುದ್ಧವನ್ನು ಆರಂಭಿಸಿಲ್ಲ, ಭಾರತೀಯ ಯೋಧರು ನಮ್ಮ ಮೇಲೆ ಗುಂಡು ಹಾರಿಸಿದ್ದಕ್ಕೆ ನಾವು ಪ್ರತಿದಾಳಿಮಾತ್ರ ಮಾಡಿದ್ದೇವೆ’ ಎಂದು ಸಮರ್ಥಿಸಿಕೊಳ್ಳುವುದಕ್ಕೆ ಅವರಿಗೆಸಾಧ್ಯವಾಗುತ್ತದೆ ಹಾಗೂ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಲು ಕಾರಣವೂ ಸಿಗುತ್ತದೆ’ ಎಂಬುದು ಜನರಲ್ ನರವಣೆ ಅವರ ಅಭಿಪ್ರಾಯವಾಗಿತ್ತು ಎಂದು ಪುಸ್ತಕವನ್ನು ಆಧರಿಸಿ ಪತ್ರಿಕೆ ವಿವರಿಸಿದೆ…

ಫಲಿಸಿದ ಯುದ್ಧತಂತ್ರ: ಗುಂಡು ಹಾರಿಸುವ ಬದಲು ಭಾರತದ ಮಧ್ಯಮ ಗಾತ್ರದ ಫಿರಂಗಿಗಳನ್ನು ರೇಚಿನ್ ಲಾ ಪಾಸ್‌ನ ಮುಂಭಾಗದಲ್ಲಿರುವ ಇಳಿಜಾರುಗಳಲ್ಲಿ ಚೀನಾದ ಸೈನಿಕರತ್ತ ಮುಖ ಮಾಡಿ ನಿಯೋಜಿಸುವಂತೆ ಜನರಲ್ ನರವಣೆ ಅವರು ಆದೇಶಿಸಿದರು. ಭಾರತದ ಗಡಿಯತ್ತ ಮುನ್ನುಗ್ಗುವ ಪ್ರಯತ್ನವನ್ನು ಚೀನಾದ ಟ್ಯಾಂಕ್‌ಗಳು ತಕ್ಷಣ ನಿಲ್ಲಿಸದಿದ್ದರೆ ಭೌತಿಕವಾಗಿ ಹತ್ತಿರದಲ್ಲೇ ಇರುವ ಚೀನಿ ಸೈನಿಕರನ್ನು ಮೇಲ್ಭಾಗದಿಂದ ಸುಲಭವಾಗಿ ಗುರಿಯಾಗಿಸಿಕೊಳ್ಳುವ ರೀತಿಯಲ್ಲಿ ನಮ್ಮ ಫಿರಂಗಿಗಳನ್ನು ನಿಯೋಜಿಸುವುದು, ಗುಂಡು ಹಾರಿಸದೇ ನಾವು ಚೀನಿ ಸೈನಿಕರನ್ನು ತಡೆಗಟ್ಟುವುದಕ್ಕೆ ಉಳಿದಿದ್ದ ಏಕೈಕ ಅಂತಿಮ ಉಪಾಯವಾಗಿತ್ತು, ಭಾರತದ ಗಡಿಯಿಂದ ಕೆಲವೇ ಮೀಟರ್ ದೂರದಲ್ಲಿದ್ದ ಚೀನಿಯರ ಟ್ಯಾಂಕ್ಗಳ ಚಲನೆ ಸ್ಥಗಿತವಾಯಿತು. ಭಾರತದ ಗಡಿಯಿಂದ ತುಸು ದೂರದಲ್ಲಿಯೇ ಚೀನಾದ ಟ್ಯಾಂಕ್‌ಗಳು ನಿಂತವು. ಭಾರತದ ಮಧ್ಯಮ ಗಾತ್ರದ ಟ್ಯಾಂಕ್‌ಗಳಿಗೆ ಚೀನಿಯರ ಲಘು ಟ್ಯಾಂಕ್‌ಗಳು ನಿಜಕ್ಕೂ ಸಮನಾಗಿರಲಿಲ್ಲ. ಆದರೂ ಒಂದು ಪೂರ್ಣ ಪ್ರಮಾಣದ ಯುದ್ಧಕ್ಕೆ ಹೋಗುವುದಕ್ಕೆ ಅದು ಸರಿಯಾದ ಸಮಯವಾಗಿರಲಿಲ್ಲ. ಮಧ್ಯಮ ಗಾತ್ರದ ಫಿರಂಗಿಗಳನ್ನು ಚೀನಿಯರತ್ತ ಮುಖ ಮಾಡಿ ನಿಯೋಜಿಸುವುದು ಒಂದು ರೀತಿಯ ಜಾಣ ನಡೆಯಾಗಿತ್ತು, ಜನರಲ್ ನರವಣೆ ಅವರು ಮಾಡಿದ ರಣತಂತ್ರ ಕೆಲಸ ಮಾಡಿತು, ಚೀನಾದ ಸೈನ್ಯವೇ ಮೊದಲು ಕಣ್ಣು ಮಿಟುಕಿಸಿತು ಎಂದು ಆ.೩೧ರ ರಾತ್ರಿ ನಡೆದ ವಿದ್ಯಮಾನಗಳನ್ನು ಎಳೆಎಳೆಯಾಗಿ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ‘ದಿ ಕ್ಯಾರವಾನ್’ ವರದಿ ಮಾಡಿದೆ.

ಚೀನಾದ ಟ್ಯಾಂಕ್‌ಗಳ ಚಲನೆ ನಿಂತಿದ್ದರಿಂದಾಗಿ ಬಿಕ್ಕಟ್ಟು ಕೊನೆಗೊಂಡಿರಲಿಲ್ಲವಾದರೂ ಗರಿಷ್ಟ ಅಪಾಯದ ಕ್ಷಣ ಮರೆಯಾಗಿತ್ತು. ಮರುದಿನ ಬೆಳಿಗ್ಗೆ ಎರಡೂ ಕಡೆಯವರು ಚುಶುಲ್-ವೋಲ್ಡೋ ಸಭೆಯ ಸ್ಥಳದಲ್ಲಿ ಫ್ಲ್ಯಾಗ್ ಸಭೆ ನಡೆಸಲು ಒಪ್ಪಿಕೊಂಡರು. ಕೈಲಾಸ ಪರ್ವತ ಶ್ರೇಣಿಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸಲಾಗಿತ್ತು, ಭಾರತವು ಯುದ್ಧತಂತ್ರದ ಪ್ರಯೋಜನವನ್ನು ಸಹ ತಕ್ಕಮಟ್ಟಿಗೆ ಪಡೆದುಕೊಂಡಿತ್ತು.

” ಕರ್ತವ್ಯನಿರತ ಸೇನೆಯ ಹಿರಿಯ ಅಧಿಕಾರಿಗಳು ಪುಸ್ತಕ ಬರೆಯುವುದಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳಿವೆ. ಭಾರತೀಯ ಸೇನೆಯ ಸೇವಾ ಕಾಯಿದೆ ೧೯೫೦ ಮತ್ತು ಸೇವಾ ಕಾಯಿದೆ ೧೯೫೪ರ ಪ್ರಕಾರ, ಸೇನಾ ಅಧಿಕಾರಿಗಳು ಕೇಂದ್ರ ಸರ್ಕಾರದ ಪರವಾನಿಗೆ ಇಲ್ಲದೇ ಮಿಲಿಟರಿ ಕಾರ್ಯಾಚರಣೆಗಳು, ಸೂಕ್ಷ್ಮ ಮಾಹಿತಿಗಳು, ರಾಜಕೀಯ ನಿರ್ಧಾರಗಳು ಹಾಗೂ ಸೇವಾಮಾಹಿತಿ ಕುರಿತಂತೆ ಪುಸ್ತಕಗಳನ್ನು ಬರೆಯುವಂತಿಲ್ಲ.  ಅಷ್ಟೇ ಅಲ್ಲ, ಯಾವುದೇಮಾಧ್ಯಮದಲ್ಲಿ ಲೇಖನಗಳನ್ನು ಬರೆಯುವುದು, ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವುದು, ಭಾಷಣ, ಉಪನ್ಯಾಸ ಮಾಡುವುದಕ್ಕೂ ಅವಕಾಶ ಇರುವುದಿಲ್ಲ. ಈ ನಿಯಮಗಳನ್ನು ಉಲ್ಲಂಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರವೂ ಕೇಂದ್ರ ಸರ್ಕಾರಕ್ಕಿದೆ. ಈ ಎಲ್ಲ ನಿಯಮಗಳು ನಿವೃತ್ತ ಸೇನಾ ಅಧಿಕಾರಿಗಳಿಗೂ ಅನ್ವಯವಾಗುತ್ತವೆಯೋ ಎಂಬ ಸ್ಪಷ್ಟತೆ ಇಲ್ಲ. ಆದರೆ, ಲೆಫ್ಟಿನೆಂಟ್ ಜನರಲ್ ಅಥವಾ ಅದಕ್ಕಿಂತ ಉನ್ನತ ರ‍್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು ಸೇನಾ ಕಾರ್ಯಾಚರಣೆ ಕುರಿತಂತೆ ಪುಸ್ತಕ ಪ್ರಕಟಣೆ ಮಾಡುವ ಮೊದಲು ರಕ್ಷಣಾ ಇಲಾಖೆ ಮತ್ತು ಸೇನಾ ಪ್ರಧಾನ ಕಚೇರಿಗೆ ಮಾಹಿತಿ ನೀಡುವುದು ಕಡ್ಡಾಯ ಎಂಬ ನಿಯಮವಿದೆ ಎಂದೂ ಹೇಳಲಾಗುತ್ತದೆ. ವಿಶೇಷವಾಗಿ ಗಡಿಯಲ್ಲಿ ನಡೆಯುವ ಸಂಘರ್ಷಗಳು ಮತ್ತು ಯುದ್ಧದಂಥ ಸ್ಥಿತಿಯ ಕುರಿತಂತೆ ಮಾಹಿತಿಯನ್ನು ಸಾರ್ವಜನಿಕಗೊಳಿಸುವ ಮೊದಲು ಪೂರ್ವ ಅನುಮತಿ ಪಡೆಯಲೇಬೇಕು ಎಂದೂ ಹೇಳಲಾಗುತ್ತಿದೆ.”

 

 

ಆಂದೋಲನ ಡೆಸ್ಕ್

Recent Posts

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

34 seconds ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

4 mins ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

9 mins ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

16 mins ago

ಓದುಗರ ಪತ್ರ | ಮತದಾನ ಪದ್ಧತಿಯಲ್ಲೂ ಮಾರ್ಪಾಡಾಗಲಿ

ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ (ಎಐ) ನಾವು ಅಗಾಧ ಸಾಧನೆ ಮಾಡಿದ್ದೇವೆ. ಹಾಗಾಗಿ ಇವತ್ತು ಜಗತ್ತು ಭಾರತದತ್ತ ತಿರುಗಿ…

20 mins ago

ಓದುಗರ ಪತ್ರ | ಎಸ್‌ಐಆರ್ ಗೊಂದಲ ಪರಿಹರಿಸಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯಲ್ಲಿ ಸಮರ್ಪಕ ಮಾಹಿತಿ ಇಲ್ಲದ ಮತದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಕರುಡು…

24 mins ago