ಹೇ….. ಭೂಮಿ ಏನಿಷ್ಟು ಸಂಭ್ರಮ, ನಿನ್ನನ್ನೇ ನೀನು ಮರೆತಂತೆ. ಮಳೆಯ ಸ್ಪರ್ಶವಾಗುತ್ತಿದ್ದಂತೆ ಗೆಳೆಯನ ಕಂಡ ಪ್ರೇಯಸಿಯಂತಾಗಿ ನಳನಳಿಸುವೆ. ಬೇಸಿಗೆಯಲ್ಲಿ ವಿರಹದಿಂದ ನೊಂದಿದ್ದರೂ ಮೊದಲ ಮಳೆಗೆ ಘಮಿಸುವೆ. ಹಸಿರಿನ ಸೀರೆಯನ್ನು ನಿಧಾನವಾಗಿ ಹೊದ್ದುಕೊಳ್ಳುತ್ತಾ ನಳನಳಿಸುವೆ.
ಎಲ್ಲಡೆ ಝುಳು ಝುಳು ನೀನಾದ ಮಾಡುತ್ತಾ, ಸಂತೋಷಕ್ಕೆ ಎಲ್ಲೆ ಇಲ್ಲ ಎಂದು ನಲಿಯುವೆ. ಇದೇ ನಲಿವಿನಲ್ಲಿ ಮರ, ಗಿಡ, ಬಳ್ಳಿ, ಹೂಗಳು ಬೆಳೆದು ನಿಲ್ಲುತ್ತವೆ. ಆನಂದ ಸೂಸುತ್ತವೆ.
ಅಲಂಕಾರ ಮಾಡಿಕೊಂಡು ತಾನೇ ಸುಂದರಿ ಎಂದು ಬೀಗಬೇಡಿ, ಎಷ್ಟು ಕಾಲ ಈ ಸೌಂದರ್ಯ? ಆದರೆ ಪ್ರತಿ ವರ್ಷ ನವ ಯುವತಿಯಂತೆ ಕಂಗೊಳಿಸುವವಳು ನಾನು, ಚಿರಯುವತಿ ನಾನು… ಎಂದು ಈಗಿನ ಕಾಲದ ಯುವತಿಯರನ್ನು ಚೇಡಿಸುವ ನಿನ್ನ ತಣ್ಣನೆಯ ನೋಟ ಎಲ್ಲರಿಗೂ ಅಚ್ಚರಿಯೇ.
ಮಳೆ ಬಿದ್ದಾಗ ಇಳೆಯಲ್ಲಾಗುವ ಸದ್ದು, ಹೊರ ಬರುವ ಸಂಭಾಷಣೆಯಲ್ಲಿ ಸುಮಧುರ ಸಂಗೀತವಿರುತ್ತದೆ. ಗಾಳಿ, ಗಂಧ ಜೊತೆ ಸೇರಿ ಸಂಗೀತ ಗೋಷ್ಠಿಯೇ ನೆರೆದಂತಾಗುತ್ತದೆ. ಎಲ್ಲರನ್ನೂ ತಾಯಿಯಂತೆ ಪೋಷಿಸುವ ಇಳೆ, ವರುಣನ ಮುಂದೆ ಮಾತ್ರ ಮಗುವಿನಂತೆ ಕಾಣುತ್ತಾಳೆ.
ಇಷ್ಟು ಪ್ರೀತಿಯನ್ನು ವರುಣನ ಮೇಲೆ ಇಟ್ಟಿದ್ದರೂ ಸದಾಕಾಲ ತನ್ನೊಂದಿಗೆ ನಿಲ್ಲು ಎಂದು ಹೇಳುವ ಸ್ವಾರ್ಥಿಯಲ್ಲ ಇಳೆ. ಏಕೆಂದರೆ ವರುಣನ ಅಬ್ಬರ ಹೆಚ್ಚಾದರೆ ಆಗುವ ಅನಾಹುತದ ಅರಿವು ಅವಳಿಗಿದೆ. ಒಮ್ಮೊಮ್ಮೆ ವರುಣ ತಾಳ್ಮೆ ಮೀರಿ ಅಬ್ಬರಿಸಿದಾಗಲೂ ಅವನನ್ನು ಸಮಾಧಾನಿಸಿ ತನ್ನೊಡಲನ್ನು ಸೇರಿಸಿಕೊಳ್ಳುತ್ತಾಳೆ.
ಮಳೆಗಾಲ ಕಳೆದು ಬೇಸಿಗೆ ಶುರುವಾಗುತ್ತಿದ್ದಂತೆ ಮತ್ತದೇ ವಿರಹ. ಆದರೂ ಮತ್ತದೇ ದೀರ್ಘ ತಾಳ್ಮೆಯಿಂದ ಮುಂದಿನ ಮುಂಗಾರಿಗೆ ಕಾಯುತ್ತಾಳೆ. ಇದೆಲ್ಲವೂ ಪ್ರಕೃತಿಯಲ್ಲಿ ಇರುವ ಪ್ರೀತಿಯ ಜಾಲದಂತೆ ಕಾಣುವುದು ನನ್ನೊಬ್ಬಳಿಗಾ? ಎನ್ನುವ ಪ್ರಶ್ನೆಯೂ ಆಗಾಗ ಹುಟ್ಟುತ್ತದೆ.
ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…
ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…
ಬೆಂಗಳೂರು: ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ…
ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಹಾಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಇಡೀ…
ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ…
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು…