ಬೆಳವಾಡಿಯ ಗೇಟ್ ಬಳಿ ಮೊದಲ ಬಾರಿಗೆ ತರಕಾರಿ ಮಾರುವುದಕ್ಕೆ ಆರಂಭಿಸಿದವರು ರೇವಮ್ಮ. ಹತ್ತು ವರ್ಷಗಳ ಹಿಂದೆ ಆಕಸ್ಮಿಕವಾಗಿ ತರಕಾರಿ ಮಾರುವ ಕೆಲಸಕ್ಕೆ ಕೈ ಹಾಕಿದರು. ಇದಕ್ಕೂ ಮೊದಲು ಬೆಂಕಿಪುರದಲ್ಲಿ ಮನೆಯಲ್ಲೇ ಹೋಟೆಲ್ ವ್ಯಾಪಾರ ನಡೆಸುತ್ತಿದ್ದರು. ಮಕ್ಕಳೆಲ್ಲ ಬೆಳವಾಡಿಗೆ ಹೋಗಬೇಕೆಂದಾಗ ಮನೆಯಲ್ಲಿ ಒಬ್ಬಳೇ ಇರುವುದಕ್ಕೆ ಮನಸ್ಸಾಗದೆ, ಮಕ್ಕಳೊಂದಿಗೆ ಹೊರಟುನಿಂತರು.
ರೇವಮ್ಮ ಅವರು ಚಿಕ್ಕವರಿದ್ದಾಗ ಬಲಗಣ್ಣಿನ ದೃಷ್ಟಿ ಕಳೆದುಕೊಂಡರು. ಚಿಕಿತ್ಸೆಗೆಂದು ವೈದ್ಯರ ಬಳಿ ಹೋಗಲಾರದಷ್ಟು ಬಡತನ.
ಬೆಳಿಗ್ಗೆ ಆರು ಗಂಟೆ ಹೊತ್ತಿಗೆಲ್ಲ ತರಕಾರಿ, ಹೂ ವ್ಯಾಪಾರ ಶುರು ಮಾಡುವ ರೇವಮ್ಮ ರಾತ್ರಿ ಎಂಟೂವರೆ ತನಕ ಆದಷ್ಟು ದುಡಿಮೆ ಮಾಡಿಕೊಂಡು ಮನೆಗೆ ವಾಪಸ್ ಆಗುತ್ತಾರೆ. ಮಗಳು ಕೊಟ್ಟ ಮಧ್ಯಾಹ್ನದ ಬುತ್ತಿ, ಸಂಜೆಯ ಚಹ ಇವರ ಕೆಲಸಕ್ಕೆ ಹುರುಪು ಕೊಡುತ್ತವೆ. ನನ್ನ ಬದುಕಿಗೆ ನನ್ನ ತಾಯಿಯೇ ಸೂರ್ತಿ ಎನ್ನುವ ರೇವಮ್ಮ ಹತ್ತು ತಿಂಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದರೂ ತಾಯಿ ಕಲಿಸಿದ ಜೀವನ ಪಾಠವನ್ನು ಮರೆತಿಲ್ಲ
ಬೆಂಗಳೂರು : ಹಲವು ಸುತ್ತಿನ ಸಭೆಯ ಬಳಿಕ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆ…
ಗುಂಡ್ಲುಪೇಟೆ : ಬೆಂಗಳೂರಿನಿಂದ ಕೇರಳಕ್ಕೆ ಎಂಡಿಎಂಎ (MDMA) ಮಾದಕವಸ್ತು ಸಾಗಿಸುತ್ತಿದ್ದ ಆರೋಪದ ಮೇರೆಗೆ ಮುತ್ತಂಗ ಚೆಕ್ಪೋಸ್ಟ್ನಲ್ಲಿ ಇಬ್ಬರನ್ನು ಕೇರಳದ ಪೊಲೀಸರು…
ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…
ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…
ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…