ಬೆಳಗಿನ ಖಾಲಿತನ ಸರಿಸಿಟ್ಟ ಮನೆಯಂಗಳ ಬೈಗಿನಲ್ಲಿ ಗಾಳಿಪಟ ತಾಂರಿಗಾಗಿ ಮಕ್ಕಳ ದಂಡಿನ ಗೌಜಿನಲ್ಲಿರುತ್ತಿತ್ತು. ಪತ್ರಿಕೆ ಹರಿದು, ಅನ್ನ ನುರಿದು ಅಂಟಾಗಿಸಿ, ಹಿಡಿಕಡ್ಡಿಗಳನ್ನು ಅಲ್ಲಲ್ಲಿ ಒತ್ತಿಟ್ಟು, ಸ್ಕೆಚ್ ಪೆನ್ನಲ್ಲಿ ಎರಡು ಕಣ್ಣರಳಿಸಿ, ಉದ್ದಕ್ಕೆ ಬಾಲ ಜೋತು ಬಿಟ್ಟ ಗಾಳಿಪಟ ಹಕ್ಕಿಗಳಲ್ಲೇ ವಿಶೇಷ ಅಂತೆನಿಸುತ್ತಿತ್ತು. ಮಾರನೇ ದಿನ ಆಗಸವನ್ನೇ ಕೊಂಡುಕೊಂಡಷ್ಟು ಗತ್ತಿನಿಂದ ಹಾರುವುದೇನು! ಅದನ್ನು ಕಂಡದ್ದೇ ನಾನು ಮತ್ತು ನನ್ನ ಅಕ್ಕ ಸೇರಿ ಹುಮ್ಮಸ್ಸಿನಲ್ಲಿಯೇ ಗಾಳಿಪಟ ತಯಾರು ಮಾಡಿಬಿಟ್ಟೆವು. ಹಾರುವುದು ಹೋಗಲಿ, ಈ ಗಾಳಿಪಟ ಏಳುವುದೂ ಇಲ್ಲ. ಮತ್ತೆ ತಿಳಿದದ್ದು, ಗಾಳಿಪಟ ಹಾರುವುದಕ್ಕೆ ಹಗುರಾಗುವ ಅರ್ಹತೆಯಿರಬೇಕು ಎಂದು. ಮುಂದಿನ ಪ್ರಯತ್ನ ನಮ್ಮದು; ಸಹಕಾರ ಎದುರು ಮನೆಯವರದ್ದು. ಆದರೂ ನಾವೇ ಕೂತು ಮಾಡಿಸಿಕೊಂಡ ಕಾರಣಕ್ಕೆ ನಮ್ಮ ಹೆಸರಿಟ್ಟು ದಾರ ಕಟ್ಟಿ ಹಾರಿಸಿದ್ದೆವು. ಹಗುರಾಗಿ ಮೇಲಕ್ಕೆ ಥೇಟ್ ಹಕ್ಕಿಯಾಗಿ ಹಾರಾಡಿದ್ದ ಗಾಳಿಪಟವನ್ನು ಕಾಣುವಾಗ ಬೀಸಿದ್ದ ಚಪ್ಪಾಳೆ, ಖುಷಿಯಲ್ಲವು ಎಂಟು ಸಾಲಿನ ಪುಟ್ಟ ಕವಿತೆಯಾಗಿತ್ತು.
ಹಾಸ್ಟೆಲ್ನ ಏಕತಾನತೆಯ ಬದುಕಿನಲ್ಲಿ ಮನೆಯವರ ಫೋನ್ಗಾಗಿ ಕಾಯುವುದು ಕೂಡ ಸೇರಿಹೋಗಿತ್ತು. ಮನೆಯಿಂದ ಮತ್ತೆ ಹಾಸ್ಟೆಲ್ ಸೇರಿದ ದಿನ ವಿಪರೀತ ವೈರಾಗ್ಯ ತಾಳಿದ ಕವಿತೆ, ರುಚಿಗಟ್ಟಾದ ಅಡುಗೆಯು ಕವಿತೆ, ಬೆಳಗಿನ ಸೂರ್ಯೋದಯ ಮತ್ತು ರಾತ್ರಿಯ ಚಂದ್ರನ ಕುರಿತು ಹೀಗೆ ಹಲವು ಕವಿತೆಗಳನ್ನು ಸುಮ್ಮನೆ ಬರೆಯುತ್ತಿದ್ದೆನಷ್ಟೆ. ಅಡುಗೆ ಕವಿತೆ ಎಷ್ಟು ಯಶಸ್ವಿಯಾಯಿತೆಂದರೆ, ಕೇಳಿದ ತಕ್ಷಣವೆ ಮೆಸ್ ಆಂಟಿಯರೆಲ್ಲ ಮನೆಗೆ ಫೋನ್ ಮಾಡಿಕೊಡುತ್ತಿದ್ದರು. ಕವಿತೆಯ ಪ್ರೋಂಜನವೆಂದು ಈಗ ನಕ್ಕು ಸುಮ್ಮನಾಗುವುದು.
(ಲೇಖಕಿ ಮಾನಸಗಂಗೋತ್ರಿಯಲ್ಲಿ ಇದೀಗ ತಾನೇ ಕನ್ನಡ ಎಂ.ಎ. ವ್ಯಾಸಂಗ ಮುಗಿಸಿದ್ದಾರೆ)
ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…
ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…
ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…
ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…
ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…