ಆಂದೋಲನ ಪುರವಣಿ

‘ಇದು ನಿಮ್ಮ ಅನುಭವವಾ?’ ಎಂಬ ಪ್ರಶ್ನೆ!

ಅರ್ಪಣ ಎಚ್.ಎಸ್.

ಬಹುತೇಕ ಎಲ್ಲಾ ಮಕ್ಕಳಂತೆ ನನ್ನ ಮಗನಿಗೂ ಸಣ್ಣವನಿದ್ದಾಗ ರಾತ್ರಿ ಮಲಗುವ ಮುನ್ನ ಒಂದು ಕತೆ ಹೇಳಲೇಬೇಕಿತ್ತು. ಅತ್ಯಂತ ಬೋರಿಂಗ್ ಎನಿಸುವ ಈ ದಿನಚರಿಯನ್ನು, ಬೇರೆ ದಾರಿಯಿಲ್ಲದೆ ಒಂದೆರಡು ವರ್ಷ ನಡೆಸಿಕೊಂಡು ಬಂದರೂ, ಅವನು ಕೊಂಚ ದೊಡ್ಡವನಾದ ಕೂಡಲೇ ದಿನಕ್ಕೊಂದು ಹೊಸ ಕತೆ ಪೂರೈಸಲಾಗದೆ ನಂಗೆ ಕತೆ ಗೊತ್ತಿಲ ್ನುವ ಮಂತ್ರ ಪಠಿಸತೊಡಗಿದೆ. ‘‘ನೀನೇ ಕತೆ ಬರೀತೀಯಲ್ಲ ಹೇಗೂ, ಅದೇ ಹೇಳು’’ ಅನ್ನುವ ಬೇಡಿಕೆ ಇಡತೊಡಗಿದ. ‘‘ನಾನು ಬರೆೋಂ ಕತೆ ನಿಂಗೆ ಅರ್ಥ ಆಗಲ್ಲ’’ ಅನ್ನತೊಡಗಿದೆ. ದಿನಾ ಇದೇ ಸಬೂಬು ಕೇಳಿ ರೋಸಿ ಹೋದ ಅವನು ಒಂದು ರಾತ್ರಿ ‘‘ಅಷ್ಟೊಂದು ಕತೆ ಬರೀತೀಯಾ, ನನ್ನ ಕತೆಗೆ ಬಹುಮಾನ ಬಂತು ಅಂತ ಬೇರೇ ಹೇಳ್ತೀಯ. ಅದರಲ್ಲಿ ಒಂದೂ ನಂಗೆ ಹೇಳೋಕೆ ಆಗಲ್ಲ ಅಂದ ಮೇಲೆ, ನೀನು ಏನು ಕತೆ ಬರೆದು ಏನು ಪ್ರೋಂಜನ ಹೋಗು’’ ಅಂದ.

ಅವತ್ತು ರಾತ್ರಿ ಅವನ ಮಾತು ಬಹಳ ಕಾಡಿ ಮರುದಿನ ಮಕ್ಕಳ ಕತೆ ಬರಿೋಂದಕ್ಕೆ ಯತ್ನಿಸಿ, ಸಾಧ್ಯವಾಗದೆ ಸುಮ್ಮನಾಗಿದ್ದೆ. ಮುಂದೆ ದೊಡ್ಡವನಾದ ಮೇಲೆ ನನ್ನ ಕತೆ ಓದುತ್ತಾನೆ ಅಂದುಕೊಂಡು ಸಮಾಧಾನ ಮಾಡಿಕೊಳ್ಳಲು ಯತ್ನಿಸಿದೆ. ಆದರೆ, ನನ್ನ ಮಕ್ಕಳು ಮುಂದೆ ನನ್ನ ಕತೆಗಳನ್ನು ಓದುತ್ತಾರೆಂಬುದು ಆಗ ನನಗೆ ಸಮಾಧಾನ ಕೊಡುವ ಬದಲು ಹೆಚ್ಚು ತಳಮಳವನ್ನೇ ಉಂಟುಮಾಡಿತ್ತು. ಸುಮಾರು ಎಂಟು ವರ್ಷಗಳ ಹಿಂದೆ ನಾನು ಕತೆ ಬರೆಯಲು ಮತ್ತು ಅದು ಪ್ರಕಟವಾಗಲು ಶುರುವಾದಾಗ ನನಗೆ ಖುಷಿಯಾಗುವುದರ ಜೊತೆ ಜೊತೆಗೆ, ಕತೆಗಳನ್ನು ಜನ ಓದುತ್ತಾರಲ್ಲ ಎಂಬ ಆತಂಕ ಕಾಡುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಅಪ್ಪ, ಅಮ್ಮ ನನ್ನ ಕತೆಗಳನ್ನು ಓದುತ್ತಾರೆ ಎಂಬುದು ದೊಡ್ಡ ಹಿಂಜರಿಕೆಗೆ ಕಾರಣವಾಗಿತ್ತು. ಈ ಆತಂಕ ಕೊಂಚಮಟ್ಟಿಗೆ ನನ್ನ ಕತೆಗಳನ್ನು ಓದುಗರು ಹೇಗೆ ಸ್ವೀಕರಿಸುತ್ತಾರೆ ಎಂಬುದಕ್ಕೆ ಸಂಬಂಧಪಟ್ಟಿದ್ದಿರಬಹುದಾದರೋ, ಬಹುಮಟ್ಟಿಗೆ ನನ್ನ ಬಗ್ಗೆ ಏನೂ ಗೊತ್ತಿಲ್ಲದ ಓದುಗರು ನನ್ನ ಕತೆಯ ಜೊತೆಗೆ ನನ್ನನ್ನು ಯಾವ ರೀತಿ ಜೋಡಿಸಬಹುದು, ನನ್ನನ್ನು ಹೇಗೆ ‘ಜಡ್ಜ್’ ಮಾಡಬಹುದು ಎಂಬುದಕ್ಕೆ ಸಂಬಂಧಪಟ್ಟದ್ದಾಗಿತ್ತು. ಹಾಗೆ, ನೋಡಿದರೆ ನನ್ನ ಕತೆಗಳಾವುವೂ ತೀರಾ ವೈಯಕ್ತಿಕವಲ್ಲ. ಆದರೂ, ಮೊದ ಮೊದಲಿಗೆ ಕಾಡುತ್ತಿದ್ದ ಈ ತಳಮಳ ನಾನು ಕತೆಗಳನ್ನು ಬರೆಯುವ ರೀತಿಯನ್ನೂ ಮತ್ತು ನನ್ನ ವಿಷಯದ ಆ್ಂಕೆುಯನ್ನು ಪ್ರಭಾವಿಸುತ್ತಿದ್ದವು ಎಂಬುದು ಸುಳ್ಳಲ್ಲ.

ಇದಕ್ಕೆ ಮುಖ್ಯ ಕಾರಣ ಕತೆಗಾರ್ತಿಯಾಗುವುದಕ್ಕೂ ಮೊದಲು ಓದುಗಳಾಗಿದ್ದ ನನಗೆ, ಒಂದು ಕೃತಿಯಲ್ಲಿ ಲೇಖಕರನ್ನು ಹುಡುಕುವ ಓದುಗರ ಅತೀ ಸಹಜವಾದ ಮತ್ತು ಸಾಮಾನ್ಯವಾದ ಪ್ರಕ್ರಿೆುಂಯ ಅರಿವಿರುವುದು. ಎಲ್ಲಾ ಕತೆ, ಕವಿತೆ, ಕೃತಿಗಳೂ ಯಾವುದೋ ಒಂದು ರೀತಿಯಲ್ಲಿ ಬರಹಗಾರನ ಬದುಕು, ಚಿಂತನೆ, ಭಾವನೆಗಳಿಂದ ಪ್ರಭಾವಿತವಾಗಿರುತ್ತದೆ ಎಂಬುದು ನಿಜವೇ. ಕೃತಿಯಲ್ಲಿ ಒಂದು ಪಾತ್ರವಾಗಿೆುೀಂ, ಘಟನೆಯಾಗಿೋಂ, ಮಾತಾಗಿೋಂ, ಭಾವವಾಗಿೋಂ ಅವನು ಅಥವಾ ಅವಳು ನುಸುಳಿರುತ್ತಾರೆ. ಆದರೆ, ಎಲ್ಲ ಕೃತಿಗಳನ್ನೂ ಅದು ಬರೆದವರ ಅತ್ಮ ಚರಿತ್ರೆೆುೀಂನೋ ಎಂಬಂತೆ ನೋಡುವ ಮಂದಿಯೂ ಸಾಕಷ್ಟಿದ್ದಾರೆ. ತಮಾಷೆೆುಂಂದರೆ, ನನ್ನ ಕತೆ, ಕವನಗಳಲ್ಲಿ ‘‘ನಾನು’’ ತುಂಬಾ ಕಡಿಮೆ ಇರುತ್ತೇನೆ ಎಂಬುದು ಅರಿವಾದಾಗ, ಮೋಸ ಹೋದವರಂತೆ ಸಿಟ್ಟುಗೊಂಡ ಕೆಲ ಓದುಗರನ್ನೂ ನಾನು ನೋಡಿದ್ದೇನೆ. ‘ನಮ್ಮ ಬರಹಗಳಲ್ಲಿರುವುದು ನಮ್ಮ ಬದುಕೇ’ ಎಂದು ಪರಿಭಾವಿಸುವ ಇಂತಹ ಓದುಗರಿಂದ ನಾನು ಗಮನಿಸಿದಂತೆ ಹೆಚ್ಚು ನಷ್ಟವಾಗಿರುವುದು ಮಹಿಳಾ ಸಾಹಿತಿಗಳಿಗೆ. ಇಂತಹ ಕಾರಣಗಳಿಂದಾಗಿೆುೀಂ ಯಾವುದೇ ಭಿಡೆ ಇಲ್ಲದೆ ಬರೆಯುವುದು ಹಲವರಿಗೆ ಸಾಧ್ಯವಾಗುವುದೇ ಇಲ್ಲ.

ನಾನೇನೋ ಈಗ ಈ ಹಂತ ದಾಟಿದ್ದರೂ ‘‘ಇದು ನಿಮ್ಮ ಅನುಭವವಾ?’’ ಎಂಬ ಪ್ರಶ್ನೆಗೆ ಹೆದರಿ, ಅದೆಷ್ಟು ಕತೆಗಳು, ಕವಿತೆಗಳು ಹುಟ್ಟದೇ ಸತ್ತು ಹೋಗಿವೆೋಂ ಎಂದು ಒಮ್ಮೊಮ್ಮೆ ೋಂಚಿಸುತ್ತಿರುತ್ತೇನೆ.

 

andolana

Recent Posts

ʼವಿದ್ಯಾವಂತರು ಸಮುದಾಯಕ್ಕೆ ಆಸರೆಯಾಗಬೇಕುʼ

  ಈ ನಡೆ ಶೋಷಿತ ಸಮುದಾಯಗಳ ಪ್ರಗತಿಗೆ ಸಹಕಾರಿ -ಟಿ.ಕೆ.ಹರೀಶ್ ಶಿಕ್ಷಣ ಕೇವಲ ವೈಯಕ್ತಿಕ ಬೆಳವಣಿಗೆಗೆ ಮಾತ್ರ ಸೀಮಿತವಾಗಿರಬಾರದು. ಅದು…

50 mins ago

ಗಾಂಧಿ ಅಭಿಯಾನ ಅರಿವಿನ ಯಾನ | ಶಿಕ್ಷಣವೇ ದೇಶ ಕಟ್ಟುವ ಹಾದಿ ಎಂದು ತಿಳಿದಿದ್ದ ದೇಶಪಾಂಡೆಯವರು

ಡಾ.ಎಂ.ಡಿ.ಉಮೇಶ್‌, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ, ಮೈಸೂರು ವಿ.ವಿ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದಲ್ಲಿ ಬಾಲ ಕೃಷ್ಣ ಮತ್ತು ರಾಧಾಬಾಯಿ…

3 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಇಂಗ್ಲೆಂಡಿನಲ್ಲಿ ಶಾಕಾಹಾರದ ದಿನಗಳು

ಡಾಕ್ಟರ್ ಮೆಹತಾ ಮತ್ತು ನಾನು ಅವರ ಮಿತ್ರನ ಮನೆಗೆ ಹೋದೆವು. ಅವರು ನನ್ನ ವಿಷಯದಲ್ಲಿ ತುಂಬಾ ಕರುಣೆ ಮತ್ತು ಆದರವುಳ್ಳವರಾಗಿದ್ದರು.…

3 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 18 ಶನಿವಾರ

4 hours ago

ನಂಜನಗೂಡು | ಹಾಡಹಗಲೇ ಸ್ಕೂಟಿಯಲ್ಲಿದ್ದ ಹಣ ಕಳವು

ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…

17 hours ago

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಜಾಗತಿಕ ಸ್ಪರ್ಶ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…

19 hours ago