ಹನಿ ಉತ್ತಪ್ಪ

ಇವರ ಹೆಸರು ಮುತ್ತ ಮತ್ತು ಲಚ್ಚಿ. ಕೊಡಗಿನ ಜೇನುಕುರುಬ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಮುತ್ತ ಚಿಕ್ಕ ಹುಡುಗನಿದ್ದಾಗಿಂದಲೂ ಕಾಫಿತೋಟದ ಕೆಲಸವನ್ನೇ ನಂಬಿಕೊಂಡಿದ್ದಾರೆ. ನಲವತ್ತರ ಆಸುಪಾಸಿನವರಾದ ಮುತ್ತ ಮತ್ತು ಹೆಂಡತಿ ಲಚ್ಚಿ ಮಾಡದ ಸಾಲಕ್ಕೆ ಬಡ್ಡಿ ತೀರಿಸುತ್ತಾ ಜೀತದಾಳಾಗಿ ಬದುಕುತ್ತಿದ್ದಾರೆ ಎಂದರೆ ಹುಬ್ಬೇರಿಸಬೇಡಿ.

ಮುತ್ತ ಮತ್ತು ಲಚ್ಚಿಯರ ಮದುವೆಯಾದ ಹೊಸತು. ಹೆಂಡತಿಯನ್ನು ಎಲ್ಲಿಯೂ ಕೆಲಸಕ್ಕೆ ಕಳುಹಿಸಬಾರದು ಎಂಬುದು ಮುತ್ತನ ಆಸೆಯಾದರೂ ಸಂಸಾರದ ನೊಗ ಸಾಗಿಸಲು ಇಬ್ಬರೂ ಕೆಲಸ ಮಾಡಲೇಬೇಕಿತ್ತು. ಹದಿಹರಯದ ವಯಸ್ಸಿನವರಾಗಿದ್ದ ಮುತ್ತನಿಗೆ ತೋಟದ ಮಾಲೀಕರು ಕುಡಿತದ ಚಟ ಅಂಟಿಸಿದ್ದರು. ಹಾಗಾಗಿ ೭೫ ರೂಪಾಯಿಯಿಂದ ೧೦೦ ರೂಪಾಯಿ, ೧೫೦ ರೂಪಾಯಿಗೆ ದಿನಗೂಲಿ ಏರಿಕೆ ಆದರೂ ಸಂಸಾರದಲ್ಲಿ ಉಳಿಕೆ ಎಂಬುದು ಅಸಾಧ್ಯವೇ ಆಯಿತು.

ತೋಟದ ಮಾಲೀಕರು ಕ್ವಾಟರ್ ಕುಡಿಸಿ ಒಂದಕ್ಕೆ ಮೂರು ಪಟ್ಟು ಹಣ ವಸೂಲಿ ಮಾಡುವುದು ಒಂದು ಕಡೆಯಾದರೆ, ತಮಗೆ ಬೇಕಾದಷ್ಟು ಹಣ ನಮೂದಿಸಿ ಸಾಲಪತ್ರವನ್ನು ತಯಾರಿಸಿ ಅವರ ಮತ್ತೇರಿದ ಅಮಲಿನಲ್ಲಿ ಸಹಿ ಹಾಕಿಸಿಕೊಂಡು ಬಿಡುತ್ತಾರೆ! ಮುತ್ತ ದಂಪತಿ ಎದುರಿಸುತ್ತಿರುವುದು ಇದೇ ಸಮಸ್ಯೆಯನ್ನು. ಐದಾರು ದಿನ ಮಾಡಿದ ಕೆಲಸಕ್ಕೆ ವಾರದ ಕೊನೆಯಲ್ಲಿ ಸಂಬಳ ಅಂತ ತೆಗೆದುಕೊಳ್ಳುವಾಗ ಸಾಲಪತ್ರವನ್ನು ತೋರಿಸಿ, ೭೫ ಸಾವಿರ ರೂ. ಸಾಲ ಕಟ್ಟಿ, ಎಂದರೆ ಆ ಮುಗ್ಧ ಜೀವಕ್ಕೆ ಹೇಗಾಗಿರಬೇಡ? ತಾನು ಜೀವನಪರ್ಯಂತ ದುಡಿದರೂ ಇದು ದೊಡ್ಡ  ಮೊತ್ತವನ್ನು ತೀರಿಸಲಾಗುವುದಿಲ್ಲ ಎಂಬ ಅರಿವು ಸ್ವತಃ ಮುತ್ತನವರಿಗೂ ಇದೆ. ಹಾಗೆಂದು ಮುತ್ತ ಸಾಲ ತೆಗೆದುಕೊಂಡೇ ಇಲ್ಲ ಎಂದಲ್ಲ. ಸ್ವಂತ ಸೂರು ಇಲ್ಲದೇ ಇದ್ದರೂ ಐವರು ಮಕ್ಕಳ ಕನಸುಗಳ ಜವಾಬ್ದಾರಿಗೆ ಹಣ ಬೇಡವೇ? ಮದುವೆ, ಮಕ್ಕಳ ಓದಿಗೆಂದು ಒಂದಷ್ಟು ಹಣ ಸಾಲ ಪಡೆದಿದ್ದರು. ಆದರೆ ಇಷ್ಟೊಂದು ಹಣವನ್ನು ಪಡೆದು ತೀರಿಸುವಷ್ಟು ಸ್ಥಿತಿವಂತ ತಾನಲ್ಲ ಎಂದು ತೋಟದ ಮಾಲೀಕರಲ್ಲಿ ಬೇಡಿಕೊಂಡಿದ್ದರು.

ಮಾಲೀಕರು ಮಣಿಯಲಿಲ್ಲ, ಇನ್ನು ಕರಗುವುದಂತೂ ದೂರದ ಮಾತೇ ಸರಿ. ಅದಕ್ಕಾಗಿ ಮುತ್ತ ಮತ್ತು ಲಚ್ಚಿ ಮೂರು ವರ್ಷಗಳ ಹಿಂದೆ ಬೇರೆ ಕೆಲಸವನ್ನು ಅರಸಿ ಅಲ್ಲಿಂದ ಬೀಡುಬಿಟ್ಟರು. ಕೆಲ ಇಲಾಖೆಯ ಅಧಿಕಾರಿಗಳಿಗೆ ತಮಗಾದ ಅನ್ಯಾಯವನ್ನು ವಿವರಿಸಿದರು. ಸ್ಪಂದನೆ ಸಿಗಲೇ ಇಲ್ಲ…! ಅಲ್ಲಿಂದ ಬಂದ ಮೇಲೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಊರಿನ ಕೆಲವರು ಕಳ್ಳರು ಎಂದು ಆರೋಪ ಹೊರಿಸುತ್ತಿದ್ದಾರೆ. ಮಾಲೀಕರು ದುಡ್ಡು ಕೊಡಬೇಕೆಂದು ಒತ್ತಾಯಿಸಿ, ಮಾನಸಿಕ ಹಿಂಸೆ ಕೊಡುತ್ತಲೇ ಇದ್ದಾರೆ.

ಉಳಿವುದಕ್ಕೆ ಸೂರಿಲ್ಲ; ಬದುಕಲ್ಲಿ ನೆಮ್ಮದಿಯೂ ಇಲ್ಲ ಎನ್ನುತ್ತಿದ್ದಾರೆ ಜೇನುಕುರುಬರ ಮುತ್ತ ಮತ್ತು ಲಚ್ಚಿ

ಆಂದೋಲನ ಡೆಸ್ಕ್

Recent Posts

ಪಡಿತರ ವಿತರಣೆ | ಸಮಯ ಬದಲಾವಣೆ

ನ್ಯಾಯಬೆಲೆ ಅಂಗಡಿಗಳ ಗ್ರಾಹಕರ ಮನವಿಗೆ ಸರ್ಕಾರದ ಸ್ಪಂದನೆ ಅ.1ರಿಂದ ಬೆಳಿಗ್ಗೆ 7ರಿಂದ ಮಧ್ಯಾಹ್ನ 12; ಸಂಜೆ 4ರಿಂದ ರಾತ್ರಿ 8…

21 mins ago

3,705 ಕೋಟಿ ರೂ. ಪರಿಹಾರ ಕೋರಿ ಕೇಂದ್ರಕ್ಕೆ ಮೆಮೊರಾಂಡಂ ಸಲ್ಲಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…

10 hours ago

ಹನೂರು | ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಕಾರ್ಮಿಕ ಸಾವು

ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…

11 hours ago

ಗ್ರಾಮದ ಸ್ವಚ್ಛತೆ ನೋಡಿಕೊಳ್ಳುವವರೇ ಅನೈರ್ಮಲ್ಯಕ್ಕೆ ಕಾರಣ?

ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…

12 hours ago

ಮಹಾಪ್ರವಾಹಕ್ಕೆ ನೇಪಾಳ ತತ್ತರ: ನಾಪತ್ತೆಯಾದವರ ಸಂಖ್ಯೆ 6100ಕ್ಕೆ ಏರಿಕೆ

ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…

17 hours ago

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

1 day ago