ಹಾಡು ಪಾಡು

ಆಗ ಟೈಲರ್ ಕಾಲ, ಈಗ ಆನ್ ಲೈನ್ ಕಾಲ…

ಮಧುಕರ ಮಳವಳ್ಳಿ

(ಈ ಲೇಖನಕ್ಕೆ ಕೃತಕ ಬುದ್ಧಿಮತ್ತೆಯ ಚಿತ್ರ ಬಳಸಲಾಗಿದೆ)

ಹಬ್ಬಕ್ಕೆ ಯಾರಿಗೆ ತಾನೆ ಹೊಸ ಬಟ್ಟೆ ಇಷ್ಟ ಇಲ್ಲ ಹೇಳಿ? ಮಕ್ಕಳಿಂದ ಹಿಡಿದು ಹಿರಿಯರ ತನಕ ಅದು ಸಂಭ್ರಮಕ್ಕೆ ಕಾರಣ.ಬಾಲ್ಯದಲ್ಲಿ ಬಟ್ಟೆ ಅಂಗಡಿಗೆ ಹೋಗಿ ನಮ್ಮ ಹಣಕಾಸಿನ ಅನುಕೂಲಕ್ಕೆ ತಕ್ಕಂತೆ ಬಟ್ಟೆ ತಂದು ಟೈಲರ್‌ಗೆ ಆಳತೆ ಕೊಟ್ಟು ‘ಹಬ್ಬಕ್ಕೆ ಎರಡು ದಿನ ಮೊದಲೆ ನೀಡುವಂತೆ’ ಹೇಳಿ ಬರುತ್ತಿದ್ದವು. ಆ ಟೈಲರ್ ರಾಗಪಾಡಿ ‘ಬಹಳ ಜನ ಹಬ್ಬಕ್ಕೆ ಬಟ್ಟೆ ಕೊಡು’ ಅಂತಾ ಹೇಳಿದಾರೆ. ‘ನೋಡುವಾ’ ಅನ್ನುತ್ತಿದ್ದ. ಆಗ ಅಪ್ಪ ‘ನನ್ ಅಂಗಿ ಚಡ್ಡಿ ಬೇಕಾದರೆ ಹಬ್ಬ ಅದ್‌ಮೇಲೆ ಕೊಡು. ಆದರೆ ನನ್ನ ಮಗ-ಮಗಳು ಬಟ್ಟೆನಾ ಹಬ್ಬದ ಮುಂಚೆನೆ ಕೊಡು’ ಎಂದು ಆಡ್ವಾನ್ಸ್ ಕೊಡುತ್ತಿದ್ದ.

ಆದರೆ ಕ್ರಮೇಣ ಕಾಲ ಚಕ್ರದ ಬದಲಾವಣೆಯಲ್ಲಿ ಕೊಂಗನಾಡಿನಿಂದ ಸ್ಕೂಟರ್ ಏರಿ ಬಂದ ವ್ಯಾಪಾರಿಗಳು ಹಬ್ಬ. ‘ವಾರ’ ಇರುವಾಗಲೇ ಮಕ್ಕಳ ಬಟ್ಟೆಗಳನ್ನು ರೆಡಿಮೇಡ್ ಅಂಗಿಗಳು, ಚಡ್ಡಿಗಳು, ಲಂಗ, ದಾವಣಿ, ಫ್ರಾಕ್ ಇತ್ಯಾದಿಗಳನ್ನು ಸಂತೆಯಲ್ಲಿ ಮಾರುತ್ತಿದ್ದರು. ಕ್ರಮೇಣ ಊರುಗಳಿಗೆ ಬರಲು ಆರಂಭಿಸಿದರು. ನಮಗೆ ಖುಷಿ, ಬೇಕಾದ ಬಣ್ಣ, ಆಳತೆಗೆ ಸರಿ ಹೊಂದುವ ಬಟ್ಟೆಗಳು ಆಗ ನಮ್ಮದಾಗುತ್ತಿತು. ಮತ್ತೆ ಹಬ್ಬಕ್ಕೆ ವಾರ ಮೊದಲೇ ಬಟ್ಟೆ ಮನೆಯ ಟ್ರಂಕ್ ಸೇರಿದ ಸಂತೋಷ ಬೇರೆ.

ಗೆಳೆಯರಿಗೆ ಹೇಳಿ ಖುಷಿ ಪಡುತ್ತಿದ್ದವು. ಯಾಕೆಂದರೆ ಟೈಲರ್ ಬಟ್ಟೆ ಕೊಟ್ಟರೆ ಹಬ್ಬದ ದಿನ ಕೊಡುತ್ತಾನೆ ಎಂಬ ನಂಬಿಕೆಯಿಲ್ಲ. ಎಷ್ಟೋ ಬಾರಿ ಹಬ್ಬದ ದಿನ ಸ್ನಾನ, ಊಟ, ತಿಂಡಿ ಇಲ್ಲದೆಯೇ, ಅವನು ಅಂಗಡಿ ಬಳಿ ನಿಂತು ಬಟ್ಟೆ ಹೊಲಿಸಿ ಬಂದ ಉದಾಹರಣೆ ಇದೆ.

ಸ್ಕೂಟರ್ ಏರಿ ಬರುವವರ ಜೊತೆಗೆ ಅವ್ವಂದಿರು ಚೌಕಾಸಿ ಮಾಡಿ ಬಟ್ಟೆ ಕೊಡಿಸುತ್ತಾ. ಇಡೀ ಊರಿನ ಮಕ್ಕಳು ಹೊಸಬಟ್ಟೆಯ ಸಂತೋಷದಲ್ಲಿ ಇರುವಂತೆ ಮಾಡುತ್ತಿದ್ದರು.

ಆದರೆ ಈಗ ಆನ್‌ಲೈನ್ ಶಾಪಿಂಗ್ ಇದೆ. ಅದು ಉಳ್ಳವರಿಗೆ. ನಮಗೆ ಅಂತಲೇ ಅಂದು ಊರಿಗೆ ಬಂದು ವ್ಯಾಪಾರ ಮಾಡುತ್ತಾ ಇದ್ದವರು ಈಗ ಬದಲಾಗಿದ್ದಾರೆ. ಊರಿನ ಯಾವುದಾದರೂ ಛತ್ರ, ಸಮುದಾದ ಭವನದಲ್ಲಿ ಅಂಗಡಿ ತೆರೆಯುತ್ತಾರೆ. ಅದನ್ನು ತಿಂಗಳ ಬಾಡಿಗೆಗೆ ಪಡೆದು. ಎಲ್ಲರಿಗೂ ತಿಳಿಯುವಂತೆ ಆಟೋದಲ್ಲಿ ಪ್ರಚಾರ ಕೂಡ ಮಾಡುತ್ತಾರೆ. ಮತ್ತೆ ಬೆಲೆ ಬಗ್ಗೆ ಕೂಡ ತಿಳಿಸುತ್ತಾರೆ. ಒಂದು ಕೊಂಡರೆ ಮತ್ತೊಂದು ಫ್ರೀ’ಎಂಬ ಘೋಷಣೆ ಇರುತ್ತದೆ. ಆಳತೆ, ಬಣ್ಣ, ನವೀನ ವಿನ್ಯಾಸಗಳಿಗೆ ಮನ ಸೋತ ಜನ ಇದೇ ನಮ್ಮ ಪಾಲಿಗೆ ಮಾಲ್ ಎಂದು ಭಾವಿಸುತ್ತಾರೆ. ಈ ತಾತ್ಕಾಲಿಕ ಅಂಗಡಿಗಳಿಗೆ ಮುಗಿಬೀಳುತ್ತಾರೆ.

ಆ ಅಂಗಡಿಯ ಮಾಲಿಕರನ್ನು ಮಾತನಾಡಿಸಿದಾಗ. ನಮ್ಮ ತಂದೆ ಜೊತೆ ನಾನು ಬಾಲ್ಯದಿಂದಲೂ ವ್ಯಾಪಾರ ಮಾಡಲು ಬರುತ್ತಾಯಿದ್ದೆ. ಈಗ ಕಾಲ ಬದಲಾಗಿದೆ. ನಾವು ಇಂತಹ ಕಡೆ ಅಂಗಡಿ ಮಾಡುತ್ತೀವಿ. ಲಾಭ -ನಷ್ಟ ಎಂದರೆ. ಹುಸಿ ನಗೆ ಬೀರುತ್ತಾ, ‘ಕಲಿತ ಕಸಬು . ಸಾವಿರ ರೂಪಾಯಿಗೆ ವ್ಯಾಪಾರ ಮಾಡಿ ೫೦೦ ರೂ.ಗೆ ಕೂಪನ್’ ಎಂದ.

” ಈಗ ಆನ್‌ಲೈನ್ ಶಾಪಿಂಗ್ ಇದೆ. ಅದು ಉಳ್ಳವರಿಗೆ. ನಮಗೆ ಅಂತಲೇ ಅಂದು ಊರಿಗೆ ಬಂದು ವ್ಯಾಪಾರ ಮಾಡುತ್ತಾ ಇದ್ದವರು ಈಗ ಬದಲಾಗಿದ್ದಾರೆ.”

 

 

ಆಂದೋಲನ ಡೆಸ್ಕ್

Recent Posts

ಬಿಡದಿ ಟೌನ್‌ಶಿಪ್‌ ಡಿಪಿಆರ್‌ಗೆ ಸಿದ್ಧತೆ : 26 ಕೋಟಿ ರೂ. ವೆಚ್ಚದ ಟೆಂಡರ್ ಕರೆಯಲು ತೀರ್ಮಾನ

ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ, ರೈತರ ಪ್ರತಿಭಟನೆ ಹಾಗೂ ಆರೋಪ-ಪ್ರತ್ಯಾರೋಪಗಳ ನಡುವೆಯೂ ಗ್ರೇಟರ್…

2 hours ago

ದುಬಾರೆ ದುರಂತ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ; ಆನೆ ಶಿಬಿರಗಳಿಗೆ ಹೊಸ ನಿಯಮ

ಬೆಂಗಳೂರು : ರಾಜ್ಯದ ಆನೆ ಶಿಬಿರಗಳು, ಸೆರೆಯಲ್ಲಿರುವ ಆನೆಗಳ ಕೇಂದ್ರಗಳು ಹಾಗೂ ಸಾರ್ವಜನಿಕ ವೀಕ್ಷಣಾ ಕೇಂದ್ರಗಳಿಗೆ ಕರ್ನಾಟಕ ಅರಣ್ಯ ಇಲಾಖೆ…

3 hours ago

ಬಿಡದಿ ಟೌನ್‌ಶಿಪ್: ಪೋಸ್ಟರ್ ಸಮರ

ಬೆಂಗಳೂರು : ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜಾ.ದಳ ನಡುವಿನ ವಾಕ್ ಸಮರ ತಾರಕಕ್ಕೇರಿದೆ.…

4 hours ago

UGC NET | ಪ್ರವೇಶ ಪತ್ರ ಬಿಡುಗಡೆ

ಹೊಸದಿಲ್ಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಯುಜಿಸಿ ನೆಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗಾಗಿ ಪ್ರವೇಶ ಪತ್ರಗಳನ್ನು ಬುಧವಾರ ಅಧಿಕೃತವಾಗಿ ಬಿಡುಗಡೆ…

5 hours ago

ಧರ್ಮಸ್ಥಳ ಪ್ರಕರಣದಲ್ಲಿ ಪ್ರಕಾಶ್‌ ರಾಜ್‌ ಹೆಸರು: ನಟ ಏನಂದ್ರು ಗೊತ್ತಾ?

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕರಣದಲ್ಲಿ ತಮ್ಮ ಹೆಸರನ್ನು ಕೆಲವರು ಅನಗತ್ಯವಾಗಿ ಉಲ್ಲೇಖಿಸುತ್ತಿದ್ದಾರೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ.…

10 hours ago

ನೀಟ್‌ ವಿದ್ಯಾರ್ಥಿಗಳಿಗೆ ಪ್ರಯಾಣದಲ್ಲಿ 50% ರಿಯಾಯಿತಿ: ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಆದೇಶ

ಲಕ್ನೋ: ಜೂನ್.‌21ರಂದು ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳ ಬಸ್‌ ಪ್ರಯಾಣದ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವುದಾಗಿ ಉತ್ತರ…

12 hours ago