ರಮ್ಯ ಕೆ ಜಿ ಮೂರ್ನಾಡು
ನಾನು ಸಣ್ಣವಳಿದ್ದಾಗ ನಮ್ಮ ಮನೆಯಲ್ಲಿ ಟಿವಿ ಇಲ್ಲದ ಕಾರಣ ಭಾನುವಾರ ನಮ್ಮಪ್ಪ ಪಿಚ್ಚರ್ ನೋಡಲು ಅವರ ಪರಿಚಯವಿರುವ ಒಂದು ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಅವರ ಟಿವಿ, ಹಾಲ್ನಲ್ಲಿದ್ದ ಕಾರಣ ನಾವು ಮನೆಯಿಂದ ಆಚೆ ಅಂದ್ರೆ ಹೊರಗಡೆ ಕೂತು ಪಿಚ್ಚರ್ ನೋಡ್ತಿದ್ದೆವು. ಆಗೊಂದು ದಿನ ‘ಹೇಮಾವತಿ’ ಪಿಚ್ಚರ್ ಹಾಕಿದ್ರು. ಅದ್ರಲ್ಲಿ ಹೀರೋ ಶ್ರೀನಿವಾಸಮೂರ್ತಿಯವರಿಗೆ ಬ್ರಾಹ್ಮಣ್ರು ಕೆಲವ್ರು “ನಮ್ ಸಂಸ್ಕಾರ, ಸಂಸ್ಕ ತಿ ಹಾಳ್ಮಾಡ್ದೆ‘ ಅಂತೆಲ್ಲ ಬೈತಿದ್ರು. ಶ್ರೀನಿವಾಸಮೂರ್ತಿ ಅವರಿಗೆಲ್ಲ ಮಾನವೀಯತೆಯ ಪಾಠ ಹೇಳ್ತಿದ್ದ. ಆಗ ನನ್ನಪ್ಪನ ಮುಖದಲ್ಲಿ ಎಂಥದ್ದೋ ಮಿಂಚು ಹೊಳಿತಿತ್ತು. ಆ ಮಿಂಚಿಗೆ ಕಾರಣ ಏನು ಅನ್ನೋದು ಆಗ ಗೊತ್ತಾಗಿರ್ಲಿಲ್ಲ. ಇತ್ತೀಚೆಗೆ ಮತ್ತೆ ಆ ಸಿನಿಮಾನ ನೋಡ್ದಾಗ ನನ್ನಪ್ಪನೊಳಗಿನ ಮಿಂಚಿಗೆ ಕಾರಣ ಗೊತ್ತಾಯ್ತು. ಅದೇ ಆ ಮನೆಯವರು, ಇಂದು ನನ್ನನ್ನು ಮನೆಯೊಳಗೆ ಕರೆದು, ಸೋಫಾದಲ್ಲಿ ಕೂರಿಸಿ, ಕಾಫಿ ಕೊಡುತ್ತಾರಂದ್ರೆ ಇದು ಸಾಧ್ಯವಾದದ್ದು ಸಂವಿಧಾನದಿಂದ.
ನನ್ನೂರು ಕೊಡಗು. ನಾನು ದಲಿತ ಸಮುದಾಯಕ್ಕೆ ಸೇರಿದ ಹೆಣ್ಣು. ಇಲ್ಲಿನ ಮೂಲನಿವಾಸಿಗಳಾಗಿದ್ದೂ, ಇನ್ನೂ ಅಸ್ಪೃಶ್ಯರಾಗಿಯೇ ಉಳಿದಿರುವ ಅನೇಕ ಸಮುದಾಯಗಳೊಂದಿಗೆ ಶತಮಾನಗಳಾಚೆ ಕೊಡಗಿಗೆ ವಲಸೆ ಬಂದ ನಮ್ಮ ಸಮುದಾಯದ ಅನೇಕರಿಗೆ ಇಂದಿಗೂ ಮನೆಗಳಿಲ್ಲ.
ನನ್ನಮ್ಮನಂತೆ ಅನಕ್ಷರಸ್ಥರೂ, ಮತ್ತು ಅಕ್ಷರಸ್ಥರಾಗಿಯೂ ಶಿಕ್ಷಣ ವಂಚಿತರಾದ ಅನೇಕರು ಇಲ್ಲಿನ ತೋಟಗಳಲ್ಲಿ ಇಂದಿಗೂ ಕೂಲಿಯಾಳುಗಳಾಗಿಯೇ ಉಳಿದು ಹೋಗಿರುವುದಕ್ಕೆ ಕಾರಣ ಉಳ್ಳವರು ಹೇಳುವ ದುಶ್ಚಟಗಳೊಂದೇ ಅಲ್ಲವೆನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
ನನ್ನಪ್ಪ ಹೇಳಿದ ಒಂದು ಸಂಗತಿ ನೆನಪಾಗುತ್ತದೆ. ಆ ಕಾಲಕ್ಕೆ ಮೂರ್ನಾಡಿನಲ್ಲಿದ್ದ ಇಂಗ್ಲಿಷ್ ಮೀಡಿಯಂ ಶಾಲೆಗೆ ನನ್ನನ್ನು ಸೇರಿಸುವ ಬಯಕೆಯಾದಾಗ, ಅಲ್ಲಿನ ಮ್ಯಾನೇಜ್ಮೆಂಟ್ಗೆ ಕೇಳಿ, ಸ್ವಲ್ಪ ಸ್ವಲ್ಪವೇ ಫೀಸ್ ಕಟ್ತೀನಿ ಅಂತ ನನ್ನಪ್ಪ ಕೋರಿಕೊಂಡಾಗ್ಯೂ, ಮ್ಯಾನೇಜ್ಮೆಂಟ್ ಒಪ್ಪದ ಕಾರಣ ನನ್ನನ್ನು ಸರ್ಕಾರಿ ಶಾಲೆಗೆ ಸೇರಿಸಬೇಕಾಯ್ತಂತೆ. ಈ ಸರ್ಕಾರಿ ಶಾಲೆಯೂ ಇಲ್ಲದೇ ಹೋಗಿದ್ದಿದ್ದರೆ! ಮತ್ತು ಶಿಕ್ಷಣ ಎಲ್ಲರಿಗೂ ಸಿಗಬೇಕೆಂದು ಸಂವಿಧಾನದಲ್ಲಿ ಇಲ್ಲದೇ ಹೋಗಿದ್ದಿದ್ದರೆ! ನೆನೆದರೇ ದಿಗಿಲು ನನಗೆ!
ಶಾಲೆಗಳಲ್ಲಿ ನನ್ನ ಕಲಿಕೆ ನೋಡಿ ನಮ್ಮಪ್ಪನಿಗೆ ಖುಷಿಯಾಗುತ್ತಿತ್ತು. ಆದರೆ ಯಾರ್ಯಾರೋ “ಹುಡುಗೀರ್ನ ಯಾಕೆ ಓದಿಸ್ತೀಯ?” ಅಂತ ಕೇಳ್ತಿದ್ರಂತೆ. ಆದ್ರೆ ನನ್ನೊಂದಿಗೆ ನನ್ನ ತಂಗಿ, ತಮ್ಮಂದಿರನ್ನೂ ಶಾಲೆಗೆ ಕಳಿಸಿದ ನನ್ನಪ್ಪ ಮತ್ತು ಅಮ್ಮನ ಪ್ರಜ್ಞೆಯ ಕಾರಣವಾಗಿ ನಾನೀಗ ಇಂದು ಸಂವಿಧಾನ ನೀಡಿದ ಮೀಸಲಾತಿಯ ಉಪಯೋಗದಿಂದ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದೇನೆ. ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇನೆ.
” ಮಾನವತೆಯ ಮಹಾಶಕ್ತಿಯಾಗಿರುವ ಸಂವಿಧಾನವೇ ನಮ್ಮ ಬದುಕಿನ ಬೆಳಕು ಎಂದು ನನ್ನೊಳಗನ್ನು ಮತ್ತೆ ಎಚ್ಚರಗೊಳಿಸಿ ಕೊಳ್ಳುತ್ತಿದ್ದೇನೆ…”
ಮೈಸೂರು : ಕೆಎಸ್ಆರ್ಟಿಸಿ ನೌಕರರು ಮೇ 20ರಿಂದ ಅನಿಧಿಷ್ಟಾವಧಿಯ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗೆ…
ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಂಘಟನೆಗಳು ಕರೆ ನೀಡಿರುವ ಬಸ್ ಬಂದ್ ಆಗುವುದು ನಿಶ್ಚಿತವಾಗಿದೆ. ಸೋಮವಾರ…
ಹೊಸದಿಲ್ಲಿ: ಅಮೆರಿಕದ ನಿರ್ಬಂಧಗಳ ವಿನಾಯಿತಿಯ ಸ್ಥಿತಿಯನ್ನು ಲೆಕ್ಕಿಸದೆ ಭಾರತವು ರಷ್ಯಾದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಪೆಟ್ರೋಲಿಯಂ…
ಮೈಸೂರು : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ…
ಬೆಂಗಳೂರು : ರಾಜ್ಯದಲ್ಲಿ ರೈತರು ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶ…
ದುಬಾರೆಯಲ್ಲಿ ಆನೆ ಕಾದಾಟದ ವೇಳೆ ಮಹಿಳೆ ಸಾವು : ಈಶ್ವರ ಖಂಡ್ವೆ ಸಂತಾಪ ಬೆಂಗಳೂರು : ಕೊಡಗು ಜಿಲ್ಲೆ ದುಬಾರೆ…