Andolana originals

ಮೈಸೂರು ಹೊರವಲಯದಲ್ಲೂ ವಹಿವಾಟಿಗೆ ಹಾಪ್ ಕಾಮ್ಸ್ ಚಿಂತನೆ

ಅನುಚೇತನ್ ಕೆ.ಎಂ.

ಹಾಪ್‌ಕಾಮ್ಸ್ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯ ಪ್ರಮುಖ ಅಂಶಗಳು: 

ನೂತನ ಮಳಿಗೆ ನಿರ್ಮಾಣಕ್ಕೆ ಅನುದಾನ ನೀಡಬೇಕು

ನವೀನ ಮಾದರಿಯ ಆಕರ್ಷಕ ಮಳಿಗೆ ನಿರ್ಮಾಣ ಮಾಡಬೇಕು

ಖಾಯಂ ನೌಕರರ ನೇಮಕಾತಿ ಮಾಡಬೇಕು

ಮೈಸೂರು: ಹಣ್ಣು, ತರಕಾರಿ ಬೆಳೆಯುವ ರೈತರು, ಖರೀದಿಸುವ ಗ್ರಾಹಕರ ಹಿತಚಿಂತನೆಯೊಂದಿಗೆ ತಾಜಾ ತರಕಾರಿಗಳು, ವಿವಿಧ ಹಣ್ಣುಗಳ ವಹಿವಾಟು ನಡೆಸುತ್ತಿರುವ ಜಿಲ್ಲಾ ಹಾಪ್‌ಕಾಮ್ಸ್‌ಗೆ ನಗರದ ಹೊರ ವಲಯಕ್ಕೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಉತ್ಸಾಹ ಬಂದಿದೆ.

ನಗರದ ಹಲವು ಪ್ರಮುಖ ಜಾಗಗಳಲ್ಲಿ ಜಿಲ್ಲಾ ತೋಟಗಾರಿಕೆ ಸಂಘ(ಜಿಲ್ಲಾ ಹಾಪ್‌ಕಾಮ್ಸ್)ವು ಮೈಸೂರು ಜಿಲ್ಲೆ ಹಾಗೂ ನಗರ ಸೇರಿದಂತೆ ತಾಜಾ ಹಣ್ಣು ಮತ್ತು ತರಕಾರಿ ಮಾರಾಟದ ೩೬ ಮಳಿಗೆಗಳನ್ನು ತೆರೆದಿದ್ದು, ಉತ್ತಮ ರೀತಿಯಲ್ಲಿ ಮಾರಾಟ ಕಾರ್ಯ ನಡೆಸುತ್ತಿದೆ. ಹಾಗಾಗಿ ತೋಟಗಾರಿಕೆ ಇಲಾಖೆಯು ಹಾಪ್‌ಕಾಮ್ಸ್ ಮಳಿಗೆಗಳನ್ನು ನಗರದ ಹೊರವಲಯಕ್ಕೂ, ವಿಸ್ತರಿಸುವ ಚಿಂತನೆ ನಡೆಸುತ್ತಿದೆ.

ಹಾಪ್‌ಕಾಮ್ಸ್ ಕಾರ್ಯವೈಖರಿ ಹೇಗೆ?: ವಿಶೇಷವಾಗಿ ಮಾರಾಟ ಮಳಿಗೆಗಳಲ್ಲಿ ರೈತರಿಂದಲೇ ನೇರವಾಗಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಪ್ರತಿದಿನ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸರ್ಕಾರದ ಅನುದಾನವಿಲ್ಲದಿದ್ದರೂ ಹಾಪ್‌ಕಾಮ್ಸ್ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ರೈತರಿಗೆ ಮಾರುಕಟ್ಟೆಯ ದರಕ್ಕಿಂತ ೨ ರೂ. ಹೆಚ್ಚು ನೀಡಿ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಲಾಗುತ್ತದೆ. ೪ರಿಂದ ೫ ರೂ. ಲಾಭಾಂಶದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ.

ಇದರಿಂದ ಗ್ರಾಹಕರಿಗೆ ಹೆಚ್ಚಿನ ಹಣ ಉಳಿತಾಯ ವಾಗುತ್ತದೆ. ಅಲ್ಲದೆ, ರೈತರಿಗೆ ಮಾರುಕಟ್ಟೆಗಿಂತ ಹೆಚ್ಚು ಲಾಭವೂ ದೊರೆಯುವಂತಾಗುತ್ತದೆ.

ನಗರದ ಸರಸ್ವತಿಪುರಂ, ಕುವೆಂಪುನಗರ, ಗೋಕುಲಂ, ಸಿದ್ದಾರ್ಥನಗರ, ಯಾದವಗಿರಿ, ನಗರ ಬಸ್ ನಿಲ್ದಾಣದ ಹತ್ತಿರ, ತಾಲ್ಲೂಕುಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ೩೬ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ನಗರದ ರಿಂಗ್ ರಸ್ತೆಯ ಒಳಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಮಳಿಗೆಗಳನ್ನು ಮುಂದಿನ ದಿನಗಳಲ್ಲಿ ರಿಂಗ್ ರಸ್ತೆಯ ಹೊರ ವಲಯದಲ್ಲಿ ಹಾಗೂ ನಗರದ ಉಳಿದ ಪ್ರಮುಖ ಬಡಾವಣೆಗಳಲ್ಲಿ ತೆರೆಯಲು ಜಿಲ್ಲಾ ತೋಟಗಾರಿಕೆ ಇಲಾಖೆ ಯೋಜನೆ ರೂಪಿಸಿ ವಿಸ್ತರಣೆಯ ಸಿದ್ಧತೆ ನಡೆಸುತ್ತಿದೆ. ಸರ್ಕಾರ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಿದೆ.

ಆನ್‌ಲೈನ್ ಹಾಗೂ ಖಾಸಗಿ ಮಾರಾಟಗಾರರ ಸ್ಪರ್ಧೆಯ ನಡುವೆಯೂ ಪದಾರ್ಥಗಳ ಗುಣ ಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಹಾಪ್‌ಕಾಮ್ಸ್ ಯಶಸ್ವಿಯಾಗಿದೆ. ಅಲ್ಲದೆ ಆದಾಯಗಳಿಕೆಯಲ್ಲೂ ಮುಂಚೂಣಿಯಲ್ಲಿದೆ. ಪ್ರತಿವರ್ಷವು ೧೨ರಿಂದ ೧೬ ಕೋಟಿ ರೂ. ವಹಿವಾಟು ನಡೆಯಲಿದೆ. ಪ್ರತಿ ತಿಂಗಳು ೧ರಿಂದ ೧.೫ ಕೋಟಿ ರೂ. ಆದಾಯ ಗಳಿಕೆ ಇದೆ. ಒಟ್ಟು ಮಾರಾಟ ಮಳಿಗೆಗಳಲ್ಲಿ ೯೭ ಮಂದಿ ನೌಕರರಿದ್ದು, ಕೆಲವರು ನಿವೃತ್ತಿ ಹೊಂದಿದ್ದಾರೆ. ಸದ್ಯಕ್ಕೆ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿ ಕೊಳ್ಳಲಾಗಿದ್ದು, ಕೆಲವರು ಏಕಾಏಕಿ ಕೆಲಸ ಬಿಡುತ್ತಿದ್ದಾರೆ. ಹಾಗಾಗಿ ಖಾಯಂ ನೌಕರರನ್ನು ನೇಮಕ ಮಾಡಿ ಕೊಂಡರೆ ಹಾಪ್‌ಕಾಮ್ಸ್ ವ್ಯವಹಾರ ವಿಸ್ತರಣೆಗೆ ಅನು ಕೂಲವಾಗುತ್ತದೆ ಎಂಬುದು ನೌಕರರೊಬ್ಬರ ಮಾತು.

” ಗ್ರಾಹಕರು ಹಾಗೂ ರೈತರ ಹಿತದೃಷ್ಟಿಯಿಂದ ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ದು, ಕೋವಿಡ್ ಬಳಿಕವೂ ಮಳಿಗೆಗಳನ್ನು ಹೊಸದಾಗಿ ತೆರೆಯಲಾಗಿತ್ತು. ಬೇಡಿಕೆ ಹೆಚ್ಚಿರುವ ಕಾರಣ ಮಳಿಗೆಗಳನ್ನು ವಿಸ್ತರಿಸುವ ಕೆಲಸ ಪ್ರಾರಂಭಿಸಲಿದ್ದೇವೆ. ಇದರಿಂದ ಇಲಾಖೆಗೆ ಹೆಚ್ಚಿನ ಲಾಭ ದೊರೆಯಲಿದೆ.”

-ಇಂಧೂದರ, ವ್ಯಪಸ್ಥಾಪಕ ನಿರ್ದೇಶಕರು, ಮೈಸೂರು ಜಿಲ್ಲಾ ಹಾಪ್‌ಕಾಮ್

ಆಂದೋಲನ ಡೆಸ್ಕ್

Recent Posts

ಉಪಚುನಾವಣೆಯಲ್ಲಿ ವಿಪಕ್ಷಗಳ ಷಡ್ಯಂತ್ರ ನಡೆಯಲಿಲ್ಲ, ನಾವೇ ಗೆದ್ದಿದ್ದೇವೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಉಪಚುನಾವಣೆಯಲ್ಲಿ ವಿಪಕ್ಷಗಳ ಷಡ್ಯಂತ್ರ ಏನೂ ನಡೆಯಲಿಲ್ಲ. ನಾನೇ ಗೆಲುವು ಸಾಧಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯದ…

2 mins ago

ಖಾಲಿ ಕಾಂಪೌಂಡ್‌ಗಳ ಮುಂದೆ ನಿಂತು ಮೂತ್ರ ವಿಸರ್ಜನೆ ಮಾಡುವವರೇ ಎಚ್ಚರ ಎಚ್ಚರ.

ನಿಮ್ಮ ತಪ್ಪನ್ನು ನಿಮಗೇ ತೋರಿಸಲಿದೆ ಕನ್ನಡಿ! ಮೈಸೂರು: ಖಾಲಿ ಕಾಂಪೌಂಡ್ ಬಳಿ ಮೂತ್ರ ವಿಸರ್ಜನೆಯ ದುರ್ವಾಸನೆ ತಪ್ಪಿಸಲು ಮೈಸೂರು ಮಹಾನಗರ…

33 mins ago

ಜನಗಣತಿ ಮಾಡುವ ವೇಳೆಯೇ ಹೃದಯಾಘಾತ: ಶಿಕ್ಷಕ ಸಾವು

ಕೆ.ಆರ್.ನಗರ: ಜನಗಣತಿ ಮಾಡುವ ವೇಳೆ ಸರ್ಕಾರಿ ಶಾಲೆಯ ಶಿಕ್ಷಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಪಟ್ಟಣದ ಕುವೆಂಪು ಬಡಾವಣೆಯಲ್ಲಿ ನಡೆದಿದೆ. ಮೃತಪಟ್ಟ…

1 hour ago

ಓದುಗರ ಪತ್ರ: ಪಂಚ.. ತಂತ್ರ !

ಪಂಚ.. ತಂತ್ರ ! ಚುನಾವಣೆಯಲ್ಲಿ ಗೆದ್ದವರಿಗೆ ಸಿಎಂ ಚಿಂತೆ, ಸೋತವರಿಗೆ ಇವಿಎಂನದೇ ಚಿಂತೆ ! -ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

3 hours ago

ಓದುಗರ ಪತ್ರ: ಮರದ ಕೊಂಬೆಯನ್ನು ತೆರವುಗೊಳಿಸಿ

ಮೈಸೂರಿನ ಕುವೆಂಪುನಗರದ ‘ಎಂ’ ಬ್ಲಾಕ್‌ನ ನೃಪತುಂಗ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದ ಪಕ್ಕದಲ್ಲಿ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಹೊಸ…

3 hours ago

ಓದುಗರ ಪತ್ರ: ತಮಿಳುನಾಡಿನಲ್ಲಿ ವಿಜಯ್ ವಿಜಯ

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ೨೩೪ ಕ್ಷೇತ್ರಗಳ ಪೈಕಿ ೧೦೮ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅತಿ ದೊಡ್ಡ…

3 hours ago