ಹಾಡು ಪಾಡು

ಪಾಷಾಣ ಮೂರ್ತಿ ಎಂಬ ಹೆಣ್ಣು ದೈವ

ಮೇದ ಜನಾಂಗದವರು ಹಳೆಯ ಕಾಲದಿಂದಲೂ ‘ಪಾಷಾಣ ಮೂರ್ತಿ’ ಎನ್ನುವ ಹೆಣ್ಣು ದೈವವನ್ನು ಆರಾಧಿಸಿಕೊಂಡು ಬಂದಿದ್ದಾರೆ

  • ಆರತಿ ಎಂ. ಎಸ್‌.

‘ಪಾಷಾಣ ಮೂರ್ತಿ’ ದೈವಕ್ಕೆ ಯಾವುದೇ ನಿರ್ದಿಷ್ಟ ಗುಡಿ, ಕಟ್ಟೆ, ಮಂದಿರವಾಗಲಿ ಇರುವುದಿಲ್ಲ. ಕೊಡಗಿನ ಮೇದ’ ಸಮುದಾಯದ ಹಿರಿಯ ಕುಟುಂಬದ ಮನೆಯಲ್ಲಿಯೇ ಯಾವುದೇ ವಸ್ತ್ರಾಭರಣಗಳಿಲ್ಲದ ಚಿಕ್ಕ ಹೆಣ್ಣಿನ ಮೂರ್ತಿಯನ್ನಿಟ್ಟು ಆರಾಧಿಸುತ್ತಾರೆ. ವರ್ಷದ ಜೂನ್ ತಿಂಗಳಲ್ಲಿ ಬರುವ ಹುಣ್ಣಿಮೆಯಂದು ‘ಪಾಷಾಣ ಮೂರ್ತಿ’ಗೆ ಎಡೆ ಇಡುವ ಪದ್ಧತಿಯನ್ನು ಹಿಂದಿನಿಂದಲೂ ಬಹಳ ವಿಶಿಷ್ಟವಾಗಿ ನಡೆಸಿಕೊಂಡು ಬರಲಾಗಿದೆ.

‘ತಾಯಿ’ಯ ಸ್ವರೂಪದಲ್ಲಿ ‘ಪಾಷಾಣ ಮೂರ್ತಿ’ಯನ್ನು ನಂಬುವ ‘ಮೇದರು ದೈವಕ್ಕೆ ಎಡೆ ಇಡುವುದರಲ್ಲಿ ಪಾರಂಪರಿಕ ಸಂಪ್ರದಾಯವನ್ನು ಪಾಲಿಸುತ್ತಾರೆ. ಎಡೆ ಇಡುವ ಹಿರಿಯರ ಮನೆಗೆ ಗ್ರಾಮದ ಪ್ರತಿಯೊಂದು ‘ಮೇದ’ ಸಮುದಾಯದವರ ಮನೆಯಿಂದ ಕೋಳಿ ಹಾಗೂ ತೆಂಗಿನಕಾಯಿಯನ್ನು ತರಲಾಗುತ್ತದೆ. ಭತ್ತವನ್ನು ಹುರಿದು ಮಾಡಿದ ಪುರಿ ಹಾಗೂ ಕಲ್ಲಿನಲ್ಲಿ ಬೀಸಿದ ಅಕ್ಕಿ ಹಿಟ್ಟನ್ನು ಮಾಡಿ ತರುತ್ತಾರೆ. ಎಡೆ ಇಡುವ ದಿನದಂದು ಅಕ್ಕಿಯಿಂದ ತಯಾರಿಸುವ ಆಹಾರವನ್ನು ಅಜ್ಜ, ಅಜ್ಜಿಯಂದಿರು ಹಾಗೂ ಗಂಡಸರು ಮಾತ್ರ ಮಾಡುತ್ತಾರೆ. ಆರಂಭದಲ್ಲಿ ಒಂದು ಬಾಳೆಗೊನೆಹಾಗೂ ಅಕ್ಕಿ ಹಾಕಿದ ತಟ್ಟೆಯ ಮೇಲೆ ‘ಪಾಷಾಣ ಮೂರ್ತಿಯ ವಿಗ್ರಹವನ್ನು ಇಡುತ್ತಾರೆ.

‘ಪಾಷಾಣ ಮೂರ್ತಿ’ಗೆ ಎಡೆ ಇಡುವಾಗ ಮನೆಯ ಹಿರಿಯರು ದೈವಕ್ಕೆ ಪ್ರಾರ್ಥನೆ ಮಾಡಿ ‘ನಾವು ಕೋಳಿಯನ್ನು ಅರ್ಪಿಸುತ್ತಿದ್ದೇವೆ’ ಎಂದು ನುಡಿದು ಕೋಳಿಯ ಕತ್ತನ್ನು ತಿರುವುತ್ತಾರೆ.

ಪ್ರಸಾದವನ್ನು ಎಡೆಯಾಗಿ ಇಡುವಾಗ ‘ಪಾಷಾಣ ಮೂರ್ತಿ’ಯ ಜೊತೆಗೆ ಹಿರಿಯರ ಆತ್ಮಗಳಿಗೂ ಎಡೆ ಇಡುತ್ತಾರೆ. ಎಡೆಗಳ ಎರಡೂ ಕಡೆ ಲೋಟದ ಆಕೃತಿಯಲ್ಲಿ ಮಡಚಿದ ಬಾಳೆ ಎಲೆಯಲ್ಲಿ ಒಂದು ಬದಿಯಲ್ಲಿ ಸರಾಯಿ ಹಾಗೂ ಇನ್ನೊಂದು ಬದಿಯಲ್ಲಿ ಕುರ್ದಿ ನೀರನ್ನು ಇಡಲಾಗುತ್ತದೆ. ಎಡೆಯ ಎರಡು ಬಿದಿರುವಿನ ಕಡ್ಡಿಯ ತುದಿಗೆ ಬಟ್ಟೆಯ ನೆಣೆ ಮಾಡಿ, ಬಾಳೆ ದಿಂಡಿನ ದೀಪವನ್ನು ಸಿದ್ಧಪಡಿಸಿ ಇಡಲಾಗುತ್ತದೆ. ಎಡೆ ಇಟ್ಟು ಪೂಜಿಸುವಾಗ ಕುಲಕಸುಬಿನ ಸಂಕೇತವಾಗಿ ಬಿದಿರಿನ ಕೋಲುಗಳಿಗೂ ಮಹತ್ವವನ್ನು ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ‘ಭೂಮಿ ಗುಳಿಗ ದೈವಕ್ಕೂ ಭತ್ತದಿಂದ ತಯಾರಿಸಿದ ಪುರಿಯನ್ನು ಕೋಳಿ ರಕ್ತದೊಂದಿಗೆ ಬೆರೆಸಿ ಎಡೆ ಹಾಕುತ್ತಾರೆ. ಪಾಷಾಣ ಮೂರ್ತಿ’ಗೆ ಎಡೆ ಇಡುವ ಹಿರಿಯರು ಕೊನೆಯಲ್ಲಿ ನಮ್ಮಿಂದ ಪ್ರಕೃತಿಗೆ ಕೇಡಾಗಿದ್ದಲ್ಲಿ ಕ್ಷಮಿಸಬೇಕು ಹಾಗೂ ಇಡೀ ಸಮುದಾಯದ ನೋವುಗಳನ್ನು ದೂರವಾಗಿಸಬೇಕು ಎಂದು ಪ್ರಾರ್ಥಿಸುತ್ತಾರೆ. ಹಾಗೆಯೇ ‘ಪಾಷಾಣ ಮೂರ್ತಿ’ಗೆ ಇರಿಸಲಾದ ಎಡೆಯನ್ನು ಸ್ವಲ್ಪ ಸ್ವಲ್ಪ ತಿನ್ನುವ ಮೂಲಕ ಹಿರಿಯರು ಆ ದಿನದ ಉಪವಾಸವನ್ನು ಅಂತ್ಯ ಮಾಡುತ್ತಾರೆ.

arathims117@gmail.com
(ಲೇಖಕಿ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ)

ಆಂದೋಲನ ಡೆಸ್ಕ್

Recent Posts

ದಸರಾ ಯಶಸ್ವಿಗೆ 17 ಉಪಸಮಿತಿಗಳ ರಚನೆ

ಮೈಸೂರು: ಮೈಸೂರು ದಸರಾ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ 17 ಉಪಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ…

3 hours ago

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…

17 hours ago

ಸಂಪುಟ ವಿಸ್ತರಣೆ ವಿಳಂಬ; ಡಿಕೆಶಿ ಅಸಮಾಧಾನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…

17 hours ago

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…

17 hours ago

ರಸ್ತೆ ಬದಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು

ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…

17 hours ago