ಅನ್ನದಾತರ ಅಂಗಳ

ಸ್ಕೂಟರ್‌ ಟ್ರಾಲಿ ಕೃಷಿ ಕೆಲಸ ಸಲೀಸು

ಜಿ.ಕೃಷ್ಣಪ್ರಸಾದ್

ಮೊನ್ನೆ ಪಾಂಡವಪುರ ಸಮೀಪದ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದ ರೈತರ ಸಭೆಯೊಂದಕ್ಕೆ ಹೋಗಿದ್ದೆ. ಇದು ರೈತ ನಾಯಕ ಪುಟ್ಟಣ್ಣಯ್ಯನವರ ಹುಟ್ಟೂರು. ಮಂಡ್ಯ, ಮೈಸೂರು ಮತ್ತು ಚಾಮರಾಜನಗರದ ಪರ್ಯಾಯ ಕೃಷಿ ಮಾಡುತ್ತಿರುವ ಜೈವಿಕ ರೈತ ಕುಟುಂಬಗಳನ್ನು ಒಂದೆಡೆ ತರುವ ಪ್ರಯತ್ನದ ಭಾಗವಾಗಿ ಆಯೋಜನೆಗೊಂಡಿದ್ದ ಸಭೆ ಅದು.

ಸಭೆ ನಡೆದ ತೋಟದ ರಸ್ತೆಯಲ್ಲಿ ನಿಲ್ಲಿಸಿದ್ದ ಮೋಟಾರ್ ಬೈಕ್ ನನ್ನ ಗಮನ ಸೆಳೆಯಿತು. ಆ ಬೈಕ್‌ಗೆ ಟ್ರಾಲಿ ಯೊಂದನ್ನು ಜೋಡಿಸಿದ್ದರು; ಟ್ರಾಕ್ಟರ್‌ಗೆ ಟ್ರಾಲಿ ಜೋಡಿಸಿದಂತೆ. ಸೀಮೆ ಹುಲ್ಲುನ್ನು ಕೊಯ್ದು ತಂದು ಟ್ರಾಲಿಯಲ್ಲಿ ತುಂಬುತ್ತಿದ್ದರು.

ಅದು ಕ್ಯಾತನಹಳ್ಳಿ ರಾಮಚಂದ್ರರ ‘ಸ್ಕೂಟರ್ ಟ್ರಾಲಿ’. ಸಣ್ಣಪುಟ್ಟ ಸರಂಜಾಮು, ತೋಟದ ತೆಂಗಿನಕಾಯಿ, ದನಕರುಗಳಿಗೆ ಬೇಕಾದ ಹುಲ್ಲು, ಗೊಬ್ಬರದ ಚೀಲ ಮೊದಲಾದ ಅಗತ್ಯ ಕೃಷಿ ಸರಕುಗಳನ್ನು ಈ ಟ್ರಾಲಿಗೆ ತುಂಬಿ ಬೈಕ್ ಓಡಿಸಿದರೆ, ನಾಯಿಯ ಬಾಲದಂತೆ ಈ ಟ್ರಾಲಿ ಜೊತೆಗೆ ಬರುತ್ತದೆ.

ಕೂಲಿ ಕಾರ್ಮಿಕರು ಸಿಗಲ್ಲ: ಈಗಿನ ಮಕ್ಕಳು ಹೊರೆ ಹೊರಲ್ಲ. ಟ್ರಾಲಿಗೆ ಲಗೇಜ್ ಹಾಕಿದರೆ ಖುಷಿಯಾಗಿ ಬೈಕ್ ಓಡಿಸುತ್ತಾರೆ. ಎಷ್ಟೋ ಸಲ ತರಕಾರಿ, ಎಳನೀರು ತುಂಬಿ ಇದೇ ಟ್ರಾಲಿಯಲ್ಲಿ ಶ್ರೀರಂಗಪಟ್ಟಣಕ್ಕೆ ತಗೊಂಡು ಹೋಗಿದ್ದೇನೆ. ಭತ್ತ ಮಿಲ್ ಮಾಡಿಸೋಕೋ ಇದರಲ್ಲಿ ಹೋಗ್ತೇನೆ ಎಂದು ರಾಮಚಂದ್ರ ಖುಷಿ ಯಿಂದಲೇ ಹೇಳಿದರು. ಸ್ಕೂಟರ್ ಟ್ರಾಲಿ ಅವರ ಕೃಷಿ ಸಂಬಂಧ ಸರಕು ಸಾಗಾಣಿಕೆಯನ್ನು ಸುಲಭಗೊಳಿಸಿದೆ.

ಟ್ರಾಲಿಗೆ ಆಟೋ ಮಾದರಿಯಲ್ಲಿ ಮೂರು ಚಕ್ರಗಳಿರುವುದರಿಂದ ಪಲ್ಟಿ ಹೊಡೆಯುವ ಸಂಭವ ಇಲ್ಲವೇ ಇಲ್ಲ. ತಿರುವುಗಳಲ್ಲಿ ಸುಲಭವಾಗಿ ತಿರುಗುತ್ತದೆ. ಬೈಕ್ ಓಡಾಡುವ ರಸ್ತೆಯಲ್ಲಿ ಈ ಟ್ರಾಲಿ ಸುಲಭವಾಗಿ ಬರುತ್ತದೆ. ೫೦೦ ಕೆಜಿಯವರೆಗೆ ಸರಕು ತುಂಬಬಹುದು. ಟ್ರಾಲಿಯನ್ನು ಬೈಕ್‌ಗೆ ಜೋಡಿಸಲು ಲೋಹದ ಸರಳು ಇರುತ್ತದೆ.

ಬೇಡ ಎನಿಸಿದಾಗ ಇದನ್ನು ಬಿಚ್ಚಿಡಬಹುದು. ಎರಡು- ಮೂರು ಮನೆಯವರು ಒಂದೇ ಟ್ರಾಲಿ ಬಳಸುತ್ತಾರೆ. ಕ್ಯಾತನಹಳ್ಳಿ ಅಷ್ಟೇ ಅಲ್ಲ ಸುತ್ತಮುತ್ತಲ ಊರುಗಳಲ್ಲೂ ಸ್ಕೂಟರ್ ಟ್ರಾಲಿ ಜನಪ್ರಿಯ. ಇದನ್ನು ಯಾರು ಅಭಿವೃದ್ಧಿಪಡಿಸಿದರು ಎಂಬುದು ಗೊತ್ತಿಲ್ಲವಾದರೂ, ಕಳೆದ ಐದಾರು ವರ್ಷಗಳಿಂದ ಇದರ ಬಳಕೆ ಇದೆ. ಸ್ಥಳೀಯವಾಗಿ ಸಿದ್ಧವಾಗುವ ಸ್ಕೂಟರ್ ಟ್ರಾಲಿ ಮಾಡಿಸಲು ೧೫ ಸಾವಿರ ರೂ. ಖರ್ಚಾಗುತ್ತದೆ.

ಯಾವುದೇ ನಿರ್ವಹಣಾ ವೆಚ್ಚ ಕೇಳದು. ‘ಮೊದಲೆಲ್ಲಾ ಹೊಲಕ್ಕೆ ಬಂಡಿ ಕಟ್ಟಿಕೊಂಡು ಹೋಗ್ತಿದ್ದರು. ಈಗ ದನಗಳೇ ಇಲ್ಲ. ಈಗಿನ ಪೀಳಿಗೆ ಹುಡುಗರಿಗೆ ಈ ಟ್ರಾಲಿ ಇಷ್ಟವಾಗಿದೆ’ ಎನ್ನುತ್ತಾರೆ ರೈತ ಬಸವರಾಜು. ಬದಲಾದ ಕಾಲಕ್ಕೆ ಅನುಗುಣವಾಗಿ ಎತ್ತಿನ ಗಾಡಿ ಬದಲು ಸ್ಕೂಟರ್ ಟ್ರಾಲಿ ಬಂದಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ರಾಮಚಂದ್ರ-ಮೊ.ಸಂ. ೭೩೫೩೨ ೮೫೯೪೩ ಸಂಪರ್ಕಿಸಬಹುದು.

ಆಂದೋಲನ ಡೆಸ್ಕ್

Recent Posts

ಮಾನವ ಕಲಿಯಬೇಕಾದ ಬದುಕಿನ ಪಾಠಗಳು

ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ  ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…

8 hours ago

ಸಾವಿರಾರು ಹೆರಿಗೆ ಮಾಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಗೀತಾ ‘ಮಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…

8 hours ago

ಸಿದ್ದರಾಮಯ್ಯ ಸಿದ್ಧಾಂತದ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ

ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…

8 hours ago

ಕಣ್ಮನ ಸೆಳೆಯುತ್ತಿದೆ ಮಲ್ಲಳ್ಳಿ ಜಲಪಾತ!

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…

8 hours ago

ಓದುಗರ ಪತ್ರ: ಸ್ಥಾನ…ಮಾನ !

ಸ್ಥಾನ...ಮಾನ ! ಅಳೆದೂ ಸುರಿದು ಅಲ್ಲಿಂದಿಲ್ಲಿಗೆ ಓಡಾಡಿ ಕೊಟ್ಟೂ ಕೊಡಲಾಗದೆ ಬಿಟ್ಟೂ ಇರಲಾಗದೆ ಉಳಿಸಿಕೊಂಡಿರುವುದು ಒಂದೇ ಒಂದು ಮಂತ್ರಿ ಸ್ಥಾನ…

8 hours ago

ಓದುಗರ ಪತ್ರ: ಸಚಿವ ಸ್ಥಾನ: ಹಿರಿಯರ ನಿರ್ಲಕ್ಷ್ಯ ಸರಿಯಲ್ಲ

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಮಂತ್ರಿಮಂಡಲ ವಿಸ್ತರಣೆಯಾಗಿ ೨೦ ಸ್ಥಾನಗಳ ಪೈಕಿ ೧೯ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ…

8 hours ago