ಅನ್ನದಾತರ ಅಂಗಳ

ಜಾನುವಾರುಗಳಿಗೆ ಬಹುವಾರ್ಷಿಕ ಮೇವಿನ ಬೆಳೆ ಬೆಳೆಯಿರಿ

ಮುಂಗಾರು ಹಂಗಾಮು ಮುಗಿದು ಹಿಂಗಾರು ಆರಂಭವಾಗಿದ್ದು, ಈ ದಿನಗಳಲ್ಲಿ ಹಸಿರು ಮೇವು ಉತ್ಪಾದನೆ ಜಾನುವಾರು, ಅದರಲ್ಲೂ ಹೈನೋದ್ಯಮದ ಬೆನ್ನೆಲುಬಾಗಿದೆ. ಹೈನುಗಾರಿಕೆಯಲ್ಲಿ ಶೇ.೭೦ರಷ್ಟು ಉತ್ಪಾದನಾ ವೆಚ್ಚ ರಾಸುಗಳಿಗೆ ಮೇವು ಪೂರೈಸುವುದ ಕ್ಕಾಗಿಯೇ ಆಗಿರುತ್ತದೆ. ಆದ್ದರಿಂದ ಕಡಿಮೆ ದರದಲ್ಲಿ ಮೇವು ಉತ್ಪಾದಿಸಿ ಹಾಗೂ ಅದರ ಸಮರ್ಪಕ ಬಳಕೆ ಯಿಂದ ಹೆಚ್ಚು ಲಾಭ ಗಳಿಸಬಹುದಾಗಿದೆ.

ಹಸು ಮತ್ತು ಎಮ್ಮೆಗಳಿಗೆ ಮೇವು ಪೂರೈಕೆ ಮಾಡುವುದು ಬಹಳ ಮುಖ್ಯ. ಪೋಷಕಾಂಶಗಳ ಕೊರತೆಯಿಂದ ಆಗುವ ತೊಂದರೆಗಳನ್ನು ತಡೆಯಲು, ರಾಸುಗಳ ಕ್ಷಮತೆಗೆ ತಕ್ಕಂತೆ ಹಾಲು ಉತ್ಪಾದಿಸಲು ಮತ್ತು ಆರೋಗ್ಯ ಕಾಪಾಡಲು ಸಾಕಷ್ಟು ಪ್ರಮಾಣದಲ್ಲಿ ವರ್ಷಪೂರ್ತಿ ಇಳುವರಿ ಕೊಡುವ ಪೌಷ್ಠಿಕಾಂಶಯುಕ್ತ ಹಸಿರು ಮೇವನ್ನು ಬೆಳೆಯುವುದು ಮೂಲಭೂತ ಅವಶ್ಯವಾಗಿದೆ. ಆದುದರಿಂದ ಬಹುವಾರ್ಷಿಕ ಮತ್ತು ಬಹು ಕಟಾವು ಮೇವಿನ ಬೆಳೆಗಳನ್ನು ಬೆಳೆಯುವುದು ಅಗತ್ಯ. ರಾಸುಗಳ ಉತ್ತಮ ಆರೋಗ್ಯ, ಹಾಲು ಇಳುವರಿಗೆ, ಲಾಭದಾಯಕತೆಗೆ ಮತ್ತು ಉತ್ಪಾದನೆ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಹಸಿರು ಮೇವು ಬಹು ಮುಖ್ಯ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ರೈತರು ಜಾನುವಾರುಗಳ ಪೋಷಣೆ ಅಂದರೆ ಮೇವು ಮತ್ತು ಸಮತೋಲನ ಪಶು ಆಹಾರ ನಿರ್ವಹಣೆ ಕ್ರಮಗಳ ಬಗ್ಗೆ ಅದರಲ್ಲೂ ವರ್ಷಪೂರ್ತಿ ಇಳುವರಿ ಕೊಡುವ ಬಹು ವಾರ್ಷಿಕ ಮೇವಿನ ಬೆಳೆಗಳ ಬಗ್ಗೆ ಹೆಚ್ಚಿನ ವೈಜ್ಞಾನಿಕ ಮಾಹಿತಿ ತಿಳಿದುಕೊಳ್ಳುವುದು ಅತ್ಯವಶ್ಯ.

ರಸ ಮೇವು ಸಂರಕ್ಷಣೆ:

ಮೇವಿಗಾಗಿ ಬೆಳೆಯುವ ಆಹಾರ ಧಾನ್ಯಗಳ ಬೆಳೆಗಳು ಮತ್ತು ಉತ್ತಮ ಹುಲ್ಲುಗಳನ್ನು ರಸ ಮೇವು ಮಾಡಲು ಬಳಸಬಹುದು. ಶೇ.೬೫-೭೫ರಷ್ಟು ತೇವಾಂಶವಿರುವ ಮತ್ತು ಹಾಲುಗಾಳು ಇರುವ ಹಂತದಲ್ಲಿ ಬೆಳೆಗಳನ್ನು ಕೊಯ್ದು ೧-೨ ಅಂಗುಲದ ತುಣುಕುಗಳನ್ನಾಗಿ ಕತ್ತರಿಸಬೇಕು. ಹೀಗೆ ಕತ್ತರಿಸಲ್ಪಟ್ಟ ಮೇವನ್ನು ಗುಂಡಿಗಳಲ್ಲಿ ಒತ್ತಿ ಒತ್ತಿ ತುಂಬಬೇಕು. ನಂತರ ಗಾಳಿಯಾಡದಂತೆ ಸೀಲ್ ಮಾಡಬೇಕು. ಹೀಗೆ ಮಾಡಿದ ೨-೩ ವಾರಗಳ ನಂತರ ನಿಯಂತ್ರಿತ ರಾಸಾಯನಿಕ ಕ್ರಿಯೆಯಿಂದ (ಹುದುಗುವಿಕೆ) ತಯಾರಾಗುವುದೇ ರಸ ಮೇವು (ಸೈಲೇಜ್) ಅಥವಾ ಹಗೇವು ಮೇವು. ಗೋವಿನ ಜೋಳ, ಜೋಳ, ಸಜ್ಜೆ ಮತ್ತು ಬಹು ವಾರ್ಷಿಕ ತಳಿಯ ಹುಲ್ಲುಗಳನ್ನು ರಸ ಮೇವಾಗಿ ಸಂಗ್ರಹಿಸಿಡಬಹುದು.

ಇದನ್ನು ಓದಿ : ಕಬ್ಬಿನ ಗದ್ದೆಯಲ್ಲಿ ಸಿಹಿ ಜೋಳದ ಬೆಲ್ಲ.

ಬಹುವಾರ್ಷಿಕ ಏಕದಳ ಮೇವು ಬೆಳೆಗಳು: 

ಸಿಒಎ-ಎಸ್-೨೯ ?

* ಬಹುವಾರ್ಷಿಕ ಮತ್ತು ಬಹು ಕಟಾವು ಏಕದಳ ಮೇವಿನ ಬೆಳೆ

* ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯುವ ಉತ್ತಮವಾದ ಮೇವಿನ ಬೆಳೆ

* ಮೇವಿನ ಕಡ್ಡಿ ಸಣ್ಣ ಮತ್ತು ಮೃದುವಾಗಿರುವುದರಿಂದ ಕುರಿ ಮತ್ತು ಆಡುಗಳು ಇಷ್ಟಪಡುವ ಮೇವಾಗಿದೆ

* ಎಕರೆಗೆ ೪ ಕೆ.ಜಿ ಬಿತ್ತನೆ ಬೀಜ ಅಗತ್ಯ

* ಸಾಲಿನಲ್ಲಿ ಅಂತರ ಬೆಳೆಯಾಗಿ ಬಿತ್ತನೆ ಮಾಡಿ ನೀರಾವರಿ ಸೌಲಭ್ಯವಿದ್ದಲ್ಲಿ ೭-೧೦ ದಿನಗಳಿಗೊಮ್ಮೆ ನೀರು ಹಾಯಿಸಬೇಕು

*  ಶೇ.೫೦ರಷ್ಟು ಹೂವಾಡಿದಾಗ ಮೊದಲ ಕಟಾವು ಮಾಡಿ ನಂತರದ ೪೫- ೫೦ ದಿನಗಳಲ್ಲಿ ಕಟಾವು ಮಾಡಬೇಕು

*  ವಾರ್ಷಿಕ ಇಳುವರಿಯಾಗಿ ಸುಮಾರು ೫೫-೬೦ ಟನ್ ಹಸಿರು ಮೇವು ಪಡೆಯ ಬಹುದು.

ಸೂಪರ್ ನೇಪಿಯರ್ :

* ಈ ಬೆಳೆಯು ನೇಪಿಯರ್ ಜಾತಿಗೆ ಸೇರಿದ  ನೂತನ ಹೈಬ್ರಿಡ್ ತಳಿ

* ಅತ್ಯಂತ ವೇಗವಾಗಿ ಬೆಳೆಯುವ ಮತ್ತು ಉತ್ತಮ ಗುಣಮಟ್ಟದ ಮೇವು

* ಅಧಿಕ ಕಚ್ಚಾ ಸಸಾರಜನಕ ಅಂಶ ಹೊಂದಿದ್ದು, ೬೦ ದಿನಗಳಲ್ಲಿ ಹತ್ತು ಅಡಿ ಎತ್ತರ ಬೆಳೆಯುತ್ತದೆ.

* ಎರಡು ಗಿಣ್ಣುಗಳಿರುವ ಕಡ್ಡಿಗಳನ್ನು ಬಿತ್ತನೆಗೆ ಬಳಸಿ ಮತ್ತು ಸಾಲಿಂದ ಸಾಲಿಗೆ ೩ ಅಡಿ ಮತ್ತು ಗಿಡದಿಂದ ಗಿಡಕ್ಕೆ ೨ ಅಡಿ ಅಂತರವಿರಲಿ

* ವರ್ಷಕ್ಕೆ ೬-೭ ಬಾರಿ ಕಟಾವು ಮಾಡಿ ವರ್ಷಗಳವರೆಗೆ ಅಧಿಕ ಇಳುವರಿ ಪಡೆಯಬಹುದು

ಇದನ್ನು ಓದಿ : ಗ್ರಾಮೀಣ ಭಾಗಗಳಲ್ಲಿ ನಿಲ್ಲದ ವನ್ಯಮೃಗಗಳ ಹಾವಳಿ 

ಬಹುವಾರ್ಷಿಕ ದ್ವಿದಳ ಮೇವು ಬೆಳೆಗಳು: 

ಕುದುರೆ ಮೆಂತೆ:

* ಈ ಬೆಳೆಯು ಮೇವಿನ ರಾಣಿ ಎಂದೇ ತುಂಬಾ ಜನಪ್ರಿಯ

* ತಳಿಗಳು: ಟಿ-೯, ಆನಂದ-೨, ಸಿಸಾ-೯, ಆರ್.ಎಲ್-೮೮ ಈ ತಳಿಗಳು ಬಹುವಾರ್ಷಿಕ ಬೆಳೆಯಾಗಿ ೨-೩ ವರ್ಷಗಳ ವರೆಗೆ ಮೇವನ್ನು ಪಡೆಯಬಹುದು

* ಎಕರೆಗೆ ೪-೫ ಕೆಜಿ ಬಿತ್ತನೆ ಬೀಜ ಅಗತ್ಯ. ಬೀಜವನ್ನು ರೈಜೋಬಿಯಂ ಜೀವಾಣುಗಳಿಂದ ಬೀಜೋಪಚಾರ ಮಾಡಬೇಕು

* ಹೂವಾಡಿದಾಗ ಮೊದಲ ಕಟಾವು ಮಾಡಿ ನಂತರದ ಕಟಾವನ್ನು ೨೫-೩೦ ದಿನಗಳಲ್ಲಿ ಮಾಡಬೇಕು ಬೇಲಿ ಮೆಂತೆ ? ವರ್ಷವಿಡೀ ಬೆಳೆಯುವ ಮತ್ತೊಂದು ಪ್ರಮುಖ ದ್ವಿದಳ ಬಹು ವಾರ್ಷಿಕ ಮೇವು

* ಶೇ.೨೨ರಷ್ಟು ಸಸಾರಜನಕ ಹೊಂದಿದ್ದು, ಮಣ್ಣಿನ ಸಸಾರಜನಕ ಹೀರಿಕೊಳ್ಳುವ ಗುಣ ಹೊಂದಿದೆ

* ೮೦-೯೦ ದಿನಗಳಲ್ಲಿ ಮೊದಲ ಕಟಾವುಮಾಡಿ ನಂತರದ ಕಟಾವನ್ನು ೩೫-೪೫ ದಿನಗಳಲ್ಲಿ ಮಾಡಬೇಕು, ಎಕರೆಗೆ ಸುಮಾರು ೩೨ ರಿಂದ ೪೦

ಗಿರೀಶ್ ಹುಣಸೂರು

ಆಂದೋಲನ ಡೆಸ್ಕ್

Recent Posts

ಪ್ರಮಾಣ ವಚನ ಸಮಾರಂಭಕ್ಕೆ ವಿಜಯ್‌ ಪತ್ನಿ, ಮಕ್ಕಳು ಗೈರು

ಚೆನ್ನೈ : ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಮಾರಂಭದಲ್ಲಿ ಅನೇಕ ಗಣ್ಯರು ಸೇರಿದ್ದರು.…

8 hours ago

ಮಡಿಕೇರಿ | ನೀರಿನಲ್ಲಿ ಮುಳುಗಿ ಯುವಕ ಸಾವು

ಮಡಿಕೇರಿ : ಸ್ನಾನಕ್ಕೆ ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿಗೆ ಸಮೀಪದ ಬಲಮುರಿ ಗ್ರಾಮದಲ್ಲಿ ಭಾನುವಾರ ನಡೆದಿದೆ.…

9 hours ago

ಗಡಿ ಜಿಲ್ಲೆಯಲ್ಲೂ ತಮಿಳು ಸಿಎಂ ವಿಜಯ್‌ ಹವಾ!

ಹನೂರು : ತಮಿಳುನಾಡಿನ ಮುಖ್ಯಮಂತ್ರಿಯಾಗಿ ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ನಟ ಸಿ.ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಹಿನ್ನೆಲೆ ಪಟ್ಟಣದಲ್ಲಿ…

9 hours ago

ಪ್ರಧಾನಿ ಸಂಚಾರ ಮಾರ್ಗದಲ್ಲಿ ಜಿಲಿಟೆನ್ ಕಡ್ಡಿ ಪತ್ತೆ ; ಕೆಲಕಾಲ ಆತಂಕ ; ಓರ್ವ ವಶಕ್ಕೆ

ಬೆಂಗಳೂರು : ಪ್ರಧಾನಿ ನರೇಂದ್ರಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ವೇಳೆ ಜಿಲಿಟಿನ್ ಕಡ್ಡಿಗಳು ಪತ್ತೆಯಾಗಿ ಕೆಲಕಾಲ…

9 hours ago

ತಮಿಳುನಾಡು | ತಿರುಚಿರಾಪಳ್ಳಿ ಕ್ಷೇತ್ರಕ್ಕೆ ವಿಜಯ್ ರಾಜೀನಾಮೆ

ಚೆನ್ನೈ : ಟಿವಿಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಭಾನುವಾರ ತಿರುಚಿರಾಪಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ…

10 hours ago

ಹುಣಸೂರು | ಭಾರೀ ಗಾಳಿ-ಮಳೆಗೆ ಹಾರಿಹೋದ ಚಾವಣಿ

ಹುಣಸೂರು : ಬಿರುಗಾಳಿ ಮಳೆಗೆ ತಾಲ್ಲೂಕಿನ ಹನಗೋಡು ಹೋಬಳಿಯ ವದ್ಲಿ ಮನುಗನಹಳ್ಳಿಯಲ್ಲಿ ಮನೆಯ ಚಾವಣಿಗೆ ಹಾಕಿದ್ದ ಕಲ್ನಾರ್ ಶೀಟ್ ಹಾರಿಹೋಗಿದ್ದು,…

11 hours ago