ಮಂಡ್ಯ ಪಕ್ಕದ ಬಸರಾಳಿನ ಕಾಲೇಜು ಬೀದಿಯಲ್ಲಿ ಬದುಕುತ್ತಿರುವ ತಂಬೂರಿ ಜವರಯ್ಯನವರಿಗೆ ಈಗ ೮೨ ವರ್ಷ. ಅರವತ್ತು ವರ್ಷಗಳ ಹಿಂದೆ ಅವರನ್ನು ಪತಿಪುರುಷನೆಂದು ಸ್ವೀಕರಿಸಿದ ಮಡದಿ ಬೋರಮ್ಮನವರಿಗೆ ೭೭ ವರ್ಷ. ಇವರಿಬ್ಬರು ಸೇರಿ ತಂಬೂರಿ ಪದ ಹಾಡುತ್ತಾ ದೇಶಾಟನೆ, ಭಿಕ್ಷಾಟನೆ ಗೈಯಲು ತೊಡಗಿ ಹತ್ತಿರ ಹತ್ತಿರ ೫೦ ವರ್ಷ. ಒಂದು ಕಾಲದಲ್ಲಿ ಕೋಳಿಮೊಟ್ಟೆ ಮಾರುತ್ತಾ, ತಿಗಣೆ ಔಷಧಿ ಹೊಡೆಯುತ್ತಾ ಊರೂರು ತಿರುಗುತ್ತಾ ಓಡಾಡುತ್ತಿದ್ದ ಜವರಯ್ಯನವರ ಮಾಮೂಲಿ ಜೀವನದ ಒಂದು ದೊಡ್ಡ ಘಟನೆ ನಾಗಮಂಗಲ ತಾಲ್ಲೂಕು ಮದ್ದನಟ್ಟಿಯ ಯುವತಿ ಬೋರಮ್ಮಳನ್ನು ಮದುವೆ ಆಗಿದ್ದು. ಇನ್ನೊಂದು ಹೊಳೆ ನರಸೀಪುರ ಬಳಿಯ ಬಂಟ್ ಶೆಟ್ಟಳ್ಳಿ ರುದ್ರಮುನಿ ಸ್ವಾಮಿಯವರಿಂದ ಗುರು ದೀಕ್ಷೆ ಪಡೆದು ಹಾಡಲು ತೊಡಗಿದ್ದು. ಇವೆರಡಕ್ಕಿಂತ ಬಹಳ ದೊಡ್ಡ ಘಟನೆ ರಾಜ್ಯೋತ್ಸವ ಪ್ರಶಸ್ತಿ ಬಂದ ಹಣದಲ್ಲಿ ಸೋರುತ್ತಿದ್ದ ಮನೆಯ ದುರಸ್ತಿ ಮಾಡಿದ್ದು ಮತ್ತು ಮಡದಿ ಬೋರಮ್ಮನಿಗೆ ಚಿನ್ನದ ಓಲೆ ಮಾಡಿಕೊಟ್ಟಿದ್ದು.
ಬಡತನ ಬಡತನವೇ ಅಲ್ಲ. ಹಸಿವು ಹಸಿವೇ ಅಲ್ಲ ಎಂದು ಹಾಡುತ್ತ ಬದುಕುತ್ತಿರುವ ಈ ತತ್ವಪದದ ಜೋಡಿಗೆ ಯಾರಾದರೂ ಹಾಡುಕೇಳಿ ನಾಲ್ಕು ಒಳ್ಳೆ ಮಾತನಾಡಿದರೆ ಅದೇ ಸಂತೋಷ. ಒಳ್ಳೆ ಮಾತನಾಡಿ ಸಹಾಯವನ್ನೂ ನೀಡಿದರೆ ಅದೇ ಆ ಹೊತ್ತಿನ ಆಹಾರ.

andolanait

Recent Posts

ಮಹಾಪ್ರವಾಹಕ್ಕೆ ನೇಪಾಳ ತತ್ತರ: ನಾಪತ್ತೆಯಾದವರ ಸಂಖ್ಯೆ 6100ಕ್ಕೆ ಏರಿಕೆ

ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…

3 hours ago

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

10 hours ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

10 hours ago

ಓದುಗರ ಪತ್ರ: ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಕಡ್ಡಾಯವಾಗಲಿ

ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…

10 hours ago

ಓದುಗರ ಪತ್ರ: ಯುಪಿಐ ವಹಿವಾಟು ಶುಲ್ಕ; ಹೊರೆಯಾಗದಿರಲಿ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ…

10 hours ago

ಮೋದಿ ಅಧಿಕಾರ ಪರ್ವ ರಜತ ಮಹೋತ್ಸವ: ಏನಿತ್ತು? ಏನಿಲ್ಲ?

ನರೇಂದ್ರ ಮೋದಿ ಅವರು ೨೦೦೧ರಲ್ಲಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಸತತ ೧೫ ವರ್ಷಗಳು ಅಲ್ಲಿ…

10 hours ago