ಆಂದೋಲನ ಪುರವಣಿ

ಬಾಳಿಗೆ ಬೆಳಕಾದ ಏಲಕ್ಕಿ ಬಾಳೆ

-ಜಯಶಂಕರ್‌ ಬದನಗುಪ್ಪೆ

ಅತಿಯಾದ ಮಳೆಯಿಂದ ಸಾಕಷ್ಟು ಪ್ರಮಾಣ ಬೆಳೆ ನಷ್ಟವಾಗಿದೆ. ಹಲವಾರು ಕಡೆಗಳಲ್ಲಿ ಬಾಳೆ, ಶುಂಠಿ, ಹರಿಸಿಣ ಸೇರಿ ಹಲವಾರು ಬೆಳೆಗಳು ನಷ್ಟಕ್ಕೀಡಾಗಿವೆ. ಅದೇ ವೇಳೆಯಲ್ಲಿ ಇವುಗಳ ಬೆಲೆ ಹೆಚ್ಚಾಗಿ ರೈತನಿಗೆ ತುಸು ಲಾಭವಾಗಿದೆ. ಅದರಲ್ಲಿಯೂ ಏಲಕ್ಕಿ ಬಾಳೆಗೆ ಈ ಬಾರಿ ಹೆಚ್ಚಿನ ಬೆಲೆ ಸಿಕ್ಕಿದ್ದು, ರೈತನ ಕೈ ಹಿಡಿಯುವಲ್ಲಿ ಏಲಕ್ಕಿ ಯಶಸ್ವಿಯಾಗಿದೆ.

ಈ ವರ್ಷದ ಆರಂಭದಿಂದ ಹಿಡಿದು ಏಲಕ್ಕಿ ಬಾಳೆಗೆ ಸಾಧಾರಣ ಬೆಲೆ ಸಿಕ್ಕಿದೆ. ಒಂದು ಹಂತದಲ್ಲಿ ಕೆಜಿಗೆ ೭೫ ರೂ. ದಾಟಿದ್ದೂ ಇದೆ. ಪ್ರಸ್ತುತ ಮೈಸೂರು ಹಾಪ್‌ಕಾಮ್ಸ್‌ನಲ್ಲಿ ಕೆಜಿ ಏಲಕ್ಕಿ ಬಾಳೆಗೆ ೪೦ ರೂ. ಇದ್ದು, ರೈತರು ತುಸು ಆದಾಯ ಕಾಣುವಂತಾಗಿದೆ.

ಮೈಸೂರು, ಚಾಮರಾಜನಗರ, ಮಂಡ್ಯದ ಕೆಲ ಭಾಗಗಳಲ್ಲಿ ಏಲಕ್ಕಿ ಬಾಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ತಮಿಳುನಾಡಿನಲ್ಲಿ ಬೆಳೆಯುವ ಏಲಕ್ಕಿ ಬಾಳೆಗಿಂತ ಗಾತ್ರದಲ್ಲಿ ಸಣ್ಣದಿದ್ದರೂ ಹೆಚ್ಚು ರುಚಿ ಹೊಂದಿರುವ ಕಾರಣ ಈ ಭಾಗದ ಬಾಳೆಗೆ ಹೆಚ್ಚು ಬೇಡಿಕೆ ಇದೆ. ಈ ಬಾರಿ ತಗ್ಗು ಪ್ರದೇಶಗಳಲ್ಲಿ ಬೆಳೆದ ಬಾಳೆ ಹೆಚ್ಚಿನ ಮಳೆಯಿಂದ ಹಾನಿಗೀಡಾಗಿದ್ದು, ಎತ್ತರದ ಪ್ರದೇಶಗಳಲ್ಲಿ ಬೆಳೆದಿರುವ ಬಾಳೆ ಚೆನ್ನಾಗಿದೆ. ಮುಂದಿನ ದಿನಗಳಲ್ಲಿ ಏಲಕ್ಕಿ ದರ ಮತ್ತೆ ಹೆಚ್ಚಾಗುವ ಸಾಧ್ಯತೆ ಇದ್ದು, ರೈತರಿಗೆ ಅನುಕೂಲ ಆಗಲಿದೆ.

೨೦೧೭-೧೮ ರಲ್ಲಿ ಕೆ.ಜಿ.ಏಲಕ್ಕಿ ಬಾಳೆಗೆ ೬೦ ರೂ. ದರ ಸಿಕ್ಕಿತ್ತು. ಈಗ ೪ ವರ್ಷದ ನಂತರ ನನಗೆ ೭೨ ರೂ. ಸಿಕ್ಕಿದೆ. ಇದು ಕೃಷಿಯಲ್ಲಿ ಆದ ನಷ್ಟ ಸರಿದೂಗಿಸಲು ನೆರವಾಗಿದೆ. ೨ ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದೆ. ಆರಂಭದಲ್ಲಿ ೭೨ ರೂ. ದರ ಸಿಕ್ಕಿದರೂ ತಿಂಗಳ ನಂತರ ಗುಣಮಟ್ಟ ಆಧರಿಸಿ ೫೫-೬೦ ರೂ. ಗೆ ಮಾರಾಟ ಮಾಡಿದ್ದೇವೆ. ಮೈಸೂರಿನ ಬೋಟಿ ಬಜಾರ್‌ನಲ್ಲಿ ಉತ್ತಮ ದರ ದೊರಕಿದೆ. ಈಗ ದರ ಕೆಜಿಗೆ ೪೦ ರೂ. ಇರುವುದರಿಂದ ಲಾಭದಾಯಕ ಎಂದು ಹೇಳಲಾಗದು. -ಬಿ.ಉದಯಕುಮಾರ್, ರೈತರು, ಹರವೆ ಗ್ರಾಮ, ಚಾ.ನಗರ ತಾಲ್ಲೂಕು.

೧೦ ಎಕರೆ ಪ್ರದೇಶದಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದೆ, ಅತಿಯಾದ ಮಳೆಯಿಂದಾಗಿ ಒಂದಷ್ಟು ಫಸಲು ನಷ್ಟವಾಗಿದೆ. ಉಳಿದ ಬಾಳೆ ಬೆಳೆಯನ್ನು ಕೆ.ಜಿ.ಗೆ ೬೬ ರೂ.ನಂತೆ ಮಾರಾಟ ಮಾಡಿದ್ದೇನೆ. ಪ್ರತಿ ಬಾರಿ ಹಾಪ್ ಕಾಮ್ಸ್ ಗೆ ಮಾರಾಟ ಮಾಡಲಾಗುತ್ತಿತ್ತು. ಈ ಬಾರಿ ರಿಲಾಯನ್ಸ್ ಮಾರಾಟ ಮಳಿಗೆಗೂ ಕೊಟ್ಟಿದ್ದೇನೆ. -ಶಿವನಂಜಪ್ಪ, ರೈತರು, ಚಿಕ್ಕಕಾನ್ಯ, ಮೈಸೂರು ತಾಲ್ಲೂಕು

ಹಾಪ್ ಕಾಮ್ಸ್ ವಾರ್ಷಿಕ ಸರಾಸರಿ ದರ

೨೦೧೮-೧೯ರಲ್ಲಿ ಕೆಜಿ.ಗೆ ೪೪ ರೂ.

೨೦೧೯-೨೦ರಲ್ಲಿ ೫೪ ರೂ.

೨೦೨೦-೨೧ ರಲ್ಲಿ ೫೧ ರೂ.

೨೦೨೧-೨೨ ರಲ್ಲಿ ೩೯ ರೂ.

andolana

Recent Posts

ಸಫಾರಿ ಟಿಕೆಟ್ ದರ ಹೆಚ್ಚಳ; ಪ್ರವಾಸಿಗರಿಗೆ ಹೊರೆ

ದಾ.ರಾ.ಮಹೇಶ್ ಪರಿಷ್ಕತ ಶುಲ್ಕ ಸೆಪ್ಟೆಂಬರ್ ೧ರಿಂದ ಜಾರಿ; ಸಫಾರಿ ಸಮಯ ೧ ಗಂಟೆ ಹೆಚ್ಚಳ ಹನಗೋಡು : ಬಂಡೀಪುರ ಮತ್ತು…

1 min ago

ದಸರಾ ಯಶಸ್ವಿಗೆ 17 ಉಪಸಮಿತಿಗಳ ರಚನೆ

ಮೈಸೂರು: ಮೈಸೂರು ದಸರಾ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ 17 ಉಪಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ…

10 hours ago

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…

24 hours ago

ಸಂಪುಟ ವಿಸ್ತರಣೆ ವಿಳಂಬ; ಡಿಕೆಶಿ ಅಸಮಾಧಾನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…

24 hours ago

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…

1 day ago