ಆಂದೋಲನ ಪುರವಣಿ

ಬಾಳಿಗೆ ಬೆಳಕಾದ ಏಲಕ್ಕಿ ಬಾಳೆ

-ಜಯಶಂಕರ್‌ ಬದನಗುಪ್ಪೆ

ಅತಿಯಾದ ಮಳೆಯಿಂದ ಸಾಕಷ್ಟು ಪ್ರಮಾಣ ಬೆಳೆ ನಷ್ಟವಾಗಿದೆ. ಹಲವಾರು ಕಡೆಗಳಲ್ಲಿ ಬಾಳೆ, ಶುಂಠಿ, ಹರಿಸಿಣ ಸೇರಿ ಹಲವಾರು ಬೆಳೆಗಳು ನಷ್ಟಕ್ಕೀಡಾಗಿವೆ. ಅದೇ ವೇಳೆಯಲ್ಲಿ ಇವುಗಳ ಬೆಲೆ ಹೆಚ್ಚಾಗಿ ರೈತನಿಗೆ ತುಸು ಲಾಭವಾಗಿದೆ. ಅದರಲ್ಲಿಯೂ ಏಲಕ್ಕಿ ಬಾಳೆಗೆ ಈ ಬಾರಿ ಹೆಚ್ಚಿನ ಬೆಲೆ ಸಿಕ್ಕಿದ್ದು, ರೈತನ ಕೈ ಹಿಡಿಯುವಲ್ಲಿ ಏಲಕ್ಕಿ ಯಶಸ್ವಿಯಾಗಿದೆ.

ಈ ವರ್ಷದ ಆರಂಭದಿಂದ ಹಿಡಿದು ಏಲಕ್ಕಿ ಬಾಳೆಗೆ ಸಾಧಾರಣ ಬೆಲೆ ಸಿಕ್ಕಿದೆ. ಒಂದು ಹಂತದಲ್ಲಿ ಕೆಜಿಗೆ ೭೫ ರೂ. ದಾಟಿದ್ದೂ ಇದೆ. ಪ್ರಸ್ತುತ ಮೈಸೂರು ಹಾಪ್‌ಕಾಮ್ಸ್‌ನಲ್ಲಿ ಕೆಜಿ ಏಲಕ್ಕಿ ಬಾಳೆಗೆ ೪೦ ರೂ. ಇದ್ದು, ರೈತರು ತುಸು ಆದಾಯ ಕಾಣುವಂತಾಗಿದೆ.

ಮೈಸೂರು, ಚಾಮರಾಜನಗರ, ಮಂಡ್ಯದ ಕೆಲ ಭಾಗಗಳಲ್ಲಿ ಏಲಕ್ಕಿ ಬಾಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ತಮಿಳುನಾಡಿನಲ್ಲಿ ಬೆಳೆಯುವ ಏಲಕ್ಕಿ ಬಾಳೆಗಿಂತ ಗಾತ್ರದಲ್ಲಿ ಸಣ್ಣದಿದ್ದರೂ ಹೆಚ್ಚು ರುಚಿ ಹೊಂದಿರುವ ಕಾರಣ ಈ ಭಾಗದ ಬಾಳೆಗೆ ಹೆಚ್ಚು ಬೇಡಿಕೆ ಇದೆ. ಈ ಬಾರಿ ತಗ್ಗು ಪ್ರದೇಶಗಳಲ್ಲಿ ಬೆಳೆದ ಬಾಳೆ ಹೆಚ್ಚಿನ ಮಳೆಯಿಂದ ಹಾನಿಗೀಡಾಗಿದ್ದು, ಎತ್ತರದ ಪ್ರದೇಶಗಳಲ್ಲಿ ಬೆಳೆದಿರುವ ಬಾಳೆ ಚೆನ್ನಾಗಿದೆ. ಮುಂದಿನ ದಿನಗಳಲ್ಲಿ ಏಲಕ್ಕಿ ದರ ಮತ್ತೆ ಹೆಚ್ಚಾಗುವ ಸಾಧ್ಯತೆ ಇದ್ದು, ರೈತರಿಗೆ ಅನುಕೂಲ ಆಗಲಿದೆ.

೨೦೧೭-೧೮ ರಲ್ಲಿ ಕೆ.ಜಿ.ಏಲಕ್ಕಿ ಬಾಳೆಗೆ ೬೦ ರೂ. ದರ ಸಿಕ್ಕಿತ್ತು. ಈಗ ೪ ವರ್ಷದ ನಂತರ ನನಗೆ ೭೨ ರೂ. ಸಿಕ್ಕಿದೆ. ಇದು ಕೃಷಿಯಲ್ಲಿ ಆದ ನಷ್ಟ ಸರಿದೂಗಿಸಲು ನೆರವಾಗಿದೆ. ೨ ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದೆ. ಆರಂಭದಲ್ಲಿ ೭೨ ರೂ. ದರ ಸಿಕ್ಕಿದರೂ ತಿಂಗಳ ನಂತರ ಗುಣಮಟ್ಟ ಆಧರಿಸಿ ೫೫-೬೦ ರೂ. ಗೆ ಮಾರಾಟ ಮಾಡಿದ್ದೇವೆ. ಮೈಸೂರಿನ ಬೋಟಿ ಬಜಾರ್‌ನಲ್ಲಿ ಉತ್ತಮ ದರ ದೊರಕಿದೆ. ಈಗ ದರ ಕೆಜಿಗೆ ೪೦ ರೂ. ಇರುವುದರಿಂದ ಲಾಭದಾಯಕ ಎಂದು ಹೇಳಲಾಗದು. -ಬಿ.ಉದಯಕುಮಾರ್, ರೈತರು, ಹರವೆ ಗ್ರಾಮ, ಚಾ.ನಗರ ತಾಲ್ಲೂಕು.

೧೦ ಎಕರೆ ಪ್ರದೇಶದಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದೆ, ಅತಿಯಾದ ಮಳೆಯಿಂದಾಗಿ ಒಂದಷ್ಟು ಫಸಲು ನಷ್ಟವಾಗಿದೆ. ಉಳಿದ ಬಾಳೆ ಬೆಳೆಯನ್ನು ಕೆ.ಜಿ.ಗೆ ೬೬ ರೂ.ನಂತೆ ಮಾರಾಟ ಮಾಡಿದ್ದೇನೆ. ಪ್ರತಿ ಬಾರಿ ಹಾಪ್ ಕಾಮ್ಸ್ ಗೆ ಮಾರಾಟ ಮಾಡಲಾಗುತ್ತಿತ್ತು. ಈ ಬಾರಿ ರಿಲಾಯನ್ಸ್ ಮಾರಾಟ ಮಳಿಗೆಗೂ ಕೊಟ್ಟಿದ್ದೇನೆ. -ಶಿವನಂಜಪ್ಪ, ರೈತರು, ಚಿಕ್ಕಕಾನ್ಯ, ಮೈಸೂರು ತಾಲ್ಲೂಕು

ಹಾಪ್ ಕಾಮ್ಸ್ ವಾರ್ಷಿಕ ಸರಾಸರಿ ದರ

೨೦೧೮-೧೯ರಲ್ಲಿ ಕೆಜಿ.ಗೆ ೪೪ ರೂ.

೨೦೧೯-೨೦ರಲ್ಲಿ ೫೪ ರೂ.

೨೦೨೦-೨೧ ರಲ್ಲಿ ೫೧ ರೂ.

೨೦೨೧-೨೨ ರಲ್ಲಿ ೩೯ ರೂ.

andolana

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

2 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

3 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

4 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

5 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

10 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

10 hours ago