ಆಂದೋಲನ ಪುರವಣಿ

ಯೋಗ ಕ್ಷೇಮ : ಪೈಮೋಸಿಸ್ ಬಗ್ಗೆ ಅರಿಯಿರಿ

ಪೆನ್ನಿಸ್ ಅಥವಾ ಶಿಶ್ನದ ಮೂತ್ರ ದ್ವಾರದ ಸುತ್ತಲಿನ ಗುಂಡನೆಯ ನುಣುಪಾದ ಭಾಗವನ್ನು ಗ್ಲ್ಯಾನ್ಸ್ ಪೆನ್ನಿಸ್ ಎನ್ನುತ್ತೇವೆ. ಗ್ಲ್ಯಾನ್ಸ್ ಪೆನ್ನಿಸ್ ಅನ್ನು ಸುತ್ತುವರಿದಿರುವ ಶಿಶ್ನದ ಮುಂಭಾಗದ ಚರ್ಮವನ್ನು ಪ್ರೆಪ್ಯೂಸ್ ಅಥವಾ ಪೋರ್ ಸ್ಕಿನ್ ಅರ್ಥಾತ್ ಮುಂತೊಗಲು ಎನ್ನುತ್ತೇವೆ. ಪ್ರೆಪ್ಯೂಸ್ ಮೃದುವಾಗಿ ಚಲನಶೀಲವಾಗಿದ್ದು, ಗ್ಲ್ಯಾನ್ಸ್ ಪೆನ್ನಿಸ್‌ಗೆ ಭದ್ರತೆಯನ್ನೊದಗಿಸಿ ಯಾವಾಗಲೂ ಮುಚ್ಚಿರುತ್ತದೆ. ಸ್ನಾನ ಮಾಡುವಾಗ ಶಿಶ್ನದ ಮುಂಭಾಗದ ಚರ್ಮವನ್ನು ಮೇಲೆಳೆದು ಶುಭ್ರವಾದ ನೀರಿನಲ್ಲಿ ತೊಳೆದು ಒಳಭಾಗದ ನೈರ್ಮಲ್ಯವನ್ನು ಕಾಪಾಡಬೇಕು.

ಪ್ರೆಪ್ಯೂಸ್ ಅಥವಾ ಶಿಶ್ನದ ಮುಂತೊಗಲು ಕಿರಿದಾಗಿ ಮತ್ತು ಬಿಗಿಯಾಗಿ ಗ್ಲ್ಯಾನ್ಸ್ ಪೆನ್ನಿಸ್‌ಗೆ ಅಂಟಿಕೊಂಡಂತೆ ಇದ್ದು, ಮೂತ್ರ ದ್ವಾರದಿಂದ ಹಿಂದೆ ಸರಿಸಲು ಅಥವಾ ಎಳೆಯಲು ಸಾಧ್ಯವಾಗುವುದಿಲ್ಲ. ಶಿಶ್ನದ ಬಿಗಿಯಾದ ಮತ್ತು ಕಿರಿದಾದ ಮುಂತೊಗಲು ಅಥವಾ ಟೈಟ್ ಸ್ಕಿನ್ ಅನ್ನು ಪೈಮೋಸಿಸ್ ಎನ್ನುತ್ತೇವೆ.

ಮಕ್ಕಳಲ್ಲಿ ಅಲ್ಪ ಪ್ರಮಾಣದಲ್ಲಿ ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಮಕ್ಕಳು ಬೆಳೆಯುತ್ತಿದ್ದಂತೆ ಪ್ರೆಪ್ಯೂಸ್ ಹಿಂದೆ ಸರಿದು ಗ್ಲ್ಯಾನ್ಸ್ ಪೂರ್ಣ ಕಾಣುತ್ತದೆ. ಆದರೆ ಹಲವರಲ್ಲಿ ಮಧ್ಯಮ ಅಥವಾ ತೀವ್ರತರದಲ್ಲಿ ಪೈಮೋಸಿಸ್ ಇದ್ದಾಗ ತೊಂದರೆ ಕಾಣಿಸಿಕೊಂಡು ಚಿಕಿತ್ಸೆ ಬೇಕಾಗುತ್ತದೆ.

ಪೈಮೋಸಿಸ್ ಅಲ್ಪ ಪ್ರಮಾಣದಲ್ಲಿ ಇದ್ದರೆ ಮೂತ್ರ ದ್ವಾರ ಮತ್ತು ಸೊಲ್ವ ಗ್ಲ್ಯಾನ್ಸ್ ಕಾಣಿಸುತ್ತದೆ. ಪೂರ್ಣ ಪ್ರಮಾಣದ ಪೈಮೋಸಿಸ್ ಇರುವವರಲ್ಲಿ ಶಿಶ್ನದ ಮುಂಭಾಗ ಚರ್ಮದಿಂದ ಮುಚ್ಚಿಕೊಂಡಿರುತ್ತದೆ. ಮೂತ್ರ ದ್ವಾರದ ರಂಧ್ರ ಮಾತ್ರ ಕಾಣಿಸುತ್ತದೆ. ಚರ್ಮವನ್ನು ಹಿಂದೆ ಎಳೆಯಲು ಸಾಧ್ಯವಾಗುವುದಿಲ್ಲ. ಪೈಮೋಸಿಸ್ ಇರುವ ವ್ಯಕ್ತಿಗಳ ಮೂತ್ರ ದ್ವಾರದ ಸುತ್ತ ಇರುವ ಚರ್ಮವು ಉಂಗುರ ಅಥವಾ ರಬ್ಬರ್ ಬ್ಯಾಂಡ್‌ನಂತೆ ಕಾಣುತ್ತದೆ. ಮೂತ್ರ ವಿಸರ್ಜಿಸುವಾಗ ಮುಂಭಾಗ ಬೆಲೂನ್‌ನಂತೆ ಸಲ್ಪ ಊದಿಕೊಳ್ಳಬಹುದು. ಪ್ರಾಯದವರಲ್ಲಿ ಶಿಶ್ನ ನಿಮಿರಿದಾಗ ನೋವು ಕಾಣಿಸಿಕೊಳ್ಳಬಹುದು. ತೀವ್ರ ತರದ ಪೈಮೋಸಿಸ್ ಇದ್ದ ಹಲವರಲ್ಲಿ ಮೂತ್ರ ನಾಳದ ಪ್ಯಾರಪೈಮೋಸಿಸ್, ಬೆಲನೈಟಿಸ್ ಮುಂತದ ಸೋಂಕು ಬರಬಹುದು. ಶಿಶ್ನದ ಚರ್ಮದ ಒಳಭಾಗವನ್ನು ಎಳೆದು ತೊಳೆಯಲು ಸಾಧ್ಯವಾಗದೇ ಇರುವುದರಿಂದ ದುರ್ವಾಸನೆ ಬರಬಹುದು.

ದೊಡ್ಡವರಲ್ಲಿ ಸಕ್ಕರೆ ಕಾಯಿಲೆ, ಲೈಕೆಸ್‌ಸ್ಲೀರೋಸಿಸ್, ಇನ್ಫೆಕ್ಷನ್, ಗ್ಸಿರೋಸಿಸ್ ಬೆಲನೋಟಿಕ್ ಮುಂತಾದ ಕಾಯಿಲೆಗಳು ಇರುವವರಲ್ಲಿ ಪೈಮೋಸಿಸ್ ಕಾಣಿಸಿಕೊಳ್ಳಬಹುದು.

ಪೈಮೋಸಿಸ್‌ಗೆ ಕಾರಣವಾಗುವ ಅಂಶಗಳನ್ನು ನಿವಾರಿಸುವುದು, ಪೈಮೋಸಿಸ್ ಮುಂದುವರಿದು ತೊಂದರೆಯಾಗುತ್ತಿದ್ದರೆ ಪೈಮೋಸಿಸ್ ಚರ್ಮದ ಒಳಭಾಗದ ಸ್ಕೃಪಿಂಗ್ ಅಥವಾ ಸರ್‌ಕಮ್‌ಸಿಷನ್ (ಮುಂಜಿ) ಮಾಡಿಸುವುದರಿಂದ ಸಮಸ್ಯೆ ನಿವಾರಿಸಿಕೊಳ್ಳಬಹುದು.

andolanait

Recent Posts

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

27 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

1 hour ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

4 hours ago