ಹಾಡು ಪಾಡು

ಹೀಗಾದರೂ ಆದರೆ ಭ್ರಮೆಗಳು ಕರಗಿ ಆಧ್ಯಾತ್ಮಿಕ ವಿನಯದ ಪರಿಚಯವಾಗಬಹುದೇನೋ…

ಸುಕನ್ಯಾ ಕನಾರಳ್ಳಿ

ಒಂದು ಮಠ. ಅಲ್ಲಿ ಮರಿಸ್ವಾಮಿಯಾಗಿದ್ದವರು ಪೀಠಾಧಿಪತಿ ತೀರಿಕೊಂಡ ಮೇಲೆ ಏನೇನೋ ಕಾರಣಗಳ ದೆಸೆಯಿಂದ ಪೀಠವನ್ನು ಏರಲು ಆಗದೆ ಹೋಯಿತು. ಆ ಕಹಿಯನ್ನು ಆತ ಜೀರ್ಣಿಸಿಕೊಳ್ಳಲು ಆಗದೆ ಕೊನೆಗೆ ಮಾನಸಿಕ ಚಿಕಿತ್ಸೆಯ ಮೊರೆ ಹೋಗಬೇಕಾಯಿತು.

ಚಿಕಿತ್ಸೆಗೆ ಆತನನ್ನು ಹೊತ್ತು ಹಾಕಿದವರ ಭಯವೇನೂ ಕಮ್ಮಿ ಇರಲಿಲ್ಲ. ಮಠದ ಗುಟ್ಟುಗಳನ್ನೆಲ್ಲ ಬಲ್ಲ ಈತ ಎಲ್ಲೆಂದರಲ್ಲಿ ಒದರಿಬಿಟ್ಟರೆ? ಅವರ ಕೇಸ್ ಇವರ ಹತ್ತಿರವೇ ಬಂತು. ತುಂಬ ಯೋಚಿಸಿದ ನಂತರ ಈ ನನ್ನ ಸ್ನೇಹಿತರು ಹಾಕಿದ ಷರತ್ತು: ‘ಆತ ಒಂದು ವರ್ಷದ ಮಟ್ಟಿಗೆ ಕಾವಿ ಹಾಕಬಾರದು. ಹಾಗಿದ್ದಲ್ಲಿ ಮಾತ್ರ ನಾನು ಚಿಕಿತ್ಸೆಯನ್ನು ಆರಂಭಿಸುತ್ತೇನೆ.’ ಆತ ಸಂಪೂರ್ಣವಾಗಿ ಗುಣ ಹೊಂದಿದ್ದು ಸುಖಾಂತ್ಯವೇ. ಆದರೆ ಅದರ ಪೂರ್ತಿ ಯಶಸ್ಸನ್ನು ಹೊತ್ತುಕೊಳ್ಳಲು ಇಷ್ಟಪಡದ ಪ್ರಾಮಾಣಿಕತೆ ಈ ಮನಶಾಸ್ತ್ರಜ್ಞರದ್ದು. ಅದರ ಬಗ್ಗೆ ಮಾತಾಡುತ್ತಾ, ‘ನಿಜ ಏನು ಗೊತ್ತಾಮ್ಮ? ಕಾವಿ ಹೆಚ್ಚಿನಂಶ ಅವರ ಅಹಮನ್ನು ಇನ್ನಿಲ್ಲದಂತೆ ಉಬ್ಬಿಸುತ್ತದೆ. ಅದರಲ್ಲೂ ಜನ ಬಂದು ಕಾಲಿಗೆ ಬೀಳುವಾಗ, “ಪೂಜ್ಯ… ಪೂಜ್ಯ’ ಅಂತೆಲ್ಲ ಸಂಬೋಽಸುವಾಗ ಒಂದು ರೀತಿಯ ಅಡಿಕ್ಷನ್ ಪ್ರಾರಂಭವಾಗುತ್ತೆ. ಆತನ ನಿಜವಾದ ಬಂಡವಾಳ ಈ ವೇಷ -ಲಾಂಛ ನವೇ ಆಗಿತ್ತು. ಕಾವಿ ಹೋದ ಮೇಲೆ ತನ್ನ ಮಾತಿಗೆ ಬೆಲೆಯೇ ಇಲ್ಲ ಎಂದು ಅರಿವಾಗಿ ತೆಪ್ಪಗಾದರು,’ ಎಂದರು.

ಭೇಷ್! ಎಂದುಕೊಂಡೆ. ಇಂಗ್ಲೆಂಡಿನಿಂದ ಬಂದ ಬಟ್ಟೆಯನ್ನು ತಿರಸ್ಕರಿಸಿ ಖಾದಿ, ಉಪ್ಪು ಇತ್ಯಾದಿ ದಿನನಿತ್ಯದ ಬಳಕೆಯ ವಸ್ತುಗಳ ಮೂಲಕ ಬ್ರಿಟಿಷ್ ಸಾಮ್ರಾಜ್ಯವನ್ನು ಅಲ್ಲಾಡಿಸಿದ ಗಾಂಽಜಿ ನೆನಪಿಗೆ ಬಂದಿದ್ದರು. ಕಾವಿಧಾರಿಗಳಿಗೆ ಏಳು ವರ್ಷದ ಕೆಲಸಕ್ಕೆ ಒಂದು ವರ್ಷದ ರಜೆ ಇದ್ದರೆ ಹೇಗೆ ಎಂಬ ಅದ್ಭುತ ಯೋಚನೆ ಹೊಳೆದಿದ್ದು ಆಗಲೇ. ಭ್ರಮೆಗಳು ಕರಗಿ ಆಧ್ಯಾತ್ಮಿಕ ವಿನಯದ ಪರಿಚಯವಾಗಬಹುದು!

ನನ್ನ ಮನಶಾಸ್ತ್ರ ಪ್ರಾಧ್ಯಾಪಕ-ಸ್ನೇಹಿತರು ಅದ್ಭುತವಾದ ಛಾಯಾಗ್ರಾಹಕ ಕೂಡ. ಅವರು ತುಂಬಾ ವರುಷಗಳ ಹಿಂದೆ ಕ್ಲಿಕ್ಕಿಸಿದ್ದ ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಜನ ಮುಗಿಬಿದ್ದಿದ್ದರು. ಅದರ ಹಕ್ಕನ್ನು ಉದಾರವಾಗಿ ಯಾರಿಗೋ ದಾನ ಮಾಡಲಾಗಿತ್ತು. ಪಡೆದುಕೊಂಡಾತ ಅದೆಷ್ಟು ಪ್ರತಿಗಳನ್ನು ಹಾಕಿಸಿದರೆಂದರೆ ತನ್ನ ಮಗಳ ಮದುವೆಗೆ ಹೊಂಚಿದ ಹಣ ಬಂದಿದ್ದು ಅದರಿಂದಲೇ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರು. ಪುಟ್ಟರಾಜ ಗವಾಯಿಗಳು ಪಂಡಿತ ವೆಂಕಟೇಶ್ ಕುಮಾರ್ ಅವರ ಗುರು. ಅವರ ಜೊತೆ ಈ ಮನಶಾಸ್ತ್ರಜ್ಞರು ಗವಾಯಿಗಳನ್ನು ನೋಡಲು ಹೋದಾಗ, ‘ಈ ಸ್ನೇಹಿತರುಯಾವ ಸ್ವಾಮೀಜಿಗಳನ್ನೂ ಹುಡುಕಿಕೊಂಡು ಹೋಗುವುದಿಲ್ಲ, ಆದರೆ ನಿಮ್ಮನ್ನ ಭೇಟಿ ಮಾಡಲೇಬೇಕು ಅಂತ ಬಂದಿದಾರೆ’, ಅಂತ ವೆಂಕಟೇಶ್ ಕುಮಾರ್ ಪರಿಚಯ ಮಾಡಿಕೊಟ್ಟರಂತೆ. ಆಗ ಗವಾಯಿಗಳು, ‘ಅವರು ಬಂದಿ ರೋದು ನಾನು ಮಠಾಧಿಪತಿ ಅಂತಲ್ಲ, ಕಲಾವಿದ ಅಂತ ಕಣ್ ಲೇ!’ ಎಂದರಂತೆ. ಅದು ಅದ್ಭುತ ಚೇತನವೊಂದು ಕಲೆಗೆ ಸಲ್ಲಿಸಿದ ನಮನದಂತೆ ನನಗೆ ಕೇಳಿಸಿತ್ತು! ಅಂದ ಹಾಗೆ ಅವರೇ ಹೇಳಿದಂತೆ ಪುಟ್ಟರಾಜ ಗವಾಯಿಗಳ ಪೇಟ ಮಾತ್ರ ಕಾವಿ. ಉಳಿದ ವಸ್ತ್ರವೆಲ್ಲ ಅಚ್ಚ ಬಿಳಿ. ಪ್ರಜ್ಞಾಪೂರ್ವಕ ಆಯ್ಕೆ!

ಆಂದೋಲನ ಡೆಸ್ಕ್

Recent Posts

ಎರಡನೇ ಆಷಾಢ ಶುಕ್ರವಾರದ ಸಂಭ್ರಮ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ

ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರವಾದ ಇಂದು ನಾಡ ಅಧಿದೇವತೆ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.…

11 hours ago

ಓದುಗರ ಪತ್ರ: ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಖಂಡನೀಯ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದಿಲ್ಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರದ ಕುಮ್ಮಕ್ಕು ಹಾಗೂ ಪೊಲೀಸರ…

14 hours ago

ಓದುಗರ ಪತ್ರ: ಗ್ರಂಥಪಾಲಕರಿಲ್ಲದ ಗ್ರಂಥಾಲಯಗಳು

ಕಳೆದ ೨೫ ವರ್ಷಗಳಿಂದ ರಾಜ್ಯದಲ್ಲಿ ೧೦ ಸಾವಿರ ಗ್ರಂಥಪಾಲಕ ಹುದ್ದೆಗಳನ್ನು ಭರ್ತಿ ಮಾಡದಿರುವುದು ಸರ್ಕಾರದ ಅಕ್ಷಮ್ಯ ನಿರ್ಲಕ್ಷ್ಯ. ೧,೨೦೦ ಸರ್ಕಾರಿ…

14 hours ago

ಓದುಗರ ಪತ್ರ: ಮುಚ್ಚಿರುವ ಪಿಎಚ್‌ಸಿ ಕೇಂದ್ರ ತೆರೆಯುವುದು ಎಂದು?

ಮೈಸೂರಿನ ಕುವೆಂಪು ನಗರದ ಎಂ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು, ಕಳೆದ ಮೂರು ತಿಂಗಳಿಂದ ಮುಚ್ಚಿದೆ. ಇದಕ್ಕೆ ಕಾರಣ ತಿಳಿದಿಲ್ಲ.…

14 hours ago

ಇದು ನಮಿತ್ ಮಲ್ಹೋತ್ರ ‘ರಾಮಾಯಣ’ ದರ್ಶನ

 ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ  ‘ತಿಣಿಕಿದನು -ಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂ ತಿಣೀಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ’ ಎಂದು…

14 hours ago

ಮಡಿಕೇರಿಯಲ್ಲಿ ಬಳಂಜಿಗಿಲ್ಲ ಬೇಡಿಕೆ

ಪುನೀತ್ ಜಿಲ್ಲೆಯಲ್ಲಿ ಕ್ಷೀಣಿಸಿದ ಮಳೆಯಿಂದ ಬೇಡಿಕೆ ಕುಸಿತ; ಕುಲಕಸುಬಿಗೆ ಹೊಡೆತ  ಮಡಿಕೇರಿ: ಜಿಲ್ಲೆಯಲ್ಲಿ ಧಾರಾಕಾರ ಮಳೆಯ ವಾತಾವರಣ ಇಲ್ಲದ ಕಾರಣ…

14 hours ago