ಡಾ. ಮಹದೇವಸ್ವಾಮಿ ಹೆಗ್ಗೊಠಾರ
ಇಂಗ್ಲಿಷ್ ಅಧ್ಯಾಪನ ಹಾಗೂ ಸುಗಮ ಸಂಗೀತ ಗಾಯನದ ಮೂಲಕ ಹಳೇ ಮೈಸೂರು ಪ್ರಾಂತ್ಯ ದಲ್ಲಿ ಪ್ರೊ. ಮಲ್ಲಣ್ಣನವರು ಚಿರಪರಿಚಿತರು; ಅಭಿನವ ಕಾಳಿಂಗರಾಯರೆಂದೇ ಖ್ಯಾತನಾಮರಾದ ಇವರು ತಮ್ಮ ಸಂಗೀತ ಸಾಧನೆಗೆ ರಾಜ್ಯ ಸರ್ಕಾರದ ಸಂತ ಶಿಶುನಾಳ ಶರೀಫ ಪ್ರಶಸ್ತಿಗೆ ಭಾಜನರಾಗಿರುವುದು ಸ್ವಾಗತಾರ್ಹ.
ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಗುಂಡೇಗಾಲದವರಾದ ಎಸ್. ಮಲ್ಲಣ್ಣ ವೃತ್ತಿ ಯಿಂದ ಇಂಗ್ಲಿಷ್ ಪ್ರಾಧ್ಯಾಪಕರು; ಪ್ರವೃತ್ತಿಯಲ್ಲಿ ಸಂಗೀತ ಕಲಾವಿದರು. ಆ ಕಾಲದಲ್ಲಿ ಹಳ್ಳಿಯ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದ್ದ ಇಂಗ್ಲಿಷ್ ಭಾಷೆಯು ಪ್ರೊ. ಮಲ್ಲಣ್ಣನವರಿಂದ ಪಾಠ ಕೇಳಿದವರಿಗೆಲ್ಲ ಸಲೀಸು; ಅವರ ಸರಳವಾದ ಇಂಗ್ಲಿಷ್ ನೋಟ್ಸ್ ಮೈಸೂರು ವಿಶ್ವವಿದ್ಯಾನಿಲಯದಲ್ಲೆಲ್ಲ ಫೇಮಸ್ಸು!
ವಿದ್ಯಾರ್ಥಿ ಹಾಗೂ ಜನಸಾಮಾನ್ಯರ ನಾಡಿಮಿಡಿತ ವನ್ನು ಚೆನ್ನಾಗಿ ಅರಿತಿದ್ದ ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾ ಪಕರನ್ನು ಅವರ ಶಿಷ್ಯವೃಂದ ಆ ದಿನಗಳೊಂದಿಗೆ ಮರೆಯದೆ ನೆನಪಿಸಿಕೊಳ್ಳುತ್ತದೆ. ಅವರ ಶಿಷ್ಯರಲ್ಲಿ ಮುಖ್ಯವಾಗಿ ಎರಡು ವರ್ಗ. ನೇರವಾಗಿ ಪಾಠ ಕೇಳಿದ ಶಿಷ್ಯರು ಹಾಗೂ ಅವರ ನೋಟ್ಸ್ ಮೂಲಕ ಕಲಿತ ಏಕಲವ್ಯನಂತಹ ಶಿಷ್ಯರು.
ಮಲ್ಲಣ್ಣನವರ ತಂದೆ ಶಂಕರಪ್ಪನವರು ೧೯೪೦-೫೦ರ ದಶಕದಲ್ಲಿ ಜನಪ್ರಿಯ ನಾಟಕ ಕಲಾವಿದರು ಹಾಗೂ ಗಾಯಕರು. ಇಂತಹ ಕಲಾಭಿರುಚಿಯ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಹುಟ್ಟಿ ಬೆಳೆದ ಮಲ್ಲಣ್ಣನವರಲ್ಲಿ ಸಂಗೀತ ರಕ್ತಗತವಾಗಿ ಬಂದ ಬಹುಶ್ರುತ ವಿದ್ಯೆ. ಕನ್ನಡ ಭಾವಗೀತೆ, ಜನಪದ ಗೀತೆ, ಚಿತ್ರಗೀತೆ, ವಚನ, ತತ್ವಪದ ಮುಂತಾದ ಪ್ರಕಾರಗಳಲ್ಲಿ ಹಾಡಿ, ಹಳಬರಿಗೆ ಉತ್ಸಾಹ, ಹೊಸಬರಿಗೆ ಪ್ರೋತ್ಸಾಹ ನೀಡುವ ಕೈಂಕರ್ಯ ಅವರದು. ಗಾಯನ ಲೋಕದ ದಿಗ್ಗಜರಾದ ಕಾಳಿಂಗರಾಯರು ಮತ್ತು ಪಿ. ಬಿ. ಶ್ರೀನಿವಾಸರ ಗಾಯನದ ಅನುಕರಣೆ, ಅನುಸರಣೆ ಮಲ್ಲಣ್ಣನವರಿಗೆ ನೀರು ಕುಡಿದಷ್ಟೇ ಸುಲಭ. ಕುವೆಂಪು, ದ. ರಾ. ಬೇಂದ್ರೆ, ರಾಜರತ್ನಂ, ಅಡಿಗ, ಜಿ. ಎಸ್. ಶಿವರುದ್ರಪ್ಪ, ಕೆ. ಎಸ್. ನರಸಿಂಹಸ್ವಾಮಿ, ಕೆ. ಎಸ್. ನಿಸಾರ್ ಅಹಮದ್ ಮೊದಲಾದವರ ಭಾವಗೀತೆಗಳನ್ನು ಮಲ್ಲಣ್ಣ ಮನ ತುಂಬಿ ಹಾಡಿ ಮತ್ತಷ್ಟು ಜನಪ್ರಿಯಗೊಳಿಸಿದ್ದಾರೆ.
ಹಿರಿಯ ಕವಿಗಳಾದ ಸಿಪಿಕೆ, ಜಯಪ್ಪ ಹೊನ್ನಾಳಿ ಸೇರಿದಂತೆ ಹೊಸ ತಲೆಮಾರಿನ ಕವಿಗಳ ನೂರಾರು ಭಾವಗೀತೆಗಳಿಗೆ ಸ್ವತಃ ರಾಗ ಸಂಯೋಜನೆ ಮಾಡಿ ಸಿಡಿಗಳನ್ನು ಹೊರತಂದಿದ್ದಾರೆ. ಮೂರು ದಶಕಗಳ ಹಿಂದೆಯೇ ಹಂಸ ಧ್ವನಿ ಎಂಬ ಸಂಗೀತ ಟ್ರಸ್ಟ್ ಕಟ್ಟಿ ಕೊಂಡು ಯುವ ಕಲಾವಿದರಿಗೂ ಧ್ವನಿಯಾಗಿದ್ದಾರೆ. ಅವರು ತಮ್ಮ ೭೫ರ ಹರಯದಲ್ಲೂ ಮೊನ್ನೆ ಮೊನ್ನೆ ಮೈಸೂರಿನ ಗಾನಭಾರತಿಯಲ್ಲಿ ನಡೆಸಿಕೊಟ್ಟ ಕಾರ್ಯ ಕ್ರಮವು ಸಂಗೀತ ಪ್ರೇಮಿಗಳನ್ನು ರಂಜಿಸಿದೆ. ಮಲ್ಲಣ್ಣ ಅವರ ಪತ್ನಿ ಪ್ರೊ. ಕೆ. ಆರ್. ಪ್ರೇಮಲೀಲಾ ಅವರು ಕೂಡ ಕವಯಿತ್ರಿಯಾಗಿದ್ದು, ಅವರು ರಚಿಸಿರುವ ಹಲವು ಕವನಗಳಿಗೂ ಮಲ್ಲಣ್ಣ ರಾಗ ಸಂಯೋಜಿಸಿ ಹಾಡಿರು ವುದು ವಿಶೇಷ.
(ಲೇಖಕರು, ಹುಣಸೂರು ತಾಲ್ಲೂಕು ರತ್ನಪುರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು)
ನಂಜನಗೂಡು: ಆಳೆತ್ತರ ಬೆಳೆದು ನಿಂತಿದ್ದ ಕಬ್ಬಿನ ಬೆಳೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಐದು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಿರುಗಾಳಿ ಸಹಿತ ಮಳೆಗೆ ಹಲವಾರು ರೈತರು ಬೆಳೆದಿದ್ದ 50ಕ್ಕೂ ಹೆಚ್ಚು…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಬುಧವಾರ ಸುರಿದ ಬಿರುಗಾಳಿ ಮಳೆಗೆ ಬಾಲೆ ಬೆಳೆ ನಾಶವಾಗಿರುವ ಘಟನೆ…
ಬೆಂಗಳೂರು: ಬೌರಿಂಗ್ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಮಂದಿ ಬಲಿಯಾಗಿದ್ದ ಪ್ರಕರಣದಲ್ಲಿ ಸಂಬಂಧಪಟ್ಟ ಎಂಜಿನಿಯರ್ ಅನ್ನು ಕೂಡಲೇ ಅಮಾನತು…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿ, ಇಬ್ಬರು…
ಬೆಂಗಳೂರು: ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿನ ರಾಜಕೀಯ ಗೊಂದಲಗಳನ್ನು ಆದಷ್ಟು…