ಓದುಗರ ಪತ್ರ
ದೇಶವೊಂದರ ಮುಖ್ಯಸ್ಥ ಇನ್ನೊಂದು ದೇಶದ ವಿರುದ್ಧ ಯುದ್ಧ ಸಾರಿದ್ದಾರೆ. ಈ ಸಂಘರ್ಷದಲ್ಲಿ ತಮ್ಮ ಜನರೂ ಪ್ರಾಣ ಕಳೆದುಕೊಳ್ಳುತ್ತಾರೆ ಎಂಬುದರ ಅರಿವಿದ್ದರೂ ಆತನದ್ದು ಅಪಾರ ಅಹಂಕಾರ. ಇಂತಹ ಸರ್ವಾಧಿಕಾರಿ ಧೋರಣೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣಕ್ಕೂ ಮುಂದಾಗಿರುವ ಮುಖ್ಯಸ್ಥನ ವಿರುದ್ಧ ಇಡೀ ದೇಶವೇ ತಿರುಗಿಬಿದ್ದಿದೆ. ಎಲ್ಲ ವಯೋಮಾನದವರೂ ಪ್ರತಿಭಟನೆಯ ಅಸ್ತ್ರ ಹಿಡಿದು ಬೀದಿಗಿಳಿದಿದ್ದಾರೆ. ಮುಖ್ಯಸ್ಥನ ಪ್ರತಿಕೃತಿಯನ್ನು ದಹಿಸಿದ್ದಾರೆ. ಸಿಕ್ಕಿದ್ದರೆಲ್ಲೆಲ್ಲ ಆತನ ಚಿತ್ರಪಟಕ್ಕೆ ಹೊಡೆಯುತ್ತಿದ್ದಾರೆ. ನಮಗೆ ರಾಜಪ್ರಭುತ್ವ ಬೇಕಿಲ್ಲ; ಪ್ರಜಾಪ್ರಭುತ್ವ ಬೇಕು ಎಂದು ಗುಡುಗಿದ್ದಾರೆ. ಹಾಗಿದ್ದರೂ ಯುದ್ಧದಿಂದ ಹಿಂದೆ ಸರಿಯುವ ಜನಪರ, ಜೀವಪರ ಚಿಂತನೆ ಆತನಿಗಿಲ್ಲ. ಆದರೆ, ಜನಾಕ್ರೋಶವನ್ನು ಎದುರಿಸುವುದು ಅಷ್ಟು ಸುಲಭವಲ್ಲ ಎಂಬುದು ಆ ಮುಖ್ಯಸ್ಥನಿಗೆ ಅರ್ಥ ಆಗಿದ್ದಂತೆ ಇಲ್ಲ. ಇದು ಯಾವ ದೇಶದ ಕಥೆ ನಿಮಗೆ ಗೊತ್ತಾಯಿತೆ? ಇದು ಅಮೆರಿಕ ದೇಶದ ಪರಿಸ್ಥಿತಿ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಟ್ಟಹಾಸದ ಪರಿಣಾಮ.
ಭಾರತದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಇಲ್ಲಿಯೂ ಅಮೆರಿಕದಂತಹ ಪ್ರತಿಭಟನೆಗಳು ನಡೆಯುವುದು ಸಾಧ್ಯವೆ? ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆಯಾದರೆ ಜನರು ಆಕ್ರೋಶ ವ್ಯಕ್ತಪಡಿಸಲು ಅವಕಾಶ ಇದೆಯೇ? ಜನಪರ ಹೋರಾಟಗಾರರು ಜೈಲಿಗೆ ಹೋಗದೇ ತಪ್ಪಿಸಿಕೊಳ್ಳಲು ಅವಕಾಶ ಇದೆಯೇ? ಎಲ್ಲರೂ ಯೋಚಿಸಬೇಕಾದ ಜರೂರತ್ತು ಇದೆ.
ರಾಜಶೇಖರ್, ಜನತಾನಗರ, ಮೈಸೂರು
ಮೈಸೂರು: ಈ ಬಾರಿಯ ಮೈಸೂರು ದಸರಾ ಮೆರವಣಿಗೆಗೆ ಸೇನೆ ಹಾಗೂ ವಾಯುಸೇನೆಯನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್…
ಹುಣಸೂರು: ತಾಲೂಕಿನ ನಂಜಾಪುರ ಗ್ರಾಮದಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ನಂಜಾಪುರದಲ್ಲಿ…
ಮೈಸೂರು: ರೈತರಿಗೆ ಬರ ಪರಿಹಾರ ನೀಡುವ ವಿಚಾರವಾಗಿ ಮಾತನಾಡಿರುವ ಡಿಸಿಎಂ ಪರಮೇಶ್ವರ್, ರಾಜ್ಯದ 101 ತಾಲೂಕುಗಳನ್ನು ಬರ ತಾಲೂಕುಗಳೆಂದು ಘೋಷಣೆ…
ರಾಜ್ಯದ ೧೭೫ ತಾಲ್ಲೂಕುಗಳು ಭೀಕರ ಬರಕ್ಕೆ ತತ್ತರಿಸಿ, ಶೇಕಡಾ ೮೦ ಕ್ಕೂ ಹೆಚ್ಚು ಬೆಳೆ ನಷ್ಟದಿಂದ ಅನ್ನದಾತರು ಸಂಪೂರ್ಣ ಕಂಗಾಲಾಗಿದ್ದರೂ…
೧೯೮೬ರ ಆಗಸ್ಟ್ ೨೯ರಂದು (ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ ಮಠದ ೨೩ ನೇ ಮಠಾಧಿಪತಿ) ಶಿವರಾತ್ರಿ ರಾಜೇಂದ್ರ ಶ್ರೀಗಳ ಅಮೃತ ಮಹೋತ್ಸವದ…
ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಏಳು ತಿಂಗಳ ಅವಧಿಯಲ್ಲಿ ಸುಮಾರು ರೂ.೬೦೦ ಕೋಟಿಯಷ್ಟು ಹಣ ಸೈಬರ್ ವಂಚಕರ…