Andolana originals

ಮಳೆ ನೀರು ಚರಂಡಿಗೆ ಸೇರುತ್ತಿರುವ ಒಳಚರಂಡಿ ನೀರು

ಸಾಲೋಮನ್

ಸೊಳ್ಳೆ, ದುರ್ವಾಸನೆ, ರೋಗದ ಭೀತಿ

ದೂರು ಕೊಟ್ಟರೂ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ

೫ ವರ್ಷದಿಂದ ಚರಂಡಿಯಲ್ಲಿ ಹರಿಯುತ್ತಿದೆ ಬೋರ್‌ವೆಲ್ ನೀರು

ಮೈಸೂರು: ಈ ಸಾಲಿನ ಸ್ವಚ್ಛ ಸರ್ವೇಕ್ಷಣ್‌ಗೆ ಸಿದ್ಧಗೊಳ್ಳುತ್ತಿದ್ದೇವೆ ಎನ್ನುವ ಪಾಲಿಕೆ ಅಧಿಕಾರಿಗಳು ನಗರದ ಹೃದಯ ಭಾಗದ ಪ್ರಮುಖ ರಸ್ತೆಗಳ ಕಡೆ ಮಾತ್ರ ಗಮನಹರಿಸುತ್ತಿzರೆ. ಆದರೆ, ಬಡಾವಣೆಗಳಲ್ಲಿ ಅನೈರ್ಮಲ್ಯ ಇದ್ದೇ ಇದೆ ಎಂದು ಸಾರ್ವಜನಿಕರು ಆಕೋಶ ವ್ಯಕ್ತಪಡಿಸಿದ್ದಾರೆ.

ಮಳೆ ನೀರು ಚರಂಡಿಗೆ ಒಳಚರಂಡಿ ನೀರು ಸೇರಿ ಕೊಳೆತು ನಾರುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಮೈಸೂರಿನ ರಾಮಕೃಷ್ಣನಗರ ಬಡಾವಣೆಯ ಜೆ ಬ್ಲಾಕ್‌ನಲ್ಲಿ ಹಾದು ಹೋಗಿರುವ ಮಳೆ ನೀರು ಚರಂಡಿಗೆ ಮಳೆ ನೀರಿಗಿಂತಲೂ ಕಳೆದ ೫ ವರ್ಷಗಳಿಗೂ ಹೆಚ್ಚು ಕಾಲದಿಂದ ಬೋರ್‌ವೆಲ್ ನೀರು ಹರಿಯುತ್ತಿದೆ. ಇದರ ಜೊತೆಗೆ ಈ ಬಡಾವಣೆಯ ಒಳಚರಂಡಿ ನೀರಿನ ಪೈಪ್ ಒಡೆದು ಅನೇಕ ತಿಂಗಳಿಂದ ಇದೇ ಚರಂಡಿಗೆ ಸೇರುತ್ತಿದೆ.

ಈ ನೀರು ಕೂಡ ಸರಿಯಾಗಿ ಹರಿಯದ ಕಾರಣ ಇಡೀ ಚರಂಡಿ ಕೊಳೆತು ನಾರುತ್ತಿದೆ. ಚರಂಡಿಯಲ್ಲಿ ಕೇವಲ ಒಳಚರಂಡಿ ನೀರು ಮಾತ್ರ ಸೇರುತ್ತಿಲ್ಲ, ಸಾರ್ವಜನಿಕರು ಮನೆ ಕಸವನ್ನೂ ನಿತ್ಯ ಚರಂಡಿಗೆ ಬಿಸಾಡುತ್ತಿರುವುದರಿಂದ ಚರಂಡಿಯಲ್ಲಿ ನೀರು ನಿಂತು, ಸೊಳ್ಳೆ, ನೊಣಗಳ ಹಾವಳಿ ಮಿತಿ ಮೀರಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯುಂಟಾಗಿದೆ.

ಸ್ಥಳೀಯರ ಪಾಡು ಹೇಳ ತೀರದು:

ರಾಮಕೃಷ್ಣ ನಗರ ಜೆ ಬ್ಲಾಕ್‌ನಲ್ಲಿ ನಿರ್ಮಿಸಿರುವ ಮಳೆ ನೀರು ಚರಂಡಿಗೆ ಸೇರಿದಂತೆ ವಾಸ ಮಾಡುತ್ತಿರುವವರ ಹಾಗೂ ಹತ್ತಿರದ ಇರುವ ಮನೆಗಳಲ್ಲಿ ವಾಸಿಸುವವರ ಪಾಡು ಹೇಳ ತೀರದು. ಅದರಲ್ಲೂ ಬೇಸಿಗೆಯಲ್ಲಿ ನರಕಯಾತನೆ. ಯಾವಾ ಗಲೂ ಬಾಗಿಲು, ಕಿಟಕಿ ಮುಚ್ಚಿಕೊಂಡೇ ಇರಬೇಕು. ಸೆಖೆ ಎಂದು ಬಾಗಿಲು ತೆರೆದರೆ ಸೊಳ್ಳೆಗಳು ಹಿಂಡು ಹಿಂಡಾಗಿ ಮನೆಗೆ ದಾಳಿ ಮಾಡುತ್ತವೆ. ಯಾವಾಗಲೂ ದುರ್ವಾಸನೆ ಬರುತ್ತದೆ.

ಸೊಳ್ಳೆಕಾಟ, ಈ ಕೆಟ್ಟ ವಾಸನೆಯಿಂದ ಯಾವ ರೋಗ ಬರುತ್ತೋ ಎಂಬ ಆತಂಕದ ಜೀವಿಸುತ್ತಿದ್ದೇವೆ. ಪಾಲಿಕೆಯವರಿಗೆ ಫೋನ್ ಮಾಡಿದರೆ ಸ್ಪಂದಿಸುತ್ತಿಲ್ಲ. ಇದೆಲ್ಲ ನಮ್ಮ ಕರ್ಮ ಎಂದುಕೊಂಡು ಅಸಹಾಯಕರಾಗಿದ್ದೇವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

” ಈ ವಿಚಾರ ನನಗೆ ಈಗಷ್ಟೇ ಗೊತ್ತಾಗಿರುವುದು. ಕೆಲವು ದಿನಗಳ ಹಿಂದಷ್ಟೇ ಅಧಿಕಾರವಹಿಸಿಕೊಂಡಿದ್ದೇನೆ. ಸಾರ್ವಜನಿಕರ ಸಮಸ್ಯೆ ಬಗ್ಗೆ ಖಂಡಿತ ಗಮನ ಕೊಡುತ್ತೇನೆ. ಆದಷ್ಟು ಬೇಗ ಪರಿಹರಿಸುತ್ತೇನೆ.”

ಶಿಲ್ಪ ಶರತ್, ಇಇ, ಒಳಚರಂಡಿ ವಿಭಾಗ, ಮಹಾನಗರ ಪಾಲಿಕೆ

” ಕಳೆದ ಐದಾರು ತಿಂಗಳಿಂದ ಇಲ್ಲಿ ಚರಂಡಿ ನೀರಿನ ಪೈಪ್ ಒಡೆದು ಕೊಳಚೆ ನೀರು ಚರಂಡಿಗೆ ಸೇರುತ್ತಿದೆ. ವಿಪರೀತ ಸೊಳ್ಳೆ ಹಾಗೂ ದುರ್ನಾತ, ಮನೆಯಲ್ಲಿ ಇರುವುದಕ್ಕೇ ಕಷ್ಟವಾಗಿದೆ. ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಸಮಸ್ಯೆಯನ್ನು ನಿವಾರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.”

ಹರ್ಷಿತ, ಸ್ಥಳೀಯರು

” ಕಳೆದ ಹದಿನೈದು ವರ್ಷಗಳಿಂದಲೂ ಇದ್ದೇವೆ, ಈ ರೀತಿಯ ಸಮಸ್ಯೆ ಇರಲಿಲ್ಲ. ಕೊಳಚೆ ನೀರು ಚರಂಡಿಯಲ್ಲಿ ಹರಿಯಲು ಆರಂಭವಾದಾಗಿನಿಂದ ಅನೇಕ ಸಮಸ್ಯೆಗಳು, ಈ ಭಾಗದಲ್ಲಿರುವ ಹಿರಿಯರಿಗೆ ಆರೋಗ್ಯ ಕೆಡುತ್ತಿದೆ. ಪಾಲಿಕೆ ಸದಸ್ಯರಾಗಿದ್ದವರು ನಮ್ಮ ಫೋನ್ ತೆಗೆಯುತ್ತಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ.”

ವಿಜಯ ರಾಧಾಕೃಷ್ಣ, ಸ್ಥಳೀಯರು

ಆಂದೋಲನ ಡೆಸ್ಕ್

Recent Posts

ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಹೊಣೆ? ಇಲ್ಲಿದೆ ಮಾಹಿತಿ

ಬೆಂಗಳೂರು : ಹಲವು ಸುತ್ತಿನ ಸಭೆಯ ಬಳಿಕ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆ…

42 mins ago

ಬೆಂಗಳೂರಿನಿಂದ ಕೇರಳಕ್ಕೆ ಎಂಡಿಎಂಎ ಸಾಗಾಟ : ಇಬ್ಬರ ಬಂಧನ

ಗುಂಡ್ಲುಪೇಟೆ : ಬೆಂಗಳೂರಿನಿಂದ ಕೇರಳಕ್ಕೆ ಎಂಡಿಎಂಎ (MDMA) ಮಾದಕವಸ್ತು ಸಾಗಿಸುತ್ತಿದ್ದ ಆರೋಪದ ಮೇರೆಗೆ ಮುತ್ತಂಗ ಚೆಕ್‌ಪೋಸ್ಟ್‌ನಲ್ಲಿ ಇಬ್ಬರನ್ನು ಕೇರಳದ ಪೊಲೀಸರು…

3 hours ago

ಮಾನವ ಕಲಿಯಬೇಕಾದ ಬದುಕಿನ ಪಾಠಗಳು

ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ  ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…

11 hours ago

ಸಾವಿರಾರು ಹೆರಿಗೆ ಮಾಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಗೀತಾ ‘ಮಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…

11 hours ago

ಸಿದ್ದರಾಮಯ್ಯ ಸಿದ್ಧಾಂತದ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ

ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…

11 hours ago

ಕಣ್ಮನ ಸೆಳೆಯುತ್ತಿದೆ ಮಲ್ಲಳ್ಳಿ ಜಲಪಾತ!

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…

11 hours ago