ಅನ್ನದಾತರ ಅಂಗಳ

ಬೇಸಿಗೆಯಲ್ಲಿ ಬೆಂಕಿ ಕುರಿತು ಇರಲಿ ಎಚ್ಚರ

ಜಿ.ಕೃಷ್ಣಪ್ರಸಾದ್

ಬೇಸಿಗೆ ಕಾಲಿಟ್ಟಿದೆ. ತೋಟಗಳಲ್ಲಿ ಹುಲ್ಲು, ಕಳೆ ಗಿಡಗಳು ಒಣಗಿ ನಿಂತಿವೆ. ಬಿಸಿಲಿನ ತಾಪ ಏರಿಕೆಯಾಗುತ್ತಿದ್ದಂತೆ ಬೆಂಕಿ ಅವಘಡಗಳ ಪ್ರಮಾಣವೂ ಹೆಚ್ಚಾಗುತ್ತಿದೆ. ಇದರಿಂದಾಗಿ ರೈತರು ಶ್ರಮಪಟ್ಟು ಬೆಳೆಸಿದ ಬೆಳೆ, ಮರ-ಗಿಡಗಳು ಕ್ಷಣಮಾತ್ರದಲ್ಲಿ ಬೆಂಕಿಗೆ ಆಹುತಿಯಾಗಿ ನಷ್ಟ ಅನುಭವಿಸುವಂತಾಗಿದೆ.

ತೋಟದಲ್ಲಿ ಒಣಗಿದ ತರಗೆಲೆಗಳಿಂದ ಬೆಂಕಿ ಹೊತ್ತಿಕೊಳ್ಳುವುದು ಸಾಮಾ ವಿದ್ಯುತ್ ತಂತಿ ಮರಗಳಿಗೆ ತಗುಲಿ ಬೆಂಕಿ ಅವಘಡ ಗಳು ಸಂಭವಿಸುತ್ತಿವೆ. ಎತ್ತರ ಬೆಳೆದ ಕಬ್ಬಿನ ಸೂಲಂಗಿ ವಿದ್ಯುತ್ ತಂತಿಗಳಿಗೆ ತಗುಲಿ ಕಬ್ಬಿನ ಗದ್ದೆಗಳು ಬೆಂಕಿಗಾವುತಿಯಾಗುತ್ತಿವೆ.

ತೋಟದ ಬೇಲಿಯಲ್ಲಿ ಹತ್ತಾರು ಜಾತಿಯ ಮರ ಗಿಡ ಬಳ್ಳಿ ಇರುತ್ತವೆ. ಉದುರಿದ ಎಲೆಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಆಕಸ್ಮಿಕವಾಗಿ ಇವಕ್ಕೆ ಬೆಂಕಿ ತಗುಲಿದರೆ ತೋಟ ಬೆಂಕಿಗಾವುತಿಯಾಗುತ್ತದೆ. ತೋಟದಲ್ಲಿ ಹುಲ್ಲು, ಕಸ ಕಡ್ಡಿ ಇದ್ದರೆ ಬೆಂಕಿ ತೋಟಕ್ಕೆ ಹರಡಿ ಗಿಡಗಳನ್ನು ಆವುತಿ ಪಡೆಯುತ್ತದೆ.

ಬೆಂಕಿ ಬರಿ ಗಿಡ ಮರಗಳನ್ನಷ್ಟೇ ಆಹುತಿ ಪಡೆಯುವುದಿಲ್ಲ. ಬೇಲಿ ಮತ್ತು ತೋಟದಲ್ಲಿ ನೆಲೆ ಮಾಡಿಕೊಂಡಿರುವ ಪಕ್ಷಿಗಳು, ಸಣ್ಣ ಪುಟ್ಟ ಪ್ರಾಣಿಗಳು ಕೂಡ ಪ್ರಾಣ ಕಳೆದುಕೊಳ್ಳುತ್ತವೆ.

ಬೆಂಕಿ ಅವಘಡ ನಿಯಂತ್ರಿಸಲು ಮಾರ್ಗೋಪಾಯ: 

ತೋಟಗಳಲ್ಲಿ ಕಸ ಕಡ್ಡಿ, ಕಾಚಿ ಹುಲ್ಲು, ಗಿಡಗಂಟಿ, ಯುಪಟೋರಿಯಂ, ಪಾರ್ಥೇನಿಯಂನಂಥ ಕಳೆ ಗಿಡಗಳನ್ನು ತೆಗೆದು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೊನೆ ಮಳೆಗೆ ಒಮ್ಮೆ ನೆಲ ಉತ್ತು ಹದ ಮಾಡಿದರೆ ಬೆಂಕಿಯ ಕಾಟ ಇರುವುದಿಲ್ಲ.

ಡಿಸೆಂಬರ್‌ನಲ್ಲಿ ತೋಟದ ಸುತ್ತ ೪-೫ ಅಡಿಗಳಷ್ಟು ಪಟ್ಟಿಯನ್ನು ಕಸ- ಕಡ್ಡಿ ಹುಲ್ಲು ಇರದಂತೆ ಸಿದ್ಧಮಾಡಿಟ್ಟುಕೊಳ್ಳಬೇಕು. ತೇಗ, ಹೊಂಗೆ ಮುಂತಾದ ಮರಗಳ ಉದುರಿದ ಎಲೆಗಳು ಈ ಪಟ್ಟಿಯ ಮೇಲೆ ಶೇಖರಣೆಯಾಗದಂತೆ ಗುಡಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ಬೆಂಕಿ, ತೋಟದ ಒಳಗೆ ಬರುವುದು ತಪ್ಪುತ್ತದೆ. ಬೇಸಿಗೆಯಲ್ಲಿ, ತೋಟದ ಅಂಚಿನಲ್ಲಿ ಅಲ್ಲಲ್ಲಿ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಆಕಸ್ಮಿಕವಾಗಿ ತೋಟಕ್ಕೆ ಬೆಂಕಿ ಬಿದ್ದರೆ ನಂದಿಸಲು ನೀರು ಬೇಕಾಗು ತ್ತದೆ. ಬೇಲಿಯ ಅಂಚಿನಲ್ಲಿ ನೀರಿನ ಪೈಪ್‌ಲೈನ್ ಇದ್ದರೆ ನೀರಿಗಾಗಿ ಹುಡುಕಾಡುವುದು ತಪ್ಪುತ್ತದೆ.

ರಸ್ತೆ ಬದಿಯಲ್ಲಿ ತೋಟ ಇರುವವರು ‘ಬೆಂಕಿ ರೇಖೆ’ ನಿರ್ಮಿಸಿಕೊಳ್ಳಬೇಕು. ರಸ್ತೆ ಅಂಚಿನ ಒಣ ಹುಲ್ಲು, ಕಸಕಡ್ಡಿಗಳಿಗೆ ಬೆಂಕಿ ಹಾಕಿ ಸುಟ್ಟುಹಾಕುವ ಮೂಲಕ ಅಲ್ಲಿ ಬೆಂಕಿ ಹೊತ್ತುಕೊಳ್ಳದಂತೆ ಮಾಡಬೇಕು. ಕಾಡಂಚಿನ ರೈತರು ಸಂಘಟಿತ ರಾಗಿ ಬೆಂಕಿ ರೇಖೆ ನಿರ್ಮಿಸಲು ಅರಣ್ಯಾಧಿಕಾರಿಗಳಿಗೆ ಒತ್ತಾಯ ಮಾಡಬೇಕು ಅಥವಾ ತಾವೇ ಜೊತೆಗೂಡಿ ಬೆಂಕಿ ರೇಖೆಯನ್ನು ನಿರ್ಮಿಸಬೇಕು. ಇದರಿಂದ ತೋಟಗಳು ಬೆಂಕಿಗಾಹುತಿಯಾಗುವುದು ತಪ್ಪುತ್ತದೆ.

ಸಾವಯವ ತೋಟದಲ್ಲಿ ಗಿಡಗಳ ಬುಡಕ್ಕೆ ಮುಚ್ಚಿಗೆ ಮಾಡುವುದರಿಂದ ಬೆಂಕಿಯ ಅಪಾಯ ಇನ್ನೂ ಹೆಚ್ಚು. ಹುರುಳಿ ತರಹದ ಹಸಿರೆಲೆ ಗೊಬ್ಬರಗಳನ್ನು ಗಿಡದ ಪಾತಿಯಲ್ಲಿ ಬೆಳೆಸುವುದರಿಂದ ಬೆಂಕಿಯ ಕಾಟ ತಪ್ಪಿಸಬಹುದು. ‘ತೋಟದ ಬೇಲಿಯ ಅಂಚಿನಲ್ಲಿ ಹೊಂಗೆ,ಬೇವು, ಪುವ್ವರಸಿ, ಮಹಾಗನಿಯಂಥ ಗಿಡಗಳಿರಲಿ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿಯೂ ಬದುಕಿ ಉಳಿಯುವ ಶಕ್ತಿ ಇವಕ್ಕಿರುತ್ತದೆ. ಮಾವು, ನೇರಳೆಯಂಥ ಕಸಿ ಗಿಡಗಳಿಗೆ ಬೆಂಕಿಯ ತಾಪ ತಡೆಯುವ ಶಕ್ತಿ ಕಡಿಮೆ. ಇಂಥ ಗಿಡಗಳನ್ನು ತೋಟದ ಒಳಭಾಗದಲ್ಲಿ ಬೆಳೆಸಿ ’ ಎನ್ನುತ್ತಾರೆ ಸಾವಯವ ಕೃಷಿಕ ಸಿದ್ಧಲಿಂಗಯ್ಯ ಹೊಲತಾಳು. ಎರಡು ವರ್ಷಗಳ ಹಿಂದೆ ಬೆಂಕಿಗಾಹುತಿಯಾದ ಇವರ ತೋಟದ ಬಹಳಷ್ಟು ಗಿಡಗಳು ಮತ್ತೆ ಚಿಗುರಿವೆ; ತಲೆ ಎತ್ತಿ ನಿಂತಿವೆ.

ಬೆಂಕಿ ಬಿದ್ದ ತೋಟದ ಭಾಗಕ್ಕೆ ನಿರಂತರವಾಗಿ ನೀರು ಉಣಿಸಿ, ತಂಪಾಗಿಡಿ. ಸುಟ್ಟು ಹೋದ ಗಿಡಗಳ ಟೊಂಗೆಯನ್ನು ಕತ್ತರಿಸಿ ಅದರ ತುದಿಗೆ ‘ಟ್ರೀ ಪೇಸ್ಟ್’ ಹಚ್ಚಿ. ಒಂದು ಭಾಗ ಸಗಣಿ, ಒಂದು ಭಾಗ ಹುತ್ತದ ಮಣ್ಣು ಮತ್ತು ಸ್ವಲ್ಪ ಸುಣ್ಣ ಸೇರಿಸಿ, ನೀರು ಚಿಮುಕಿಸಿಕೊಳ್ಳುತ್ತಾ ಚೆನ್ನಾಗಿ ಕಲಸಿದರೆ ‘ಟ್ರೀ ಪೇಸ್ಟ್’ ಸಿದ್ಧವಾಗುತ್ತದೆ. ಟ್ರೀ ಪೇಸ್ಟನ್ನು ಗಿಡಗಳ ಕಾಂಡಕ್ಕೂ ಸವರಿದರೆ ಗಿಡ ನಂಜಾಗುವುದು ತಪ್ಪುತ್ತದೆ. ಬಿಸಿಲಿನ ಝಳವನ್ನು ತಡೆದುಕೊಳ್ಳುತ್ತದೆ’ ಎನ್ನುತ್ತಾರೆ

ಮೈಸೂರಿನ ಯುವ ರೈತ ಕೇಶವ್. ಇವರು ಇದೇ ವಿಧಾನ ಬಳಸಿ ಗಿಡಗಳಿಗೆ ಮರುಜೀವ ನೀಡಿದ್ದಾರೆ. ಗಿಡ ಮತ್ತೆ ಚಿಗುರಿದ ನಂತರ, ಸುಟ್ಟ ಮತ್ತು ಒಣಗಿದ ಎಲೆಗಳಿದ್ದರೆ ತೆಗೆದು ಹಾಕಿ. ಜೀವಾ ಮೃತ ಮೊದಲಾದ ದ್ರವರೂಪಿ ಗೊಬ್ಬರಗಳನ್ನು ಕೊಟ್ಟು ಗಿಡಕ್ಕೆ ಚೈತನ್ಯ ತುಂಬಿ. ಬೇಸಿಗೆ ಬೆಂಕಿಯ ಬಗ್ಗೆ ಅಸಡ್ಡೆ ತೋರದೆ , ಮುಂಜಾಗ್ರತೆ ವಹಿಸಿದರೆ ತೋಟವನ್ನು ರಕ್ಷಿಸಿಕೊಳ್ಳಬಹುದು. ಶ್ರಮಪಟ್ಟು ಕಟ್ಟಿದ ತೋಟ ಬೆಂಕಿಯ ಕೆನ್ನಾಲಿಗೆಗೆ ಸಿಲುಕದಿರಲಿ.

” ಎಲ್ಲ ಮುನ್ನೆಚ್ಚರಿಕೆಯ ನಂತರವೂ, ತೋಟ ಬೆಂಕಿಗೆ ಆಹುತಿಯಾದರೆ ಸಂಯಮದಿಂದ ಗಿಡಗಳ ಉಪಚಾರ ಮಾಡಿ. ಬಹಳಷ್ಟು ಗಿಡಗಳು ಬೆಂಕಿಯ ಆಘಾತದಿಂದ ಚೇತರಿಸಿಕೊಂಡು ಮತ್ತೆ ಚಿಗುರುತ್ತವೆ. ಎಳೆಯ ಮತ್ತು ಸೂಕ್ಷ್ಮ ಗಿಡಗಳು ಮಾತ್ರ ಮತ್ತೆ ಚಿಗುರಲಾರವು.”

ಆಂದೋಲನ ಡೆಸ್ಕ್

Recent Posts

ಬೆಂಗಳೂರಿನಿಂದ ಕೇರಳಕ್ಕೆ ಎಂಡಿಎಂಎ ಸಾಗಾಟ : ಇಬ್ಬರ ಬಂಧನ

ಗುಂಡ್ಲುಪೇಟೆ : ಬೆಂಗಳೂರಿನಿಂದ ಕೇರಳಕ್ಕೆ ಎಂಡಿಎಂಎ (MDMA) ಮಾದಕವಸ್ತು ಸಾಗಿಸುತ್ತಿದ್ದ ಆರೋಪದ ಮೇರೆಗೆ ಮುತ್ತಂಗ ಚೆಕ್‌ಪೋಸ್ಟ್‌ನಲ್ಲಿ ಇಬ್ಬರನ್ನು ಕೇರಳದ ಪೊಲೀಸರು…

2 hours ago

ಮಾನವ ಕಲಿಯಬೇಕಾದ ಬದುಕಿನ ಪಾಠಗಳು

ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ  ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…

10 hours ago

ಸಾವಿರಾರು ಹೆರಿಗೆ ಮಾಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಗೀತಾ ‘ಮಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…

10 hours ago

ಸಿದ್ದರಾಮಯ್ಯ ಸಿದ್ಧಾಂತದ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ

ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…

10 hours ago

ಕಣ್ಮನ ಸೆಳೆಯುತ್ತಿದೆ ಮಲ್ಲಳ್ಳಿ ಜಲಪಾತ!

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…

10 hours ago

ಓದುಗರ ಪತ್ರ: ಸ್ಥಾನ…ಮಾನ !

ಸ್ಥಾನ...ಮಾನ ! ಅಳೆದೂ ಸುರಿದು ಅಲ್ಲಿಂದಿಲ್ಲಿಗೆ ಓಡಾಡಿ ಕೊಟ್ಟೂ ಕೊಡಲಾಗದೆ ಬಿಟ್ಟೂ ಇರಲಾಗದೆ ಉಳಿಸಿಕೊಂಡಿರುವುದು ಒಂದೇ ಒಂದು ಮಂತ್ರಿ ಸ್ಥಾನ…

10 hours ago