ಮಾಮರಶಿ
ರೇಷ್ಮೆ ಕೃಷಿಯಿಂದಲೇ ಉದ್ಯಮ ಕಟ್ಟಿದ ರೇಷ್ಮೆ ತ್ಯಾಗರಾಜು
೨೦೦ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ ರೈತನ ಮಗ
ಮಳವಳ್ಳಿ: ರೇಷ್ಮೆ ಬೆಳೆಯಿಂದ ರೈತನ ಜೀವನ ಹಸನಾಗಲಿದೆ ಎಂಬುದನ್ನು ಸಾಬೀತುಪಡಿಸಿ, ಹಲವರಿಗೆ ಉದ್ಯೋಗ ಕಲ್ಪಿಸಿ, ದೇಶ-ವಿದೇಶಗಳಲ್ಲಿ ಅಧ್ಯಯನ ನಡೆಸಿ ‘ರೇಷ್ಮೆ ರಾಜ’ ಎಂಬ ಖ್ಯಾತಿ ಪಡೆದಿರುವ ಯುವ ರೈತ ರೇಷ್ಮೆ ಬೆಳೆಗಾರ ತ್ಯಾಗರಾಜು ಅವರ ಸಾಧನೆ ರೈತರಿಗೆ ಮಾದರಿಯಾಗಿದೆ.
ರಾಮನಗರ ಜಿಲ್ಲೆ, ಬಿಡದಿ ಹೋಬಳಿಯ ಕುಗ್ರಾಮ ಕಾಕರಾಮರನಹಳ್ಳಿಯವೆಂಕಟರಾಮಯ್ಯ-ವನ ಜಾಕ್ಷಮ್ಮ ಅವರ ಪುತ್ರ ತ್ಯಾಗರಾಜ ಅವರು ಬಿ.ಎ. ಪದವೀಧರ. ರೇಷ್ಮೆ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದ ಇವರು, ಕೀರನಗೆರೆ ಜಗದೀಶ್ ಅವರ ಚಾಕಿ ಕೇಂದ್ರದಲ್ಲಿ ೧೨ ವರ್ಷ ರೇಷ್ಮೆ ಬೆಳೆ, ಅಭಿವೃದ್ಧಿ ಬಗ್ಗೆ ಕಲಿತು, ೨೦೧೬ರಲ್ಲಿ ಮಳವಳ್ಳಿ ತಾಲ್ಲೂಕಿನ ಮೂಗನಕೊಪ್ಪಲು ಬಳಿ ‘ಮೂಗನಕೊಪ್ಪಲು ಚಾಕಿ ಸಾಕಾಣಿಕಾ ಕೇಂದ್ರ’ವನ್ನು ಆರಂಭಿಸಿ ೨೦೦ ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. ತಮ್ಮ ನೌಕರರಿಗೆ ಪಿಎಫ್, ಇಎಸ್ಐ, ವಿಮೆ ಸೌಲಭ್ಯ ನೀಡಿ ಅವರ ಕುಟುಂಬಕ್ಕೆ ಆಧಾರವಾಗಿದ್ದಾರೆ.
೧೦ ಸಾವಿರ ರೈತರಿಗೆ ಮರಿ ಸರಬರಾಜು ಗುರಿ: ಆರಂಭದಲ್ಲಿ ೫೦ ಲಕ್ಷ ರೂ. ಬಂಡವಾಳ ಹೂಡಿ ಇದೀಗ ಒಂದೂವರೆ ಕೋಟಿ ರೂ. ಬಂಡವಾಳದೊಂದಿಗೆ ತಿಂಗಳಿಗೆ ಒಂದು ಲಕ್ಷಕ್ಕೂ ಅಧಿಕ ಚಾಕಿ ಮರಿಗಳನ್ನು ಉತ್ಪಾದಿಸಿ, ರಾಜ್ಯದ ೬ ಸಾವಿರ ರೈತರಿಗೆ ಸರಬರಾಜು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ೧೦ ಸಾವಿರ ರೈತರಿಗೆ ಸರಬರಾಜು ಮಾಡುವ ಗುರಿ ಇಟ್ಟುಕೊಂಡಿದ್ದಾರೆ.
೫ ಸಾವಿರ ರೇಷ್ಮೆ ಗೂಡು ಉತ್ಪಾದಿಸುವ ಗುರಿ: ೩೯ನೇ ವಯಸ್ಸಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು, ರೇಷ್ಮೆ ಕಾಯಕ ಮಾಡುತ್ತಾ ತಿಂಗಳಿಗೆ ೨ ಸಾವಿರ ಕೆ.ಜಿ. ರೇಷ್ಮೆಗೂಡು ಉತ್ಪಾದಿಸುತ್ತಿದ್ದಾರೆ. ರೈತರಿಗೆ ಉಚಿತ ತರಬೇತಿ: ಸರ್ಕಾರದ ಯಾವುದೇ ಸವಲತ್ತು ಪಡೆಯದೇ ರೈತರಿಗೆ ಉಚಿತವಾಗಿ ತರಬೇತಿ, ಶೇ.೯೫ಕ್ಕೂ ಹೆಚ್ಚು ಇಳುವರಿ ಉತ್ಪಾದಿಸಲು ತಾಂತ್ರಿಕತೆ ಮತ್ತು ಸಲಹೆಯೊಂದಿಗೆ ಪ್ರತಿ ವರ್ಷ ರಾಜ್ಯದ ಸಾವಿರಾರು ಯುವ ರೈತರಿಗೆ ತರಬೇತಿ ನೀಡಿದ್ದಾರೆ.
೧೮ ದೇಶಗಳಿಗೆ ಅಧ್ಯಯನ ಪ್ರವಾಸ: ಚೀನಾ, ಬ್ರೆಜಿಲ್, ಜಪಾನ್, ಥೈಲ್ಯಾಂಡ್, ಇಸ್ರೇಲ್ ದೇಶಗಳು ಸೇರಿದಂತೆ ೧೮ಕ್ಕೂ ಹೆಚ್ಚು ದೇಶಗಳಿಗೆ ಪ್ರವಾಸ ತೆರಳಿ ರೇಷ್ಮೆ ಕೃಷಿ ಕುರಿತು ಅಧ್ಯಯನ ಮಾಡಿದ್ದಾರೆ.
ಸಮಾಜ ಸೇವೆಯಲ್ಲೂ ಮುಂದು: ಉತ್ತಮ ದ್ವಿತಳಿ ರೇಷ್ಮೆ ಬೆಳೆಗಾರರನ್ನು ಸನ್ಮಾನಿಸುತ್ತಾ, ರೇಷ್ಮೆ ಬೆಳೆಗಾರರಿಗೆ ಮಾರ್ಗದರ್ಶಕರಾಗಿರುವುದಲ್ಲದೆ, ಸರ್ಕಾರಿ ಶಾಲೆಗಳಿಗೆ ವಾಟರ್ ಫಿಲ್ಟರ್, ಕಪ್ಪು ಹಲಗೆಗಳು, ಮಕ್ಕಳ ಮನೆ ನಿರ್ಮಾಣ, ಪುಟಾಣಿ ಮಕ್ಕಳಿಗೆ ಚೇರ್ ಮತ್ತು ಟೇಬಲ್ಗಳನ್ನು ನೀಡುತ್ತಾ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.
” ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ರೇಷ್ಮೆ ಬೆಳೆ ಯುವ ಜಿಲ್ಲೆಯಾಗಿದೆ. ಗುಣಮಟ್ಟದಲ್ಲಿ ರೇಷ್ಮೆ ಬೆಳೆ ಬೆಳೆದರೆ ರೈತರಿಗೆ ವರದಾನ. ಎಲ್ಲ ಬೆಳೆಗಿಂತಲೂ ರೇಷ್ಮೆ ಬೆಳೆ ಲಾಭದಾಯಕ. ಸರ್ಕಾರಗಳೂ ರೇಷ್ಮೆ ಬೆಳೆಗೆ ಬಹಳಷ್ಟು ಉತ್ತೇಜನ ನೀಡುತ್ತಿವೆ.”
– ತ್ಯಾಗರಾಜು, ರೇಷ್ಮೆ ಬೆಳೆಗಾರ
ಮಧ್ಯ ಪ್ರಾಚ್ಯದಲ್ಲಿ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದಿಂದ ನಡೆಯುತ್ತಿರುವ ದಾಳಿ ಹಾಗೂ ಯುಎಇ, ಬಹರೇನ್, ಕುವೈತ್ ಮೊದಲಾದ ರಾಷ್ಟ್ರಗಳಲ್ಲಿರುವ…
೩೦ ವರ್ಷ ಪ್ರಾಯದ ಸಫುರಾ ಖಾನ್ರ ತಂದೆ ತಾಯಿ ಚೆನ್ನೆ ಯಿಂದ ಕರ್ನಾಟಕಕ್ಕೆ ವಲಸೆ ಬಂದಾಗ ಆಕೆ ಇನ್ನೂ ಮಗುವಾಗಿದ್ದರು.…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ಗುಂಡ್ಲುಪೇಟೆಯಿಂದ ನಂಜನಗೂಡು ತನಕ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ರಸ್ತೆಯ ಎರಡೂ ಬದಿಗಳನ್ನು ಅಗೆದು…
ಕೆ.ಬಿ.ರಮೇಶನಾಯಕ ಮೈಸೂರು: ದಕ್ಷಿಣ ಭಾರತದಲ್ಲೇ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಶ್ರೀ ಚಾಮರಾಜೇಂದ್ರ ಮೃಗಾಲಯವು ಕೋವಿಡ್ ಸಮಯದಲ್ಲಿ ಆದಾಯ ಕುಸಿತದಿಂದ ಕಂಗೆಟ್ಟರೂ…
ಶೇಷಾದ್ರಿ ಗಂಜೂರು ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ನಾಲ್ಕನೇ ದಿನ ಪೂರ್ಣಗೊಳಿಸಿದೆ. ಯುದ್ಧದ ಬೀಸಿಗೆ ಸಿಲುಕಿ ಮುಖ್ಯವಾಗಿ ೧೨…
ಪ್ರಶಾಂತ್ ಎನ್. ಮಲ್ಲಿಕ್ ಮೈಸೂರು: ಸಾಂಸ್ಕೃತಿಕ ನಗರಿ, ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಯ ಮೈಸೂರಿನ ಪಕ್ಕದಲ್ಲೇ ಒಂದು ಬಡಾವಣೆ ಇದೆ.…