ಪ್ರಶಾಂತ್ ಎನ್. ಮಲ್ಲಿಕ್
ಮೈಸೂರು: ಸಾಂಸ್ಕೃತಿಕ ನಗರಿ, ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಯ ಮೈಸೂರಿನ ಪಕ್ಕದಲ್ಲೇ ಒಂದು ಬಡಾವಣೆ ಇದೆ. ಆದರೆ ಅಲ್ಲಿಗೆ ಹೋದರೆ ನೀವು ಯಾವುದೋ ಹಳ್ಳಿಗಿಂತಲೂ ಕಡೆಯಾದ ಊರಿಗೆ ಬಂದಂತಾಗುತ್ತದೆ! ಇದು ಜೆ.ಪಿ. ನಗರದ ರಿಂಗ್ ರಸ್ತೆಗೆ ತೀರಾ ಹತ್ತಿರದಲ್ಲಿರುವ ಭವಾನಿ ನಗರ ಬಡಾವಣೆಯ ಇಂದಿನ ದುಸ್ಥಿತಿ. ಹಾಗಾಗಿ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳನ್ನು ‘ಒಮ್ಮೆ ಬನ್ನಿ ಪ್ಲೀಸ್…’ ಎನ್ನುತ್ತಿದ್ದಾರೆ.
ಹಂದಿಗಳ ತಾಣವಾದ ವಸತಿ ಪ್ರದೇಶ: ಬಡಾವಣೆಯ ೨ನೇ ಕ್ರಾಸ್ನಲ್ಲಿ ಕಾಲಿಟ್ಟರೆ ಸಾಕು, ಮೂಗು ಮುಚ್ಚಿಕೊಳ್ಳದೆ ಓಡಾಡುವುದು ಅಸಾಧ್ಯ. ಇಲ್ಲಿನ ಯುಜಿಡಿ (ಒಳಚರಂಡಿ) ಕಾಮ ಗಾರಿ ಅರ್ಧಕ್ಕೆ ನಿಂತು ಹಲವು ವರ್ಷಗಳೇ ಕಳೆದಿವೆ. ಚರಂಡಿ ನೀರು ಮತ್ತು ಮಳೆಯ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ, ಖಾಲಿ ಇರುವ ಸೈಟುಗಳಲ್ಲೇ ಬಂದು ನಿಲ್ಲುತ್ತಿದೆ. ಈ ಕೊಳಚೆ ನೀರು ಈಗ ಹಂದಿಗಳ ನೆಚ್ಚಿನ ಆವಾಸ ಸ್ಥಾನವಾಗಿದೆ. ಹಗಲು-ರಾತ್ರಿ ಎನ್ನದೇ ಹಂದಿಗಳು ಈ ಗಬ್ಬೆದ್ದು ನಾರುವ ನೀರಿನಲ್ಲಿ ಹೊರಳಾಡುತ್ತಾ, ಸ್ಥಳೀಯರ ಮನೆಗಳ ಬಾಗಿಲವರೆಗೂ ಬಂದು ನಿಲ್ಲುತ್ತಿವೆ.
ನೆಂಟರಿಷ್ಟರ ಮುಂದೆ ಅವಮಾನ: ನಮ್ಮ ಮನೆಗೆ ಬರುವ ನೆಂಟರಿಷ್ಟರು, ‘ಹಳ್ಳಿಗಳ ಪರಿಸ್ಥಿತಿಗಿಂತಲೂ ಹೀನಾಯವಾಗಿರುವ ಈ ಜಾಗದಲ್ಲಿ ನೀವು ಹೇಗೆ ವಾಸಿಸುತ್ತಿದ್ದೀರಿ?’ ಎಂದು ವ್ಯಂಗ್ಯವಾಡುತ್ತಾರೆ. ಅವರ ಮಾತಿನಿಂದ ನಮಗೆ ಅವಮಾನವಾಗತ್ತಿದೆ, ಆದರೆ ಬೇರೆ ದಾರಿಯಿಲ್ಲದೆ ಇಲ್ಲದಂತಾಗಿದೆ ಎಂದು ಸ್ಥಳೀಯರು ನೋವು ತೋಡಿಕೊಳ್ಳುತ್ತಾರೆ.
ಈ ಸಮಸ್ಯೆ ಪರಿಹಾರಕ್ಕಾಗಿ ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ದಿನನಿತ್ಯ ಅಲೆದಾಡಿದರೂ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ. ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಅಧಿಕಾರಿಗಳಿಗೆ ಜನರ ಕಷ್ಟ ಮಾತ್ರ ಕಾಣಿಸುತ್ತಿಲ್ಲ.
ರೋಗಗಳಿಗೆ ಸರಾಗ: ಈಗಾಗಲೇ ಬಡಾವಣೆಯ ಅನೇಕರಲ್ಲಿ ಚರ್ಮವ್ಯಾಧಿ ಹಾಗೂ ಉಸಿರಾಟದ ತೊಂದರೆಗಳು ಕಾಣಿಸಿಕೊಂಡಿವೆ. ಈಗ ಬೇಸಿಗೆ ಕಾಲ ಶುರುವಾಗುತ್ತಿರುವುದರಿಂದ ಕೊಳಚೆ ನೀರಿನ ದುರ್ವಾಸನೆ ಮತ್ತಷ್ಟು ಹೆಚ್ಚಾಗಲಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರು ಈ ಅಶುಚಿತ್ವದ ನಡುವೆಯೇ ಬದುಕು ದೂಡುತ್ತಿದ್ದಾರೆ.
” ಬೀದಿಯ ನೀರು ಮನೆಯೊಳಗೆ ನುಗ್ಗುತ್ತದೆ. ಈ ಬಗ್ಗೆ ಹಲವಾರು ಬಾರಿ ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಂದಿಗಳ ಹಾವಳಿಯಿಂದ ಮಕ್ಕಳು, ವೃದ್ಧರು ದಿನವೂ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ.”
ಶಂಕರ್, ಬಡಾವಣೆ ನಿವಾಸಿ
” ರಸ್ತೆ, ಯುಜಿಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ನಿತ್ಯವೂ ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಬಳಿ ಎಷ್ಟು ಬಾರಿ ಹೋದರೂ ಪ್ರಯೋಜನವಾಗುತ್ತಿಲ್ಲ. ಮುಂದೆ ಬೃಹತ್ ಮೈಸೂರು ಮಹಾನಗರ ಪಾಲಿಕೆಯಾದರೆ ಇಲ್ಲಿನ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ.”
ಕೆ.ಸಿ.ಬಸವರಾಜು, ಬಡಾವಣೆ ನಿವಾಸಿ ಹಾಗೂ ನಿವೃತ್ತ ತಹಸಿಲ್ದಾರ್
ಬೆಂಗಳೂರು: ಸೂಕ್ತ ಖಾತೆ ಸಿಗದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರಕ್ಕೆ ಮುಜುಗರ ಸೃಷ್ಟಿಸಿದ್ದ ಸಚಿವ ರಾಮಲಿಂಗ ರೆಡ್ಡಿ…
ರಾಯ್ಪುರ: ಇತ್ತೀಚೆಗೆ ಆಫ್ರಿಕಾದ ಹಲವೆಡೆ ಎಬೋಲಾ ವೈರಸ್ ಭೀತಿ ಸೃಷ್ಟಿಯಾಗಿರುವ ಬೆನ್ನಲ್ಲೇ ಇದೀಗ ಛತ್ತೀಸ್ಗಢದಲ್ಲಿ ಮೂವರು ಆಫ್ರಿಕಾ ಪ್ರಜೆಗಳನ್ನು 21…
ಭಾರತೀನಗರ: ಇಲ್ಲಿಗೆ ಸಮೀಪದ ಬೊಮ್ಮನದೊಡ್ಡಿ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿದೆ. ಗುರುದೇವರಹಳ್ಳಿ ಗ್ರಾಮದ ಚೇತನ್ಮಾದೇಗೌಡ ಎಂಬವರು ಬೊಮ್ಮನದೊಡ್ಡಿ…
ತಿರುವನಂತಪುರಂ: ನೆರೆಯ ಕೇರಳ ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ಹಲವೆಡೆ ಭಾರೀ ಮಳೆಯಾಗುತ್ತಿದೆ. ಮಲ್ಲಪುರಂ, ಕೋಯಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡಿನಲ್ಲಿ…
ಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಬಿಜೆಪಿಗೆ ಗುಡ್ಬೈ ಹೇಳಿದ ಬೆನ್ನಲ್ಲೇ ಮತ್ತೆರಡು ವಿಕೆಟ್ ಪತನಗೊಂಡಿದೆ. ರಾಜ್ಯ…
ಬೆಂಗಳೂರು: ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆದು ಸಚಿವ ಸಂಪುಟದಲ್ಲಿ ಮುಂದುವರೆಯಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್…