Andolana originals

ಕರ ಭಾರದ ನಡುವೆ ಘನ ತ್ಯಾಜ್ಯ ವಿಲೇವಾರಿಗೂ ಸೆಸ್‌

ಜನಪ್ರತಿನಿಧಿಗಳ ಆಡಳಿತವಿಲ್ಲದ ನಗರಪಾಲಿಕೆಯಲ್ಲಿ ಅಧಿಕಾರಿಗಳ ಅಂಧ ದರ್ಬಾರ್‌

ಮೈಸೂರು : ಗ್ಯಾಸ್ ದರ ಹೆಚ್ಚಳ…, ವಿದ್ಯುತ್ ದರ ಹೆಚ್ಚಳ…, ನೀರಿನ ಕರ ಹೆಚ್ಚಳ.., ಒಳ ಚರಂಡಿ ಶುಲ್ಕ ಹೆಚ್ಚಳ…, ಕಂದಾಯದ ಜೊತೆಗೆ 7 ಮಾದರಿಯ ವಿವಿಧ ಸೆಸ್‌ಗಳು… ಇಷ್ಟೆಲ್ಲದರ ನಡುವೆ ಗಾಯದ ಮೇಲೆ ಬರೆ ಎಳೆದಂತೆ ನಗರ ಪಾಲಿಕೆಯು ಹೊಸದಾಗಿ ಘನ ತ್ಯಾಜ್ಯವಿಲೇವಾರಿ ಸೆಸ್ ವಿಧಿಸುವ ಮೂಲಕ ಉದ್ದಿಮೆದಾರರನ್ನು ಹೈರಾಣಾಗಿಸಲು ಮುಂದಾಗಿದೆ.

ಮೈಸೂರು ಮಹಾನಗರಪಾಲಿಕೆಗೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ನಗರಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದಿರುವುದು ಅಧಿಕಾರಿಗಳಿಗೆ ವರದಾನವಾಗಿ ಪರಿಣಮಿಸಿದೆ. ಇನ್ನು ಶಾಸಕರು, ಸಂಸದರು ಅವರಿಗೆ ಲೆಕ್ಕಕ್ಕೇ ಇಲ್ಲ. . . !

ಹೋಟೆಲ್, ಬೇಕರಿ, ಆಹಾರ ತಯಾರಿಕಾ ಘಟಕ, ತರಕಾರಿ ಮಾರುವವರು, ಹಣ್ಣು ಮಾರುವವರು, ಮಾಂಸ ಮಾರಾಟಗಾರರು ಹೀಗೆ ವಿವಿಧ ಉದ್ದಿಮೆಗಳನ್ನು ನಡೆಸುವವರು ಇಂದು ಉದ್ದಿಮೆಗಳನ್ನು ನಡೆಸಬೇಕೆ ಅಥವಾ ಮುಚ್ಚಬೇಕೆ? ಎಂಬ ಗೊಂದಲದಲ್ಲಿ ಇದ್ದಾರೆ. ಕಾರಣ ನಗರಪಾಲಿಕೆ ಹಾಗೂ ಸರ್ಕಾರ ವಿಧಿಸುವ ತೆರಿಗೆ, ಕಂದಾಯ ಹಾಗೂ ಇನ್ನಿತರ ಶುಲ್ಕಗಳು.

ಅದರಂತೆ ಇದೀಗ ನಗರಪಾಲಿಕೆಯು ಶಾಸಕರು, ಸಂಸದರು ಅಥವಾ ಮಾಜಿ ಮೇಯರ್‌ಗಳು ಸೇರಿದಂತೆ ಯಾರೊಂದಿಗೂ ಚರ್ಚೆ ನಡೆಸದೆ ಎಸ್‌ಡಬ್ಲ್ಯೂಎಂ ಸೆಸ್ ಜಾರಿಗೊಳಿಸಲು ಮುಂದಾಗಿದ್ದು, ಇದೀಗ ಟ್ರೇಡ್ ಲೈಸನ್ಸ್ ನವೀಕರಣದ ಜೊತೆಗೆ ಈ ಸೆಸ್‌ಅನ್ನು ವಿಧಿಸುತ್ತಿದೆ.

ಈ ಸಂಬಂಧ ಹೋಟೆಲ್ ಮಾಲೀಕರ ಸಂಘ ಹಾಗೂ ಇನ್ನಿತರ ಸಂಘಟನೆಗಳು ನಗರಪಾಲಿಕೆ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿವೆ. ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಚಾರವನ್ನು ತರಲಾಗುತ್ತಿದ್ದು, ಅಲ್ಲಿಯವರೆಗೆ ಯಾರೂ ಕೂಡ ವಾಣಿಜ್ಯ ಪರವಾನಗಿ ಶುಲ್ಕ ಪಾವತಿಸದಂತೆ ಮನವಿ ಮಾಡಿದೆ.

ನಗರಪಾಲಿಕೆಯು ಬಿಡುಗಡೆ ಮಾಡಿರುವ ತ್ಯಾಜ್ಯವಿಲೇವಾರಿ ಸೆಸ್ ಪಟ್ಟಿಯನ್ನು ಗಮನಿಸಿದಲ್ಲಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಹೂವಿನ ಮಾರಾಟ ಮಳಿಗೆಗೆ ತಿಂಗಳಿಗೆ 25050 ರೂ. ಸೆಸ್, ಎಳನೀರು ಮಾರಾಟ ಮಳಿಗೆಗೆ ತಿಂಗಳಿಗೆ 400 ರೂ. ಈ ಪಟ್ಟಿ ಹೀಗೆಯೇ ಮುಂದುವರಿಯುತ್ತದೆ.

ತರಕಾರಿ ಮಾರಾಟ ಮಳಿಗೆಗೆ 500 ರೂ., ಹೋಟೆಲ್ ಗಳಿಗೆ ಚದರ ಅಡಿಗಳ ಆಧಾರದಲ್ಲಿ ಸೆಸ್ ನಿಗಧಿ. ಅದು ರೂ. ನಿಂದ ಆರಂಭವಾಗಿ ಗರಿಷ್ಟ ತಿಂಗಳಿಗೆ 5 ಸಾವಿರ ರೂ. ಸೆಸ್ ವಿಧಿಸಲು ನಗರಪಾಲಿಕೆ ಮುಂದಾಗಿದೆ.

ಹೋಟೆಲ್, ಗೋದಾಮು, ಬಟ್ಟೆ ವ್ಯಾಪಾರ ಮಳಿಗೆ, ಪೇಯಿಂಗ್ ಗೆಸ್ಟ್, ಕೂಲ್ ಪಾರ್ಲರ್, ಸಾಮಿಲ್, ಕಿರಾಣಿ ಮಳಿಗೆ, ಗುಡಿ ಕೈಗಾರಿಕೆಗಳು ಸೇರಿದಂತೆ ಸುಮಾರು 36 ಉದ್ದಿಮೆಗಳನ್ನು ನಗರಪಾಲಿಕೆ ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ. ಇದನ್ನು ಅವರೇ ನಡೆಸುವ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಪಡೆದುಕೊಂಡಿದ್ದಾರೆ.

ಶಾಸಕರೇಕೆ ಮೌನ
ನಗರಪಾಲಿಕೆಯು ಇಷ್ಟೆಲ್ಲಾ ಅವೈಜ್ಞಾನಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರೂ ಸ್ಥಳೀಯ ಶಾಸಕರು ಹಾಗೂ ಸಂಸದರು ಏಕೆ ಮೌನ ವಹಿಸಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಉದ್ದಿಮೆ ನಡೆಸುವವರು ಪ್ರಶ್ನಿಸುತ್ತಿದ್ದಾರೆ.

ನಗರಪಾಲಿಕೆಯು ಈಗಾಗಲೇ ಕಂದಾಯದ ಜೊತೆಗೆ ಭಿಕ್ಷುಕರ ಸೆಸ್, ಸಾರಿಗೆ ಸೆಸ್, ಗ್ರಂಥಾಲಯ ಸೆಸ್, ಯುಜಿಡಿ ಸೆಸ್ ಸೇರಿದಂತೆ ಏಳು ವಿಧದ ಸೆಸ್ ಗಳನ್ನು ಜನರಿಂದ ಪಾವತಿಸಿಕೊಳ್ಳುತ್ತಿದೆ. ಆದರೂ ಹೊಸದಾಗಿ ಮತ್ತೆ ಮತ್ತೆ ಶುಲ್ಕಗಳನ್ನು ಹೇರುವ ಮೂಲಕ ಜನರಿಗೆ ಹಾಗೂ ಉದ್ದಿಮೆದಾರರಿಗೆ ಏಕೆ ತೊಂದರೆ ಕೊಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಉದ್ದಿಮೆದಾರರು ಬೇಸರದಿಂದ ಪ್ರಶ್ನಿಸುತ್ತಾರೆ.

ಆಂದೋಲನ ಡೆಸ್ಕ್

Recent Posts

ಮಳವಳ್ಳಿ | ಚಿರತೆ ಪ್ರತ್ಯಕ್ಷ ; ಆತಂಕ

ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮಕ್ಕೆ ಹೊಂದುಕೊಂಡಂತೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ. ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪವೇ…

3 hours ago

ಎಚ್.ಸಿ.ಮಹದೇವಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ

ಬೆಂಗಳೂರು : ಕರ್ನಾಟಕದ ಪ್ರಭಾವಿ ದಲಿತ ಸಮುದಾಯದ ನಾಯಕ ಹಾಗೂ ಮಾಜಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ…

7 hours ago

ಮಲ್ಲಿಕಾರ್ಜುನ್‌ ಖರ್ಗೆ, ಎಂ.ನಾಗರಾಜ್‌ ಸಹಿತ ನಾಲ್ವರು ರಾಜ್ಯಸಭೆಗೆ ಅವಿರೋಧ ಆಯ್ಕೆ

ಬೆಂಗಳೂರು : ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಧೈವಾರ್ಷಿಕ ಚುನಾವಣೆಯಲ್ಲಿ ನಿರೀಕ್ಷೆಯಂತೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ.ಮಲ್ಲಿಕಾರ್ಜುನ…

8 hours ago

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ 11ನೇ ನೀತಿ ಆಯೋಗದ ಸಭೆ

ಕರ್ನಾಟಕ ಸಿಎಂ ಡಿಕೆಶಿ ಸೇರಿ ಹಲವು ರಾಜ್ಯಗಳ ಸಿಎಂಗಳು ಭಾಗಿ ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರ…

8 hours ago

ಕಾಂಗ್ರೆಸ್‌ ಶಾಸಕ ಷಡಕ್ಷರಿ ಆರೋಗ್ಯ ಸ್ಥಿತಿ ಗಂಭೀರ

ನವದೆಹಲಿ: ತಿಪಟೂರು ಕಾಂಗ್ರೆಸ್‌ ಶಾಸಕ ಕೆ.ಷಡಕ್ಷರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಚಿವ ಸ್ಥಾನಕ್ಕಾಗಿ ಪಕ್ಷದ…

13 hours ago

ಕೇರಳದಲ್ಲಿ ಮತ್ತೆ ನಿಫಾ ವೈರಸ್‌ ಪತ್ತೆ: ಆರೋಗ್ಯ ಇಲಾಖೆಯಿಂದ ಹೈಅಲರ್ಟ್‌

ಕೋಯಿಕ್ಕೋಡ್:‌ ವಯನಾಡು, ಕೋಯಿಕ್ಕೋಡ್‌ನಲ್ಲಿ ಶಿಗೆಲ್ಲಾ ವೈರಸ್‌ ಸೋಂಕು ಹರಡಿರುವ ನಡುವೆ ನಿಫಾ ವೈರಸ್‌ ಪತ್ತೆಯಾಗಿದೆ. 43 ವರ್ಷದ ವ್ಯಕ್ತಿಯೊಬ್ಬರಿಗೆ ನಿಫಾ…

13 hours ago