ಸಾರ್ಥಕ ಪಯಣ ಸಮಾರಂಭದಲ್ಲಿ ರಾಜಶೇಖರ ಕೋಟಿ ಅವರ ಬದುಕುನ್ನು ಸ್ಮರಿಸಿದ ಮಾಜಿ ಸಚಿವರು
ತಿ.ನರಸೀಪುರ: ಧರ್ಮ, ಜಾತಿ, ಗುಂಪು, ಪಂಗಡದ ಬಗ್ಗೆ ಇರದೇ ವಸ್ತು ನಿಷ್ಠವಾಗಿ ಪತ್ರಿಕೆಯನ್ನು ನಡೆಸಿಕೊಂಡು ಬಂದಿದ್ದ ರಾಜಶೇಖರ ಕೋಟಿ ಅವರು ವೃತ್ತಿಧರ್ಮಕ್ಕೆ ವಿರುದ್ಧ ಬರವಣಿಗೆ ಮಾಡಲಿಲ್ಲ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಪಟ್ಟಣದ ವಿದ್ಯೋದಯ ಕಾಲೇಜಿನ ಸಭಾಂಗಣದಲ್ಲಿ ‘ಆಂದೋಲನ ದಿನಪತ್ರಿಕೆ ೫೦ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ತಿ.ನರಸೀಪುರ ತಾಲ್ಲೂಕಿನ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೋಟಿ ಅವರು ಜಾತಿ, ಧರ್ಮದ ಪ್ರೇರೇಪಣೆಗೆ ಒಳಗಾದವರಲ್ಲ. ಪಾಟೀಲ್ ಪುಟ್ಟಪ್ಪ, ಪಿ.ಲಂಕೇಶ್, ಪ್ರೊ.ಕೆ.ರಾಮದಾಸ್, ದೇವನೂರ ಮಹಾದೇವ, ರಘುರಾಮ್ ಶೆಟ್ಟಿ, ವೇದಾಂತ ಹೆಮ್ಮಿಗೆ, ಪ್ರೊ.ಲಿಂಗದೇವರು ಹಳೆಮನೆ, ಪ.ಮಲ್ಲೇಶ್ ಅವರಂತಹವರ ಜತೆಗೂಡಿ ಬಂದವರು. ಒಬ್ಬ ಹೋರಾಟಗಾರನಾಗಿದ್ದರಿಂದಲೇ ದಲಿತರು, ಕಾರ್ಮಿಕ, ರೈತ ಚಳವಳಿಯನ್ನು ಬೆಂಬಲಿಸಿ ಪ್ರೇರಣೆಯಾಗಿ ನಿಲ್ಲುತ್ತಿದ್ದರು ಎಂದು ಹೇಳಿದರು.
‘ಆಂದೋಲನ’ ಜನರ ಪರ ಮತ್ತು ಅಭಿವೃದ್ಧಿ ಪರವಾಗಿ ಇರುತ್ತದೆ. ಪ್ರಚೋದನಾಕಾರಿ ಮತ್ತು ಪತ್ರಿಕಾ ಮೂಲಧರ್ಮಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳದಂತೆ ನೋಡಿಕೊಂಡು ೫೦ ವರ್ಷಗಳ ಕಾಲ ಅದರಲ್ಲಿ ಯಶಸ್ವಿಯಾಗಿ ನಡೆದುಕೊಂಡಿದ್ದಾರೆ. ಕೋಟಿ ನಿಜವಾಗಿಯೂ ಕೋಟಿ. ಜಾತಿ, ಧರ್ಮ, ಗುಂಪು ಸೀಮಿತವಾಗಿಲ್ಲದೆ ಕೆಲಸ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ದೇಶ ಬಂಡವಾಳಶಾಹಿಗಳ ಕಪಿಮುಷ್ಠಿಯ ಹಿಡಿತದಲ್ಲಿ ಸಿಲುಕಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವ್ಯವಸ್ಥೆಯನ್ನು ಕತ್ತು ಹಿಸುಕಿ ಅದರ ಆಶುಂವನ್ನು ಭಂಗಗೊಳಿಸುವ ಕೆಲಸ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಮೊದಲಿಗಿಂತಲೂ ಈಗ ಹೆಚ್ಚು ಜವಾಬ್ದಾರಿಯಿಂದ ಪತ್ರಿಕಾಧರ್ಮ ಅರಿತು ಕೆಲಸ ಮಾಡಬೇಕಾಗಿದೆ ಎಂದರು.
ಜಿ.ಜನಾರ್ಧನರೆಡ್ಡಿ ಅವರು ಗಂಗಾವತಿಯಲ್ಲಿ ಮನೆ ಮಾಡಿದ್ದನ್ನೂ ದೃಶ್ಯ ಮಾಧ್ಯಮದಲ್ಲಿ ದಿನಗಟ್ಟಲೇ ತೋರಿಸಲಾಗುತ್ತದೆ. ಆದರೆ, ಬೆಂಗಳೂರಿನಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶ ಮಾಡಿದರೆ ಆ ದೃಷ್ಯವನ್ನು ಒಂದು ಕ್ಷಣವೂ ತೋರಿಸಲ್ಲ ಅಂದರೆ ಮನಸ್ಸಿಗೆ ಎಷ್ಟು ನೋವಾಗಬಾರದು ಎಂದು ಪ್ರಶ್ನಿಸಿದರು.
ರಾಜಶೇಖರ ಕೋಟಿ ಅವರಾಗಲೀ ಅಥವಾ ‘ಆಂದೋಲನ’ವಾಗಲಿ ಎಂದೂ ಜಾಹೀರಾತಿನ ಹಿಂದೆ ಬಿದ್ದವರಲ್ಲ. ಸದಾ ಓದುಗರನ್ನು ನೋಡುವುದು ಅವರ ಬಯಕೆಯಾಗಿದೆ ಎಂದು ನುಡಿದರು.
ಇಂದು ನಾವು ನಗಬೇಕು ಅಥವಾ ನಗಿಸಬೇಕು. ಅದೇ ನಿಜವಾದ ಪ್ರಜಾಪ್ರಭುತ್ವ. ಮುಖವನ್ನು ಆ ಕಡೆ ತಿರುಗಿಸಿಕೊಳ್ಳುವುದು, ಮುಖ ಗಂಟಾಕಿಕೊಳ್ಳುವುದು ಅಲ್ಲ. ಎದುರಿಗೆ ಬಂದು ಮಾತನಾಡಿಸಿದರೆ ಮುಖ ಬೇರೆ ಕಡೆಗೆ ತಿರುಗಿಸುವ ಬದಲಿಗೆ ಅವರನ್ನು ಮಾತನಾಡಿಸಿಬಿಟ್ಟರೆ ಮನಸ್ಸು ಹಗುರವಾಗಲಿದೆ ಎಂಬುದನ್ನು ಅರಿಯಬೇಕು ಎಂದರು.
‘ಆಂದೋಲನ’ ಐವತ್ತು ವರ್ಷಗಳನ್ನು ಕಳೆದರೂ ಮದುವಣಗಿತ್ತಿಯ ಸಡಗರ ಕಡಿಮೆ ಮಾಡಿಕೊಂಡಿಲ್ಲ. ಪತ್ರಿಕಾ ಧರ್ಮವನ್ನು ಬಿಟ್ಟು ಯಾರೊಂದಿಗೂ ರಾಜಿ ಮಾಡಿಕೊಂಡಿಲ್ಲ. ಪತ್ರಿಕೆಯು ಜನರ ನಂಬಿಕೆ ಉಳಿಸಿಕೊಂಡು ವಿಶ್ವಾರ್ಹತೆ ಇರಿಸಿಕೊಂಡಿದೆ. ಪ್ರಾದೇಶಿಕತೆ ಉಳಿಸಿಕೊಂಡು ರಾಷ್ಟ್ರೀಯ ಮಾನ್ಯತೆ ಪಡೆದಿದೆ. ಪತ್ರಿಕೆಯನ್ನು ನಡೆಸುವುದು ಸುಲಭವಲ್ಲದಿದ್ದರೂ ಅದನ್ನು ಬೆಳೆಸಿರುವುದು ದೊಡ್ಡ ಸಾಧನೆ. ರಾಜಶೇಖರ ಕೋಟಿ ಅವರನ್ನು ನೆನಪಿಸಿಕೊಳ್ಳದೆ ‘ಆಂದೋಲನ’ದ ಬಗ್ಗೆ ಮಾತನಾಡಿದರೆ ಅಪೂರ್ಣವಾಗಲಿದೆ.
-ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವರು.
ಚಿತ್ರದುರ್ಗ : ದಶಕಗಳಿಂದ ಬರಗಾಲದ ಬೇಗೆಯಲ್ಲಿ ಬೆಂದ ಬಯಲುಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆ ಹೊಸ ಭರವಸೆ ಮೂಡಿಸಿದೆ. ಅರಣ್ಯ ಇಲಾಖೆ…
ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…
ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…
ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…
ಡಾ. ಬಸವರಾಜ್ ಇಟ್ನಾಳ ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ…