ಆಂದೋಲನ 50

ತಿ.ನರಸೀಪುರ ತಾಲ್ಲೂಕಿನ ಸಾಧಕರಿಬ್ಬರಿಗೆ ಆತ್ಮೀಯ ಸನ್ಮಾನ

ಭತ್ತದ ತಳಿ ಸಂರಕ್ಷಕ ಎಂ.ಕೆ.ಶಂಕರ್ ಗುರು, ಕ್ರೀಡಾ ರತ್ನ ಪುರಸ್ಕೃತ ಎಂ.ವೀಣಾ ಅವರಿಗೆ ಗೌರವ ಸಲ್ಲಿಕೆ

ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನಲ್ಲಿ ‘ಆಂದೋಲನ’ ದಿನಪತ್ರಿಕೆ ೫೦ ಸಾರ್ಥಕ ಪಯಣ ಕಾರ್ಯಕ್ರಮದಲ್ಲಿ ಸಾಧಕರಿಬ್ಬರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ವಿದ್ಯೋದಯ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕರಾದ ಭತ್ತದ ತಳಿ ಸಂರಕ್ಷಕ ಎಂ.ಕೆ.ಶಂಕರ್ ಗುರು, ಕ್ರೀಡಾ ರತ್ನ ಪುರಸ್ಕೃತ ಎಂ.ವೀಣಾ ಅವರನ್ನು ಸಂಸದ ವಿ.ಶ್ರೀನಿವಾಸಪ್ರಸಾದ್, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಎಂ.ಅಶ್ವಿನ್‌ಕುಮಾರ್, ಡಾ.ಎನ್.ಎಲ್.ಭಾರತೀಶಂಕರ್ ಸಮ್ಮುಖದಲ್ಲಿ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಭತ್ತದ ತಳಿ ಸಂರಕ್ಷಕ ಎಂ.ಕೆ.ಶಂಕರ್ ಗುರು: ತಿ.ನರಸೀಪುರ ತಾಲ್ಲೂಕಿನಲ್ಲಿ ಮಾದರಹಳ್ಳಿ ಗ್ರಾಮದ ಪ್ರಗತಿ ಪರ ರೈತ ಎಂ.ಕೆ.ಶಂಕರ್ ಗುರು ಪ್ರಮುಖರು. ಕಳೆದ ಮೂರು ೩ ದಶಕಗಳಿಂದ ಭತ್ತದ ಹೊಸ ತಳಿಗಳನ್ನು ಬೆಳೆಸುವುದರ ಜೊತೆಗೆ ಸಾಂಪ್ರದಾಯಿಕ ತಳಿಗಳ ಬೀಜ ಸಂಗ್ರಹ ಮತ್ತು ಸಂರಕ್ಷಣೆುಂಲ್ಲೂ ಶಂಕರ್ ಮಹತ್ತರ ಪಾತ್ರ ವಹಿಸಿದ್ದಾರೆ.
ಶಂಕರ್ ಅಭಿವೃದ್ಧಿಪಡಿಸಿರುವ ಸುಧಾರಿತ ತಳಿ ‘ಓಒ-೨’ ಭತ್ತದ ತಳಿುಂನ್ನು ಭಾರತ ಸರ್ಕಾರದ ಸಸ್ಯ ಪ್ರಭೇದಗಳ ನೋಂದಣಿ ಸಂಸ್ಥೆಯು ಗುರುತಿಸಿ ಅನುಮೋದನೆಯು ಮುದ್ರೆ ಒತ್ತಿದೆ. 2014ರಲ್ಲಿ ಪ್ಲಾಂಟ್ ಜಿನೋಮ್ ಸೇವರ್ ಫಾರ್ಮರ್ ಮನ್ನಣೆಯನ್ನು ನೀಡಿ ಗೌರವಿಸಿದೆ. ಶಂಕರ್ ಅವರು, ‘ರತ್ನಚೂಡಿ ತಳಿ ಎಂಬ ಔಷಧಿಯ ಗುಣವುಳ್ಳ ತಳಿಯನ್ನೂ ಸಂರಕ್ಷಿಸಿದಾರೆ. ‘ಜೀರಗ ಸಣ್ಣ ಎಂಬ ಇನ್ನೊಂದು ಅಕ್ಕಿ ತಳಿ ಪರಿಮಳ ಭರಿತವಾಗಿದ್ದು ಬೆಳೆಗಾರರಲ್ಲಿ ಜನಪ್ರಿಯವಾಗಿದೆ.

ಕ್ರೀಡಾ ರತ್ನ ಪುರಸ್ಕೃತ ಎಂ.ವೀಣಾ
ತಿ.ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದ ಎಂ.ವೀಣಾ( ೨೨) ಅವರು ಖೋಖೋದಲ್ಲಿ ರಾಜ್ಯ ಸರ್ಕಾರ ನೀಡುವ ಕ್ರೀಡಾ ರತ್ನ (೨೦೧೭) ಪ್ರಶಸ್ತಿ ಪಡೆದು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದವರು. ೧೨ ವರ್ಷಗಳ ಹಿಂದೆ ೫ನೇ ತರಗತಿಯಲ್ಲಿ ಓದುತ್ತಿರುವಾಗಲೇ ವೀಣಾ ಖೋಖೋ ಆಟದ ಅಭ್ಯಾಸ ಆರಂಭಿಸಿದರು. ನಂತರ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖೋಖೋ ಪಂದ್ಯಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ. ೨೦೧೯-೨೦ನೇ ಸಾಲಿನ ೫೩ನೇ ನ್ಯಾಷನಲ್ ಸೀನಿಯರ್ಸ್ ಖೋಖೋ ಚಾಂಪಿಯನ್ ಶಿಪ್‌ನಲ್ಲಿ ರಾನ್ಸಿರಾಣಿ ಲಕ್ಷ್ಮೀಭಾಯಿ ಪ್ರಶಸ್ತಿ ಪಡೆದಿದ್ದಾರೆ. ಅಸ್ಸಾಂನಲ್ಲಿ ನಡೆದ ೧೨ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ದಿಲ್ಲಿಯಲ್ಲಿ ನಡೆದ ೪ನೇ ಏಷ್ಯನ್ ಗೇಮ್ಸ್ ಖೋಖೋ ಅಂತಾರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಇವರು ಕುರುಬೂರು ಮಹದೇವ ಸ್ವಾಮಿ ಮತ್ತು ಮಾದಲಾಂಬಿಕಾ ಅವರ ಪುತ್ರಿ, ಬಿಕಾಂ ಪದವೀಧರೆ ವೀಣಾ, ಈಗ ದೈಹಿಕ ಶಿಕ್ಷಕಿಯಾಗುವ ಉದ್ದೇಶದಿಂದ ಎಂಪಿ.ಎಡ್ ಮಾಡುತ್ತಿದ್ದಾರೆ.

 

andolanait

Recent Posts

ಓದುಗರ ಪತ್ರ: ಮಾದರಿಯ ನಡೆ!

ಮಾದರಿಯ ನಡೆ! ಮೊನ್ನೆ ಹುಣಸೂರಿನಲ್ಲಿ ನಡೆದ ದಲಿತರ ದೇವಸ್ಥಾನ ಪ್ರವೇಶ ಸಹಪಂಕ್ತಿ ಭೋಜನ ಮಾದರಿ ನಡೆಯಾಗಿದೆ ನಾಡು-ದೇಶಕೆ! ಪ್ರೇರಣೆಯಾಗಿದೆ ಮೇಲ್ಪಂಕ್ತಿಯಾಗಿದೆ…

51 mins ago

ಓದುಗರ ಪತ್ರ: ಅರಮನೆ ಸುತ್ತಲಿನ ಪಾದಚಾರಿ ಮಾರ್ಗ ದುರಸ್ತಿ ಮಾಡಿ

ಮೈಸೂರಿನ ಅರಮನೆ ವೀಕ್ಷಣೆಗೆ ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು ಆಗಮಿಸುತ್ತಾರೆ. ಅರಮನೆಯ ಸುತ್ತಲೂ ನಿರ್ಮಾಣವಾಗಿರುವ ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ಚಪ್ಪಡಿ…

52 mins ago

ಓದುಗರ ಪತ್ರ: ಕೆರೆಗಳಿಗೆ ಹೇಮಾವತಿ ಜಲಾಶಯದಿಂದ ನೀರು ತುಂಬಿಸಿ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ, ಬೂಕನಕೆರೆ ಹೋಬಳಿಯ ಬಹುಪಾಲು ಪ್ರದೇಶಗಳಲ್ಲಿ ಈ ವರ್ಷ ಪೂರ್ವ ಮುಂಗಾರು ಮಳೆ ಆಗದೆ, ಬೆಳೆ…

54 mins ago

ಓದುಗರ ಪತ್ರ: ಕೋಚಿಂಗ್ ದಂಧೆಗೆ ಕಡಿವಾಣ ಹಾಕಿ

ಖಾಸಗಿ ಶಾಲೆಗಳು ೬ನೇ ತರಗತಿಯಿಂದಲೇ ಐಐಟಿ ಮತ್ತು ನೀಟ್ ತರಬೇತಿಯನ್ನು ಕಡ್ಡಾಯಗೊಳಿಸಿವೆ. ೧೧-೧೨ ವರ್ಷದ ಪುಟ್ಟ ಮಕ್ಕಳ ಮೇಲೆ ಸ್ಪರ್ಧಾತ್ಮಕ…

56 mins ago

ಶುಶ್ರೂಷೆ ವೃತ್ತಿಗೆ ಮೆರುಗು ನೀಡಿದ ಫ್ಲಾರೆನ್ಸ್ ನೈಟಿಂಗೇಲ್

ಎನ್.ಹರೀಶ್ ಕುಮಾರ್ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖವಾಗಿ ಮುಂಚೂಣಿಯಲ್ಲಿ ಬರುವ ಹೆಸರೆಂದರೆ ಅದು ವೈದ್ಯ ವೃತ್ತಿ. ಆದರೆ ಒಬ್ಬ ರೋಗಿಯು ಗುಣಮುಖ…

4 hours ago

ಜನಮೆಚ್ಚುಗೆ ಗಳಿಸಿದ ರಾಜ್ಯಮಟ್ಟದ ಯಿಫಾ ಹಾಕಿ

ಲಕ್ಷ್ಮೀಕಾಂತ್ ಕೊಮಾರಪ್ಪ ಉತ್ತಮ ಪ್ರದರ್ಶನ ನೀಡಿದ ಎಜಿಒಆರ್‌ಸಿ ತಂಡ ಚಾಂಪಿಯನ್; ಸದರ್ನ್ ಕಮಾಂಡ್ ತಂಡಕ್ಕೆ ದ್ವಿತೀಯ ಬಹುಮಾನ ಸೋಮವಾರಪೇಟೆ: ಸುಮಾರು…

4 hours ago