ತಿ.ನರಸೀಪುರ: ದಲಿತರು, ಶೋಷಿತರು, ದಮನಿತರ ಧ್ವನಿಯಾಗಿ ಕೆಲಸ ಮಾಡುತ್ತಿರುವ ‘ಆಂದೋಲನ’ ನೂರು ವರ್ಷಗಳನ್ನು ಪೂರೈಸಬೇಕು. ರಾಜಶೇಖರ ಕೋಟಿ ಅವರು ಹಾಕಿದ ಫೌಂಡೇಷನ್ನ್ನು ಮಕ್ಕಳಾದ ರವಿ ಕೋಟಿ, ರಶ್ಮಿಕೋಟಿ ಮುಂದುವರಿಸಿಕೊಂಡು ಬಂದಿರುವುದರಿಂದ ಓದುಗ ಸಮೂಹ ಬೆನ್ನಿಗೆ ನಿಲ್ಲಬೇಕು ಎಂದು ಮಾಜಿ ಶಾಸಕ ಡಾ.ಎನ್.ಎಲ್.ಭಾರತೀಶಂಕರ್ ಹೇಳಿದರು.
ಪಟ್ಟಣದಲ್ಲಿ ನಡೆದ ಆಂದೋಲನ ದಿನಪತ್ರಿಕೆ 50 ಸಾರ್ಥಕ ಪಯಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಐವತ್ತು ವರ್ಷಗಳು ತುಂಬಿರುವ ಆಂದೋಲನ ತನ್ನ ಸಿದ್ಧಾಂತ, ವಿಚಾರವನ್ನು ಸದಾ ಉಳಿಸಿಕೊಂಡು ಜನರ ಪರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಹೈಸ್ಕೂಲ್ ವಿದ್ಯಾರ್ಥಿ ಆಗಿದ್ದಾಗ ಆಂದೋಲನ ಪತ್ರಿಕೆ ಹೊರ ಬರುತ್ತಿತ್ತು. ಆಂದೋಲನ ಜೊತೆಗೆ ನಾವು ಬೆಳೆದು ಬಂದಿದ್ದೇವೆ. ತಿ. ನರಸೀಪುರ ತಾಲ್ಲೂಕಿನಲ್ಲಿ ಕಾವೇರಿ, ಕಪಿಲ ಹಾಗೂ ಸ್ಪಟಿಕ ಸಂಗಮವಾಗಿ ಗಮನ ಸೆಳೆದಿರುವ ಜತೆಗೆ ಹಲವಾರು ವಿಚಾರಗಳಲ್ಲಿ ತಾಲ್ಲೂಕು ಪ್ರಥಮವನ್ನು ಹೊಂದಿದೆ. ಎನ್.ರಾಚಯ್ಯ ,ಟಿ.ಪಿ.ಬೋರಯ್ಯ,ಟಿ.ಎನ್.ನರಸಿಂಹಮೂರ್ತಿ,ಎಂ.ರಾಜಶೇಖರ ಮೂರ್ತಿ ಸೇರಿದಂತೆ ಅನೇಕ ಹಿರಿಯರು ಈ ತಾಲ್ಲೂಕಿನಲ್ಲಿ ಹುಟ್ಟಿ ಹೆಸರು ಗಳಿಸಿದವರಾಗಿದ್ದಾರೆ ಎಂದರು. ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗದೊಡನೆ ಪತ್ರಿಕಾರಂಗ ಕೆಲಸ ಮಾಡಿಕೊಂಡು ಬಂದು ತಮ್ಮ ಪ್ರಭಾವವನ್ನು ಬೀರಿದೆ. ಪ್ರಸ್ತುತ ದಿನದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮಹತ್ವ ಕಳೆದುಕೊಳ್ಳುವಂತಾಗಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಸಜ್ಜನರು ಮೌನವಾಗಿದ್ದರೆ, ದುಷ್ಟರು ಮುಂದೆ ಬಂದಿದ್ದಾರೆ. ಸಮಾಜ ತಪ್ಪು ದಾರಿಗೆ ಸಾಗುವುದನ್ನು ತಡೆಯಲು ಸಜ್ಜನರು ಮೌನ ಮುರಿಯಬೇಕಾಗಿದೆ ಎಂದು ಸಲಹೆ ನೀಡಿದರು.
ಹೊಸದಿಲ್ಲಿ : ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದು, ದೆಹಲಿಯ ಕೆಂಪುಕೋಟೆಯಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿದ ಪ್ರಧಾನಿ…
ಬೆಂಗಳೂರು: 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಆದ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದರು. ಸದಾಶಿವನಗರದಲ್ಲಿರುವ ತಮ್ಮ…
ನವದೆಹಲಿ: ದೇಶದಾದ್ಯಂತ ಇಂದು 80ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ…
ಪ್ರಾಮಾಣಿಕತೆ, ದಕ್ಷತೆ ವಿಷಯ ಬಂದಾಗ ಹೆಂಗಸರಿಗೆ ಸಿಗುವ ‘ಅಂಕ’ ಸ್ವಲ್ಪ ಹೆಚ್ಚೆ ಎಂಬ ಭಾವನೆ ಈ ಹಿಂದಿನಿಂದಲೂ ಇದೆ. ಅದೇ…
ರಾಜ್ಯ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ಮೇಲೆ ಒಂದು…
ಪ್ರತಿ ವರ್ಷ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಬಹು ವಿಜೃಂಭಣೆಯಿಂದ ಮೈಸೂರಿನಲ್ಲಿ ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ…