ಮಹಿಳೆ

ಸರ್ಗಂ ಕೌಶಲ್ ವಿಶ್ವದ ಚೆಲುವೆಯಾಗಿದ್ದು ಹೇಗೆ ಗೊತ್ತೇ..?

ಸರ್ಗಂ ಕೌಶಲ್ ವಿಶ್ವದ ಚೆಲುವೆಯಾಗಿದ್ದು ಹೇಗೆ ಗೊತ್ತೇ..?

ಕಾಶ್ಮೀರಿ ಚೆಲುವೆಯೊಬ್ಬಳು 21 ವರ್ಷದ ಬಳಿಕ ವಿಶ್ವ ಸೌಂದರ್ಯ ಸ್ಪರ್ಧೆಯ ಕಿರೀಟವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಜಮ್ಮು ಮೂಲದ ಸರ್ಗಂ ಕೌಶಲ್ ಅವರು ಲಾಸ್ ವೆಗಾಸ್ ನಲ್ಲಿ ಡಿ.18ರಂದು ಜರುಗಿದ ಸ್ಪರ್ಧೆಯಲ್ಲಿ ಸುಮಾರು 63 ದೇಶಗಳ ಸುಂದರಿಯರೊಂದಿಗೆ ಸ್ಪರ್ಧಿಸಿ ಮಿಸೆಸ್ ವರ್ಲ್ಡ್ 2022 ಕಿರೀಟವನ್ನು ಮುಡಿಗೇರಿಸಿಕೊಂಡು ಗೆಲುವಿನ ನಗೆ ಬೀರಿದ್ದಾರೆ. ತಮ್ಮ ಸಾಧನೆಯ ಫೋಟೋಗಳನ್ನು ಅವರು ಇನ್‌ ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಆಯ್ದ ಫೋಟೋಗಳು ಇಲ್ಲಿವೆ.

 

ಮಿಸೆಸ್ ವರ್ಲ್ಡ್ ವಿವಾಹಿತ ಮಹಿಳೆಯರಿಗೆ ಮೀಸಲಾದ ಸ್ಪರ್ಧೆ. 21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಪ್ರಶಸ್ತಿ

2001ರಲ್ಲಿ ವೈದ್ಯೆಯಾಗಿದ್ದ ಅದಿತಿ ಗೋವಿತ್ರಿಕರ್ ಅವರು ಮಿಸೆಸ್ ವರ್ಲ್ಡ್ ಆಗಿ ಆಯ್ಕೆಯಾಗಿದ್ದರು. ಈಗ ಶಿಕ್ಷಕಿಯಾಗಿರುವ ಸರ್ಗಂ ಕೌಶಲ್‌ ಈ ಕಿರೀಟ ಒಲಿದಿದೆ.

 


1990ರ ಸೆ.17 ರಂದು ಜಮ್ಮುವಿನ ಜಿ.ಎಸ್. ಕೌಶಲ್ ಹಾಗೂ ರೀನಾ ಕಾಜೂರಿಯ ದಂಪತಿ ಪುತ್ರಿಯಾಗಿ ಜನಿಸಿದ ಸರ್ಗಂ ಪ್ರತಿಭಾನ್ವಿತ ವಿದ್ಯಾರ್ಥಿನಿ.

ಜಮ್ಮುವಿನ ಪ್ರೆಸೆಂಟೇಶನ್ ಕಾನ್ವೆಂಟ್, ಗಾಂಧಿನಗರ ಸೀನಿಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಸರ್ಗಂ, ಜಮ್ಮು ವಿವಿಯ ಇಂಗ್ಲೀಷ್ ಸಾಹಿತ್ಯ ಸ್ನಾತಕೋತ್ತರ ಪದವೀಧರೆ.

ಸರ್ಗಂ ಕೌಶಲ್ ಗೆ ತನಗಿಂತ ಏಳು ವರ್ಷ ಕಿರಿಯನಾದ ಮಂಥನ್ ಕೌಶಲ್ ಎಂಬ ಸಹೋದರನಿದ್ದಾನೆ.

ಸರ್ಗಂ ಕೌಶಲ್ 2018 ರಲ್ಲಿ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕರ್ನಲ್ ಆದಿತ್ಯ ಮನಮೋಹನ್ ಶರ್ಮಾ ಅವರನ್ನು ವಿವಾಹವಾಗುತ್ತಾರೆ.

 


ಇದೇ ವರ್ಷದ ಜೂನ್ ತಿಂಗಳಿನಲ್ಲಿ 2022-ರ ಮಿಸೆಸ್ ಇಂಡಿಯಾ ವರ್ಲ್ಡ್ ಸ್ಪರ್ಧೆಯನ್ನು ಗೆದ್ದ ಸರ್ಗಂ ವಿಶ್ವ ಸುಂದರಿ ಸ್ಪರ್ಧೆಗೆ ಆಯ್ಕೆಯಾಗಿದ್ದರು.

ಜಮ್ಮುವಿನ ಕೆ.ಸಿ.ಇಂಟರ್‌ ನ್ಯಾಷನಲ್ ಸ್ಕೂಲ್‌ ನಲ್ಲಿ ಶಿಕ್ಷಕಿಯಾಗಿರುವ ಸರ್ಗಂ ತನ್ನ 32 ನೇ ವಯಸ್ಸಿನಲ್ಲಿ ಮಿಸೆಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ.

ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದ ಸರ್ಗಂ, ಶುದ್ಧ ಶಾಖಾಹಾರಿ. ತಮ್ಮ ಫಿಟ್ನೆಸ್‌ ಗೆ ಆಹಾರ ಪದ್ಧತಿಯೂ ನೆರವಾಗಿದೆ ಎನ್ನುತ್ತಾರೆ ಅವರು.

ಸತತ ಪರಿಶ್ರಮ,ಬದ್ಧತೆ,ನೌಕಾದಳದಲ್ಲಿ ಸೇವೆ ಸಲ್ಲಿಸುತ್ತಿರುವ ಪತಿ ಆದಿತ್ಯ ಅವರ ಬೆಂಬಲದಿಂದ ಸರ್ಗಂ ಈ ಸಾಧನೆ ಮಾಡಲು ಸಾಧ್ಯವಾಗಿದೆ.

ಕೊನೆಯ ಹಂತದವರೆಗೂ ನಿಕಟ ಪೈಪೋಟಿ ನೀಡಿದ್ದ ಪಾಲಿನೇಶಿಯಾ ಅವರನ್ನು ಸೋಲಿಸಿ ವಿಶ್ವ ಸುಂದರಿ ಕಿರೀಟಕ್ಕೆ ಭಾಜನನರಾದ ಸರ್ಗಂ

 

andolanait

Share
Published by
andolanait

Recent Posts

ಮಾಡೆಲ್‌ ಟ್ವಿಶಾ ಶರ್ಮಾ ಸಾವಿನ ಕೇಸ್‌ ತನಿಖೆ ಸಿಬಿಐ ಹೆಗಲಿಗೆ

ನವದೆಹಲಿ : ಮಾಡೆಲ್ ತ್ವಿಶಾ ಶರ್ಮಾ ಸಾವು ಪ್ರಕರಣ ಇದೀಗ ಸುಪ್ರೀಂಕೋರ್ಟ್​ ತಲುಪಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ತನಿಖಾ…

13 hours ago

ಮೈಸೂರು | ಪೊಲೀಸರ ಬಲೆಗೆ ಬಿದ್ದ ಸುಪಾರಿ ಗ್ಯಾಂಗ್‌

ಮೈಸೂರು : ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ರೌಡಿ ಹಬೀದ್ ಪಾಷಾ ಇದೀಗ ಸುಫಾರಿ ಹಂತಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ…

14 hours ago

ಗ್ರಾಹಕರಿಕೆ ಶಾಕ್‌ : ಪೆಟ್ರೋಲ್‌, ಡಿಸೇಲ್‌ ಬೆಲೆ ಮತ್ತೆ ಏರಿಕೆ

ನವದೆಹಲಿ : ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯ ಹೊರೆ ಜನರ ಮೇಲೆ ಬಿದ್ದಿದೆ. ಸೋಮವಾರ ಪೆಟ್ರೋಲ್ ದರವನ್ನು ಲೀಟರ್‍ಗೆ…

17 hours ago

ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ:ಈಶ್ವರ ಖಂಡ್ರೆ

ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲು ಸಮಿತಿ ರಚನೆ: ಈಶ್ವರ ಖಂಡ್ರೆ ಕಾರ್ಕಳ : ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶದಲ್ಲಿ ಸರ್ಕಾರಿ…

17 hours ago

ಪಶ್ಚಿಮ ಬಂಗಾಳ : ಒಬಿಸಿ ಪಟ್ಟಿ ಮರುಸಂರಚನೆ

ಆರ್‌ಎಸ್‌ಎಸ್‌ ಕಾರ್ಯಸೂಚಿಗಳು ಜಾರಿ ಬಿ.ಶ್ರೀಪಾದ ಭಟ್‌ 2026ರ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು…

18 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ | ಆಳುವ ಸರ್ಕಾರ ಎಚ್ಚರ ತಪ್ಪಿದರೆ ಪ್ರತಿರೋಧ ಖಚಿತ

ಆರ್ಥಿಕ ಸಂಕಷ್ಟದ ಸಮಯದಲ್ಲಿ ಜಾಗ್ರತೆಯಿಂದ ಕಾರ್ಯನಿರ್ವಹಣೆ ಅಗತ್ಯ ಇದು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆ. ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.…

19 hours ago