ರಾಜ್ಯ

ಕಾಂಗ್ರೆಸ್‌ ಜೀವಂತವಾಗಿದ್ದರೇ ಶಾಮನೂರು ಶಿವಶಂಕರಪ್ಪನನ್ನು ಸಸ್ಪೆಂಡ್‌ ಮಾಡಿ ಪಕ್ಷದಿಂದ ಹೊರಗೆಹಾಕಿ : ಹೆಚ್‌.ವಿಶ್ವನಾಥ್‌ !

ಮೈಸೂರು : ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಜೀವಂತವಾಗಿದ್ದರೆ ಶಾಮನೂರು ಶಿವಶಂಕರಪ್ಪನನ್ನು ಪಕ್ಷದಿಂದ ಸಸ್ಪೆಂಡ್‌ ಮಾಡಿ ಹೊರಗೆ ಹಾಕಿ ಎಂದು ಬಿಜೆಪಿ ಎಂಎಲ್‌ಸಿ ʼಹಳ್ಳಿ ಹಕ್ಕಿʼ ಹೆಚ್‌.ವಿಶ್ವನಾಥ್‌ ಏಕವಚನದಲ್ಲೇ ಗುಡುಗಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್‌ ಪಕ್ಷದಿಂದ ಗೆದ್ದಿದ್ದಾರೆ. ಜೀವನದುದ್ದಕ್ಕೂ ಕಾಂಗ್ರೆಸ್‌ನಿಂದ ಸಹಾಯ ಪಡೆದುಕೊಂಡು ಬಂದಿದ್ದಾರೆ. ಶಾಮನೂರು ಶಿವಶಂಕರಪ್ಪ ಎಂದು ಜಗತ್ತಿಗೆ ತೋರಿಸಿದವರು ದೇವರಾಜ ಅರಸು. ಅವರನ್ನು ಒಂದು ದಿನವಾದರೂ ನೆನಿತಾನ ಇವನು ಎಂದರು.

ಆತನ ಸಂಪೂರ್ಣ ಬೆಳವಣಿಗೆಗೆ ದೇವರಾಜ ಅರಸು ಕಾರಣ. ನಾವಾದರು ಅರಸು ಅವರನ್ನು ನೆನೆಯುತ್ತೇವೆ ಆದರೆ ಅವರೆಂದು ನೆನೆಯುವುದಿಲ್ಲ. ಕೃತಜ್ಞತೆಯೇ ಇಲ್ಲದವರು. ಚೆನ್ನಾಗಿ ದುಡ್ಡು ಮಾಡಿದ್ದಾನೆ. ಯಾರನ್ನ ಬೇಕಾದರೂ ಕೊಂಡುಕೊಳ್ಳುತ್ತೇನೆ ಎನ್ನುತ್ತಾನೆ ಎಂದು ಶಾಮನೂರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅವನಿಲ್ಲದಿದ್ದರೆ ಪಕ್ಷ ನಡೆಯಲ್ವೇ? ಪಕ್ಷ ನಡೆಯುವುದು ಜನರಿಂದ ಎಂದು ಹೇಳಿದರು.

ನಮ್ಮವರಿಗೂ ಬುದ್ದಿ ಇಲ್ಲ : ನಮ್ಮ ಯಾವುದೇ ಮುಖ್ಯಮಂತ್ರಿಗಳಾಗಲಿ, ಮಂತ್ರಿಗಳಾಗಲಿ ದಾವಣಗೆರೆಗೆ ಹೋದರೆ ಅವರ ಗೆಸ್ಟ್‌ಹೌಸ್‌ನಲ್ಲೇ ಮಲಗುತ್ತಾರೆ. ಅವನ ಮನಗೆ ಉಣ್ಣಲಿಕ್ಕೆ ಹೋಗುತ್ತಾರೆ. ಯಾರಾದರು ಕಾರ್ಯಕರ್ತರ ಮನೆಗೆ ಹೋಗಿ ಅಂಥಾ ನಾನು ಬಹಳಾ ಸತಿ ಹೇಳೀದ್ದೇನೆ. ನೀವೆಲ್ಲಾ ಅವನ ಮನಗೆ ಹೋದರೆ ನಿಮಗೆ ತಿರುಗಿಸಿ ಮಾತನಾಡುತ್ತಾನೆ. ನಮ್ಮ ಕಾಂಗ್ರೆಸ್‌ ಪಕ್ಷದ ಬಂಡೆ ಡಿಕೆಶಿ ನಿಜವಾದ ಬಂಡೆಯಾಗಿದ್ದರೆ, ಪಕ್ಷದಿಂದ ಅವನನ್ನು ಹೊರಗೆಹಾಕಿ ಎಂದು ಹೆಚ್‌.ವಿಶ್ವನಾಥ್‌ ಸವಾಲು ಹಾಕಿದ್ದಾರೆ.

andolanait

Recent Posts

ತಮಿಳುನಾಡಿಗೆ ನಿತ್ಯ 3500 ಕ್ಯೂಸೆಕ್ಸ್‌ ನೀರು ಬಿಡಲು CWRC ಆದೇಶ: ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ

ಮಂಡ್ಯ: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡಿಗೆ ನಿತ್ಯ 3500 ಕ್ಯೂಸೆಕ್‌ನಂತೆ 15…

28 mins ago

ಓದುಗರ ಪತ್ರ: ಭ್ರಷ್ಟಾಚಾರ ಬಗ್ಗು ಬಡಿಯಲು ಸಿಎಂ ಮುಂದಾಗುವರೇ?

ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಾಯುಕ್ತರು ಆಗಾಗ್ಗೆ ದಾಳಿ ನಡೆಸುವುದು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಈಗಿನ ಪತ್ರಿಕಾ ವರದಿಗಳ ಪ್ರಕಾರ, ಮೂರೂವರೆ ವರ್ಷಗಳಲ್ಲಿ…

10 hours ago

ಓದುಗರ ಪತ್ರ: ಸದ್ದು ಮಾಡದ ತುಪ್ಪ, ಬೆಣ್ಣೆ ಬೆಲೆ ಏರಿಕೆ!

ನಂದಿನಿ ಉತ್ಪನ್ನಗಳಾದ, ತುಪ್ಪ ಕೆ.ಜಿಗೆ ರೂ.೧೫ ಮತ್ತು ಬೆಣ್ಣೆ ಕೆ.ಜಿಗೆ ರೂ.೫೦ ಅನ್ನು ಇದೇ ತಿಂಗಳ ೨೪ ರಿಂದಲೇ ಗ್ರಾಹಕರಿಗೆ…

10 hours ago

ಓದುಗರ ಪತ್ರ: ಬರ…ಅಬ್ಬರ !

ಬರ...ಅಬ್ಬರ ! ಬರ ಬರ ಬರ್ಬರ ಮಳೆ ಇಲ್ಲ; ಬೆಳೆ ಇಲ್ಲ ಬರಡಾಯಿತಲ್ಲ ಬದುಕೆಲ್ಲ ಜನ-ಜನುವಾರುಗಳ ಬದುಕೀಗ ಅಕ್ಷರಶಃ ಬರ್ಬರ…

10 hours ago

ಓದುಗರ ಪತ್ರ: ಪರೀಕ್ಷಾ ವ್ಯವಸ್ಥೆ ಸಮಗ್ರ ಸುಧಾರಣೆ ಅತ್ಯಗತ್ಯ

ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಉನ್ನತ ಅಧಿಕಾರ ಕಾರ್ಯಪಡೆ ರಚಿಸಿರುವುದು ಅತ್ಯಂತ ಸಮಯೋಚಿತ ಕ್ರಮವಾಗಿದೆ. ಪ್ರತಿವರ್ಷ…

10 hours ago

ಆರ್‌ಟಿಇ; ಮಕ್ಕಳು ಅವಕಾಶ ವಂಚಿತರಾಗಬಾರದು

ಶಾಂತರಾಜು ಬಸ್ತೀಪುರ ಬಜೆಟ್ ಘೋಷಣೆಯಂತೆ ಪ್ರೌಢಶಾಲೆಗೂ ವಿಸ್ತರಣೆಯಾಗಲಿ ಬಡತನ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ…

10 hours ago