ಬೆಂಗಳೂರು : ಯುಗಾದಿ, ಶಿವರಾತ್ರಿಯ ಹಬ್ಬದ ದಿನವೂ ನಾನು ಮಾಂಸ ತಿನ್ನುತ್ತೇನೆ. ಅದರಲ್ಲಿ ತಪ್ಪೇನು? ಎಲ್ಲಾ ದಿನಗಳು ಒಂದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲೆ ನಡೆದ ಚರ್ಚೆಗೆ ಉತ್ತರ ನೀಡುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ಮ ಸಿದ್ದಾಂತವನ್ನು ತಾವು ನಂಬುವುದಿಲ್ಲ. ರಾಹುಕಾಲ ಗುಳಿಕಕಾಲ, ಯಮಗಂಡಕಾಲ ಯಾವುದರ ಮೇಲೂ ನಂಬಿಕೆ ಇಲ್ಲ, ದೇವರನ್ನು ನಂಬುತ್ತೇನೆ. ಆದರೆ ಮೂಢನಂಬಿಕೆಗಳಿಗೆ ಜೋತು ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಹಳಷ್ಟು ಜನ ತಮ್ಮ ಈಗಿನ ಸ್ಥಿತಿ ಅಥವಾ ದುಃಸ್ಥಿತಿಗೆ ಹಿಂದಿನ ಜನ್ಮದ ಕರ್ಮ ಎಂದು ನಂಬುತ್ತಾರೆ. ನಾನು ಅದನ್ನು ನಂಬುವುದಿಲ್ಲ ಮೂಢ ನಂಬಿಕೆಗಳಿಂದ ದೂರ ಇದ್ದೇನೆ ಎಂದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳುವುದು ಒಂದು, ಮಾಡುವುದು ಇನ್ನೊಂದು. ರಾಹುಕಾಲ ಕಳೆದ ಬಳಿಕ ಈ ಬಾರಿಯ ಬಜೆಟ್ ಮಂಡಿಸಿದ್ದೀರಾ, ಅಂಬೇಡ್ಕರ್ ಬಸವಣ್ಣ ಸೇರಿದಂತೆ ಹಲವಾರು ಸಿದ್ಧಾಂತಗಳನ್ನು ಹೇಳುತ್ತೀರಾ. ಆದರೆ ನಿಮ್ಮ ಸಿದ್ಧಾಂತ ಯಾವುದು ಎಂದರು.
ರಾಜಕೀಯವಾಗಿ ಅಧಿಕಾರಕ್ಕಾಗಿ ನಾವೆಲ್ಲ ಕಾಯುತ್ತಿದ್ದೇವೆ. ಆದರೆ ನಿಮಗೆ ಎಲ್ಲಾ ಕಡೆ ಬಾಗಿಲು ತೆರೆದುಕೊಂಡು ಅವಕಾಶಗಳು ಸಿಕ್ಕವು. ಜನತಾದಳದಲ್ಲಿ ಉಪಮುಖ್ಯಮಂತ್ರಿಯಾಗಿದ್ದೀರಿ. ಕಾಂಗ್ರೆಸ್ಗೆ ಬಂದು ಮುಖ್ಯಮಂತ್ರಿಯಾಗಿದಿರಾ. ನೀವು ಎಲ್ಲಿಗೆ ಹೋದರೂ ಅವಕಾಶ ಒದಗಿ ಬರುತ್ತಿದೆ. ಡಿ.ಕೆ.ಶಿವಕುಮಾರ್ ಅವರನ್ನು ನೋಡಿ, ಪಾಪ ದೇವಸ್ಥಾನ ಸುತ್ತುತ್ತಿದ್ದಾರೆ. ಕಾಮಾಖ್ಯದಲ್ಲಿ ಪೂಜೆ ಮಾಡಿಸಿದ್ದಾರೆ ಎಂದು ಹೇಳುತ್ತಿದ್ದಂತೆ ಖುದ್ದು ಶಿವಕುಮಾರ್ ಆಗಮಿಸಿದರು.
ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಅವರು, ನಾನು ಹಿಂದೆ ರಾಹುಕಾಲದಲ್ಲೂ ಬಜೆಟ್ ಮಂಡಿಸಿದ್ದೇನೆ. ಈ ಬಾರಿ ರಾಹುಕಾಲ ಕಳೆದ ಬಳಿಕ ಬಜೆಟ್ ಮಂಡಿಸಿದ್ದು ನಿಜ. ಅಧಿಕಾರಿಗಳು ಮತ್ತು ಮನೆಯವರು ಹೇಳಿದಂತೆ ಕೇಳಬೇಕಲ್ಲವೇ ಎಂದರು. ಆಗ ಅಶೋಕ್ ಅವರು, ಈ ಹಿಂದೆ ರಾಹುಕಾಲದಲ್ಲಿ ಬಜೆಟ್ ಮಂಡಿಸಿದ ಸಂದರ್ಭವೇ ಬೇರೆ, ಈಗ ಮುಂದಿನ ಬಜೆಟ್ ಅನ್ನು ನೀವು ಮಂಡಿಸುತ್ತೀರೋ, ಇಲ್ಲವೋ ಎಂಬ ಗೊಂದಲದ ವಾತಾವರಣ ಇದೆ. ಅದಕ್ಕಾಗಿ ಕಾಲ ನೋಡಿ ಬಜೆಟ್ ಮಂಡಿಸಿ, ಮುಂದಿನ ಬಜೆಟ್ ಪೀಠಿಕೆ ಹಾಕಿಕೊಂಡಿದ್ದೀರಾ ಎಂದರು. ಆಗ ಸಿದ್ದರಾಮಯ್ಯ ಅವರು ನನಗೆ ಯಾವ ಕಾಲದ ಮೇಲೂ ನಂಬಿಕೆ ಇಲ್ಲ. ಹಬ್ಬದ ದಿನವೂ ಕೂಡ ಮಾಂಸ ತಿನ್ನುತ್ತೇನೆ. ಎಲ್ಲವೂ ಅವರ ನಂಬಿಕೆ ಎಂದರು.
ನವದೆಹಲಿ : ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ಹೋರಾಟಗಾರ ಸೋನಮ್ ವಾಂಗ್ಚುಕ್ ಮೊದಲ ಪ್ರತಿಕ್ರಿಯೆ…
ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಪ್ರಥಮವಾಗಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಂಬಳಕ್ಕಾಗಿ ಮೈಸೂರಿನಲ್ಲಿ ಸ್ಥಳ ನಿಗದಿಪಡಿಸಿದ್ದು, ಸಿದ್ಧತೆ…
ನನ್ನ ಅಜ್ಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಗಾಂಧಿ ಹಕ್ಕಿಯ ಹಾಗೆ ಇದ್ದರು ಮತ್ತು ನಿರುಪದ್ರವಿ ಎಂದು. ಗಾಂಽಯ ಕಾಲದಲ್ಲಿ…
ಡಾ.ಪ್ರಮೀಳಾದೇವಿ ಬಿ.ಕೆ. ಮಹಾತ್ಮಗಾಂಧಿ ಇಂಗ್ಲೆಂಡಿನಲ್ಲಿದ್ದಾಗಲೂ, ಅಲ್ಲಿಂದ ಹಿಂತಿರುಗಿದಾಗ, ಮತ್ತು ಆರಂಭದ ದಿನಗಳಲ್ಲಿ ಅವರು ಎಲ್ಲಾ ವಿದ್ಯಾವಂತರಂತೆ ಬೆಲೆಬಾಳುವ ಸೂಟುಬೂಟು…
ಶಾಕಾಹಾರದಲ್ಲಿ ದಿನದಿನಕ್ಕೂ ನನ್ನ ನಂಬಿಕೆ ಹೆಚ್ಚುತ್ತಲೇ ಹೋಯಿತು. ಸಾಲ್ಟ್ರ ಗ್ರಂಥದ ವ್ಯಾಸಂಗದಿಂದ, ಆಹಾರದ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಭ್ಯಾಸ ಮಾಡಲು…