Andolana originals

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ಉಡುಪು ಯಾಕೆ ಬದಲಾಯಿತು?

 

ಡಾ.ಪ್ರಮೀಳಾದೇವಿ ಬಿ.ಕೆ.
ಮಹಾತ್ಮಗಾಂಧಿ ಇಂಗ್ಲೆಂಡಿನಲ್ಲಿದ್ದಾಗಲೂ, ಅಲ್ಲಿಂದ ಹಿಂತಿರುಗಿದಾಗ, ಮತ್ತು ಆರಂಭದ ದಿನಗಳಲ್ಲಿ ಅವರು ಎಲ್ಲಾ ವಿದ್ಯಾವಂತರಂತೆ ಬೆಲೆಬಾಳುವ ಸೂಟುಬೂಟು ಧರಿಸುತ್ತಿದ್ದವರೇ. ಆದರೆ ಅವರು ಒಮ್ಮೇಲೆ ತಮ್ಮ ಉಡುಪಿನ ನಿಯಮ ಬದಲಾಯಿಸಿದ್ದಕ್ಕೆ ಪ್ರೇರಣೆಯಾದ ಕುತೂಹಲಕರಿಯಾದ ಹಿನ್ನೆಲೆಯೊಂದಿದೆ.

ಭಾರತಕ್ಕೆ ಬಂದ ಮೇಲೆ ಆಗಿನ ಪ್ರಸಿದ್ಧ ರಾಜಕೀಯ ಧುರೀಣರಾಗಿದ್ದ ಗೋಪಾಲಕೃಷ್ಣ ಗೋಖಲೆಯವರನ್ನು ನೋಡಲು ಹೋದರು. ತಮ್ಮ ಬಳಿ ಭಾರತದ ಅಂದಿನ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿಯಲು ಪ್ರಯತ್ನಿಸಿದ ಮೋಹನದಾಸರಿಗೆ ಗೋಖಲೆಯವರು ದೇಶವನ್ನು ಸ್ವತಂತ್ರ್ಯಗೊಳಿಸಲು ಹೋರಾಟಕ್ಕಿಳಿಯುವ ಮೊದಲು ದೇಶದ ಜನರ ನಿಜಸ್ಥಿತಿಯನ್ನು ಸರಿಯಾಗಿ ಅರಿತುಕೊಳ್ಳಲು ದೇಶದ ವಿವಿಧ ಭಾಗಗಳನ್ನು ಸಂಚರಿಸಿಬರುವಂತೆ ಹೇಳಿದರು.

ಗಾಂಧೀಜಿಯವರು ೧೯೧೫-೧೬ರಲ್ಲಿ ಪ್ರವಾಸ ಕೈಗೊಂಡಾಗ ಇಂದಿನಂತೆ ಉತ್ತಮ ರಸ್ತೆಗಳಾಗಲಿ, ರೈಲು ಮಾರ್ಗಗಳಾಗಲಿ ಇರಲಿಲ್ಲ. ಇದ್ದ ರೈಲುಗಳು ಉಗಿಬಂಡಿ ಅಂದರೆ ಸಾಕ್ಷಾತ್ ನೀರಿನ ಹಬೆಯಿಂದೊಡುತ್ತಿದ್ದ, ಆಗಾಗ ನಿಂತು, ನಿಂತು ಹೊರಡುತ್ತಿದ್ದ ರೈಲುಗಳು. ಗಾಂಧೀಜಿಯವರು ಆ ಸ್ಥಿತಿಯಲ್ಲೆಯೇ ಪ್ರವಾಸ ಮುಂದುವರೆಸಿ ಉತ್ತರ ಭಾರತದ ನಂತರ ದಕ್ಷಿಣ ಭಾರತಕ್ಕೆ ಬಂದರು. ತಮಿಳುನಾಡಿನಲ್ಲಿ ಅವರಿದ್ದ ರೈಲು ಚಲಿಸುತ್ತಿದ್ದಾಗ ನದಿಯೊಂದರ ಸೇತುವೆ ಮೇಲೆ ರೈಲು ಒಂದೆರಡು ಗಂಟೆಗಳ ಕಾಲ ನಿಂತುಬಿಟ್ಟಿತ್ತು. ಇದು ಅಂದಿನ ಸಾಮಾನ್ಯ ಸ್ಥಿತಿ. ಹಲವರು ಇಳಿದು ನದಿಯಲ್ಲಿ ಸ್ನಾನ ಮಾಡತೊಡಗಿದರು.

ಎಲ್ಲರಂತೆ ಗಾಂಧೀಜಿಯವರೂ ಕೂಡ ಆ ಸಮಯದಲ್ಲಿ ಸುತ್ತಲಿನ ಪ್ರಕೃತಿಯನ್ನು ಸವಿಯಲು ಇಳಿದರು. ಅವರು ಗಮನಿಸಿದಾಗ, ಅನತಿ ದೂರದಲ್ಲಿ ಮಹಿಳೆಯೊಬ್ಬಳು ನದಿಯಲ್ಲಿ ಇಳಿದು ಅತಿ ಸಂಕೋಚದಿಂದ ಸ್ನಾನಕ್ಕೆ ತೊಡಗಿದ್ದಳು. ಅವಳು ತಾನು ಉಟ್ಟಿದ್ದ ಸೀರೆಯನ್ನೇ ಅರ್ಧ ಭಾಗ ನದಿಯಲ್ಲಿ ತೊಳೆದು ಅದನ್ನೆ ಉಟ್ಟುಕ್ಕೊಂಡು ನಂತರ ಉಳಿದರ್ಧವನ್ನು ಬಿಚ್ಚಿ ನೀರಿನಲ್ಲಿ ಒಗೆಯಲಾರಂಭಿಸಿದಳು. ಬಹುಶಃ ಅವಳ ಬಳಿ ಇದ್ದದ್ದು ಅದೊಂದೆ ಸೀರೆ, ಬದಲಾಯಿಸಲು ಬೇರೆ ಸೀರೆಯಿದ್ದಂತಿರಲಿಲ್ಲ. ಇದು ಅಂದಿನ ಬಹುತೇಕ ಜನರ ಸ್ಥಿತಿ, ಕಡು ಬಡತನದ ಸ್ಥಿತಿ. ಜನರಿಗೆ ತೊಡಲು ಸಾಕಷ್ಟು ಬಟ್ಟೆಯೂ ಇರದೆ, ಅರೆಬರೆಯ ಉಡುಪು ಮಾತ್ರ ಇರುತ್ತಿತ್ತು. ಗಂಡುಮಕ್ಕಳಂತೂ ದೊಡ್ಡವರಾಗುವವರೆಗೂ ಪೂರ್ಣ ಬಟ್ಟೆಯನ್ನೇ ಕಾಣುತ್ತಿರಲಿಲ್ಲ., ಹೆಣ್ಣುಮಕ್ಕಳಿಗೂ ಅರೆಬರೆ ಬಟ್ಟೆಯೆ.

ಗಾಂಧೀಜಿಯವರಿಗೆ ಭಾರತದ ಜನರ ದಟ್ಟದರಿದ್ರತನ ಮತ್ತು ಸಂಕಟಗಳ ಅರಿವಾಯಿತು. ಇದು ಅವರು ಗೋಖಲೆಯವರ ಸಲಹೆಯಂತೆ ಮಾಡಿದ ಭಾರತದರ್ಶನ. ಈ ದೃಶ್ಯದಿಂದ ವಿಚಲಿತರಾದ ಗಾಂಽಜಿಯವರು ನೊಂದುಕ್ಕೊಂಡು, ಎಲ್ಲಿಯವರೆಗೆ ತಮ್ಮ ಜನರಿಗೆ ಇಂಥಹ ದುಃಸ್ಥಿತಿಯಿರುತ್ತದೋ ಅಲ್ಲಿಯವರೆಗೆ ತಾವೂ ಕೂಡ ದೇಹ ಮುಚ್ಚಿಕ್ಕೊಳ್ಳಲು ಅವಶ್ಯವಿದ್ದ ಎರಡು ತುಂಡು ಬಟ್ಟೆಯನ್ನು ಮಾತ್ರ ಧರಿಸುವುದಾಗಿ ನಿರ್ಧರಿಸಿದರು. ಎಂತಹ ಸನ್ನಿವೇಶ, ವಾತಾವರಣದಲ್ಲೂ ಅವರ ನಿರ್ಧಾರ ಬದಲಾಗುತ್ತಿರಲಿಲ್ಲ. ಅದರಂತೆಯೇ ನಡೆದು ತಾವು ಕ್ರೂರಹಂತಕನ ಗುಂಡಿಗೆ ಬಲಿಯಾಗಿ ಪ್ರಾಣಬಿಡುವವರೆಗೆ ಈ ನಿರ್ಧಾರವನ್ನೆ ಪಾಲಿಸಿದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮನವಿಗೆ ಸ್ಪಂದಿಸಿದಕ್ಕಾಗಿ ಅಭಿನಂದನೆಗಳು

ಮೈಸೂರಿನ ವಿ.ವಿ.ಮೊಹಲ್ಲದ ೨ನೇ ಮುಖ್ಯರಸ್ತೆಯಲ್ಲಿರುವ (ಕ್ಲಬ್ ಹಿಂಭಾಗ) ವಾರ್ಡ್ ಸಂಖ್ಯೆ ೧೯ರ ವ್ಯಾಪ್ತಿಗೆ ಒಳಪಡುವ ಕನ್ಸರ್‌ವೆನ್ಸಿಯಲ್ಲಿ ಗಿಡ ಗಂಟಿಗಳು ಬೃಹದಾಕಾರವಾಗಿ…

7 hours ago

ಓದುಗರ ಪತ್ರ: ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಲಿ

ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ತಾಲ್ಲೂಕು ವನಸಿರಿ ನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಹಾಗೆ ಹಲವು ದೇವಾಲಯಗಳ ಬೀಡು, ಈ…

7 hours ago

ಓದುಗರ ಪತ್ರ: ಹಳೆ ಪಿಂಚಣಿ ಮರುಜಾರಿಯಿಂದ ಖಜಾನೆಗೆ ಭಾರ ಆಗದೇ?

ಚುನಾವಣಾ ಲಾಭಕ್ಕಾಗಿ ಹಳೆ ಪಿಂಚಣಿ ಯೋಜನೆ ಮರುಜರಿಗೆ ಹೊರಟಿರುವುದು ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ೩.೫…

7 hours ago

ಓದುಗರ ಪತ್ರ: ದಸರಾ ಚಲನಚಿತ್ರೋತ್ಸವ ಕೈಬಿಡಬಾರದು

ಮೈಸೂರಿನ ದಸರಾ ಚಲನಚಿತ್ರೋತ್ಸವವನ್ನು ಕಳೆದ ಸುಮಾರು ೫೦ ವರ್ಷಗಳಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಪ್ರೇಕ್ಷಕರ ಭಾಗವಹಿಸುವಿಕೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಈ…

7 hours ago

ವರ್ಷದಲ್ಲಿ 180 ದ್ವಿಚಕ್ರ ವಾಹನಗಳ ಕಳ್ಳತನ!

ಎಚ್.ಎಸ್.ದಿನೇಶ್ ಕುಮಾರ್ ವರ್ಷದಿಂದೀಚೆಗೆ ೯೬ ವಾಹನಗಳ ಪತ್ತೆ; ೧೦ಕ್ಕೂ ಹೆಚ್ಚು ಆರೋಪಿಗಳ ಬಂಧನ ವಾಹನ ಸವಾರರಿಗೆ ಮುನ್ನೆಚ್ಚರಿಕೆ * ವಾಹನ…

7 hours ago

ಧ್ವನಿವರ್ಧಕ ಬಳಕೆ; ನಿಯಮ ಉಲ್ಲಂಘಿಸಿದಲ್ಲಿ ಕ್ರಮ

ನವೀನ್ ಡಿಸೋಜ ರಾತ್ರಿ ೧೦ರಿಂದ ಬೆಳಿಗ್ಗೆ ೬ರವರೆಗೆ ಧ್ವನಿವರ್ಧಕ, ಡಿಜೆ ಬಳಕೆಗೆ ನಿರ್ಬಂಧ; ನಿಯಮ ಪಾಲಿಸಲು ಪೊಲೀಸ್ ಇಲಾಖೆ ಮನವಿ…

7 hours ago