Andolana originals

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಗೆ ಅಜ್ಜಿ ಒಡವೆ ನೀಡಿದ ಪ್ರಸಂಗ…

ನನ್ನ ಅಜ್ಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಗಾಂಧಿ ಹಕ್ಕಿಯ ಹಾಗೆ ಇದ್ದರು ಮತ್ತು ನಿರುಪದ್ರವಿ ಎಂದು. ಗಾಂಽಯ ಕಾಲದಲ್ಲಿ ಹಿರಿಯರು, ಕಿರಿಯರು, ಮುದುಕರು, ಮಕ್ಕಳು ಎಲ್ಲರೂ ಗಾಂಧಿಯೇ ಎಂದು!

ಈ ಒಂದು ಕತೆಯನ್ನು ಪದೇ ಪದೇ ನನಗೆ ಹೇಳುತ್ತಿದ್ದರು. ನಾನೂ ಇದನ್ನು ಅವಕಾಶ ಸಿಕ್ಕಿದಾಗಲೆ ನೂರಾರು ಸಲ ಮರು ಪ್ರಸಾರ ಮಾಡಿರುವೆ. ಮಂಗಳೂರಿಗೆ ಗಾಂಧಿ ಬಂದಾಗ ಹದಿಹರೆಯದ ಹುಡುಗಿಯಾಗಿದ್ದ ಗುಲಾಬಿ (ನನ್ನ ಅಜ್ಜಿ) ಗಾಂಧಿಯನ್ನು ನೋಡಲು ದೇಯಿ(ಮನೆಗೆಲಸದ ಸಹಾಯಕಿ)ಯನ್ನು ಜತೆಗೆ ಕರೆದುಕೊಂಡು ಹೋಗಿದ್ದರಂತೆ. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ ಸ್ವರಾಜ್ಯ ಪಡೆಯಲು ಕೈ ಜೋಡಿಸಿ ಎಂದು ಎಲ್ಲರಿಗೆ ಮನವಿ ಮಾಡಿ ಅನುಕೂಲ ಇದ್ದವರು ಹಣ, ವಸ್ತು, ಒಡವೆ ನೀಡಿದರೆ ಅದು ಸದ್ವಿನಿಯೋಗ ಆಗುವುದು ಎಂದರಂತೆ.

ಗಾಂಧಿಯಿಂದ ಪ್ರಭಾವಿತರಾದ ಗುಲಾಬಿ (ಅಜ್ಜಿ) ತನ್ನ ಕುತ್ತಿಗೆಯಿಂದ ಸರ ಬಿಚ್ಚಿ ಕೊಟ್ಟಳಂತೆ. ಗುಲಾಬಿಯಿಂದ ಪ್ರೇರಿತರಾಗಿ ಅವರ ಮನೆಗೆಲಸದ ಸಹಾಯಕಿ ದೇಯಿ ತಾನೂ ಕಿವಿಯೋಲೆ ಬಿಚ್ಚಿ ಗಾಂಧಿಯವರಿಗೆ ನೀಡಿದಳಂತೆ. ಗಾಬರಿಯಾದ ಗುಲಾಬಿ, ‘ಅಯ್ಯೋ ನಿನ್ನ ಬಳಿ ಇದ್ದದೊಂದೇ ಒಡವೆ, ನೀನೇಕೆ ನೀಡಿದೆ? ನಿನ್ನ ಆಪತ್ಕಾಲಕ್ಕೆ ಆಗುತ್ತಿತ್ತು ಎಂದಳಂತೆ’. ಕೊಡಬೇಕು ಅಂತ ಮನಸ್ಸಿಗೆ ಬಂತು, ಆತ ನೋಡಿದರೆ ನನಗಿಂತ ಬಡವನಂತೆ ಕಾಣುತ್ತಿರುವನು ಎಂದು ದೇಯಿ ನುಡಿದಳಂತೆ!
ಅದಾದ ಹಲವು ವರುಷಗಳ ನಂತರ ದೇಶ ಸ್ವತಂತ್ರವಾಯಿತು ಎಂದು ಸುದ್ದಿ ಬಂದಾಗ ಗುಲಾಬಿ ಹೇಳದಿದ್ದರೂ, ದೇಯಿ ತಾನೇ ಮುಂದಾಗಿ ಪಾಯಸ ಮಾಡಿ ಸಡಗರದಿಂದ ಗುಲಾಬಿಗೆ ತಂದು ಕೊಟ್ಟಳಂತೆ. ಅಷ್ಟೇ ಅಲ್ಲ, ಗುಲಾಬಿಗೆ ಹಿಂದೆ ಗಾಂಽಗೆ ಒಡವೆ ಕೊಟ್ಟದ್ದನ್ನು ನೆನಪಿಸಿ ‘ಆ ಮುದುಕನಿಗೆ ಓಲೆ ಕೊಟ್ಟದ್ದು ಸಾರ್ಥಕವಾಯಿತು. ಮೋಸ ಮಾಡಲಿಲ್ಲ, ಮಾತು ತಪ್ಪಲಿಲ್ಲ, ಸ್ವಾತಂತ್ರ್ಯ ತಂದುಕೊಟ್ಟ’ ಎಂದು ಹೇಳಿದಳಂತೆ.

ನನ್ನ ಅಜ್ಜಿ ಸದಾ ಬಿಳಿಯ ಹತ್ತಿ ಸೀರೆ ಉಡುತ್ತಿದ್ದರು. ಕಿವಿ, ಕತ್ತು, ಕೈ ಬೋಳು ಬೋಳು. ಒಡವೆ ಧರಿಸುತ್ತಿರಲಿಲ್ಲ. ಅಯ್ಯೋ, ಗಾಂಧಿಗೆ ಒಡವೆ ಕೊಟ್ಟು ಈ ಪರಿಸ್ಥಿತಿ ಬಂತು ಎಂದು ನಾನು ಮನದಲ್ಲಿ ನೊಂದುಕೊಳ್ಳುತ್ತಿz. ಈಗ ಎ ಕಡೆ, ನನ್ನ ಅಜ್ಜಿ ಹಿಂದೆ ಗಾಂಧಿಗೆ ಒಡವೆ ಕೊಟ್ಟಿದ್ದಳು ಎಂದು ಹೇಳಿಕೊಂಡು ಹೆಮ್ಮೆಪಡುತ್ತಿರುವೆ!
-ಸವಿತಾ ನಾಗಭೂಷಣ, ಕವಯಿತ್ರಿ

 

ಆಂದೋಲನ ಡೆಸ್ಕ್

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 25 ಶನಿವಾರ  

45 seconds ago

ನೋಟ-ಪ್ರತಿನೋಟ | ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಸರಿಯೇ? ತಪ್ಪೇ?

ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಪ್ರಥಮವಾಗಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಂಬಳಕ್ಕಾಗಿ ಮೈಸೂರಿನಲ್ಲಿ ಸ್ಥಳ ನಿಗದಿಪಡಿಸಿದ್ದು, ಸಿದ್ಧತೆ…

4 mins ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ಉಡುಪು ಯಾಕೆ ಬದಲಾಯಿತು?

  ಡಾ.ಪ್ರಮೀಳಾದೇವಿ ಬಿ.ಕೆ. ಮಹಾತ್ಮಗಾಂಧಿ ಇಂಗ್ಲೆಂಡಿನಲ್ಲಿದ್ದಾಗಲೂ, ಅಲ್ಲಿಂದ ಹಿಂತಿರುಗಿದಾಗ, ಮತ್ತು ಆರಂಭದ ದಿನಗಳಲ್ಲಿ ಅವರು ಎಲ್ಲಾ ವಿದ್ಯಾವಂತರಂತೆ ಬೆಲೆಬಾಳುವ ಸೂಟುಬೂಟು…

7 mins ago

ಗಾಂಧಿ ಅಭಿಯಾನ ಅರಿವಿನ ಯಾನ ; ಸಜ್ಜನನಾದ ಆಂಗ್ಲನಾಗುವ ಪ್ರಯತ್ನ

ಶಾಕಾಹಾರದಲ್ಲಿ ದಿನದಿನಕ್ಕೂ ನನ್ನ ನಂಬಿಕೆ ಹೆಚ್ಚುತ್ತಲೇ ಹೋಯಿತು. ಸಾಲ್ಟ್‌ರ ಗ್ರಂಥದ ವ್ಯಾಸಂಗದಿಂದ, ಆಹಾರದ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಭ್ಯಾಸ ಮಾಡಲು…

16 mins ago

ಎರಡನೇ ಆಷಾಢ ಶುಕ್ರವಾರದ ಸಂಭ್ರಮ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ

ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರವಾದ ಇಂದು ನಾಡ ಅಧಿದೇವತೆ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.…

21 hours ago

ಓದುಗರ ಪತ್ರ: ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಖಂಡನೀಯ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದಿಲ್ಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರದ ಕುಮ್ಮಕ್ಕು ಹಾಗೂ ಪೊಲೀಸರ…

1 day ago