ವಿಶ್ವದಾದ್ಯಂತ ಇರುವ ಕ್ರಿಕೆಟ್ ಪ್ರೇಮಿಗಳು ಕಾತರತೆಯಿಂದ ಕಾಯುತ್ತಿದ್ದ ದಿನ ಹತ್ತಿರ ಬಂದೇ ಬಿಟ್ಟಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನಾಳೆ ( ನವೆಂಬರ್ 19 ) ಅಹ್ಮದಾಬಾದ್ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯ ನಾಳೆ ಮಧ್ಯಾಹ್ನ ಎರಡು ಗಂಟೆಗೆ ಶುರುವಾಗಲಿದ್ದು 13ನೇ ವಿಶ್ವಕಪ್ ಟ್ರೋಫಿಯನ್ನು ಯಾವ ತಂಡ ಎತ್ತಿ ಹಿಡಿಯಲಿದೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಆಸ್ಟ್ರೇಲಿಯಾ ಆರನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯುವತ್ತ ಚಿತ್ತ ನೆಟ್ಟಿದ್ದು, ಟೀಮ್ ಇಂಡಿಯಾ ಮೂರನೇ ಬಾರಿಗೆ ಚಾಂಪಿಯನ್ ಎನಿಸಿಕೊಳ್ಳುವ ಯೋಜನೆಯಲ್ಲಿದೆ. ಹಾಗಿದ್ದರೆ ಇಲ್ಲಿಯವರೆಗೆ ನಡೆದಿರುವ ಒಟ್ಟು 12 ವಿಶ್ವಕಪ್ ಟೂರ್ನಿಯಲ್ಲಿ ಯಾವ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
1975 – ಆತಿಥ್ಯ: ಇಂಗ್ಲೆಂಡ್, ವಿನ್ನರ್: ವೆಸ್ಟ್ ಇಂಡೀಸ್, ರನ್ನರ್ – ಆಸ್ಟ್ರೇಲಿಯಾ
1979- ಆತಿಥ್ಯ: ಇಂಗ್ಲೆಂಡ್, ವಿನ್ನರ್: ವೆಸ್ಟ್ ಇಂಡೀಸ್, ರನ್ನರ್ – ಇಂಗ್ಲೆಂಡ್
1983 – ಆತಿಥ್ಯ – ಇಂಗ್ಲೆಂಡ್, ವಿನ್ನರ್ – ಭಾರತ, ರನ್ನರ್ – ವೆಸ್ಟ್ ಇಂಡೀಸ್
1987 – ಆತಿಥ್ಯ – ಭಾರತ ಹಾಗೂ ಪಾಕಿಸ್ತಾನ, ವಿನ್ನರ್ – ಆಸ್ಟ್ರೇಲಿಯಾ, ರನ್ನರ್ – ಇಂಗ್ಲೆಂಡ್
1992 – ಆತಿಥ್ಯ – ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ, ವಿನ್ನರ್ – ಪಾಕಿಸ್ತಾನ, ರನ್ನರ್ – ಇಂಗ್ಲೆಂಡ್
1996 – ಆತಿಥ್ಯ – ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ, ವಿನ್ನರ್ – ಶ್ರೀಲಂಕಾ, ರನ್ನರ್ – ಆಸ್ಟ್ರೇಲಿಯಾ
1999 – ಆತಿಥ್ಯ – ಇಂಗ್ಲೆಂಡ್, ವಿನ್ನರ್ – ಆಸ್ಟ್ರೇಲಿಯಾ, ರನ್ನರ್ – ಪಾಕಿಸ್ತಾನ
2003 – ಆತಿಥ್ಯ – ದಕ್ಷಿಣ ಆಫ್ರಿಕಾ, ವಿನ್ನರ್ – ಆಸ್ಟ್ರೇಲಿಯಾ, ರನ್ನರ್ – ಭಾರತ
2007 – ಆತಿಥ್ಯ – ವೆಸ್ಟ್ ಇಂಡೀಸ್, ವಿನ್ನರ್ – ಆಸ್ಟ್ರೇಲಿಯಾ, ರನ್ನರ್ – ಶ್ರೀಲಂಕಾ
2011 – ಆತಿಥ್ಯ – ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ವಿನ್ನರ್ – ಭಾರತ, ರನ್ನರ್ – ಶ್ರೀಲಂಕಾ
2015 – ಆತಿಥ್ಯ – ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವಿನ್ನರ್ – ಆಸ್ಟ್ರೇಲಿಯಾ, ರನ್ನರ್ – ನ್ಯೂಜಿಲೆಂಡ್
2019 – ಆತಿಥ್ಯ – ಇಂಗ್ಲೆಂಡ್ಸ್ ಹಾಗೂ ವೇಲ್ಸ್, ವಿನ್ನರ್ – ಇಂಗ್ಲೆಂಡ್, ರನ್ನರ್ – ನ್ಯೂಜಿಲೆಂಡ್
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…
ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ…
ಈ ಬಾರಿಯ ಸ್ವಾತಂತ್ರೋತ್ಸವದ ಅಂಗವಾಗಿ ೮೦ ತ್ಯಾಜ್ಯ ಹಾಕುವ ತಾಣಗಳನ್ನು ಗುರುತಿಸಿ, ಸ್ವಾತಂತ್ರೋತ್ಸವ ಸ್ವಚ್ಛತಾ ಅಭಿಯಾನ ೨೦೨೬ರ ಪ್ರಯುಕ್ತ ೮೦…
ರಾಜ್ಯದಲ್ಲಿ ೩,೭೦೦ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಹುzಗಳಿಗೆ, ೩ ಲಕ್ಷದ ೭೭ ಸಾವಿರ ಅಭ್ಯರ್ಥಿಗಳು ಇದೇ ಭಾನುವಾರ ಲಿಖಿತ ಪರೀಕ್ಷೆ…
ಭಾರತಿ ಬಿ ವಿ ವ್ಯಾಲಿ ಆಫ್ ಮಾನ್ಯುಮೆಂಟ್ಸ್ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ…
ಅಕ್ಷತಾ ಹೈದರ್ ಅವರ ಮುತ್ತಾತ ಎಂ.ಬುಡಾನ್ ಬೇಗ್ ಮೈಸೂರಿನ ಮಹಾರಾಜರ ಪದಾತಿ ದಳದಲ್ಲಿ ಸುಬೇ ದಾರ್ ಮೇಜರ್ ಆಗಿ ಕರ್ತವ್ಯ…