ಮುಂಬೈ : ಭಾರತ ತಂಡ ಟಿ20 ವಿಶ್ವಕಪ್ 2026ರಲ್ಲಿ ನ್ಯೂಜಿಲೆಂಡ್ನ್ನು 96 ರನ್ಗಳಿಂದ ಮಣಿಸಿ ಐತಿಹಾಸಿಕ ಗೆಲುವು ಸಾಧಿಸಿದೆ. ಫೈನಲ್ನಲ್ಲಿ 8 ಎಸೆತಕ್ಕೆ 26 ರನ್ಗಳ ಸ್ಫೋಟಕ ಇನ್ನಿಂಗ್ಸ್ನೊಂದಿಗೆ ತಂಡಕ್ಕೆ ಕೊಡುಗೆ ನೀಡಿದ ಮುಂಬೈನ ಆಲ್ರೌಂಡರ್ ಶಿವಂ ದುಬೆ ಟೂರ್ನಿಯಲ್ಲಿ 235 ರನ್ಗಳು ಸಿಡಿಸಿದ್ದಾರೆ.
ಆದರೆ ಗೆಲುವಿನ ನಂತರ ಅವರ ಪ್ರಯಾಣವೇ ವೈರಲ್ ಆಗಿದೆ! ಅಹಮದಾಬಾದ್ನಿಂದ ಮುಂಬೈಗೆ ವಿಮಾನಗಳು ಫುಲ್ ಆಗಿದ್ದರಿಂದ ದುಬೆ ಪತ್ನಿ ಅಂಜುಮ್ ಖಾನ್ ಮತ್ತು ಒಬ್ಬ ಸ್ನೇಹಿತರ ಜೊತೆ ಸಯಾಜಿ ಎಕ್ಸ್ಪ್ರೆಸ್ 3ನೇ ಎಸಿ ಕೋಚ್ನಲ್ಲಿ ಪ್ರಯಾಣಿಸಿದ್ದಾರೆ. ಕ್ಯಾಪ್, ಮಾಸ್ಕ್ ಹಾಕಿ, ಅಪ್ಪರ್ ಬರ್ತ್ನಲ್ಲಿ ನಿದ್ರಿಸಿ ಸಾಮಾನ್ಯ ಪ್ರಯಾಣಿಕರಂತೆ ಬಂದಿದ್ದಾರೆ.
ಬೊರಿವಲಿ ನಿಲ್ದಾಣದಲ್ಲಿ ಗದ್ದಲವಾಗಬಾರದು ಎಂದು ಮೊದಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ರೈಲು ತಲುಪುತ್ತಿದ್ದಂತೆ ಪೊಲೀಸ್ ಭದ್ರತೆಯೊಂದಿಗೆ ಸುರಕ್ಷಿತವಾಗಿ ಇಳಿದು ಮನೆ ತಲುಪಿದ್ದಾರೆ.
ಕೋಟಿಗಟ್ಟಲೆ ಸಂಭಾವನೆ ಪಡೆಯುವ ಸ್ಟಾರ್ ಆಟಗಾರನಾಗಿದ್ದರೂ, ಕುಟುಂಬದ ಮೇಲಿನ ಪ್ರೀತಿಗಾಗಿ ಹಮ್ಮು-ಬಿಮ್ಮಿಲ್ಲದೆ ರೈಲಿನಲ್ಲಿ ಪ್ರಯಾಣಿಸಿದ ಈ ಸರಳತೆಗೆ ಸಾಮಾಜಿಕ ಜಾಲತಾಣಗಳು ಜೋರಾಗಿ ಕ್ಲ್ಯಾಪ್ ಹೊಡೆಯುತ್ತಿವೆ. 4 ವರ್ಷದ ಮಗ ಮತ್ತು 2 ವರ್ಷದ ಮಗಳನ್ನು ನೋಡಲು ಕುಟುಂಬಕ್ಕಾಗಿ ರೈಲು ಪ್ರಯಾಣಿಸಿದ ಈ ಸರಳತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಳವಳ್ಳಿ: ಪೂರಿಗಾಲಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿದ್ದು, ರಸ್ತೆ ಬದಿಯ ಕಟ್ಟಡ ನೆಲಸಮ ಮಾಡುವಾಗ ಕಟ್ಟಡದ ಗೋಡೆ ಹಿಟಾಚಿ…
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಶಿಕ್ಷಣತಜ್ಞ, ವಿಜ್ಞಾನಿ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.…
ಕೃಷ್ಣಾ ಸಿದ್ದಾಪುರ ವಿರಾಜಪೇಟೆ: ತಾಲೂಕಿನ ಪಳ್ಳಕೆರೆ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಕೆಲಸಕ್ಕೆ ತೆರಳಿದ್ದ…
ಮೈಸೂರು: ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಬಳಿ ಮಾಜಿ ಸಿಎಂ ದೇವರಾಜ ಅರಸು ಅವರ ನೂತನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.…
ವಿಜಯನಗರ: ತುಂಗಭದ್ರಾ ಜಲಾಶಯದಲ್ಲಿ ಅಳವಡಿಸಲಾಗಿರುವ ನೂತನ ಕ್ರೆಸ್ಟ್ ಗೇಟ್ಗಳನ್ನು ಮೂವರು ಮುಖ್ಯಮಂತ್ರಿಗಳು ಉದ್ಘಾಟಿಸಿದ ಅಪರೂಪದ ಸಮಾರಂಭಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.…
ನವದೆಹಲಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಮಂತ್ರಿಗಳಾದ ಶಿವರಾಜ್ ಸಿಂಗ್…