ಕ್ರೀಡೆ

ಅರಬ್ ಕ್ಲಬ್ ಚಾಂಪಿಯನ್ಸ್ ಕಪ್ ಗೆದ್ದ ರೊನಾಲ್ಡೊ ಪಡೆ

ರಿಯಾದ್: ಅವಳಿ ಗೋಲು ಗಳಿಸಿದ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅಲ್ ನಸ್ರ್ ತಂಡ ಫೈನಲ್ ನಲ್ಲಿ ಅಲ್ ಹಿಲಾಲ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿ ಅರಬ್ ಕ್ಲಬ್ ಚಾಂಪಿಯನ್ಸ್ ಕಪ್ ಜಯಿಸಲು ನೆರವಾಗಿದ್ದಾರೆ.

ಕಳೆದ ವರ್ಷ ಸೌದಿ ಪ್ರೊ ಲೀಗ್ ನಲ್ಲಿ ಅಲ್-ನಸ್ರ್ ರನ್ ಅಪ್ ಗೆ ತೃಪ್ತಿಪಟ್ಟ ಕಾರಣ ರೊನಾಲ್ಡೊ ಟ್ರೋಫಿ ಜಯಿಸುವಲ್ಲಿ ವಿಫಲರಾಗಿದ್ದರು. ಆದರೆ 38ರ ವಯಸ್ಸಿನ ರೊನಾಲ್ಡೊ ಶನಿವಾರ ಕಿಂಗ್ ಫಹದ್ ಇಂಟರ್ನ್ಯಾಶನಲ್ ಸ್ಟೇಡಿಯಮ್ ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ(98ನೇ ನಿಮಿಷ)ಗೋಲು ಗಳಿಸಿ ಅಲ್ ನಸ್ರ್ ತಂಡ ಮೊತ್ತ ಮೊದಲ ಬಾರಿ ಅರಬ್ ಕ್ಲಬ್ ಚಾಂಪಿಯ್ಸನ್ ಕ್ಲಬ್ ಜಯಿಸಲು ಪ್ರಮುಖ ಕೊಡುಗೆ ನೀಡಿದರು.

ಅಲ್ ಹಿಲಾಲ್ ತಂಡ ಆರಂಭದಿಂದಲೂ ಪ್ರಾಬಲ್ಯ ಮೆರೆದಿದ್ದು, ಸ್ಟಾರ್ ಆಟಗಾರರನ್ನು ಒಳಗೊಂಡ ಅಲ್ ನಸ್ರ್ ತಂಡ ಮೊದಲಾರ್ಧದಲ್ಲಿ ಗೋಲು ಗಳಿಸುವ ಹಲವು ಅವಕಾಶಗಳನ್ನು ಪಡೆದಿತ್ತು. ಆದರೆ ಅಲ್ ಹಿಲಾಲ್ ಗೋಲ್ ಕೀಪರ್ ಗೋಲು ನಿರಾಕರಿಸಿದರು. ಉಭಯ ತಂಡಗಳು ತೀವ್ರ ಪೈಪೋಟಿ ನಡೆಸಿದ ಕಾರಣ ಮೊದಲಾರ್ಧದ ಪಂದ್ಯ ಗೋಲುರಹಿತವಾಗಿ ಅಂತ್ಯವಾಯಿತು. 51ನೇ ನಿಮಿಷದಲ್ಲಿ ಹೆಡರ್ನ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಗೆ ತಲುಪಿಸಿದ ಬ್ರೆಝಿಲ್ ನ ಮೈಕಲ್ ಅಲ್ ಹಿಲಾಲ್ ತಂಡ 1-0 ಮುನ್ನಡೆ ಪಡೆಯಲು ನೆರವಾದರು.

ತನ್ನ ಖ್ಯಾತಿಗೆ ತಕ್ಕಂತೆ ಆಡಿದ ರೊನಾಲ್ಡೊ 74ನೇ ನಿಮಿಷದಲ್ಲಿ ಗೋಲು ಗಳಿಸಿ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು. ಐದು ಬಾರಿಯ ಬ್ಯಾಲನ್ ಡಿ ಓರ್ ಪ್ರಶಸ್ತಿ ವಿಜೇತ ರೊನಾಲ್ಡೊ ಟೂರ್ನಮೆಂಟ್ ನಲ್ಲಿ ಒಟ್ಟು 6 ಗೋಲುಗಳನ್ನು ಗಳಿಸಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದರು.

ನಿಗದಿತ ಸಮಯದಲ್ಲಿ ಸ್ಕೋರ್ 1-1ರಿಂದ ಸಮಬಲಗೊಂಡ ಕಾರಣ ಪಂದ್ಯವು ಹೆಚ್ಚುವರಿ ಸಮಯಕ್ಕೆ ವಿಸ್ತರಣೆಯಾಯಿತು. 98ನೇ ನಿಮಿಷದಲ್ಲಿ ಗೋಲು ಗಳಿಸಿದ ರೊನಾಲ್ಡೊ 2021ರ ಡಿಸೆಂಬರ್ ನಂತರ ಮೊದಲ ಬಾರಿ ಅಲ್ ನಸ್ರ್ ತಂಡ ಅಲ್ ಹಿಲಾಲ್ ತಂಡವನ್ನು ಸೋಲಿಸಲು ಅಮೂಲ್ಯ ಕೊಡುಗೆ ನೀಡಿದರು. ಹೆಚ್ಚುವರಿ ಸಮಯದ ಎರಡನೇ ಅವಧಿಯಲ್ಲಿ ಗಾಯಗೊಂಡಿರುವ ರೊನಾಲ್ಡೊ ಮೈದಾನವನ್ನು ತೊರೆದರು. ಸೌದಿ ಪ್ರೊ ಲೀಗ್ ಆರಂಭವಾಗಲು ಕೇವಲ ಎರಡು ದಿನಗಳಿರುವಾಗ ರೊನಾಲ್ಡೊ ಗಾಯಗೊಂಡಿರುವುದು ಅಲ್ ನಸ್ರ್ ತಂಡಕ್ಕೆ ಹಿನ್ನಡೆಯಾಗಿದೆ.

2022-23ರ ಋತುವಿನಲ್ಲಿ ಸೌದಿ ಪ್ರೊ ಲೀಗ್ ನಲ್ಲಿ ಅಲ್ ನಸ್ರ್ 2ನೇ ಸ್ಥಾನ ಪಡೆದಿದ್ದರೆ, ಅಲ್ ಹಿಲಾಲ್ ಮೂರನೇ ಸ್ಥಾನ ಪಡೆದಿತ್ತು.

ಅರಬ್ ಕ್ಲಬ್ ಚಾಂಪಿಯ್ಸನ್ ಕ್ಲಬ್ ಪಂದ್ಯಾವಳಿಯನ್ನು ಪ್ರದೇಶದ ಅಗ್ರ ಅರಬ್ ಕ್ಲಬ್ ಗಳು ಆಡುತ್ತವೆ. ಸೌದಿ ಅರೇಬಿಯಾ, ಖತರ್, ಯುನೈಟೆಡ್ ಅರಬ್ ಎಮಿರೇಟ್ಸ್, ಇರಾಕ್, ಮೊರಾಕ್ಕೊ, ಟುನೀಶಿಯಾ ಹಾಗೂ ಅಲ್ಜೀರಿಯಾದ ತಂಡಗಳು ಇದರಲ್ಲಿ ಒಳಗೊಂಡಿವೆ.

andolanait

Recent Posts

‘ಕೊಲೆ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ’

ಎಚ್.ಎಸ್.ದಿನೇಶ್ ಕುಮಾರ್ ನಿತ್ಯಾನಂದ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪಶ್ಚಾತ್ತಾಪದ ಕಣ್ಣೀರು ಮೈಸೂರು: ನಗರದ ಕುವೆಂಪುನಗರದಲ್ಲಿ ಪತ್ನಿಯಿಂದಲೇ ಹತ್ಯೆಯಾದ ನಿತ್ಯಾನಂದ…

5 hours ago

ಕೊಡಗು ಜಿಲ್ಲೆಯಾದ್ಯಂತ ಚುರುಕುಗೊಂಡ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕು ಪಡೆದುಕೊಂಡಿದ್ದು, ಹಾರಂಗಿ ಜಲಾಶಯದ ಒಳಹರಿವಿನಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದೆ. ಹಾರಂಗಿ ಜಲಾಶಯಕ್ಕೆ…

7 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಮಹಾತ್ಮನ ಚಿಂತನೆಯ ಹಾದಿಯಲ್ಲಿ ನಡೆಯಬೇಕಿದೆ ನಾನು ಕಂಡ ಗಾಂಧಿಜಿಯವರಲ್ಲಿ, ಅವರ ಜೀವನದಲ್ಲಿ ನನ್ನನ್ನು ಅತ್ಯಂತ ಹೆಚ್ಚಾಗಿ ಆಕರ್ಷಿಸಿದ ವಿಷಯ ಎಂದರೆ…

9 hours ago

ಮನುಷ್ಯ ಕುಲದ ಪ್ರಜ್ಞಾವಂತಿಕೆ ವಿಕಾಸಕ್ಕೆ ಗಾಂಧೀಜಿ ಕೈಮರ

ಗಾಂಧಿಜಿಯವರ ಜೀವನ ಚರಿತ್ರೆ ದೇಶ, ಖಂಡಗಳ ಗಡಿ ದಾಟಿ ಮನುಷ್ಯರೆಲ್ಲರ ಒಳಿತನ್ನು ಬಯಸುವ ಬಯಕೆಯನ್ನು ಭಾವಿಸಿ, ಜೀವಿಸಿ ತೋರಿಸಿದವರ ಪುಣ್ಯ…

9 hours ago

ಗಾಂಧಿ ಮೈಮೇಲೆ ಬಂದಂತೆ ಬದುಕಿದ್ದ ಹುಚ್ಚೇಗೌಡರು

ಸ್ವಾಮಿ ಪೊನ್ನಾಚ್ಚಿ ನಾನು ಹುಚ್ಚೇಗೌಡರನ್ನು ನೋಡಿದ್ದು ಇತ್ತೀಚೆಗೆ. ಅದೂ ಅತ್ತಿಖಾನೆ ಎಸ್ಟೇಟ್ ಸ್ಥಾಪಕ ಮಾರಿಸ್ ಬಗ್ಗೆ ತಿಳಿಯಲು ಹೋದಾಗ. ಸಿಕ್ಕ…

9 hours ago

ವಿಲಾಯತಿಗೆ ಹೊರಟವನು ಜಾತಿ ಬಾಹಿರನಾದೆ

ನಮ್ಮ ಜಾತಿಯ ಜನರು ನನ್ನ ವಿದೇಶ ಪ್ರಯಾಣವನ್ನು ಕುರಿತು ಗೊಂದಲವನ್ನು ಎಬ್ಬಿಸಿದರು. ಅಲ್ಲಿಯವರೆಗೆ ಮೋಧ್ ಬನಿಯರ ಪೈಕಿ ಯಾರೂ ವಿಲಾಯತಿಗೆ…

9 hours ago