ದೋಹಾ: ಇದು ಫುಟ್ಬಾಲ್ ಪಂದ್ಯದ ಮಹತ್ವದ ವಸ್ತು
ಪೋರ್ಚುಗಲ್ ನಬ್ರೂನೊ ಫರ್ನಾಂಡಿಸ್ ಹೊಡೆದ ಎರಡು ಗೋಲುಗಳು ತಂಡವನ್ನು ನಾಕೌಟ್ ಹಂತಕ್ಕೆ ತಲುಪಿತು.
‘ಎಚ್’ ಗುಂಪಿನ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನಾಯಕತ್ವದ ಪೊರ್ಚುಗಲ್ 2–0 ಗೋಲುಗಳ ಅಂತರದಿಂದ ಉರುಗ್ವೆ ತಂಡವನ್ನು ಪರಾಭವಗೊಳಿಸಿತು.
ಲುಸೈಲ್ ಕ್ರೀಡಾಂಗಣದಲ್ಲಿ ಸೋಮವಾರ ತಡರಾತ್ರಿ ನಡೆದಪಂದ್ಯದ ಮೊದಲಾರ್ಧದಲ್ಲಿ ಪೋರ್ಚುಗಲ್ ಹಿಡಿತ ಸಾಧಿಸಿತು. ಅಧಿಕ ವೇಳೆ ಚೆಂಡನ್ನು ತನ್ನ ಪರಿಧಿಯಲ್ಲೇ ಉಳಿಸಿಕೊಂಡ ತಂಡ ಗೋಲು ಬಾರಿಸುವ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡಿತು. ಆದರೆ ಉರುಗ್ವೆ ಗೋಲ್ಕೀಪರ್ ಸೆರ್ಗಿಯೊ ರೊಚೆಟ್ ಅವರ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.
ಮೊದಲಾರ್ಧ ಮುಗಿದ ಎಂಟು ನಿಮಿಷಗಳಲ್ಲಿ ಫರ್ನಾಂಡಿಸ್ ಜಾದೂ ಮಾಡಿದರು. ಎಡಭಾಗದಿಂದ ಚೆಂಡನ್ನು ರೊನಾಲ್ಡೊ ಅವರತ್ತ
ನೂಕಿದರು. ಜಿಗಿದ ರೊನಾಲ್ಡೊ ಚೆಂಡನ್ನು ಹೆಡ್ ಮಾಡಲು ಯತ್ನಿಸಿದರು. ಆದರೆ ಅವರಿಗೆ ತಾಗದ ಚೆಂಡು ಗೋಲ್ಪೋಸ್ಟ್ನೊಳಗೆ ಮಿಂಚಿನ ವೇಗದಲ್ಲಿ ಸೇರಿತು. ರೊನಾಲ್ಡೊ ಗೋಲು ಗಳಿಸಿದ ಸಂಭ್ರಮ ಆಚರಿಸಿದರು. ಆದರೆ ವಿಡಿಯೋ ಮರುಪರಿಶೀಲನೆಯ ಬಳಿಕ ಫಿಫಾ ಈ ಗೋಲನ್ನು ಫರ್ನಾಂಡಿಸ್ ಖಾತೆಗೆ ಸೇರಿಸಲಾಗಿದೆ.
ಈ ಗೋಲನ್ನು ರೊನಾಲ್ಡೊ ಗಳಿಸಿದ್ದರೆ ಪದವಿಯಲ್ಲಿ ಅವರ ಒಂಬತ್ತನೇ ಗೋ. ಆ ಮೂಲಕ ಅವರು ಪೋರ್ಚುಗಲ್ ತಂಡದ ದಿಗ್ಗಜ ಯುಸೆಬಿಯೊ ಅವರನ್ನು ಸರಿಗಟ್ಟುತ್ತಿದ್ದರು.
ಫರ್ನಾಂಡಿಸ್ ಗೋಲಿನ ಬಳಿಕ ಉರುಗ್ವೆ ವೇಗದ ಆಟಕ್ಕೆ ಮೊರೆಹೋಯಿತು. ತಂಡದ ಫಾರ್ವರ್ಡ್ ಆಟಗಾರ ಮ್ಯಾಕ್ಸಿ ಗೋಮೆಜ್ 20 ಯಾರ್ಡ್ನಿಂದ ಪಾಸ್ ಮಾಡಿದ ಚೆಂಡನ್ನು ಲೂಯಿಸ್ ಸ್ವಾರೆಜ್ ಗೋಲ್ಪೋಸ್ಟ್ನತ್ತ ತಳ್ಳಿದರು. ಆದರೆ ಚೆಂಡು ನೆಟ್ ಸಮೀಪದಿಂದ ಹಾಯ್ದುಹೋದಾಗ ಸ್ವಾರೆಜ್ ನಿರಾಸೆಗೊಳಗಾದರು.
ಗಾಯದ ಸಮಯದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಫರ್ನಾಂಡಿಸ್ ಅತಿ ಸುಲಭವಾಗಿ ಗೋಲಾಗಿ ಪರಿವರ್ತಿಸಿದರು. ಚೆಂಡನ್ನು ಗೋಲ್ಪೋಸ್ಟ್ನ ಬಲಭಾಗಕ್ಕೆ ಒಡ್ಡ ಅವರು ಗೋಲ್ಕೀಪರ್ ಸೆರ್ಗಿಯೊ ಅವರನ್ನು ವಂಚಿಸಿದರು.
ಇದೇ ಅವಧಿಯಲ್ಲೇ ಮತ್ತೊಂದು ಗೋಲು ಗಳಿಸಿ ಹ್ಯಾಟ್ರಿಕ್ ಸಾಧಿಸುವ ಫರ್ನಾಂಡಿಸ್ ಅವರಿಗಿತ್ತು. ಆದರೆ ಯಶಸ್ಸು ಸಾಧ್ಯವಾಗಲಿಲ್ಲ.
ಈ ಗೆಲುವಿನೊಂದಿಗೆ ಪೋರ್ಚುಗಲ್, 16ರ ಘಟ್ಟ ತಲುಪಿರುವ ಫ್ರಾನ್ಸ್ ಮತ್ತು ಬ್ರೆಜಿಲ್ ತಂಡಗಳ ಸಾಲಿಗೆ ಸೇರಿತು.
ಗುಂಪು ಹಂತದಲ್ಲಿ ಪೋರ್ಚುಗಲ್ ಸತತ ಎರಡು ಪಂದ್ಯಗಳನ್ನು ಗೆದ್ದಿರುವುದು ಇದು ಎರಡನೇ ಬಾರಿ.
ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಪ್ರವೇಶಾತಿ ಪಡೆದ ಸಂಶೋಧಕರುಗಳಿಗೆ ಶಿಷ್ಯ ವೇತನ ನೀಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ…
ಚಾಮರಾಜನಗರ: ತಾಲ್ಲೂಕಿನ ಬಾಗಳಿ ಗ್ರಾಮದ ಜಮೀನೊಂದರಲ್ಲಿ ಹುಲಿ ಪ್ರತ್ಯಕ್ಷಗೊಂಡಿದ್ದು ರೈತರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ಪುಟ್ಟಯ್ಯ ಎಂಬವರು ಸೋಮವಾರ ಬೆಳಿಗ್ಗೆ…
ವಾಷಿಂಗ್ಟನ್ : ಅಮೆರಿಕ-ಇರಾನ್ ಸಂಸಂಘರ್ಷವನ್ನು ಕೊನೆಗೊಳಿಸಲು ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಯನ್ನು ಪುನಃಸ್ಥಾಪಿಸಲು ಪ್ರಾಥಮಿಕ ಒಪ್ಪಂದಕ್ಕೆ ಬಂದಿರುವುದಾಗಿ ಡೊನಾಲ್ಡ್…
ಬೆಂಗಳೂರು : ಆರ್ಎಸ್ಎಸ್ನ ಸಾಂಸ್ಥಿಕ ಮತ್ತು ಕಾನೂನುಬದ್ಧ ಸ್ಥಿತಿಗತಿ ಕುರಿತು ಸ್ಪಷ್ಟನೆ ನೀಡುವಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು…
ಮೈಸೂರು : ಪಬ್ನಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಸಜೀವ ದಹನವಾಗಿರುವ ಘಟನೆ ನಗರದ ದಟ್ಟಗಳ್ಳಿಯಲ್ಲಿ ನಡೆದಿದೆ. ನಗರದ ರಿಂಗ್…
ಬೆಂಗಳೂರು: ಕರ್ನಾಟಕದವರಿಗೆ, ವೋಟ್ ಇದ್ದವರಿಗೆ ಮಾತ್ರ ನಾವು ಗ್ಯಾರಂಟಿ ಕೊಡುತ್ತೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ…